...VIJAY...ONLY GK...
614 views
#🧠 ಸಾಮಾನ್ಯ ಜ್ಞಾನ & ಕರೆಂಟ್ ಅಫೇರ್ಸ್ 🧠 scheme in news ✍️ ಸೇತುಬಂಧ ವಿದ್ವಾನ್ ಯೋಜನೆ ( Setubandha scholar scheme ) 👉 ಈ ಯೋಜನೆಯನ್ನು ಶಿಕ್ಷಣ ಸಚಿವಾಲಯ ಹಾಗೂ ಕೇಂದ್ರ ಸಂಸ್ಕೃತಿ ವಿಶ್ವವಿದ್ಯಾಲಯದ ಭಾರತೀಯ ಜ್ಞಾನ ವ್ಯವಸ್ತೆಗಳ ಸಹಭಾಗಿತ್ವದಲ್ಲಿ ಪ್ರಾರಂಭಿಸಿದೆ. 👉 ಉದ್ದೇಶ : ಸಾಂಪ್ರದಾಯಿಕ ಗುರುಕುಲ ಕಲಿಕೆಯು ಆಧುನಿಕ ಸಂಶೋಧನೆಯೊಂದಿಗೆ ಸಂಯೋಜಿಸುವುದು ಮತ್ತು ಉನ್ನತ ಶಿಕ್ಷಣದಲ್ಲಿ ಭಾರತೀಯ ಜ್ಞಾನ ವ್ಯವಸ್ಥೆಗಳನ್ನು ( Indian knowledge system ) ಮುಖ್ಯ ವಾಹಿನಿಗೆ ತರುವುದು. 👉 ಈ ಯೋಜನೆಯು ಸ್ನಾತಕೋತ್ತರ ಪದವಿ ಮತ್ತು ಡಾಕ್ಟರೇಟ್ ಸಂಶೋಧನೆಗೆ ದೇಶದ ಪ್ರತಿಷ್ಠಿತ IIT ಸಂಸ್ಥೆಗಳಲ್ಲಿ ದಾಖಲಾತಿಗೆ ಪ್ರೋತ್ಸಾಹಿಸುತ್ತದೆ. 👉 ಅರ್ಹತೆ : 1) ಮಾನ್ಯತೆ ಪಡೆದ ಗುರುಕುಲದಲ್ಲಿ ಕನಿಷ್ಠ ಐದು ವರ್ಷ ಕಲಿತು ಶಾಸ್ತ್ರ ಮತ್ತು ಸಾಂಪ್ರದಾಯಿಕ ಜ್ಞಾನ ಹೊಂದಿರಬೇಕು. 2) ವಯಸ್ಸಿನಮಿತಿ : 32 ವಯಸ್ಸಿಗಿಂತ ಕಡಿಮೆ. 3) ಯಾವುದೇ ಪದವಿ ಅಗತ್ಯವಿಲ್ಲ. 👉 ಸ್ನಾತಕೋತ್ತರ ಪದವಿಗೆ ಆಯ್ಕೆಯಾದವರು ತಿಂಗಳಿಗೆ 40,000 ಫೆಲೋಶಿಪ್ ಮತ್ತು ವಾರ್ಷಿಕ 1 ಲಕ್ಷ ಸಂಶೋಧನಾ ಅನುದಾನ ಪಡೆಯುತ್ತಾರೆ. 👉 ಪಿಎಚ್‍ಡಿ ಅಡಿಯಲ್ಲಿ ಬರುವವರು ತಿಂಗಳಿಗೆ 65000 ಫೆಲೋಶಿಪ್ ಮತ್ತು ವರ್ಷಕ್ಕೆ 2 ಲಕ್ಷ ಸಂಶೋಧನಾ ಅನುದಾನ ಪಡೆಯುತ್ತಾರೆ. 👉 ಸೇತುಬಂಧ ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬಹುದು.

More like this