#📜ಪ್ರಚಲಿತ ವಿದ್ಯಮಾನ📜
ಯುವಕರಿಗೆ ಪಕೋಡ ಮಾರಿ ಎಂದವರಿಂದ ಉದ್ಯೋಗದ ಮಾತು
ಕರ್ನಾಟಕ ರಾಜ್ಯದಲ್ಲಿ 2013 ರಿಂದ 2018ರ ಅವಧಿಯಲ್ಲಿ ಅತಿ ಹೆಚ್ಚು ರಾಜ್ಯ ಸರ್ಕಾರದ ಹುದ್ದೆಗಳನ್ನು ತುಂಬಿರುತ್ತಾರೆ. ಈ ಅವಧಿಯಲ್ಲಿ ಒಂದು ಲಕ್ಷದ ಮೂವತ್ತು ಸಾವಿರಕ್ಕೂ ಹೆಚ್ಚು ಹುದ್ದೆಗಳನ್ನು ಭರ್ತಿ ಮಾಡಿರುತ್ತಾರೆ. ಈ ಅವಧಿಯಲ್ಲಿ ಸರ್ಕಾರವಿದ್ದದ್ದು ಕಾಂಗ್ರೆಸ್ ಪಕ್ಷದ ಸಿದ್ದರಾಮಯ್ಯ ನೇತೃತ್ವದ ಸರ್ಕಾರ.
2023ರಿಂದ ಇಲ್ಲಿಯ ತನಕ 40,000 ಹುದ್ದೆಗಳನ್ನು ವಿವಿಧ ಇಲಾಖೆಗಳಲ್ಲಿ ತುಂಬಿರುತ್ತಾರೆ ಮತ್ತು ಮತ್ತೆ ಸುಮಾರು 60 ಸಾವಿರಕ್ಕೂ ಹೆಚ್ಚು ಹುದ್ದೆಗಳನ್ನು ತುಂಬಲು ಆರ್ಥಿಕ ಇಲಾಖೆಯ ಅನುಮತಿಯನ್ನು ಪಡೆದಿದ್ದಾರೆ.
2019 ರಿಂದ 2023ರ ಅವಧಿಯಲ್ಲಿ ಒಟ್ಟಾರೆ ನಾಲ್ಕು ವರ್ಷದ ಅವಧಿಯಲ್ಲಿ ಕೇವಲ 40,000 ಹುದ್ದೆಗಳನ್ನು ಅಷ್ಟೇ ಬಿಜೆಪಿ ಸರ್ಕಾರ ತುಂಬಿರುತ್ತದೆ.
ಕೇಂದ್ರದಲ್ಲಿ 40 ಲಕ್ಷ ಉದ್ಯೋಗಿಗಳ ಒಟ್ಟಾರೆ ಸಂಖ್ಯೆಯಲ್ಲಿ ಸುಮಾರು 10 ಲಕ್ಷ ಉದ್ಯೋಗಗಳು ಖಾಲಿ ಇದೆ.
ಪ್ರತಿ ವರ್ಷ ಎರಡು ಕೋಟಿ ಹುದ್ದೆಗಳ ಸೃಷ್ಟಿ ಮಾಡುವುದಾಗಿ ಹೇಳಿದಂತಹ ಕೇಂದ್ರದ ಬಿಜೆಪಿ ಸರ್ಕಾರ ಕಳೆದ 11 ವರ್ಷದ ಅವಧಿಯಲ್ಲಿ ಕೇವಲ ಏಳು ಲಕ್ಷ ಹುದ್ದೆಗಳನ್ನು ಮಾತ್ರ ತುಂಬಿರುತ್ತಾರೆ. ಇದರಲ್ಲಿ ಹೆಚ್ಚಾಗಿ ರೈಲ್ವೆ ಇಲಾಖೆ ಮತ್ತು ರಕ್ಷಣಾ ವಿಭಾಗದಲ್ಲಿ ಉದ್ಯೋಗಗಳನ್ನು ನೀಡಿರುತ್ತಾರೆ.
ಭಾರತದಲ್ಲಿ ಸುಮಾರು 3 ಕೋಟಿ ನಿರುದ್ಯೋಗಿ ಯುವ ಜನತೆ ಇದೆ ಎನ್ನುವ ಮಾಹಿತಿ ಇದೆ ಬಿಜೆಪಿ ನಾಯಕರು ರಾಜ್ಯ ಸರ್ಕಾರ ಖಾಲಿ ಇರುವ ಹುದ್ದೆ ತುಂಬಿ ಎಂದು ಹೋರಾಟ ಮಾಡುವ ಬದಲಿಗೆ ಕೇಂದ್ರದಲ್ಲಿ ಖಾಲಿ ಇರುವ ಸುಮಾರು ಹತ್ತು ಲಕ್ಷ ಉದ್ಯೋಗಗಳನ್ನು ತುಂಬುವಂತೆ ಒತ್ತಾಯವನ್ನು ಮಾಡಲಿ.
ರಾಜ್ಯ ಸರ್ಕಾರ ನಿರುದ್ಯೋಗಿ ಜನರಿಗೆ ಅನುಕೂಲವಾಗಲಿ ಎನ್ನುವ ಕಾರಣಕ್ಕೆ ಯುವನಿಧಿ ಯೋಜನೆಯನ್ನು ಜಾರಿಗೆ ತಂದು ಈ ಮೂಲಕ ನಿರುದ್ಯೋಗಿ ಪದವೀಧರರಿಗೆ ಮಾಸಿಕವಾಗಿ 3000 ಪ್ರೋತ್ಸಾಹಧನವನ್ನು ಕೊಡುವಂತಹ ಕೆಲಸವನ್ನ ಮಾಡಿ ಅವರುಗಳು ವಿವಿಧ ಇಲಾಖೆಗಳಲ್ಲಿನ ಸಂದರ್ಶನಗಳಿಗೆ ಸಿದ್ದರಾಗಲು ಅನುಕೂಲವನ್ನು ಕಲ್ಪಿಸಿಕೊಡಲಾಗಿದೆ.
ಹಾಲಿ ಇರುವಂತ ಎಲ್ಲ ಉದ್ಯೋಗಗಳನ್ನು ತುಂಬಬೇಕಾದದ್ದು ಸರಿಯಾದ ಮಾತು. ಆದರೆ ಯಾವುದೇ ರಾಜ್ಯ ಸರ್ಕಾರದಲ್ಲಿ ಮುಂಗಡಪತ್ರದ ಒಟ್ಟು ಮೊತ್ತದಲ್ಲಿ ಕೇವಲ 40ರಷ್ಟು ಭಾಗವನ್ನು ಮಾತ್ರ ಆಡಳಿತಾತ್ಮಕ ನಿರ್ವಹಣೆ ವೆಚ್ಚವನ್ನಾಗಿ ವೆಚ್ಚ ಮಾಡಬಹುದು.
ಆರ್ಥಿಕ ಇಲಾಖೆಯ ಮಾನದಂಡಗಳ ಆಧಾರದ ಮೇಲೆ ಸರ್ಕಾರದ ಹುದ್ದೆಗಳನ್ನು ತುಂಬಬೇಕಾಗಿರುತ್ತದೆ. ಸರ್ಕಾರ ನಡೆಸಿದ ಬಿಜೆಪಿ ನಾಯಕರಿಗೆ ಕನಿಷ್ಠ ಜ್ಞಾನವು ಇಲ್ಲದೆ ಇರುವುದು ಬೇಸರದ ಸಂಗತಿ.
ದೇಶದಲ್ಲಿ ನಿರುದ್ಯೋಗ ದೊಡ್ಡ ಪ್ರಮಾಣದಲ್ಲಿ ಬೆಳೆಯುತ್ತಿದೆ. ವಿದ್ಯಾವಂತರು ಉದ್ಯೋಗವಿಲ್ಲದೆ ಪರಿತಪಿಸುತ್ತಿದ್ದಾರೆ. ಈಗ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಎಂಬ ಭೂತ ಇಡೀ ಉದ್ಯೋಗ ವ್ಯವಸ್ಥೆಯನ್ನು ಹಾಳು ಮಾಡುವ ಸಾಧ್ಯತೆ ಇದೆ. ಪ್ರತಿದಿನ ಅನೇಕ ಕಂಪನಿಗಳಲ್ಲಿ ಮತ್ತು ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಸಂಸ್ಥೆಗಳಲ್ಲಿ ಹೇಳದೆ ಕೇಳದೆ ಉದ್ಯೋಗದಿಂದ ತೆಗೆದು ಹಾಕುತ್ತಿದ್ದಾರೆ.
ಬಿಜೆಪಿ ನಾಯಕರು ಉದ್ಯೋಗಕ್ಕಾಗಿ ಹೋರಾಟ ಮಾಡುತ್ತಿರುವ ಯುವಕರ ಪರವಾಗಿ ಮಾತನಾಡುವ ನೆಪದಲ್ಲಿ ರಾಜಕಾರಣ ಮಾಡಲು ಹೋಗಿ ಅವಮಾನ ಮಾಡಿಸಿಕೊಂಡು ಬುದ್ಧಿ ಬಾರದೆ ಮಾತನಾಡುತ್ತಿದ್ದಾರೆ. ರಾಜ್ಯ ಸರ್ಕಾರವನ್ನು ಟೀಕೆ ಮಾಡುವ ಮೊದಲು ಕೇಂದ್ರ ಸರ್ಕಾರದಲ್ಲಿ ಖಾಲಿ ಇರುವ 10 ಲಕ್ಷ ಹುದ್ದೆಗಳನ್ನು ತುಂಬಲು ಹೇಳಿ. ಜೊತೆಗೆ ಅವರು ಕೊಟ್ಟ ಮಾತಿನಂತೆ ಪ್ರತಿ ವರ್ಷ ಎರಡು ಕೋಟಿ ಉದ್ಯೋಗದ ಲೆಕ್ಕದಲ್ಲಿ ಕೂಡಲೇ ಕನಿಷ್ಠ 20 ಕೋಟಿ ಉದ್ಯೋಗವನ್ನು ಸೃಷ್ಟಿ ಮಾಡುವ ಆರ್ಥಿಕ ಮತ್ತು ಆಡಳಿತಾತ್ಮಕ ವ್ಯವಸ್ಥೆಯನ್ನು ಸಿದ್ಧ ಮಾಡಿಕೊಡಲು ಒತ್ತಾಯವನ್ನು ಮಾಡಿ ಯುವಜನರ ಬಗ್ಗೆ ನಿಮ್ಮ ನಿಜವಾದ ಕಾಳಜಿಯನ್ನ ವ್ಯಕ್ತಪಡಿಸಿ.
ನಿರುದ್ಯೋಗಿ ಯುವಜನರ ಪರವಾಗಿ ನಾವಿದ್ದೇವೆ ಎಂದು ರಾಜಕಾರಣ ಮಾಡುವ ಮಾತುಗಳನ್ನು ಹೇಳಿದರೆ ಕೇಳಿಸಿಕೊಳ್ಳಲು ಈ ದೇಶದಲ್ಲಿ ಯುವ ಜನರು ತಿಳುವಳಿಕೆ ಇಲ್ಲದವರಲ್ಲ. ಕಳೆದ 11 ವರ್ಷದಲ್ಲಿ ಕೇಂದ್ರ ಸರ್ಕಾರದಲ್ಲಿ ಉದ್ಯೋಗದ ಪ್ರಮಾಣ ಎಷ್ಟು ಏರಿಕೆಯಾಗಿದೆ ಮತ್ತು ನಿರುದ್ಯೋಗದ ಪ್ರಮಾಣ ಎಷ್ಟು ಏರಿದೆ ಎನ್ನುವ ಮಾಹಿತಿ ಎಲ್ಲ ಯುವಜನರಲ್ಲೂ ಇದೆ ಎನ್ನುವ ಜ್ಞಾನ ಬಿಜೆಪಿ ನಾಯಕರಿಗೆ ಇರಲಿ.
- ಕೆ ಎಸ್ ನಾಗರಾಜ್, ಬೆಂಗಳೂರು
#Talk #employment #sell #pakodas #youth #ksnagaraj #malgudiexpress #malgudinews #news #TopNews