Anthoniraj
600 views
2 days ago
ಬೆಳವಾಡಿ ಮಲ್ಲಮ್ಮ. ಭಾಗ-೧. ಶಿವಾಜಿಯ ಸೊಂಟ ಮುರಿದು '"ಕನ್ನಡ ದೇಶದ " ಕೀರ್ತಿ ಪತಾಕೆ ಹಾರಿಸಿದ ಕೆಚ್ಚೆದೆಯ ಕನ್ನಡತಿ "ತಾಯಿ ಬೆಳವಾಡಿ ಮಲ್ಲಮ್ಮ".💛❤ ನಿಜಕ್ಕೂ ಅಂದು ನಡೆದದ್ದೇನು? ಹಲವು ಕನ್ನಡ ಹಾಗೂ ಬ್ರಿಟಿಷ್ ಇತಿಹಾಸಕಾರರು ಬೈಲಹೊಂಗಲ ಯುದ್ಧ, ಇಡೀ ಶಿವಾಜಿಯ ಜೀವಮಾನದಲ್ಲಿಯೇ, ಆತನ‌ ಮನಸ್ಸಿನಲ್ಲಿ ಅವಮಾನಕಾರಿಯಾಗಿ ಉಳಿದ ಯುದ್ಧ ಎನ್ನುತ್ತಾರೆ. ಸೋಂದೆ ಸಂಸ್ಥಾನದ ಮೇಲೆ ಯುದ್ಧ ಮಾಡಿ ಈಶಪ್ರಭುವನ್ನು‌ ಕೊಂದ ಶಿವಾಜಿಯ ಸೈನ್ಯ, ಇನ್ನೇನು ಇಡೀ ಸೋಂದೆ ಸಂಸ್ಥಾನವನ್ನೇ ತಮ್ಮ ಮರಾಠ ಸಾಮ್ರಾಜ್ಯದೊಳಕ್ಕೆ ವಿಲೀನಗೊಳಿಸಿಕೊಳ್ಳಲು ಮುಂದಾದ ಹೊತ್ತಲ್ಲಿ ಮಹಾಕಾಳಿಯಂತೆ ಎದ್ದು ಬಂದವಳೇ ಈಶಪ್ರಭುವಿನ‌ ಹೆಂಡತಿ, ಆ ದಿನಗಳಲ್ಲಿಯೇ ಚೊಚ್ಚಲ ಹೆರಿಗೆಯಾಗಿದ್ದ ಬಾಣಂತಿ ಮಲ್ಲಮ್ಮ, ಬೆಳವಾಡಿ ಮಲ್ಲಮ್ಮ. ಭಾರತದ ಬಹುತೇಕ ರಾಜರು ಹೆಣ್ಣುಗಳನ್ನು ತಮ್ಮ ಆಸ್ಥಾನದಲ್ಲಿ ಕುಣಿಯಲಿಕ್ಕೆ ಬಳಸುತ್ತಿದ್ದ ಆ ಕಾಲದಲ್ಲಿ ಕನ್ನಡ ನಾಡು, ಅದೆಷ್ಟೋ ಹೆಣ್ಣುಗಳ ಸೈನ್ಯವನ್ನೇ ಪಡೆದಿತ್ತು.‌ ಅಂತಹ ಸೈನ್ಯಗಳಲ್ಲಿ ಮಲ್ಲಮ್ಮನ ಸೈನ್ಯವೂ ಒಂದು.‌ ಈಶಪ್ರಭುವನ್ನು ಕೊಂದು ಬೈಲಹೊಂಗಲದಲ್ಲಿ ಬಿಡಾರ ಹೂಡಿದ್ದ ಶಿವಾಜಿಯ ಮರಾಠ ಸೈನ್ಯ, ಮರುದಿನ ಮುಂಜಾನೆಯ ಹೊತ್ತಿಗೆ ತಮಗೆ ಬೇಕಾದ ದಿನೋಪಯೋಗಿ ಆಹಾರ ಪದಾರ್ಥಗಳಿಗಾಗಿ ಬೈಲಹೊಂಗಲ ಹಾಗೂ ಸುತ್ತಮುತ್ತಲಿನ ಪ್ರದೇಶಗಳನ್ನು‌ ಕೊಳ್ಳೆ ಹೊಡೆಯಲಾರಂಭಿಸುತ್ತಾರೆ. ತನ್ನ ಗಂಡನು ಯುದ್ಧದಲ್ಲಿ ವೀರಮರಣ ಅಪ್ಪಿದ ವಿಚಾರ ತಿಳಿದ ಮಲ್ಲಮ್ಮನ ಎದೆಯಲ್ಲಿ ದುಃಖ ಆವರಿಸಿದರೆ, ಮತ್ತದೇ ಪರದೇಸಿಗಳು ತಮ್ಮ ಆಸ್ಥಾನದ ಜನರನ್ನು ಕೊಳ್ಳೆ ಹೊಡೆಯುತ್ತಿದ್ದ ವಿಚಾರವನ್ನು ಕೇಳಿ ಉಗ್ರಳಾಗುತ್ತಾಳೆ.‌ ಚಿತೆಗೇರಿದ ಗಂಡ ಈಶಫ್ರಭುವಿನ‌ ಶವದೆದುರು “ಸೋಂದೆ ಎಂದಿಗೂ ಪರದೇಸಿಗಳ ಪಾಲಾಗದು, ಇದು ನಿಮ್ಮಾಣೆ” ಎಂದು ಪ್ರತಿಜ್ಞೆ ಮಾಡುತ್ತಾಳೆ. ಇತ್ತ ಬೈಲಹೊಂಗಲ ಹಾಗೂ ಸುತ್ತಲಿನ ಹಳ್ಳಿಗಳಿಗೆ ನುಗ್ಗಿದ ಮರಾಠರ ಸೈನ್ಯ, ದನಕರಗಳನ್ನೂ ಹೆಣ್ಣು ಹೊನ್ನುಗಳನ್ನೂ ಕೊಳ್ಳೆ ಹೊಡೆಯುತ್ತಾರೆ.‌ ಅತ್ತ ಬೆಳವಾಡಿ ಮಲ್ಲಮ್ಮ ತನ್ನ ಹೆಣ್ಣು ಹುಲಿಗಳ ಸೈನ್ಯದೊಂದಿದೆ ಮರಾಠರ ಬಿಡಾರಕ್ಕೆ ನುಗ್ಗುತ್ತಾಳೆ. ಹೆಣ್ಣು ಹೊನ್ನು ದನಕರುಗಳನ್ನು ಬಿಡುಗಡೆಗೊಳಿಸುತ್ತದೆ. ಅಂದು ಬಿಡಾರದಲ್ಲಿದ್ದ ಅರ್ಧಕ್ಕರ್ಧ ಸೈನಿಕರು ನರಕದ ಬಾಗಿಲನ್ನು‌ ತಟ್ಟಿದ್ದರು. ಸುದ್ದಿ ತಿಳಿದ ಶಿವಾಜಿ ಯುದ್ಧವನ್ನು ಇನ್ನಷ್ಟು ಚುರುಕುಗೊಳಿಸಲು ಆದೇಶಿಸುತ್ತಾನೆ.‌ ಆತ ಮಲ್ಲಮ್ಮನ ಹೆಣ್ಣಹುಲಿಗಳ ಸೈನ್ಯದ ಸಾಮಾರ್ಥ್ಯವನ್ನು ಕಡೆಗಣಿಸಿದ್ದಂತು ನಿಜ. ಈ ಯುದ್ಧ ತನ್ನಿಡೀ ಜೀವನವನ್ನೆಲ್ಲ ಕೊರಗಿನಲ್ಲಿ ಮುಳುಗಿಸುತ್ತದೆ ಎಂಬ ಅಂದಾಜೂ ಸಹ ಅವನಿಗಿರಲಿಲ್ಲ. ಹೀಗೆ ಯುದ್ಧದಲ್ಲಿ ಮೊದಲ ಬಾರಿಗೆ ಮಲ್ಲಮ್ಮ ಹಾಗು ಶಿವಾಜಿಯ ಮೊದಲ ಮುಖಾಮುಖಿಯಾದದ್ದು 22ನೇ ದಿನ. ಬೇರಾವ ಯುದ್ಧದಲ್ಲಿಯೂ ಅಷ್ಟು ಸೈನಿಕರನ್ನು ಕಳೆದುಕೊಂಡಿರದ ಶಿವಾಜಿಗೆ, ಬೆಳವಾಡಿಯ ಯುದ್ಧ ಬರೀ ಸೋಲು‌ ನಿರಾಸೆಗಳನ್ನೇ ಉಣಿಸಿತ್ತು.‌ ಇದರಿಂದ ಕುಗ್ಗಿದ್ದ ಶಿವಾಜಿ, ಬೆಳವಾಡಿ ಮಲ್ಲಮ್ಮನೆದುರು ಸಂದಾನವಾಗುವನಂತೆ ಮಾತುಗಳನ್ನಾಡಿ ಮಲ್ಲಮ್ಮನ ಸೈನ್ಯವು ಯುದ್ಧದಿಂದ ಹಿಂದೆ ಸರಿಯುವಂತೆ ಮಾಡುತ್ತಾನೆ.‌ ಆದರೆ ನಂತರ ನಡೆದದ್ದೇನು? ಮತ್ತದೇ ನಂಬಿಕೆ ದ್ರೋಹ! ಅತ್ತ ಬೆಳವಾಡಿ ಮಲ್ಲಮ್ಮನ‌ ಸೈನ್ಯವು ಸಂದಾನವಾಯಿತೆಂದು ಆಸ್ಥಾನಕ್ಕೆ ತೆರಳುವ ತಯಾರಿ ಮಾಡಿಕೊಳ್ಳುತ್ತಿದ್ದರೆ, ಇತ್ತ ಶಿವಾಜಿ ಸಂದಾನವಾದ ವಿಚಾರವನ್ನು ಸೇನಾಧಿಪತಿಗಳಿಗೆ ತಿಳಿಸದೆ, ಇಲ್ಲೂ ಕುತಂತ್ರದಿಂದ ಬೆಳವಾಡಿಯನ್ನು ಕಬಳಿಸಿಕೊಳ್ಳಲು, ತನಗಾದ ಇಡೀ ಜೀವಮಾನದ ಅವಮಾನವೊಂದನ್ನು ಅಳಿಸಿಹಾಕುವ ದುಃಸಾಹಸಕ್ಕೆ ಕೈ ಹಾಕುತ್ತಾನೆ. ಯುದ್ಧ ಮುಂದುವರೆಸುತ್ತಾನೆ! ಶಿವಾಜಿಯ ನಸಗುನ್ನಿ ಬುದ್ದಿಯಿಂದ ಇನ್ನಷ್ಟು ಉಗ್ರಳಾದ ಮಲ್ಲಮ್ಮ, ತನ್ನ ಸೈನ್ಯವನ್ನು ಈಗ ಉರಿಮಾರಿಯರ ಸೈನ್ಯವನ್ನಾಗಿಸುತ್ತಾಳೆ! ನಿರಂತರ ಐದು ದಿನಗಳ ಯುದ್ಧದಲ್ಲಿ ಶಿವಾಜಿಯ ಮರಾಠ ಸೈನ್ಯ ಅಕ್ಷರಶಃ ನಾಮವಶೇಷಗೊಳ್ಳುತ್ತದೆ.‌ ಯುದ್ಧದ ಕೊನೆಯ ದಿನ ಮರಾಠರ ಮಂತ್ರಿಯೊಬ್ಬ ಬೆಳವಾಡಿ ಮಲ್ಲಮ್ಮನ‌ ಸವಾರಿ ಕುದುರೆಯ ಕಾಲು ಮುರಿದು ನೆಲಕ್ಕುರುಳಿಸುತ್ತಾನೆ. ಚಂಡಿಗೆ ಹುಲಿವಾಹನವಿದ್ದರೇನು? ಇಲ್ಲದಿದ್ದರೇನು? ಚಂಡಿ ಚಂಡಿಯೇ! ನೆಲ್ಲಕ್ಕೆ ಬಿದ್ದವಳೇ ಎದ್ದು ನಿಂತು, ಕುದುರೆಯ ಕಾಲು‌ ಕಡಿದವನತ್ತ ಓಡಿ ಅವನ ತಲೆ ಕತ್ತರಿಸುತ್ತಾಳೆ. ಅಡ್ಡ ಬಂದವರ ರುಂಡ ಮುಂಡಗಳ ಚೆಂಡಾಡುತ್ತಾ, ಶಿವಾಜಿ ಅಡಗಿ ಕುಳಿತಿದ್ದ ಬಿಡಾರದತ್ತ ನುಗುತ್ತಾಳೆ. ಶಿವಾಜಿಗಿದು ಗಾಯದ ಮೇಲೆ ಬರೆ ಎಳೆದಂತಹ ದುಃಸ್ಥಿತಿ. ತನ್ನ ಕುತಂತ್ರವೂ ಫಲಿಸದೇ ಹೋದದ್ದು ಅವನನ್ನು ಬಹಳಷ್ಟು ಕುಗ್ಗಿಸಿತ್ತು. ಮಲ್ಲಮ್ಮ‌ ಎದುರಾಗುತ್ತಿದ್ದಂತೆ ಅವಳೆದುರು ನೆಲಕ್ಕುರುಳಿದ ಶಿವಾಜಿ, ಆಕೆಗೆ ಕತ್ತಿಯನ್ನು ಕೊಡುತ್ತಾ, “ಇಗೋ ತಾಯೇ, ನಾನಿನ್ನು ಬದುಕಲು ಅರ್ಹನಲ್ಲ, ನನ್ನ ಶಿರಚ್ಛೇದವಾಗಲಿ” ಎಂದು ಇಳಿಧನಿಯಲ್ಲಿಯೇ ಊಳಿಡುತ್ತಾನೆ. ಅಂದೂ ಇಂದೂ ಕನ್ನಡಿಗರ ದೌರ್ಬಲ್ಯ ಇದೇ ಅಲ್ಲವೇ? ಶರಣಾದವರ ತಲೆಕಾಯುವುದು! ಇಂಥಹ ರಾಜನೊಬ್ಬ ತನ್ನೆದುರು ಸೋತು ಆತ್ಮಾಹುತಿಗೆ ಸಿದ್ದನಾಗಿ ಕುಳಿತಿದ್ದದ್ದನ್ನು ಕಂಡ‌ ಮಲ್ಲಮ್ಮನ ಕೆಂಡದೆದೆ ತಣ್ಣಗಾಗುತ್ತಾ ಹೋಯಿತೇನೋ! ತನ್ನ ಗಂಡನನ್ನು ಕೊಂದ ಇವನು, ಇನ್ನೂ ಜೀವನವಿಡಿ ನಾ ಕೊಟ್ಟ ಪ್ರಾಣ ಭಿಕ್ಷೆಯಲ್ಲೇ ಬದುಕುವಂತಾಗಲಿ, ಇದಕ್ಕಿಂತಲೂ ದೊಡ್ಡ ಶಿಕ್ಷೆ ಮತ್ತೊಂದು ಇರಲಿಕ್ಕಿಲ್ಲವೆಂದು ಆತನಿಗೆ ಪ್ರಾಣ ಭಿಕ್ಷೆ ನೀಡುತ್ತಾಳೆ. ಸೋಂದೆ ಸಂಸ್ಥಾನ‌ ಕನ್ನಡಿಗರ ಪಾಲಾಗುತ್ತದೆ. ಅಂದೇನಾದರೂ ಸೋಂದೆ ಸಂಸ್ಥಾನ ಮರಾಠರ ವಶವಾಗಿದ್ದಿದ್ದೆ ಆದರೆ, ಇಂದು ಅರ್ಧಕ್ಕರ್ಧ ಬೆಳಗಾವಿ ಜಿಲ್ಲೆಯಲ್ಲಿ ಮರಾಠಿಗರ ಸಂಖ್ಯೆ ಹೆಚ್ಚಾಗಿ, ಬೆಳಗಾವಿ ಮಹಾರಾಷ್ಟ್ರದ ಪಾಲಾಗಿತ್ತಿತ್ತು. ಬೆಳಗಾವಿಯ ಕನ್ನಡಿಗರು ಇಂದು ಕರ್ನಾಟಕವು ತಮ್ಮ ರಾಜ್ಯವಾಗಿರುವುದಕ್ಕೆ ತಾಯಿ ಬೆಳವಾಡಿ ಮಲ್ಲಮ್ಮನಿಗೆ ಸದಾ ಚಿರ‌ಋಣಿಗಳಾಗಿರಬೇಕು.‌ ಬಹಳಷ್ಟು ಇತಿಹಾಸಕಾರರು ಹೇಳುವಂತೆ, ಶಿವಾಜಿಯು ಮೈಸೂರು ಅರಸರೆದುರು ಸೋತದ್ದು, ಬಿಜಾಪುರ ಸುಲ್ತಾನರೆದುರು ಸೋತದ್ದು, ಈ ಎಲ್ಲಾ ಸೋಲುಗಳಿಗಿಂತ, ಬೆಳವಾಡಿ ಮಲ್ಲಮ್ಮನ ಜೊತೆಗಿನ 27 ದಿನಗಳ ಯುದ್ಧದಲ್ಲಿ ಸೋತದ್ದು ದೊಡ್ಡ ಕೊರಗಾಗಿ ಉಳಿಯಿತು ಎನ್ನುತ್ತಾರೆ. ಶಿವಾಜಿಯ ಕೊರಗು ಯಾವ ಮಟ್ಟಕ್ಕಿತ್ತೆಂದರೆ, ತಾನೂ ಸಾಯುವ ಗಳಿಗೆಯಲ್ಲಿಯೂ ಈ ಕೊರಗು ಅವನನ್ನು ಬಿಟ್ಟಿದ್ದಿಲ್ಲ. ಇದನ್ನು ಗಮನಿಸಿದ ಶಿವಾಜಿಯ ಎರಡನೇ ಸೊಸೆಯಾದ ತಾರಾಬಾಯಿ, ಆ ಕಾಲಕ್ಕೆ ಸ್ವತಃ ಹಣ್ಣಣ್ಣು ಮುದಿಕಿಯಾಗಿದ್ದ ಮಲ್ಲಮ್ಮಳನ್ನು ಭೇಟಿಯಾಗಿ ನಡೆದದ್ದನ್ನೆಲ್ಲ ಕೇಳಿ ತಿಳಿದುಕೊಂಡಿದ್ದಳು.‌ ನಡೆದದ್ದೇನೋ‌ ನಡೆದುಹೋಯಿತು, ಆದರೆ ಶಿವಾಜಿಯ ಮರಣದ ನಂತರ, ಆತನ ಇತಿಹಾಸದ ಹಾನಿ ನಿಯಂತ್ರಣಕ್ಕಾಗಿ ಮರಾಠಿ ಕೃತಿಗಳಲ್ಲಿ, ಬರಿ ಮಲ್ಲಮ್ಮ ಹಾಗೂ ಶಿವಾಜಿಯ ನಡುವೆ ಕೇವಲ ಸಂದಾನವಾದಂತೆ, ಇಲ್ಲವೇ ಮಲ್ಲಮ್ಮಳೇ ಶಿವಾಜಿ ಎದುರು ಸೋತಂತೆ ಇತಿಹಾಸವನ್ನು ತಿದ್ದಲಾಯಿತು. ಆದರೆ ಕನ್ನಡ ಜಾನಪದ, ಕನ್ನಡ ಇತಿಹಾಸಕಾರರು ದಾಖಲಿಸಿದ ಇತಿಹಾಸ, ಬೈಲಹೊಂಗಲದ ಇತಿಹಾಸ, ಬ್ರಿಟಿಷ್ ಇತಿಹಾಸಕಾರರು ದಾಖಲಿಸಿದ ಇತಿಹಾಸಗಳು ಈಗಲೂ ಹಸಿ ಹಸಿ ಸತ್ಯವನ್ನು ತೆರೆದಿಡುತ್ತಿವೆ. ಶಿವಾಜಿ ಯಾವ ರೀತಿಯಿಂದಲೂ ಆದರ್ಶನಲ್ಲ.‌ ಆತನ ಕಪಟಿತನ, ನಸಗುನ್ನಿತನದಿಂದ ಆತನನ್ನು ಸುತ್ತಮುತ್ತಲಿನ ಸಂಸ್ಥಾನದವರೆಲ್ಲ “ಬೆಟ್ಟದ ಇಲಿ” ಎಂದೇ ಕರೆಯುತ್ತಿದ್ದರು. ಮುಖ್ಯವಾಗಿ ಆತ ಹಿಂದೂ ಧರ್ಮ‌ ರಕ್ಷಕನಂತೂ ಅಲ್ಲವೇ ಅಲ್ಲ.‌ ಶಿವಾಜಿ ಕಾಲದಲ್ಲಿಯೇ ಮರಾಠರ ಹಾಗೂ ಹೈದರಾಬಾದ್ ನಿಜಾಮರ ನಡುವೆ ಒಳ್ಳೆಯ ಸ್ನೇಹ ಬಾಂಧವ್ಯವಿತ್ತು.‌ ಇವರಿಬ್ಬರೂ ಸೇರಿಯೇ ಈಗಿನ ಉತ್ತರ ಕರ್ನಾಟಕವನ್ನು ಬಹಳಷ್ಟು ಸಾರಿ ಕೊಳ್ಳೆ ಹೊಡೆದಿದ್ದರು. ಈಗಲೂ ಉತ್ತರ ಕರ್ನಾಟಕ ಭಾಗ ಹೈರಾಣಾಗಿರಲು ಕಾರಣ ಮರಾಠರು ಹಾಗೂ ನಿಜಾಮರು. ಬರೀ ಉತ್ತರ ಕರ್ನಾಟಕ ಅಷ್ಟೇ ಅಲ್ಲ, ದಕ್ಷಿಣ ಕರ್ನಾಟಕದ ಮೇಲೆಯೂ ಸಹ ಶಿವಾಜಿಯಿಂದ ಲೂಟಿಗಳಾಗಿವೆ.‌ ಮೇಲುಕೋಟೆ ಹಾಗೂ ಶ್ರೀರಂಗಪಟ್ಟಣಗಳ ಮೇಲೆ ದಾಳಿಯಾಗಿ, ದೇವಾಲಯಗಳನ್ನು ವಿರೂಪಗೊಳಿಸಿ ಅಲ್ಲಿನ ಸಂಪತ್ತನ್ನು ದೋಚಿದ್ದರು. ಕಬ್ಬಿಣದ ತೇರುಗಳಿಗೆ ಬೆಂಕಿ ಇಟ್ಟು ಕಬ್ಬಿಣವನ್ನು ದೋಚಿದ್ದರು. ಇದೇ ಕಾರಣಕ್ಕೆ ಮೇಲುಕೋಟೆಯಲ್ಲಿ 90ರ ದಶಕದವರೆಗೂ, ದೊಡ್ಡ ತೇರಿಗೆ ದನದ ಮಾಂಸವನ್ನು ನೇತುಹಾಕುವ ಸಂಪ್ರದಾಯವಿತ್ತು.‌ ದನದ ಮಾಂಸವಿದ್ದ ಕಡೆ ಮರಾಠ/ಪೇಶ್ವೆಗಳು ಬಾರರು ಎಂದು. ಇಷ್ಟೆಲ್ಲಾ ಆದರೂ ಸಹ ಶಿವಾಜಿ ಹಾಗೂ ಮರಾಠ ಸೈನ್ಯಕ್ಕೆ ಮೈಸೂರು ಸಂಸ್ಥಾನವನ್ನು ಗೆಲ್ಲಲಾಗಲಿಲ್ಲ. ಚಿಕ್ಕದೇವರಾಜ ಒಡೆಯರು ಶಿವಾಜಿಯನ್ನು ಯುದ್ದದಲ್ಲಿ ಎರಡೆರಡು ಬಾರಿ ಸೋಲಿಸಿ‌ ಶ್ರೀರಂಗಪಟ್ಟಣದಿಂದ ಒದ್ದೋಡಿಸಿದರು. ಇನ್ನೂ ಮಜಾ ಕೊಡುವ ವಿಷಯವೇನೆಂದರೆ, ತುಮಕೂರಿನ‌ ಮೂಕನಾಯಕನಹಳ್ಳಿ ಎಂಬ ಊರನ್ನು‌‌ ಕೊಳ್ಳೆ ಹೊಡೆಯಲೋದ‌ ಶಿವಾಜಿ ಹಾಗೂ ಆತನ‌ ಸೈನ್ಯವನ್ನು, ಅದೇ ಊರಿನ ಸಾಮಾನ್ಯ ಜನರು, ಹಾರೆ, ಗುದ್ದಲಿ, ಪೊರಕೆ‌ ದೊಣ್ಣೆ, ಚೂರಿಗಳಿಂದ ಆಕ್ರಮಣ ಮಾಡಿ, ಅಟ್ಟಾಡಿಸಿ ಒದ್ದೋಡಿಸಿದ್ದರು.‌ ಈ ಎರಡೂ ವಿಷಯಗಳು ಹಯವದನ ರಾವ್ ಬರೆದಿರುವ ಮೈಸೂರು ಗೆಜೆಟಿಯರ್‌ನಲ್ಲಿ ದಾಖಲಾಗಿವೆ. ಇನ್ನೂ ಮರಾಠ ಸೇನೆ ಎಂಬುದು ಲೂಟಿ‌ ಆಧಾರಿತ ಸೇನೆಯೇ ಆಗಿತ್ತು ಎಂದು‌ ಸ್ಪಷ್ಟವಾಗಿ ಹೇಳಬಹುದು. ‌ಸುಗ್ಗಿ ಕಾಲದಲ್ಲಿಯೇ ಈ ಮರಾಠರು ದಾಳಿ ಮಾಡಿ ಧಾನ್ಯಗಳನ್ನ, ದನಕರುಗಳನ್ನ ಹೆಣ್ಣು ಹೊನ್ನುಗಳನ್ನು ಕೊಳ್ಳೆ ಹೊಡೆಯುತ್ತಿದ್ದರು.‌ ಇದಕ್ಕೆ ಹೆಚ್ಚು ಬಲಿಯಾದವರು ಈಗಿನ ಉತ್ತರ ಕರ್ನಾಟಕದ ಕನ್ನಡಿಗ ಹಿಂದೂಗಳು ಹಾಗೂ ಬಂಗಾಳಿ ಹಿಂದೂಗಳು.‌ ಹೈದರ್ ಟಿಪ್ಪು ಸೈನ್ಯದ ವಿರುದ್ಧ ಚಿತ್ರದುರ್ಗದ ಪಾಳೆಗಾರರು ಸೋಲಲು ಪರೋಕ್ಷವಾಗಿ ಕಾರಣ ಇದೇ ಶಿವಾಜಿಯ ಮಗ ಸಾಂಬಾಜಿ ಹಾಗೂ ಮರಾಠ ಸಾಮ್ರಾಜ್ಯ. ಪಾಳೆಗಾರರ ಹಾಗು ಹೈದರ್ ಟಿಪ್ಪು ನಡುವಲ್ಲಿ ಯುದ್ಧ ಏರ್ಪಟ್ಟರೆ, ಪಾಳೆಗಾರರ ಪರ ಹೋರಾಡುತ್ತೇವೆಂದು ಮಾತು ಕೊಟ್ಟ ಮರಾಠ ಸಾಮ್ರಾಜ್ಯ, ಅದೇ ಯುದ್ಧ ಏರ್ಪಟ್ಟಾಗ ಹೈದರ್ ಟಿಪ್ಪುವಿನ ಎಂಜಲು ಕಾಸಿಗೆ ಆಸೆ ಪಟ್ಟು, ನಿಜಾಮನ ಸ್ನೇಹಕ್ಕೆ ಕಟ್ಟುಬಿದ್ದು, ಪಾಳೆಗಾರರೊಡನೆ ಹೈದರ್ ಟಿಪ್ಪುವಿನ ವಿರುದ್ಧ ಯುದ್ಧಕ್ಕೆ ಬಾರದೆ, ಮಾತು ತಪ್ಪುತ್ತಾರೆ. ಇದರ ಮೂಲಕ ಹಿಂದೂ ಪಾಳಯಪಟ್ಟೊಂದು ಸುಲ್ತಾರೆದುರು ಸೋಲಲು ಶಿವಾಜಿಯ ಮಗ ಸಾಂಬಾಜಿ ಹಾಗೂ ಮರಾಠ ಸಾಮ್ರಾಜ್ಯ ಕಾರಣವಾಗುತ್ತದೆ. ಮರಾಠರು ಮಾತಿಗೆ ತಪ್ಪಿದ ಮಕ್ಕಳಾಗುತ್ತಾರೆ. ಕರ್ನಾಟಕದ ಮೇಲೆ ಮರಾಠ ದಾಳಿಗಳು. 1639ರಲ್ಲಿ ಶಿವಾಜಿಯ ಅಪ್ಪ ಶಹಾಜಿ ಮತ್ತು ರಣದುಲ್ಲಾ ಖಾನ್ ನೇತೃತ್ವದ ಬಿಜಾಪುರ ಸುಲ್ತಾನರ ಸೇನೆಯನ್ನು ಕಂಠೀರವ ಒಡೆಯರ್ ಸೋಲಿಸುತ್ತಾರೆ. 1655ರಲ್ಲಿ ಕರಾವಳಿಯ ಶ್ರೀಮಂತ ವ್ಯಾಪಾರಿ ಪಟ್ಟಣ ಬಸ್ರೂರಿನ ಮೇಲೆ ದಾಳಿ ಮಾಡಿದ್ದು ಶಿವಾಜಿ. ಅಪ್ಪಟ ಕನ್ನಡಿಗರ ಬೆಳವಾಡಿ ಸಂಸ್ಥಾನದ ಕೋಟೆಯನ್ನು ಮುತ್ತಿಗೆ ಹಾಕಲು ಬಂದು 27 ದಿನಗಳ ಕಾಲ ನಡೆದ ಯುದ್ಧದಲ್ಲಿ ಮಲ್ಲಮ್ಮನ ಕೈಯಿಂದ ಸೋಲುಂಡ ಶಿವಾಜಿ. 1677ರಲ್ಲಿ ಶ್ರೀರಂಗಪಟ್ಟಣ ಕೊಳ್ಳೆ ಹೊಡೆದು ಸಂಪತ್ತನ್ನೆಲ್ಲ ಮಹಾರಾಷ್ಟ್ರಕ್ಕೆ ಸಾಗಿಸಿ ಮತ್ತೊಮ್ಮೆ ಕೊಳ್ಳೆ ಹೊಡೆಯಲು ಬಂದು ಮೈಸೂರು ಒಡೆಯರಾದ ಚಿಕ್ಕದೇವರಾಜ ಒಡೆಯರ ಹತ್ತಿರ ಸೋತಿದ್ದು. 1682ರಲ್ಲಿ ಶಿವಾಜಿ ಸತ್ತ ಮೇಲೆ ಅವನ ಮಗ ಸಂಭಾಜಿ ಹಾಸನ ಜಿಲ್ಲೆಯ ಮೇಲೆ ದಾಳಿ ಮಾಡಲು ಬಂದು ಬಾಣವಾರದಲ್ಲಿ ಚಿಕ್ಕದೇವರಾಜ ಒಡೆಯರ ಹತ್ತಿರ ಸೋತ್ತಿದ್ದು. 1770ರಲ್ಲಿ ಪೇಶ್ವ ಮಾಧವ ರಾವ್ ಬರಗಾಲಕ್ಕೆ ತುತ್ತಾಗಿದ್ದ ಮೈಸೂರು ಸಂಸ್ಥಾನದ ಚಾಮರಾಜನಗರ ಜಿಲ್ಲೆಯ ಮೇಲೆ ದಾಳಿ ಮಾಡಿ ಕೊಳ್ಳೆ ಹೊಡೆದದ್ದು. 1791ರಲ್ಲಿ ಶೃಂಗೇರಿ ಮಠದ ಮೇಲೆ ಪೇಶ್ವೆಗಳು ಪಿಂಡಾರಿಗಳನ್ನು ಬಿಟ್ಟು ಕೊಳ್ಳೆ ಹೊಡೆದಿದ್ದು. 1792ರಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ಪರಶುರಾಮ್ ಭಾವು ಎನ್ನುವವನ ಮರಾಠ ಸೇನಾ ತುಕಡಿ 6000 ಮನೆಗಳನ್ನು ಸುಟ್ಟು ಅಲ್ಲಿನ ಹೆಣ್ಣುಮಕ್ಕಳನ್ನು ಹೊತ್ತೊಯ್ದಿದ್ದು. ಇನ್ನೂ ಬೇಕಾದಷ್ಟು ಉದಾಹರಣೆಗಳಿವೆ. ಮರಾಠ ಸಾಮ್ರಾಜ್ಯದವರು ಕರ್ನಾಟಕದ, ಕನ್ನಡಿಗರ ಮೇಲೆ ನಡೆಸಿರುವ ಹಲ್ಲೆಗಳನ್ನು ವ್ಯವಸ್ಥಿತವಾಗಿ ಮುಚ್ಚಿಹಾಕಲಾಗಿದೆ. ಇನ್ನೂ ಶಿವಾಜಿ ತನ್ನ ಮೂಲದ ಬಗ್ಗೆ ಕೆಟ್ಟ ಕೀಳರಿಮೆಯನ್ನು ಇಟ್ಟುಕೊಂಡಿದ್ದನು. ರಾಜ್ಯ ಪಟ್ಟಗಳ ಆಸೆಗೆ ಅದನ್ನು ತಿದ್ದಿಸಿಯೂ ಬಿಟ್ಟ! ಮೂಲದಲ್ಲಿ ಕಾನಡಿ ಬೋಸಲೆ ಎಂಬ ಕನ್ನಡ ಶೂದ್ರ ಜಾತಿಯವನಾಗಿದ್ದು, ರಾಜ್ಯ ಪಟ್ಟ ಅಧಿಕಾರದ ಆಸೆಗೆ, ತನ್ನನ್ನು ತಾನು ರಜಪೂತನೆಂದು ಸಿಸೊಡಿಯ ರಾಣಪಂಥೀಯನೆಂದು ತನ್ನ ಮೂಲವನ್ನು ತಿದ್ದಿಸಿಕೊಂಡು ಅಧಿಕಾರ ಪಡೆಯುತ್ತಾನೆ. ಅವನೇ ಬೇಡವೆಂದು ಎಡಗಾಲಿನಲ್ಲಿ ಒದ್ದು ಹೋದ ಕನ್ನಡ ಮೂಲವನ್ನು ಈಗ ಕೆಲವು ಎಡಬಿಡಂಗಿಗಳು ನಾಚಿಕೆ ಇಲ್ಲದೆ ಪ್ರಚಾರ ಮಾಡುತ್ತಿರುವುದು ಅಸಯ್ಯ! ಅಧಿಕಾರದ ಆಸೆಗೆ ಮೊದಲ “ಫೇಕ್ ಕ್ಯಾಸ್ಟ್ ಸರ್ಟಿಫಿಕೇಟ್” ಪಡೆದ ದೊಡ್ಡ ಕಂತ್ರಿ ಈತ. ಇಂಥವರು ಅಧಿಕಾರದ ಆಸೆಗೆ ಅಪ್ಪನ ಹೆಸರನ್ನೂ ಸಹ ಬದಲಿಸಿಕೊಂಡುಬಿಡ್ತಾರೆ. ಈತನ ಸಾಮ್ರಾಜ್ಯದಲ್ಲಿದ್ದ ಬಹುತೇಕ ಅಂಗರಕ್ಷಕರು, ಸೇನಾಧಿಪತಿಗಳು, ಖಜಾಂಚಿಗಳು, ಅಧಿಕಾರಿಗಳೆಲ್ಲರೂ ಮುಸಲ್ಮಾನರೇ. ಮಂತ್ರಿ ಪದವಿ ಮಾತ್ರ ಪೇಶ್ವೆ ಬ್ರಾಹ್ಮಣರದ್ದು. ಅಳಿದುಳಿದ ಸಣ್ಣಪುಟ್ಟ ಸ್ಥಾನಗಳು ಮಾತ್ರ ಶೂದ್ರ ಅವರ್ಣೀಯ ಹಾಗೂ ಇತರೆ ಸಮುದಾಯಗಳಿಗೆ. ಈತನ ಎಂಟು ಜನ ಹೆಂಡಿರುಗಳ ಪೈಕಿ ಇಬ್ಬರು ಮುಸಲ್ಮಾನರು. ಇನ್ನೂ ಈತನ ಪೂರ್ವ ಪರಂಪರೆಯೇ ದೊಡ್ಡ ದುರಂತ. ಪಾಳು ಹಂಪೆಯ ಛಿದ್ರಗೊಂಡ ಕಟ್ಟಡ ಶಿಲ್ಪಗಳನ್ನು ನೋಡುವಾಗ ಕೇವಲ ಸುಲ್ತಾನರನ್ನು ನೆನೆದು, ಬೈದುಕೊಂಡು ಅವರಿಗೆ ಹಿಡಿ ಶಾಪ ಹಾಕಿಬಿಟ್ಟರೆ ಸಾಲದು. ಅವರೊಡನೆ ಕೈ ಜೋಡಿಸಿ ಹಂಪಿಯನ್ನ ಇಂಚಿಂಚೂ ಹಾಳಗೆಡವಿದ ಶಿವಾಜಿ ಪೂರ್ವಜರಾದ ಹಳೆ ಮರಾಠ ಸೈನಿಕರೇನು ಸಾಚಾಗಳೇ? ಇಂಡೋ‌ ಸಿಥಿಯನ್, ತುರ್ಕರು ಹಾಗೂ ಕಾನಡಿಗಳ ಬೆರಕೆಯಾಗಿ ರೂಪುಗೊಂಡ ಈ ಮರಾಠರು, ಮೂಲದಲ್ಲಿ ಸುಲ್ತಾನರ ಗುಲಾಮರಾಗಿ, ಅವರ ಆಸ್ಥಾನದಲ್ಲಿ ಕಾಲಾಳುಪಡೆಗಳಾಗಿ ಇದ್ದರು.‌ ಶಿವಾಜಿಯ ತಂದೆ ಶಹಾಜಿಯೂ ಸಹ ಅಂತಹ ಗುಲಾಮರಲ್ಲಿ ಒಬ್ಬ‌. ಬಂಗಾಳದ ಹಿಂದೂಗಳಂತು ಮರಾಠರನ್ನು ದರಿದ್ರದ ಸಂಕೇತ ಎಂದೇ ಪರಿಗಣಿಸುತ್ತಾರೆ. ಬಂಗಾಳಿ ಜಾನಪದವು ಮರಾಠರ ಕುದುರೆ ಕಾಲಿಟ್ಟ ಕಡೆ ದಟ್ಟದಾರಿದ್ರ್ಯ ಆವರಿಸುತ್ತದೆ ಎಂಬ ಆಡುಮಾತುಗಳನ್ನು‌ ಹೊಂದಿದೆ. ಇದೇ ಕಾರಣಕ್ಕೆ ಕೆಚ್ಚೆದೆ, ಸ್ವಾಭಿಮಾನ ಇರುವ ಬಂಗಾಳಿಗಳು ಮರಾಠರೆಂದರೆ, ಶಿವಾಜಿ ಎಂದರೆ ಕವಡೆ ಕಾಸಿನ ಕಿಮ್ಮತ್ತು ತೋರುವುದಿಲ್ಲ. ಹಿಂದೂಗಳನ್ನೇ ಕೊಳ್ಳೆ ಹೊಡೆದು, ಹಿಂದೂ ಹೆಂಗಸರನ್ನೇ ಅಪಹರಿಸಿ ಅತ್ಯಾಚಾರಗಳ ಮಾಡಿದ ಈ ಸಾಮ್ರಾಜ್ಯ ಹಿಂದೂ ಧರ್ಮ ರಕ್ಷಕ ಸಾಮ್ರಾಜ್ಯ ಹೇಗಾಗುತ್ತದೆ? ಇವರ ಅತ್ಯಾಚಾರಗಳಿಗೆ ಹುಟ್ಟಿದವರು ಮಾತ್ರ ಈ ಸಾಮ್ರಾಜ್ಯವನ್ನು ಹಿಂದೂ ಧರ್ಮ ರಕ್ಷಕ ಸಾಮ್ರಾಜ್ಯ ಎನ್ನಬಹುದಷ್ಟೇ. ❤️🙏🌷 ವಿಮಲ್ ನ್ಯೂಟ್ರಿಷನ್ ಸೆಂಟರ್ 🌷🙏❤️ #🎥 Motivational ಸ್ಟೇಟಸ್ #😍 ನನ್ನ ಸ್ಟೇಟಸ್ #👦🏻 Bad Boyz ಸ್ಟೇಟಸ್ #✍️ ಮೋಟಿವೇಷನಲ್ ಕೋಟ್ಸ್ #✍️ ಮೋಟಿವೇಷನಲ್ ಕೋಟ್ಸ್