ನಾವು ನಮ್ಮ ಕೆಟ್ಟ ಸಮಯದಲ್ಲಿ ಹಣೆಬರಹವನ್ನು ದೂಷಿಸುವುದು ಎಷ್ಟು ಸರಿ?
ಮೊದಲಿಗೆ ಕ್ಷಮೆ ಇರಲಿ ಈ ಪ್ರಶ್ನೆ ಕೇಳಿದವರಿಗೆ. ಏಕೆಂದರೆ ನಾನು ಬರೆಯುವ ಈ ಉತ್ತರವು ನಿಮಗೆ ಇ #p #PSSM World ಷ್ಟ ಆಗುತ್ತದೋ ಇಲ್ಲವೋ ಗೊತ್ತಿಲ್ಲ ಹಾಗಾಗಿ ಕ್ಷಮೆ ಇರಲಿ ಎಂದಿದ್ದು.
ಕಾಯಕವೇ ಕೈಲಾಸ ಈ ನುಡಿಯನ್ನು ವಿಶ್ವ ಗುರು ಬಸವಣ್ಣ ನವರು ಬಹಳಷ್ಟು ಶತಮಾನಗಳ ಹಿಂದೆಯೇ ಹೇಳಿದ್ದಾರೆ. ಈ ನುಡಿಯನ್ನು ಈಗ ನಾನು ಮತ್ತೊಮ್ಮೆ ನಿಮ್ಮ ಗಮನಕ್ಕೆ ತರಲು ಬಯಸುತ್ತೇನೆ. ಕಾರಣವಿಷ್ಟೆ, ಯಾವುದೇ ಒಬ್ಬ ಮನುಷ್ಯನಿಗೆ ಒಳ್ಳೆ ಸಮಯ ಅಥವಾ ಕೆಟ್ಟ ಸಮಯ ಎಂಬುದು ಇಲ್ಲವೇ ಇಲ್ಲ. ಹಾಗೆಯೇ ಹಣೆಬರಹ ಎನ್ನುವುದು ಒಂದು ಪದವೇ ಹೊರತು ಅದನ್ನು ನೋಡಿದವರು ಈ ಜಗತ್ತಿನಲ್ಲಿ ಯಾರು ಇಲ್ಲ.
ಒಳ್ಳೆ ಸಮಯ ಹಾಗೆಂದರೇನು? ಇದಕ್ಕುತ್ತರ ನೀವು ಮಾಡುವ ಯಾವುದೇ ಒಂದು ಕೆಲಸದಲ್ಲಿ ಯಶಸ್ಸು ಕಂಡರೆ ಆ ಯಶಸ್ಸು ಕಂಡ ಸಮಯವೇ ಅಥವಾ ಆ ಘಳಿಗೆ ಯೇ ಒಳ್ಳೆ ಸಮಯ. ಒಂದು ವೇಳೆ ಆ ಕೆಲಸ ಮಾಡುವ ಸಮಯ ದಲ್ಲಿ ವಿಫಲನಾದರೆ ಅದೇ ಕೆಟ್ಟ ಘಳಿಗೆ ಅಥವಾ ಕೆಟ್ಟ ಸಮಯ.
ಇನ್ನು ಹಣೆಬರಹ ಹಾಗೆಂದರೆ ಏನು? ಇದನ್ನು ನಿಮ್ಮ ಹಣೆಯ ಮೇಲೆ ಬರೆದವರು ಯಾರು? ನನಗೆ ಗೊತ್ತಿರುವುದು ಒಂದೇ ಹಣೆಬರಹ, ಅದೇನೆಂದರೆ ನಿಮ್ಮ ಹಣೆಯ ಮೇಲೆ ಅಡ್ಡವಾಗಿ 3 ಗೆರೆಗಳನ್ನು ಎಳೆದರೆ ಅದು ವಿಭೂತಿ ಅದೇ ಗೆರೆಗಳನ್ನು ಮೇಲಿಂದ ಕೆಳಗೆ ಎಳೆದರೆ 3 ನಾಮ. ದಯವಿಟ್ಟು ಕ್ಷಮಿಸಿ ನಾನು ತಮಾಷೆ ಮಾಡುತ್ತಿಲ್ಲ ಏಕೆಂದರೆ ನಮ್ಮ ಹಣೆಬರಹವನ್ನು ನಾವೇ ಬರೆಯ ಬೇಕೇ ಹೊರತು ಬೇರೆಯವರ ಕೈಯಲ್ಲಿ ಬರೆಸಿ ಕೊಳ್ಳಬಾರದು. ನಾವು ಮಾಡುವ ತಪ್ಪುಗಳಿಗೆ ಸಮಯವನ್ನಾಗಲಿ, ಹಣೆಬರಹವನ್ನಾಗಲಿ ದೂಷಿಸಬಾರದು.
ಮಾಡುವ ಕೆಲಸ ಅಥವಾ ಬಸವಣ್ಣ ನವರು ಹೇಳಿದಂತೆ ಕಾಯಕ ಯಾವುದೇ ಇರಲಿ ತಾಳ್ಮೆಯಿಂದ ನಿಧಾನವಾಗಿ ಯೋಚಿಸಿ ಕೆಲಸ ಮಾಡಿದರೆ ಯಶಸ್ಸು ಕಟ್ಟಿಟ್ಟ ಬುತ್ತಿ. ಒಂದು ವೇಳೆ ವಿಫಲವಾದರೂ ದೃತಿಗೆಡಬಾರದು. ಮತ್ತೊಮ್ಮೆ ಮಗದೊಮ್ಮೆ ಪ್ರಯತ್ನಿಸಿ ಎಲ್ಲಿಯವರೆಗೆ ನಿಮಗೆ ಯಶಸ್ಸು ಸಿಗುವವರೆಗೂ ಪ್ರಯತ್ನಿಸಿ ತಪ್ಪೇನು ಇಲ್ಲ ಏಕೆಂದರೆ ನಿಮ್ಮ ಪ್ರತಿ ಪ್ರಯತ್ನದಲ್ಲೂ ಒಂದೊಂದು ಅನುಭವಗಳು ಸಿಗುತ್ತಿರುತ್ತದೆ. ಅನುಭವಗಳ ಮೆಟ್ಟಿಲುಗಳನ್ನು ಏರುತ್ತಾ ಮೇಲೆ ಸಾಗಿದವನಿಗೆ ಮತ್ತೆ ಕೆಳಗೆ ಬೀಳುವ ಅಪಾಯವೇ ಇರುವುದಿಲ್ಲ. ಏನಂತೀರಾ……..