ಆಪತ್ಬಾಂಧವ ಕೆಎಲ್ ರಾಹುಲ್!; ಮತ್ತೊಂದು ಸೂಪರ್ ಚೇಸ್ ನಲ್ಲಿ ಮುಂಬೈಗೆ ಸೋಲಿನ ರುಚಿ ತೋರಿಸಿದ ಕರ್ನಾಟಕ ರಣಜಿ ಸೆಮಿಫೈನಲ್ ಗೆ
Karnataka Vs Mumbai Ranji Match- ರಣಜಿಯಲ್ಲಿ ಕರ್ನಾಟಕ ತಂಡದ ಅದ್ಭುತ ಪ್ರದರ್ಶನ ಮುಂದುವರಿದಿದೆ. ಗುಂಪು ಹಂತದ ಕೊನೇ ಪಂದ್ಯದಲ್ಲಿ ಪಂಜಾಬ್ ವಿರುದ್ಧ ಅದ್ಭುತವಾಗಿ ಚೇಸ್ ನಾಕೌಟ್ ಹಂತಕ್ಕೇರಿದ್ದ ದೇವದತ್ ಪಡಿಕ್ಕಲ್ ಬಳಗ ಇದೀಗ ಮುಂಬೈ ತಂಡವನ್ನು ಸೋಲಿಸಿ ಸೆಮಿಫೈನಲ್ ಗೇರಿದೆ. ಕ್ನಾರ್ಟರ್ ಫೈನಲ್ ಪಂದ್ಯದಲ್ಲಿ ಅನುಭವಿ ಕೆಎಲ್ ರಾಹುಲ್ ಅವರ ಅಮೋಘ ಶತಕ ಮತ್ತು ರವಿಚಂದ್ರನ್ ಸ್ಮರಣ್ ಅವರ ತಾಳ್ಮೆಯ ಅದೇಯ ಅರ್ಧಶತಕಗಳ ನೆರವಿನಿಂದ ಕರ್ನಾಟಕ ತಂಡ 4 ವಿಕೆಟ್ ಗಳ ಜಯ ಗಳಿಸಿದೆ.