ನಿತ್ರ ಕ್ಯಾಲೆಂಡರ್ ಅವರಿಂದ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಪ್ರೊಸೆಸರ್ ಡೌನ್ಲೋಡ್ ಮಾಡಿ
https://bit.ly/33Y8uiS #🙏 ಓಂ ನಮಃ ಶಿವಾಯ#🙏ಸೋಮವಾರದ ಭಕ್ತಿ ಸ್ಪೆಷಲ್#🙏 ದೈನಂದಿನ ಭಕ್ತಿ ಸ್ಟೇಟಸ್#🔱 ಭಕ್ತಿ ಲೋಕ
ಶಿವನ ಪೂಜೆಯನ್ನು ಮಾಡುವಾಗ ಯಾವ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎನ್ನುವುದನ್ನು ಇಲ್ಲಿ ನೀಡಲಾಗಿದೆ..!!💫💫
✨ ನಾವು ಶಿವನಿಗೆ ಕುಂಕುಮವನ್ನು ಏಕೆ ಅರ್ಪಿಸಬಾರದು✨

🍓ಜಗದ ಲಯಕರ್ತನಾದ ಶಿವ ನು ಅತ್ಯಂತ ಶಕ್ತಿಶಾಲಿ ಹಾಗೂ ಸರಳ ಜೀವನ ನಡೆಸಲು ಇಷ್ಟಪಡುವನು. ಹಾಗಾಗಿಯೇ ಇವನು ತನ್ನ ಪೂಜೆಯನ್ನು ಸಹ ಭಕ್ತರು ಭಕ್ತಿ ಭಾವದಿಂದ ಸರಳವಾಗಿಯೇ ಪೂಜಿಸಲಿ ಎಂದು ಬಯಸುವನು. ನಿರಾಲಂಕಾರ ಪ್ರಿಯನಾದ ಶಿವನಿಗೆ ವಿವಿಧ ಫಲಗಳ ನೈವೇದ್ಯವಿಟ್ಟರೆ ಸಾಕು ಹೆಚ್ಚಿನ ತೃಪ್ತಿಯನ್ನು ಪಡೆದುಕೊಳ್ಳುವನು. ವಿವಿಧ ಒಡವೆ ಹಾಗೂ ಅಲಂಕಾರವನ್ನು ಆಶಿಸದ ದೇವನೆಂದರೆ ಶಿವ.
🍓ಈಶ್ವರನಿಗೆ ಧಾತುರದ ಹಣ್ಣು, ಬಿಲ್ವ ಪತ್ರೆ, ತಾಜಾ ತಣ್ಣನೆಯ ಹಸುವಿನ ಹಾಲು, ಶ್ರೀಗಂಧದ ಲೇಪನ, ಭಸ್ಮಗಳಂತಹ ಸರಳ ವಸ್ತುಗಳನ್ನು ನೀಡುವುದರ ಮೂಲಕ ತೃಪ್ತಿ ಪಡಿಸಬಹುದು ಎಂದು ಪ್ರಾಚೀನ ಗ್ರಂಥಗಳಲ್ಲೂ ಉಲ್ಲೇಖಿಸಲಾಗಿದೆ. ಶಿವನನ್ನು ಶ್ರದ್ಧಾ ಭಕ್ತಿಯಿಂದ ಪೂಜಿಸಿದರೆ ಸ್ವರ್ಗದಲ್ಲಿ ಇರುವ ಎಲ್ಲಾ ದೇವತೆಗಳು ಸಹ ಸಮಾಧಾನವನ್ನು ಪಡೆದುಕೊಳ್ಳುತ್ತಾರೆ ಎನ್ನುವ ನಂಬಿಕೆಯಿದೆ.
🍓ಶಿವ ಮತ್ತು ಪಾರ್ವತಿಯ ಪೂಜೆಯ ಸಮಯದಲ್ಲಿ ಕೆಲವು ಸಂಗತಿಗಳನ್ನು ವಿಶೇಷವಾಗಿ ಅನುಸರಿಸಬೇಕು. ಅಂತೆಯೇ ಕೆಲವು ವಸ್ತುಗಳನ್ನು ಹಾಗೂ ವಿಧಾನಗಳನ್ನು ಪೂಜೆಯ ಸಂದರ್ಭದಲ್ಲಿ ಬಳಸಬಾರದು ಎಂದೂ ಹೇಳಲಾಗುತ್ತದೆ. ಶಿವ ಮತ್ತು ಪಾರ್ವತಿಗೆ ಇಷ್ಟವಿರದ ಸಂಗತಿಗಳಿಂದ ಪೂಜೆಗೈದರೆ ಅದು ಶಿವನ ಕೋಪಕ್ಕೆ ಕಾರಣವಾಗುವುದು. ಅದರಲ್ಲೂ ಶಿವನಿಗೆ ಅರಿಶಿಣವನ್ನು ಅರ್ಪಿಸುವುದು ಅಥವಾ ಲೇಪಿಸುವುದರ ಮೂಲಕ ಪೂಜೆಯನ್ನು ಮಾಡಬಾರದು. ಅದು ಶಿವನಿಗೆ ಇಷ್ಟವಿರದ ವಸ್ತು ಎನ್ನಲಾಗುವುದು.
.zoom-box { border: 3px solid #ff1493; /* Deeppink border */ background: #F7C0D8; /* Light pink background */ padding: 15px; border-radius: 12px; animation: zoomInOut 2s infinite;}@keyframes zoomInOut { 0% { transform: scale(1); } 50% { transform: scale(1.08); } 100% { transform: scale(1); }}"https://sridiya.com/kn/category/Rasi-Energy-Kavach?catid=50&c=Rasi_Energy_Kavach&s=KC_noti_btwn&m=Sushmitha"🌟 ಧನ ನಷ್ಟವನ್ನು ಕಡಿಮೆ ಮಾಡುತ್ತದೆ 🧿🛡️ಹೊಸ ಅವಕಾಶಗಳನ್ನು ನೀಡುತ್ತದೆ.🌟
👉 Click here if you want it 👈
👉ಮಾಡಿದ ಕೆಲಸಕ್ಕೆ ಮನ್ನಣೆ, ಖ್ಯಾತಿ ಮತ್ತು ಗೌರವ ದೊರೆಯುತ್ತದೆ.
👉ಸಂಪತ್ತು ಮತ್ತು ಶ್ರೇಯಸ್ಸನ್ನು ಆಕರ್ಷಿಸುತ್ತದೆ.
👉ಧನಾತ್ಮಕತೆಯನ್ನು ಮತ್ತು ಮನಶ್ಶಾಂತಿಯನ್ನು ಹೊಂದಿದೆ.👉 ಈಗ COD ಲಭ್ಯವಿದೆ
"https://sridiya.com/kn/category/Rasi-Energy-Kavach?catid=50&c=Rasi_Energy_Kavach&s=KC_noti_btwn&m=Sushmitha"
ಬಯಸುವವರು ಇಲ್ಲಿ Click ಮಾಡಿ
ಹೆಚ್ಚಿನ ವಿವರಗಳಿಗಾಗಿ ಈ ಸಂಖ್ಯೆಯನ್ನು ಸಂಪರ್ಕಿಸಿ::
"tel:8056601121" style="text-decoration:none;" 8056601121
"tel:9150432670" style="text-decoration:none;" 9150432670
🍓ಧರ್ಮ ಗ್ರಂಥಗಳ ಪ್ರಕಾರ ಶಿವಲಿಂಗ ಎಂಬುದು ಪುರುಷನನ್ನು ಪ್ರತಿನಿಧಿಸುವುದು. ವಿಶೇಷವಾಗಿ ಶಿವನು ಅಗಾಧ ಶಕ್ತಿಯನ್ನು ಹೊಂದಿರುವ ದೇವ. ಅವನು ಸದಾ ಬೆಂಕಿಯಂತೆ ಇರುವನು. ಅವನಿಗೆ ತಂಪಾಗಿಸುವಂತಹ ಶ್ರೀಗಂಧ, ಹಾಲು, ಭಸ್ಮ, ಪತ್ರೆಗಳಂತಹ ತಂಪಾದ ವಸ್ತುಗಳನ್ನು ನೀಡಬೇಕು. ಅರಿಶಿಣವನ್ನು ಶಿವನಿಗೆ ನೀಡಬಾರದು. ಅದು ಅವನ ತಾಪವನ್ನು ತಣ್ಣಗಾಗಿಸದು. ಲೌಕಿಕ ಸುಖಗಳಿಂದ ದೂರ ಇರುವ ಬ್ರಹ್ಮಚಾರಿಯ ರೀತಿಯಲ್ಲಿಯೇ ಬದುಕಿದ್ದ ಶಿವನಿಗೆ ಅರಿಶಿಣವನ್ನು ಎಂದಿಗೂ ಅರ್ಪಿಸಬಾರದು.
🍓ಅಲ್ಲದೆ, ಅರಿಶಿಣವು ಸ್ತ್ರೀಲಿಂಗದ ಸೌಂದರ್ಯ ಪ್ರಚೋದಕ ವಸ್ತು. ಅದು ಸೌಂದರ್ಯವನ್ನು ಪ್ರಚೋದಿಸುವುದು, ಅಲ್ಲದೆ ಮಾನಸಿಕವಾಗಿ ಲೌಖಿಕ ಸುಖದ ಕಡೆಗೆ ಬಾಗುವಂತೆ ಮಾಡುವುದು ಎನ್ನಲಾಗುತ್ತದೆ. ಅರಿಶಿಣವನ್ನು ಪಾರ್ವತಿ ದೇವಿಗೆ ಅರ್ಪಿಸಿದರೆ ಅದು ಅತ್ಯಂತ ಶ್ರೇಷ್ಠವಾದದ್ದು. ಆದರೆ ಶಿವನಿಗೆ ಅರ್ಪಿಸಬಾರದು.
🍓ಸಾಮಾನ್ಯವಾಗಿ ಶಿವನ ಪೂಜೆಯಲ್ಲಿ ಪ್ರಾಚೀನ ಕಾಲದಿಂದಲೂ ನಡೆದುಕೊಂಡು ಬಂದ ಧಾರ್ಮಿಕ ವಿಧಿ-ವಿಧಾನದ ಮೂಲಕವೇ ಶಿವನನ್ನು ಪೂಜಿಸಲಾಗುವುದು. ವಿಶೇಷ ಮಂತ್ರಗಳು ಹಾಗೂ ಧಾರ್ಮಿಕ ಸಂಸ್ಕಾರಗಳು ಶಿವನಿಗೆ ಅತ್ಯಂತ ಪ್ರಿಯವಾದ ಸಂಗತಿಗಳು. ಸರಳ ಪೂಜೆಯನ್ನು ಬಯಸುವ ಶಿವನ ಆಶೀರ್ವಾದವನ್ನು ನಾವು ಭಕ್ತಿಯ ಪೂಜೆ ಸಲ್ಲಿಸಿ ಪಡೆಯಬಹುದು. ಹಾಗಾಗಿ ಶಿವನ ಆರಾಧನೆ ಅಥವಾ ಶಿವಲಿಂಗದ ಪೂಜೆಯ ಸಂದರ್ಭದಲ್ಲಿ ಅಪ್ಪಿ ತಪ್ಪಿಯೂ ಕೆಲವು ವಸ್ತುಗಳನ್ನು ಬಳಸಬಾರದು. ಅವು ಶಿವನಿಗೆ ಇಷ್ಟವಾಗದ ಸಂಗತಿಗಳಾಗಿರುತ್ತವೆ. ಹಾಗಾದರೆ ನೀವು ಶಿವನ ಪೂಜೆಯನ್ನು ಮಾಡುವಾಗ ಯಾವ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎನ್ನುವುದನ್ನು ಇಲ್ಲಿ ನೀಡಲಾಗಿದೆ.
🍓ಸಿಂಧೂರ ಮತ್ತು ಕುಂಕುಮವು ಭಾರತೀಯ ಪುರಾಣಗಳು ಮತ್ತು ಧಾರ್ಮಿಕ ವಿಚಾರಗಳ ಅನುಸಾರ ಅತ್ಯಂತ ಪವಿತ್ರವಾದ ವಸ್ತುಗಳು. ಇವುಗಳನ್ನು ದೇವರ ಪೂಜಾ ಕ್ರಮದಲ್ಲಿ ಕಡ್ಡಾಯವಾಗಿ ಬಳಸಲಾಗುವುದು. ಆದರೆ ಶಿವನ ಆರಾಧನೆ ಅಥವಾ ಶಿವಲಿಂಗದ ಪೂಜೆಯ ಸಮಯದಲ್ಲಿ ಕುಂಕುಮವನ್ನು ಅರ್ಪಿಸಬಾರದು. ಕುಂಕುಮವು ಸ್ತ್ರೀಯರೊಂದಿಗೆ ಸಂಬಂಧವನ್ನು ಪಡೆದುಕೊಂಡಿದೆ. ಮಹಿಳೆಯರು ತಮ್ಮ ಪತಿಯ ದೀರ್ಘಾಯುಷ್ಯವನ್ನು ಆಶಿಸಿ ಕುಂಕುಮವನ್ನು ಬಳಸುತ್ತಾರೆ. ಶಿವನು ಲೌಕಿಕ ಜಗತ್ತು ಮತ್ತು ಸಂತೋಷಗಳೊಂದಿಗೆ ಸಂಬಂಧವನ್ನು ಪಡೆದುಕೊಂಡಿಲ್ಲ. ಭಸ್ಮ ಪ್ರಿಯನಾದ ಶಿವನಿಗೆ ಕುಂಕುಮವನ್ನು ಅರ್ಪಿಸಬಾರದು ಎಂದು ಹೇಳಲಾಗುತ್ತದೆ.
🍓ಸಾಮಾನ್ಯವಾಗಿ ದೇವತೆಗಳಿಗೆ ತೆಂಗಿನ ನೀರನ್ನು ನೈವೇದ್ಯವಾಗಿ ನೀಡುವುದು ಅಥವಾ ಅಭಿಷೇಕವನ್ನು ಕೈಗೊಳ್ಳಲಾಗುತ್ತದೆ. ಆದರೆ ಶಿವಲಿಂಗಕ್ಕೆ ಅಥವಾ ಶಿವನಿಗೆ ತೆಂಗಿನ ನೀರಿನ ಅಭಿಷೇಕವನ್ನು ಮಾಡುವುದಿಲ್ಲ. ಎಶಿವನು ನಿರ್ಮಲ ಮನಸ್ಸು ಹಾಗೂ ಸರಳ ಪೂಜೆಯನ್ನು ಬಯಸುವುದರಿಂದ ತೆಂಗಿನನೀರನ್ನು ಆಶಿಸುವುದಿಲ್ಲ. ಹಾಗಾಗಿ ಶಿವನ ಪೂಜೆಗೆ ತೆಂಗಿನ ನೀರು ನಿಷೇಧಿಸಲಾಗಿದೆ.
🍓ಪುರಾಣ ಕಥೆಯ ಪ್ರಕಾರ ಮತ್ತು ಶಿವ ಪುರಾಣದಲ್ಲಿ ಉಲ್ಲೇಖಿಸಲಾದ ವಿಷಯಗಳ ಪ್ರಕಾರ ಶಿವನು ಜಲಂಧರ ಎಂಬ ರಾಕ್ಷಸನನ್ನು ಸುಟ್ಟುಹಾಕಿದನು. ಪತಿವ್ರತೆಯಾದ ವೃಂದಾಳ ಗಂಡನಾಗಿದ್ದ ಈತನು ದುಷ್ಟನಾಗಿದ್ದು, ಎಲ್ಲರಿಗೂ ತೊಂದರೆಯನ್ನು ನೀಡುತ್ತಿದ್ದನು. ಹಾಗಾಗಿ ವಿಷ್ಣು ಜಲಂಧರನ ರೂಪದಲ್ಲಿ ಬಂದು ಅವಳ ಪರಿಶುದ್ಧತೆಯನ್ನು ಹಾಳು ಮಾಡಿದನು. ನಂತರ ಅವಳನ್ನು ವಿವಾಹವಾದನು. ಈ ಸಂಗತಿಯಿಂದ ತುಳಸಿಗೆ ಶಿವನ ಮೇಲೆ ಕೋಪ ಬಂದಿತು. ಅದಕ್ಕಾಗಿ ತುಳಸಿ ತನ್ನ ಎಲೆಗಳಿಂದ ಶಿವನನ್ನು ಪೂಜಿಸಬಾರದು ಎಂದು ಬಹಿಷ್ಕರಿಸಿದ್ದಳು. ಈ ಹಿನ್ನೆಲೆಯಲ್ಲಿಯೇ ವಿಷ್ಣುವಿನ ಪತ್ನಿಯಾದ ತುಳಸಿಯನ್ನು ಶಿವನ ಪೂಜೆಗೆ ಬಳಸುವುದಿಲ್ಲ.
🍓ಪುರಾಣ ಕಥೆಯ ಪ್ರಕಾರ ಒಮ್ಮೆ ವಿಷ್ಣು ಮತ್ತು ಬ್ರಹ್ಮನ ನಡುವೆ ಯಾರು ಶ್ರೇಷ್ಠರು ಎನ್ನುವ ವಿಚಾರದ ಅಡಿಯಲ್ಲಿ ವಾಗ್ವಾದ ನಡೆಯುತ್ತಿತ್ತು. ನಂತರ ಯಾರು ಹೆಚ್ಚು ಶಕ್ತಿಶಾಲಿ ಎನ್ನುವುದನ್ನು ಕಂಡುಹಿಡಿಯಲು ಮುಂದಾದರು. ಆಗ ಶಿವನು ಜ್ಯೋತಿರ್ಲಿಂಗದ ರೂಪದಲ್ಲಿ ಕಾಣಿಸಿಕೊಂಡನು. ಇಬ್ಬರೂ ಪರಸ್ಪರ ಆಯುಧಗಳನ್ನು ಹಿಡಿದು ಯಾರು ಶ್ರೇಷ್ಠರು ಎನ್ನುವುದನ್ನು ಸಾಬೀತು ಪಡಿಸಲು ಮುಂದಾದರು. ಆಗ ಶಿವನು ಜಗತ್ತಿನ ಮೂಲ ಮತ್ತು ಅಂತ್ಯವನ್ನು ಕಂಡುಹಿಡಿಯಲು ಶಿವನು ಆದೇಶಿಸಿದನು. ಆಗ ವಿಷ್ಣು ದೇವನು ತನ್ನ ಸೋಲನ್ನು ಒಪ್ಪಿಕೊಂಡನು. ಆದರೆ ಬ್ರಹ್ಮನು ತಾನು ಉತ್ತರವನ್ನು ಕಂಡುಹಿಡಿದಿರುವುದಾಗಿ ಸುಳ್ಳು ಹೇಳಿದನು. ಬ್ರಹ್ಮ ಸುಳ್ಳು ಹೇಳುವಾಗ ಅದಕ್ಕೆ ಕೇತಕಿಯ ಹೂವು ಬೆಂಬಲಿಸಿತು. ಆಗ ಶಿವನು ಬ್ರಹ್ಮನ ಒಂದು ತಲೆಯನ್ನು ಕತ್ತರಿಸಿದನು. ಜೊತೆಗೆ ತನ್ನ ಪೂಜೆ ಮಡುವಾಗ ಎಂದಿಗೂ ಕೇತಕಿಯ ಹೂವನ್ನು ಬಳಸಬಾರದು ಎಂದು ಶಪಿಸಿದನು. ಅಂದಿನಿಂದ ಕೇತಕಿಯ ಹೂವನ್ನು ಶಿವಲಿಂಗದ ಪೂಜೆಗೆ ಬಳಸುವುದಿಲ್ಲ.
🍓ಶಿವ, ಶಂಕರ, ಈಶ್ವರ, ಪರಮೇಶ್ವರ ಹೀಗೆ ವಿವಿಧ ನಾಮಗಳಿಂದ ಕರೆಯಲಾಗುವ ಶಿವನು ಅತ್ಯಂತ ಸರಳ ಹಾಗೂ ಭಕ್ತಿಯನ್ನು ಮೆಚ್ಚುವ ದೇವನು. ಅಪಾರ ಶಕ್ತಿಯನ್ನು ಹೊಂದಿರುವ ಶಿವ ದೇವನು ತನ್ನ ಭಕ್ತರ ಆಶಯವನ್ನು ಬಹುಬೇಗ ಈಡೇರಿಸುವನು. ಹಾಗಾಗಿ ಶಿವನ ಕೋಪಕ್ಕೆ ಕಾರಣವಾಗುವ ವಸ್ತುಗಳನ್ನು ಶಿವಲಿಂಗ ಅಥವಾ ಶಿವನ ಪೂಜೆಗೆ ಬಳಸದೆ, ಅವನಿಗೆ ಪ್ರಿಯವಾದ ವಸ್ತುಗಳನ್ನು ನಿರ್ಮಲ ಮನಸ್ಸಿನಿಂದ ಅರ್ಪಿಸಬೇಕು. ಆಗ ನಮ್ಮ ಜೀವನದಲ್ಲಿ ಸುಖ ಸಂತೋಷ ನೆಲೆಸುವುದು. ಮನದಿಂಗಿತಗಳು ಸುಲಭವಾಗಿ ನೆರವೇರುವುದು.
ನಿತ್ರ ಕ್ಯಾಲೆಂಡರ್ ಅನ್ನು ನೀವು ಆಂಡ್ರಾಯಿಡ್ ಫೋನ್ ಮುಖಾಂತರ ಉಚಿತವಾಗಿ ಡೌನ್ಲೋಡ್ ಮಾಡಿಕೊಳ್ಳಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ https://bit.ly/33Y8uiS