#📜ಪ್ರಚಲಿತ ವಿದ್ಯಮಾನ📜
ಸಿ ಕೆ ಜಾಫರ್ ಷರೀಫ್ ರೈಲ್ವೆ ಸಚಿವರಾಗಿದ್ದಾಗ ಕರ್ನಾಟಕದ ಪಾಲಿಗೆ ಸುವರ್ಣ ಕಾಲ
ಇತ್ತೀಚಿನ ದಿನಗಳಲ್ಲಿ ಕೇಂದ್ರ ಸರ್ಕಾರದ ರಾಜ್ಯದ ಸಚಿವರುಗಳಿಂದ ರಾಜ್ಯಕ್ಕೆ ಮೂರು ಕಾಸಿನ ಅನುಕೂಲ ಆಗುತ್ತಿಲ್ಲ .ಆದರೆ ಪದೇ ,ಪದೇ ರಾಜ್ಯ ಸರ್ಕಾರವನ್ನ ಟೀಕೆ ಮಾಡುವುದರಲ್ಲಿ ಮಾತ್ರ ಹಿಂದೆ ಬೀಳುವುದಿಲ್ಲ. ಆದರೆ ನಿಜಕ್ಕೂ ಕರ್ನಾಟಕಕ್ಕೆ ರೈಲ್ವೆ ಇಲಾಖೆಯಲ್ಲಿ ಸುವರ್ಣ ಕಾಲವನ್ನು ಒದಗಿಸಿದವರು ಭಾರತ ದೇಶದ ಭೂಪಟದಲ್ಲಿ ರೈಲ್ವೆ ಇಲಾಖೆಯಲ್ಲಿ ಕರ್ನಾಟಕಕ್ಕೆ ಮಹತ್ವವನ್ನ ತಂದು ಕೊಟ್ಟವರು ಸಿ ಕೆ ಜಾಫರ್ ಶರೀಫ್.
ಪಿ,ವಿ ,ನರಸಿಂಹರಾಯರು ಪ್ರಧಾನ ಮಂತ್ರಿಗಳಾಗಿದ್ದಾಗ ಕೇಂದ್ರದಲ್ಲಿ ರೈಲ್ವೆ ಸಚಿವರಾಗಿದ್ದ ಶ್ರೀ ಸಿ ಕೆ ಜಾಫರ್ ಷರೀಫ್ ರವರು ನಿಜಕ್ಕೂ ಸಹ ಈ ರಾಜ್ಯಕ್ಕೆ ಹೆಚ್ಚು ಸೇವೆಯನ್ನು ಸಲ್ಲಿಸಿದ ಕೇಂದ್ರ ಸಚಿವರಾಗಿದ್ದಾರೆ.
ಅವರು ಸಚಿವರಾಗಿದ್ದಾಗ ಇಡೀ ದೇಶದಾದ್ಯಂತ ಆರು ಸಾವಿರ ಕಿಲೋಮೀಟರ್ಗಳ ಗೇಜ್ ಪರಿವರ್ತನೆಯನ್ನ ಮಾಡುವ ಸಂದರ್ಭದಲ್ಲಿ ಸುಮಾರು ಒಂದು ಸಾವಿರ ಕಿಲೋಮೀಟರ್ ಗೆಜ್ ಪರಿವರ್ತನೆಯ ಯೋಜನೆಯನ್ನು ಕರ್ನಾಟಕಕ್ಕೆ ನೀಡಿದ್ದಾರೆ.
ಅತ್ಯಂತ ಮಹತ್ವದ ಕೊಂಕಣ್ ರೈಲ್ವೆ ಯೋಜನೆಯ ಅನುಷ್ಠಾನಕ್ಕೆ ಶ್ರಮವನ್ನ ವಹಿಸಿದ್ದಾರೆ.
ಬೆಂಗಳೂರಿನಲ್ಲಿ ರೈಲ್ವೆ ವಲಯವನ್ನು ಸ್ಥಾಪಿಸಿ ನಮ್ಮ ನಾಡಿನ ಜನರಿಗೆ ಹೆಚ್ಚಿನ ಅನುಕೂಲವನ್ನು ಮಾಡಿಕೊಟ್ಟಿದ್ದಾರೆ.
ರೈಲ್ವೆ ನೇಮಕಾತಿ ಮಂಡಳಿಯನ್ನ ಪ್ರತ್ಯೇಕವಾಗಿ ಬೆಂಗಳೂರಿನಲ್ಲಿ ರಚಿಸಿ ನಮ್ಮ ಕರ್ನಾಟಕದ ಹೆಚ್ಚಿನ ಜನರು ಉದ್ಯೋಗವನ್ನು ಪಡೆದುಕೊಳ್ಳುವಲ್ಲಿ ನೆರವು ನೀಡಿದ್ದಾರೆ.
ಬೆಂಗಳೂರು ಮತ್ತು ದೆಹಲಿ ರಾಜಧಾನಿ ಎಕ್ಸ್ಪ್ರೆಸ್ ,ಚೆನ್ನೈ ಬೆಂಗಳೂರು ಶತಾಬ್ದಿ ಎಕ್ಸ್ಪ್ರೆಸ್, ಇವುಗಳು ಇವರ ಕೊಡುಗೆಯಾಗಿದೆ.
ಅತ್ಯಂತ ಮಹತ್ವದ ವೀಲ್ ಅಂಡ್ ಆಕ್ಸೆಲ್ ಕಾರ್ಖಾನೆಯನ್ನು ಯಲಹಂಕದಲ್ಲಿ ಸ್ಥಾಪಿಸಿ ನಮ್ಮ ನಾಡಿಗೆ ದೊಡ್ಡ ಕೊಡುಗೆಯನ್ನು ನೀಡಿದ್ದಾರೆ.
ಕರ್ನಾಟಕದ ಅನೇಕ ಹೊಸ ಹೊಸ ಯೋಜನೆಗಳಿಗೆ ಚಾಲನೆಯನ್ನು ನೀಡಿ ಮತ್ತಷ್ಟು ಹೊಸ ಯೋಜನೆಗಳ ಅನುಷ್ಠಾನವಾಗುವಲ್ಲಿ ಅವುಗಳಿಗೆ ಬೇಕಾದ ಆಡಳಿತಾತ್ಮಕವಾದಂತ ಮಂಜೂರಾತಿ ಮತ್ತು ಸಂಪನ್ಮೂಲಗಳ ಒದಗಿಸಿ ಕೊಟ್ಟಿದ್ದಾರೆ.
ಇವರ ಈ ಕೊಡುಗೆಗಳಿಂದಾಗಿ ಬೆಂಗಳೂರು ನಗರದಲ್ಲಿ ರೈಲ್ವೆ ವಲಯದಲ್ಲಿ ಹೆಚ್ಚಿನ ವಾಣಿಜ್ಯ ವ್ಯವಹಾರಗಳು ನಡೆಯಲು ಸಾಧ್ಯವಾಯಿತು.
ವಿನೂತನವಾದ ತಂತ್ರಜ್ಞಾನವನ್ನು ಒಳಗೊಂಡ ತೂಗು ಸೇತುವೆ ಕೆಆರ್ ಪುರದಲ್ಲಿ ನಿರ್ಮಾಣದ ಹಿಂದೆ ಇವರ ಶ್ರಮವಿದೆ.
ಕರ್ನಾಟಕದ ಜನರು ರೈಲಿನಲ್ಲಿ ಬಿಟ್ಟಿ ಓಡಾಡುತ್ತಿಲ್ಲ ,ಟಿಕೆಟ್ ಗಳನ್ನು ಕೊಂಡು ಪ್ರಯಾಣ ಮಾಡುತ್ತಾರೆ. ರೈಲ್ವೆ ಇಲಾಖೆಯ ಒಟ್ಟಾರೆ ಶೇಖರಣೆಯ ಮೊತ್ತದಲ್ಲಿ ಸುಮಾರು 48 ಸಾವಿರದಿಂದ ಹಿಡಿದು ಐವತ್ತು ಸಾವಿರ ರೂಪಾಯಿಗಳ ಪಾಲು ಕರ್ನಾಟಕದ ರೈಲ್ವೆ ಸಂಚಾರದಿಂದ ಬಂದಿರುತ್ತದೆ.
ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಏನೇನು ಕೊಟ್ಟು ಬಿಟ್ಟಿದೆ ಎನ್ನುವ ರೀತಿಯಲ್ಲಿ ತಮ್ಮ ಬೆನ್ನುಗಳನ್ನು ತಾವೇ ತಟ್ಟಿಕೊಳ್ಳುವುದು ಬೇಡ. ಕರ್ನಾಟಕದ ರೈಲ್ವೆ ಇಲಾಖೆಯಲ್ಲಿ ಸಿಕೆ ಜಾಫರ್ ಷರೀಫ್ ರವರ ರೀತಿಯಲ್ಲಿ ಯಾರು ಸಹ ನಮ್ಮ ರಾಜ್ಯದ ಪರವಾಗಿ ಯೋಜನೆಗಳನ್ನು ತರಲು ಇಲ್ಲಿಯ ತನಕ ಸಾಧ್ಯವಾಗಿರುವುದಿಲ್ಲ.
ನಮ್ಮ ಲೋಕಸಭಾ ಸದಸ್ಯರುಗಳು ಮತ್ತು ಕೇಂದ್ರದ ಸಚಿವರು ಕೇವಲ ಟೀಕೆ ಮಾಡುವುದನ್ನು ಬಿಟ್ಟು ಯೋಜನೆಗಳನ್ನ ತಂದು ಕರ್ನಾಟಕದ ಪ್ರಗತಿಗೆ ಚಾಲನೆಯನ್ನು ನೀಡಿ. ರಾಜಕಾರಣದ ಮಾತುಗಳು ಪ್ರತಿದಿನವೂ ಕೇಳಿ ಕೇಳಿ ಎಲ್ಲರಿಗೂ ಸಾಕಾಗಿದೆ .ಅಭಿವೃದ್ಧಿಯ ಮಾತು ಕೇಳಿ ಬರಲಿ. ಯಾರು ಎಷ್ಟು ಕೆಲಸವನ್ನ ಮಾಡಿದ್ದಾರೆ ಎನ್ನುವುದನ್ನು ವಾಟ್ಸಾಪ್ ಗಳು ನಿರ್ಧರಿಸುವುದಿಲ್ಲ. ಇತಿಹಾಸ ದಾಖಲಿಸುತ್ತದೆ.
- ಕೆ ಎಸ್ ನಾಗರಾಜ್, ಬೆಂಗಳೂರು
#goldenera #Karnataka #CKJafferSharif #RailwayMinister #ksnagaraj #malgudiexpress #malgudinews #news #TopNews