Anthoniraj
677 views
ಅಂದು ಶ್ರೀಕೃಷ್ಣನು ಹಸ್ತಿನಾಪುರಕ್ಕೆ ಬರುತ್ತಿದ್ದಾನೆಂದು ಗೂಢಾಚಾರರಿಂದ ಧೃತರಾಷ್ಟ್ರನಿಗೆ ತಿಳಿಯಿತು. ಅವನು ಭೀಷ್ಮ, ವಿದುರ ಮತ್ತು ಸಂಜಯನಿಗೆ ಹೇಳಿಕಳುಹಿಸಿದನು. ದ್ರೋಣ ದುರ್ಯೋದನರೂ ಅಲ್ಲಿದ್ದರು‌. ಆಗ ಧೃತರಾಷ್ಟ್ರನು:- "ಮಹಾತ್ಮನಾದ ಕೃಷ್ಣನು ಯುದ್ದ ವಿಚಾರವಾಗಿ ಮಾತನಾಡಲು ಹಸ್ತಿನಾಪುರಕ್ಕೆ ಬರುತ್ತಿದ್ದಾನೆ. ಅವನನ್ನು ಗೌರವಿಸಿಕೊಳ್ಳಬೆಕು, ಒಲಿಸಿಕೊಳ್ಳಬೆಕು. ಈಗ ಅವನ ಶುಭಾಶಂಸನೆ ಅತ್ಯವಶ್ಯಕ. ಅವನನ್ನು ಎದುರುಗೊಳ್ಳಲು ಏರ್ಪಾಡು ಮಾಡಿ. ಅವನ ಪ್ರಯಾಣ ಪ್ರಯಾಸವಾಗದಂತೆ ನೋಡಿಕೊಳ್ಳಿ, ಭೀಷ್ಮರು ಈಗ ಏನನ್ನುವರು ?" ಎಂದು ಹೇಳಿದನು. ರಾಜನಾದ ಧೃತರಾಷ್ಟರನ ಮಾತಿಗೆ ಯಾರೂ ಇಲ್ಲವೆನ್ನಲಿಲ್ಲ. ದುರ್ಯೋದನ ಎಲ್ಲ ಏರ್ಪಾಡುಗಳನ್ನ ಮಾಡಿ, ರಾಜನಿಗೆ ವರದಿ ಮಾಡಿದನು. ವಿದುರನಿಗೆ ಧೃತರಾಷ್ಟ್ರನು:- "ಕೃಷ್ಣನು ಇಂದು ರಾತ್ರಿ ಕುಶಸ್ಥಳ ಎಂಬಲ್ಲಿ ಉಳಿದು ನಾಳೆ ಹಸ್ತಿನಾಪುರಕ್ಕೆ ಬರುತ್ತಿದ್ದಾನೆ‌. ಮಹಾಪುರುಷನಾದ ಆತನ ಸ್ವಾಗತವನ್ನ ನೀನೆ ನೋಡಿಕೊಳ್ಳಬೇಕು. ಅನೇಕ ರತ್ನಾಭರಣಗಳನ್ನು, ರಥ ಕುದುರೆಗಳನ್ನೂ ಇನ್ನೂ ಸಾವಿರಾರು ವಸ್ತ್ರಗಳನ್ನ ಕೊಡಬೇಕೆಂದಿದ್ದೇನೆ. ಅವನನ್ನು ಮೆಚ್ಚಿಸಲು ನಾನು ಕಾತುರದಿಂದ್ದೇನೆ ಏನನ್ನುತ್ತೀ" ಎಂದು ಕೇಳಿದನು. ತನ್ನಲ್ಲಿಯೇ ನಕ್ಕು ವಿದುರನು:- "ಕೃಷ್ಣನು ಈ ಭೂಮಿಯಲ್ಲಿ ಈ ಹಿಂದೆಯೇ ಆಗಿ ಹೋದ, ಈಗ ಇರುವ ಮತ್ತೆ ಮುಂದೆ ಹುಟ್ಟಲಿರುವ ಪುರುಷರಲ್ಲೆಲ್ಲ ಉತ್ತಮನು ಸರಿ. ಆದರೇ ಮಕ್ಕಳಂತೆ ಮಾತನಾಡುತ್ತಿರಿವುದನ್ನ ನೋಡಿ ನನಗೆ ನಗು ಬರುತ್ತಿದೆ. ಕೃಷ್ಣನಿಗೆ ಉಡುಗೊರೆಯನ್ನು ಕೊಡುವುದೇ..? ಅವನಿಗೆ ಇಡೀ ಭೂಮಂಡಲವನ್ನೆ ಕೊಟ್ಟರೂ ಸಾಲದು. ಅದು ಬೇರೆ ವಿಚಾರ. ನಾನು ನಿನ್ನ ಜೊತೆ ಬಾಲ್ಯದಿಂದ ಬೆಳೆದವನು. ನಿನ್ನ ಒಳಗೂ ಹೊರಗೂ ನನಗೆ ಗೊತ್ತು. ನನ್ನಿಂದ ನೀ ಏನನ್ನೂ ಮುಚ್ಚಿಡಲಾರೆ. ಅವನನ್ನು ಲಂಚ ಕೊಟ್ಟು ಒಲಿಸಿಕೊಳ್ಳುವುದಕ್ಕೆ ನೋಡುತ್ತಿರುವೆಯಾ ? ಇದೇನು ಇದ್ದಕ್ಕಿದ್ದ ಹಾಗೆ ಉದಾರಿಯಾಗಿಬಿಟ್ಟೆ ? ಪಾಂಡವರ ಹಾಗೂ ನಿನ್ನ‌ ಮಕ್ಕಳ ವಿಚಾರವಾಗಿ ಮಾತನಾಡಲು ಬರುವವರಿಗೆ ಏನೆಲ್ಲ ಕೊಡಲು ಸಿದ್ದನಾಗಿಬಿಟ್ಟಿದ್ದಿಯಾ ? ಪಾಂಡವರಿಗಾಗಿ ಐದು ಹಳ್ಳಿಗಳನ್ನ ಕೊಡಲು ಮನಸ್ಸು ನಿನಗೆ ಬರಲಿಲ್ಲ. ಆದರೇ ಅವನ ದೂತನಿಗೆ ಏಕೆ ಇಷ್ಟೊಂದು ಸಂಭ್ರಮದ ಆದರ...?" "ನೀನು ಕೃಷ್ಣನನ್ನು ಅಷ್ಟೊಂದು ಸುಲಭವಾಗಿ ನಮ್ಮ ಕಡೆಗೆ ಒಲಿಸುಕೊಳ್ಳುವುದಕ್ಕೆ ಆಗದು. ಅವನ ಜೀವ ಅರ್ಜನನೊಂದಿಗೆ ಇದೆ. ನೀನು ಏನೂ ಕೊಟ್ಟರೂ ಪಾಂಡವರಿಂದ, ಅರ್ಜುನಿಂದ ಅವರನ್ನು ಬೇರ್ಪಡಿಸಲಾರೆ. ನಿನಗೆ ನಿಜವಾಗಿಯೂ ಅವನನ್ನು ಮೆಚ್ಚಿಸುವ ಮನಸಿದ್ದರೇ, ಅವನು ಹೇಳಿದ್ದನ್ನು ಮಾಡು. ಕೇಳಿದ್ದನ್ನು‌ ಕೊಟ್ಟು ಗೌರವಿಸು. ಅವನಿಲ್ಲೀಗ ಬರುತ್ತಿರುವುದು ನಿನಗೂ ನಿನ್ನ ಮಗನಿಗೂ ಯುದ್ಧದ ದುಷ್ಪರಿಣಾಮಗಳನ್ನು ಪಾಂಡವರಿಗೆ ನೀವು ಮಾಡಿದ ಅನ್ಯಾಯಗಳನ್ನು, ನಿನ್ನ ಲೋಭವನ್ನು, ನಿನ್ನ ಸ್ವಾರ್ಥಕ್ಕಾಗಿ ರಾಜರೆಲ್ಲರ ರಕ್ತವನ್ನು ಬಸಿಯಲು ಹೊರಟಿರುವುದನ್ನು ಮನವರಿಕೆ ಮಾಡಿಕೊಡುವುದಕ್ಕೆ, ಅವನು ಬರುತ್ತಿರುವುದು ಕುರುವಂಶಕ್ಕೆ ಒಳ್ಳೆಯದನ್ನು ಮಾಡುವುದಕ್ಕೆ‌. ಅವನು ಬಯಸುವುದು ಶಾಂತಿಯನ್ನ. ಅದನ್ನು ಗೌರವಿಸಿ ಯುದ್ದ ಸಿಧ್ಧತೆಗಳನ್ನು ನೀನು ನಿಲ್ಲಿಸಿದರೇ, ಅದು ಅವನಿಗೆ ಮಾಡುವ ನಿಜವಾದ ಸ್ವಾಗತವಾಗಬಹುದು. ನೀನು‌ ತಂದೆಯಿಲ್ಲದ ಮಕ್ಕಳಿಗೆ ತಂದೆ. ಆ ತಬ್ಬಲಿಗಳಿಗೆ ಸ್ವಲ್ಪ ಪ್ರೀತಿ ತೋರಿಸುವುದು ಅಣ್ಟು ಕಷ್ಟವೇ ?" ಎಂದು ವಿದುರನು ಹೇಳಿದನು. ಇದನ್ನೆಲ್ಲ ಕೇಳಿದ ದುರ್ಯೋದನನು:- "ಚಿಕ್ಕಪ್ಪ ಹೇಳುತ್ತಿರುವುದು ಸರಿ. ಕೃಷ್ಣನು, ಪಾಂಡವರ ಪಕ್ಷಪಾತಿ ಎಂಬುದರಲ್ಲಿ ಸಂದೇಹವಿಲ್ಲ. ಉಡುಗೊರೆಗಳನ್ನು ಕೊಡಬೇಕಾದರೇ ವಿವೇಚನೆ ಬೇಕು. ಎಲ್ಲಕ್ಕೂ ಒಂದು ಸಂದರ್ಭ ಅಗತ್ಯ. ನಿನ್ನ ಯೋಚನೆ ಪೆದ್ಧುತನದ್ದು. ಕೃಷ್ಣನೇನೂ ಮೂರ್ಖನಲ್ಲ. ಅವನು ನಮ್ಮನ್ನು ನೋಡಿ ನಕ್ಕಾನು. ಹೆದರಿಕೆಯಿಂದ ಅವನನ್ನು ಮೆಚ್ಚಿಸಲು ಹೊರಟಿರುವೆವು ಎಂದು ತಿಳಿಯಬಹುದು. ಅವನ ಮುಂದೆ ಹೀಗೆ ಹಲ್ಲುಗಿಂಜುವುದು ನಮ್ಮ‌ ಮರ್ಯಾದೆಗೆ ಕಡಿಮೆ. ಅವನಿಗೂ ಅದು ಕಿರಿಕಿರಿ ಆಗುವುದು. ಅವನು ಉತ್ತಮರಲ್ಲಿ ಉತ್ತಮ. ಇಂತಹ ಅಲ್ಪ ಉಡುಗೊರೆ ಕೊಟ್ಟು ಅವಮಾನಿಸಬಾರದು. ಅದರಿಂದ ನಮ್ಮ ಉದ್ದೇಶ ಸಾಧನೆಯೂ ಆಗದು. ಮಾರ್ಯಾದೆ ಮಾಡೋಣ; ಆದರೇ ಈ ಒಲಿಸಿಕೊಳ್ಳುವ ಯೋಚನೆ ಬಿಟ್ಟುಬಿಡು; ಜನ ನಮ್ಮನ್ಮು ನೋಡಿ ನಕ್ಕುಬಿಡುವರು !" ಎಂದನು. ಭೀಷ್ಮನು:- "ನೀವು ಮರ್ಯಾದೆ ಮಾಡಿದರೂ ಅಷ್ಟೆ, ಮಾಡದಿದ್ದರೂ ಅಷ್ಟೆ. ಕೃಷ್ಣನಿಗೇನೂ ಅನಿಸುವುದಿಲ್ಲ. ಯಾವನಾದರೂ ಮೂರ್ಖತನದಿಂದ ಅವನನ್ನು ಅವಮಾನ ಮಾಡಲು ಎತ್ನಿಸಿದರೂ ಅವನು ಅದನ್ನು ಪರಿಗಣಿಸದಿರುವಷ್ಟು ಮೇಲ್ಮಟ್ಟದವನು‌. ಸತ್ಯದ ಪರವಾಗಿರುವ ಅವನು ಪಾಂಡವರಿಗಾದ ಅನ್ಯಾಯವನ್ನು ಸರಿಪಡಿಸಬೇಕೆನ್ನುವವನು. ಅವನು ಹೇಳುವುದನ್ನ ನೀವು ಕೇಳಿದ್ದೇ ಆದರೇ, ಅವನಿಗೆ ಸಂತೋಷವಾಗುವುದು. ಅದನ್ನೇ ನೀವು ಮಾಡಬೇಕು" ಎಂದನು. ದುರ್ಯೋದನನು:- "ಅಜ್ಜನು ಯಾವಾಗಲೂ ಮಾತನಾಡುವುದು ಪಾಂಡವರ ಬಗ್ಗೆಯೇ. ಪಾಂಡವರನ್ನು ನನ್ನ ಸೇವಕರನ್ನಾಗಿಸಿಕೊಳ್ಳಲು ನಾನೊಂದು ಉಪಾಯ ಮಾಡಿದ್ದೇನೆ. ಬರಲಿರುವ ಈ ಪಾಂಡವರ ಸ್ನೇಹಿತನನ್ನು ಸೆರೆಯಲ್ಲಿಡುವೆ. ಆಗ ಅವರು ನಿಸ್ಸಹಾಯಕರಾಗುವರು. ಇದು ಸಾಧ್ಯವಾಗುವುದಾದರೇ ಒಳ್ಳೆಯ ಉಪಾಯವಲ್ಲವೇ ?" ಎಂದನು. ಗಾಭರಿಯಾದ ಧೃತರಾಷ್ಟ್ರನು:- "ಛೇ.. ಛೇ.. ಬೇಡ. ಹಾಗೆಲ್ಲ ಯೋಚಿಸುವುದೂ ತಪ್ಪು. ಕೃಷ್ಣನು ಬರುತ್ತಿರುವುದು ರಾಯಭಾರಿಯಾಗಿ. ಮೇಲಾಗಿ ಅವನು ನಮ್ಮ ಸಂಭಂದಿ. ಹಾಗೆಲ್ಲ ಮಾಡುವುದಕ್ಕೆ ಹೋಗಬೇಡ ದುರ್ಯೋಧನ" ಎಂದನು. ಜಿಗುಪ್ಸೆಯಿಂದ ಭೀಷ್ಮನು:- "ಈ ನಿನ್ನ ಮಗ ವಿವೇಕವನ್ನು ಕಳೆದುಕೋಳ್ಳುತ್ತಿದ್ದಾನೆ. ದುರಾದೃಷ್ಣವನ್ನು ತಾನಾಗಿ ಬರಮಾಡಿಕೊಳ್ಳುತ್ತಿದ್ದಾನೆ. ಅವನೂ ಅವರ ಗೆಳೆಯರೂ ಪರಮ ಪಾಪಿಗಳು. ಅವನ ಒಳಿತಿಗಾಗಿ ನಾವು ಹೇಳಿದ್ದನ್ನು ಉದಾಸೀನ ಮಾಡುತ್ತಾನೆ. ಈಗ ಕೃಷ್ಣನನ್ನು ಬಂದಿಸುತ್ತಾನಂತೆ ! ಇವನ ಮಾತುಗಳನ್ನು ನಾನಿನ್ನು ಖಂಡಿತ ಕೇಳಲಾರೆ" ಎಂದು ಇನ್ನೇನೂ ಮಾತನಾಡದೇ ಸಭೆಯಿಂದ ಎದ್ದು ಹೋದನು. ಬೆಳಿಗ್ಗೆ ಕೃಷ್ಣನು ಹಸ್ತಿನಾಪುರಕ್ಕೆ ಬಂದನು. ಭೀಷ್ಮ, ದ್ರೋಣ, ಕೃಪರೊಂದಿಗೆ, ಧೃತರಾಷ್ಟ್ರನು ಅವರೊಂದಿಗೆ ಎದುರುಗೋಳ್ಳಲು ಹೋದನು. ದುರ್ಯೋದನ ಕರ್ಣ ಮತ್ತಿತರರು ಬಂದಿರಲಿಲ್ಲ. ರಸ್ತೆಗಳನ್ನೆಲ್ಲ ಸಿಂಗರಿಸಿದ್ದ ಪುರಜನರು, ಕೃಷ್ಣನನ್ನು ನಗುನಗುತ್ತಾ ಪ್ರೀತಿಯಿಂದ ಬರಮಾಡಿಕೊಂಡರು. ಕೃಷ್ಣನು ಅರಮನೆಗೆ ಬಂದು ಧೃತರಾಷ್ಟ್ರನು ಹಾಕಿಸಿದ್ದ ರತ್ನ ಖಚಿತವಾದ ಆಸನದ ಮೇಲೆ‌ ಕುಳಿತನು. ಮಂದಹಾಸವು ಮುಖದಲ್ಲಿ ಶೋಭಿಸುತ್ತಿತ್ತು. ಕುಶಲ ಪ್ರೆಶ್ನೆಗಳಾದ ಮೇಲೆ ಅಲ್ಲಿಂದ ಕೃಷ್ಣನು ಹೊರಟು ವಿದುರನ ಮನೆಗೆ ಹೋದನು. ವಿದುರನಿಗೆ ಬಹಳ ಸಂತೋಷವಾಯಿತು‌. ಆನಂದ ಬಾಷ್ಪಗಳನ್ನು ಸುರಿಸುತ್ತಾ ಅವನು ಆದರಿಂದ ಸ್ವಾಗತಿಸಿದನು. ಕುಂತಿಯ ಮಕ್ಕಳು ಹೇಗಿರುವರೆಂದು ವಿಚಾರಿಸಲು, ಕಳೆದ ಕೆಲವು ದಿನಗಳಲ್ಲಿ ನಡೆದುದನ್ನು ಎಲ್ಲವೂ ವಿವರಿಸಿದನು. ಕುಂತಿಯು ವಿದುರನ ಮನೆಯಲ್ಲಿದ್ದಳು ಅಷ್ಟೆ. ಕೃಷ್ಣನು ಅವಳಿದ್ದಲ್ಲಿಗೆ ಹೋಗಲು, ಕುಂತಿಗೆ ಭಾವ ತೀವ್ರತೆಯಿಂದ ಕಣ್ಣೀರು ಬಂತು. ಗದ್ಗದ ಕಂಠದಿಂದ ಕುಂತಿಯು:- "ನನ್ನ ಮಗು ಯುದಿಷ್ಟಿರ ಹೇಗಿದ್ದಾನಪ್ಪಾ ? ಭೀಮ? ಅವನೆಂದರೇ ಯುದಿಷ್ಟಿರನಿಗೆ ಬಹಳ ಪ್ರೀತಿ. ಅರಮನೆಯ ಸುಖಜೀವನಕ್ಕೆ ಒಗ್ಗಿಕೊಂಡಿದ್ದವನು; ಕಾಡಿನಲ್ಲಿ ಇಷ್ಟೊಂದು ವರ್ಷಗಳು ಹೇಗೆ ಕಳೆದ ? ಅರ್ಜುನ ತನ್ನ ಶೌರ್ಯವನ್ನು ಇಷ್ಟು ವರ್ಷಗಳ ಕಾಲ ಹೇಗೆ ಬಚ್ಚಿಟ್ಟುಕೊಂಡಿದ್ದ ? ನಕುಲ ಸಹದೇವರು ಹೇಗಿದ್ದಾರೆ? ತನ್ನ ಮೇಲೆ ಹೇರಲ್ಪಟ್ಟ ಕಷ್ಟಗಳನ್ನು ಆ ಅಗ್ನಿಪುತ್ರಿ (ದ್ರೌಪದಿ) ಹೇಗೆ ಸಹಿಸಿದಳು ?" ಎನ್ನುವಷ್ಟರಲ್ಲಿ ದುಃಖ ಉಕ್ಕಿಬಂದು ಇನ್ನು ಮಾತನಾಡಲು ಅವಳಿಗೆ ಸಾಧ್ಯವಾಗದಾಯಿತು. ಮೃದುವಚನಗಳಿಂದ ಕುಂತಿಯನ್ನು ಸಮಾಧಾನ ಮಾಡಿದ, ಕೃಷ್ಣನು:- "ನಿನ್ನ ಮಕ್ಕಳು ಈಗ ತಮ್ಮ ವನವಾಸ ಅಜ್ಞಾತವಾಸ ಮುಗಿಸಿ, ಪುಟಕ್ಕಿಟ್ಟ ಚಿನ್ನದಂತೆ ಹೊರಹೊಮ್ಮಿದ್ದಾರೆ‌. ಧೀರರಾಗಿ ಕಷ್ಟಗಳನ್ನು ಸಹಿಸಿದ್ದಾರೆ. ತಪಸ್ಸಿನ ಫಲ ಅವರಿಗೀಗ ದೊರಕಿದೆ. ಕಷ್ಟದ ಕಾಲ ಮುಗಿಯಿತು‌, ಸಮಾಧಾನ ಮಾಡಿಕೊ ತಾಯಿ" ಎಂದನು. ನಂತರ, ಕೃಷ್ಣನು ದುರ್ಯೋದನನ ಮನೆಗೆ ಹೋದನು. ಅದು ಇಂದ್ರನ ಅರಮನೆಯಂತೆ ಸುಂದರವಾಗಿತ್ತು. ಮೆಟ್ಟಿಲುಗಳನ್ನು ಹತ್ತಿ, ಸಭೆಯನ್ನು ಪ್ರವೇಷಿಸಿದನು. ದುರ್ಯೋದನನು ಸಿಂಹಾಸನದ ಮೇಲೆ ಕುಳಿತಿದ್ದನು. ಶಕುನಿ, ದುಶ್ಶಾಸನ ಮತ್ತು ರಾಧೇಯರು ಹತ್ತಿರದಲ್ಲಿದ್ದರು‌. ಕೃಷ್ಙನು ಬಂದ ನಂತರ ಎಲ್ಲರೂ ಎದ್ದು ನಿಂತು ಸ್ವಾಗತಿಸಿದರು. ಸುಂದರವಾಗಿ ಕುಸುರಿ ಕೆಲಸ ಮಾಡಿದ ರತ್ನ ಖಚಿತವಾದ ಆಸನದ ಮೇಲೆ ಕುಳ್ಳಿರಿಸಿದನು. ಕೃಷ್ಣನು ಮುಗುಳ್ನಗುತ್ತಾ ಕುಳಿತನು. ರಾಧೆಯನೊಂದಿಗೆ ಏನೋ ಹೇಳುತ್ತಿದ್ದವನು, ಈಗ ಕೃಷ್ಣನ ಕಡೆಗೆ ತಿರುಗಿ, ದುರ್ಯೋಧನನು:- "ಕೃಷ್ಣ, ನಿನ್ನ ವಾಸ್ತವ್ಯಕ್ಕೆ ಹಾಗೂ ಮನರಂಜೆನೆಗೆ ನಾವು ಎಲ್ಲಾ ಏರ್ಪಾಟುಗಳನಗನ್ನು ಮಾಡಿಸಿದ್ದೆವು. ಉತ್ತಮವಾದ ಭೋಜನವನ್ನೂ ಸಿದ್ಧಪಡಿಸಿದ್ದೇವು. ಅವೊಂದನ್ನು ಸ್ವೀಕರಿಸದೇ, ನೀನು ವಿದುರನ ಮನೆಗೆ ಹೋದದ್ದೇಕೆ‌ ?" ಎನ್ನಲು. ಕೃಷ್ಣನು:- "ಏಕೆ ದುರ್ಯೋದನ, ನೀನು ನನ್ನನ್ನು ಚೆನ್ನಾಗಿಯೇ ನೋಡಿಕೊಳ್ಳುತ್ತಿರುವೆ. ನಿನ್ನ ಮನೆಯಲ್ಲಿ ಊಟ ಮಾಡದಿದ್ದರೇನಾಯಿತು ? ನಾನು ಬಂದ ಕೆಲಸವಾದ ಮೇಲೆ ಬಂದು ಊಟ ಮಾಡುವೆ" ಎನ್ನಲು. ದುರ್ಯೋದನನು:- "ನಮ್ಮ ಆತಿಥ್ಯವನ್ನು ಉದಾಸೀನ ಮಾಡಿದೆಯಲ‌್ಲ ? ನೀನು ಹೀಗೆ ಮಾಡಬಾರದಾಗಿತ್ತು. ನಮ್ಮ ನಡುವೇ ಶತ್ರುತ್ವ ಏನಿದೆ ? ಆದರೇ, ನಿನ್ನನ್ನು ಕಂಡರೇ ನಮಗೆಲ್ಲ ತುಂಬಾ ಪ್ರೀತಿ !" ಎಂದನು. ಕೃಷ್ಣನು ಮೃದುವಾಗಿ ನಕ್ಕು:- "ಇರುವುದನ್ನು ಹೇಳಿಬಿಡುತ್ತೇನೆ. ನಿನ್ನ ಮೃಷ್ಟಾನ್ನ ಇತ್ಯಾದಿಗಳು ನನಗೆ ಇಷ್ಟವಿಲ್ಲ. ಋಜುತ್ವವಿಲ್ಲದ ಮನೆಯಲ್ಲಿ ನಾನು ಊಟ ಮಾಡಲಾರೆ. ನನಗೆ ಪ್ರೀತಿಪಾತ್ರರಾದ ಪಾಂಡವರನ್ನು ನೀನು ಅನೇಕ ವರ್ಷಗಳಿಂದ ಕಾರಣವಿಲ್ಲದೇ ದ್ವೇಷಸುತ್ತೀದ್ದಿಯೇ. ಪಾಂಡವರ ಜೀವವೇ ನಾನು. ಲೋಭಕ್ಕೆ ದಾಸನಾಗಿರುವವನನ್ನು ನಾನು ಕೀಳು ಮನುಷ್ಯನೆಂದು ಭಾವಿಸುತ್ತೇನೆ. ನೀನು ಅವರನ್ನು ದ್ವೇಷಿಸುವುದರಿಂದ ನಿನ್ನ ಅನ್ನವು ನನಗೆ ಶತ್ರುವಿನ ಅನ್ನ; ನಾನು ಅದನ್ನು ತಿನ್ನಲಾರೆ. ಅದರಿಂದಾಗಿಯೇ ಪಾಂಡವರನನ್ನು ಪ್ರೀತಿಸುವ ವಿದುರನ ಮನೆಯಲ್ಲಿ ಊಟ ಮಾಡುವೆ" ಎಂದು ಮೇಲೆದ್ದು ಹೊರಟು ಹೋದನು‌. ಭೀಷ್ಮ, ಕೃಪರು ಕರೆದರೂ ಅವರ ಮನೆಗೂ ಹೋಗದೇ, ನೇರವಾಗಿ ಕೃಷ್ಣನು ವಿದುರನ ಮನೆಗೆ ಬಂದನು. ಅವನು ಪ್ರೀತಿಯಿಂದ ಕೃಷ್ಣನನ್ನು ಪೂಜಿಸಿ ಉಣಬಡಿಸಲು, ಕೃಷ್ಣನು ಅಲ್ಲಿಯೇ ತಂಗಿದನು. ಸಂಜೆಯಾಯಿತು. ವಿಶ್ರಾಂತಿ ಆದ ಮೇಲೆ ಕೃಷ್ಣನು ಎದ್ದು ಕುಳಿತು, ಅಂದಿನ‌ ವಿಷಯವನ್ನು ವಿದುರನೊಂದಿಗೆ ಚರ್ಚಿಸಿದನು. ವಿದುರನು:- "ಕೃಷ್ಣ, ನೀನು ಹಸ್ತಿನಾಪುರಕ್ಕೆ ಬಂದದ್ದು ತಪ್ಪಾಯಿತು. ಮೂರ್ಖನಾದ ದುರ್ಯೋದನನು ಯಾರ ಮಾತನ್ನೂ ಕೇಳುವುದಿಲ್ಲ. ನಾವೆಲ್ಲ ಹಿರಿಯರು ಬೇಡವೆಂದು ಎಷ್ಟು ಹೇಳಿದರೂ, ಅವನು ಯುದ್ದ ಮಾಡಲೇ ಬೇಕು ಎಂದು ತೀರ್ಮಾನಿಸಿದ್ದಾನೆ. ತಾನು ಯುದ್ಧದಲ್ಲಿ ಗೆಲ್ಲುವನೆಂದೇ ಅವನ ನಂಬಿಕೆ. ರಾಧೇಯ ಶತ್ರುಗಳನ್ನೆಲ್ಲ ಕೊಲ್ಲಬಲ್ಲನೆಂದು ಅವನು ನಂಬಿದ್ದಾನೆ. ನಿನ್ನ ಮಾತನ್ನು ಅವನು ಕೇಳುವುದಿಲ್ಲ. ಆ ಪಾಪಿಗಳ ಮಧ್ಯದಲ್ಲಿ ನೀನು ಹೋಗಿ ಕುಳ್ಳಿರುವುದೇ ನನಗಿಷ್ಟವಿಲ್ಲ. ಸುಮ್ಮನೆ ಸಂದಿ ಮಾತಾಡಿ ಗಂಟಲು ‌ನೋಯಿಸಿಕೊಳ್ಳಬೇಡ. ಅವರು ನಿನ್ನನ್ನು ಅವಮಾನಿಸುವರು. ಅದನ್ನು ನಾನು ಹೇಗೆ ಸಹಿಸಲಿ ? ಕೃಷ್ಣ" ಎನ್ನಲು. ಕೃಷ್ಣನು:- "ವಿದುರ, ನಿನಗೆ ನನ್ನ ಮೇಲೆ ಅತಿಯಾದ ಪ್ರೀತಿಯಿರುವುದರಿಂದ ನಿನಗೆ ಹಾಗೆ ಎನಿಸುತ್ತದೆ. ನಾನು ಬಂದಿರುವುದೇಕೆಂದು ಕೇಳು. ಯುದ್ದ ನಡೆದೇ ನಡಿಯುವುದಾದರೂ, ಜನರು ವೃಥಾ ಸಾಯುವವರಲ್ಲ. ಅದನ್ನು ತಪ್ಪಿಸುವುದಕ್ಕಾದೀತೇ ಎಂದು ನೋಡೋಣ ಎಂದು ಬಂದೆ. ತಪ್ಪಿಸುವುದಕ್ಕಾದರೇ ದೊಡ್ಡ ಕೀರ್ತಿ ನನ್ನದಾಗುತ್ತದೆ. ಆಗದಿದ್ದರೂ ಅದಕ್ಕಾಗಿ ಪ್ರಯತ್ನಿಸಿದ ತೃಪ್ತಿ ನನಗೆ ಸಾಕು. ವಿನಾಶ ಹತ್ತಿರಕ್ಕೆ ಬಂದಿರವುದನ್ನು ಕಂಡರೂ ರಕ್ಷಣೆಗೆ ಧಾವಿಸದೇ ಇರುವವನು ಮನುಷ್ಯನೇ? ಅಪಾಯದಲ್ಲಿರುವವನನ್ನು ಕೂದಲು ಹಿಡಿದು ಎಳೆದಾದರೂ ರಕ್ಷಿಸಬೇಕು. ಮಾನವೀಯತೇಗೆ ಈ ಸೇವೆ ಮಾಡುವ ಇಷ್ಟ ನನ್ನದು. ಯುದಿಷ್ಟಿರನು ತನಗೆ ಶಾಂತಿ ಬೇಕೆಂದು ಹೇಳಿದ್ದಾನೆ‌. ದುರ್ಯೋದನನ್ನು ಒಪ್ಪಿಸಲು ಪ್ರಯತ್ನಿಸುತ್ತೇನೆ. ಈ ಪ್ರಯತ್ನದಲ್ಲಿ ಸೋತರೂ ಚಿಂತೆ ಇಲ್ಲ. ಪಾಂಡವರೊಡನೆ ಹೋರಾಡಲು ನಿರ್ಧರಿಸುವುದು ಎಂತಹಾ ಪಾಪವೆಂದು ನಾನು ಭೀಷ್ಮ-ದ್ರೋಣಾದಿಗಳಿಗೆ ತಿಳಿಸಿಕೊಡಬೇಕಾಗಿದೆ. ಯುದ್ಧವನ್ನು ತಪ್ಪಿಸಲಾಗದಿದ್ದರೂ, ಅದು ಏಕೆ ನಡೆಯುತ್ತದೆಂದೂ ಲೋಕವೂ ತಿಳಿಯಬೇಕು‌. ಅದೇ ನಾನು ಬರಲು ಕಾರಣ ವಿದುರ" ಎಂದನು. ಅಂದು ರಾತ್ರಿ ಮಾತನಾಡುತ್ತಾ ಎಲ್ಲರೂ ಮಲಗಿದರು. ಬೆಳಗಾಯಿತು. ಕೃಷ್ಣನು ತನ್ನ ಕರ್ಮಗಳನ್ನೆಲ್ಲ ಮುಗಿಸಿದೊಡನೆ ಅವನನ್ನು ಕರೆದುಕೊಂಡು ಹೋಗಲು ದುರ್ಯೋದನ, ಕರ್ಣನೊಂದಿಗೆ ಕೌರವರೆಲ್ಲರೂ ವಿದುರನ ಮನೆಗೆ ಬಂದರು. ಕೃಷ್ಣನು ವಿದುರನೊಂದಿಗೆ ರಥವನ್ನು ಏರಿ‌ ಕುಳಿತನು. ಎಲ್ಲರೂ ತಮ್ಮ ತಮ್ಮ ರಥಗಳಲ್ಲಿ ಬಂದರು. ಸಂಭ್ರಮದಿಂದ ಅವನನ್ನು ಸ್ಬಾಗತಿಸಿದರು. ಕೃಷ್ಣನನ್ನು ನೋಡಲು ಜನ ಜಂಗುಳಿ ದಟ್ಟೈಸಿತ್ತು. ಮೆರವಣಿಗೆ ಅರಮನೆಗೆ ಬಂದಿತು. ವಿದುರ, ಸಾತ್ಯಕಿ ಕೃಷ್ಣನನ್ನು ಕೈ ಹಿಡಿದು ಇಳಿಸಿದರು. ಕೃಷ್ಣನು ಹಾಗೆ ರಾಜಸಭೆಯನ್ನು ಪ್ರವೇಶಿಸಿದನು. ಧೃತರಾಷ್ಟ್ರ ಮತ್ತಿತರು ಎದ್ದು ನಿಂತು ಗೌರವಿಸಿದರು. ತನಗಾಗಿ ಇರಿಸಿದ ಆಸನವನ್ನು ಕುಳಿತುಕೊಳ್ಳುವ ಮುನ್ನ ಕೃಷ್ಣನು ನಾರದ ಮತ್ತಿತರ ಋಷಿಗಳು ಬರುತ್ತಿರುವುದನ್ನು ಕಂಡು, ಅದನ್ನು ಭೀಷ್ಮನಿಗೆ ತಿಸಿದನು‌. ಭೀಷ್ಮನು ಅವರನ್ನೆಲ್ಲ ಗೌರವದಿಂದ ಕರೆತಂದು ಆಸನದಲ್ಲಿ ಕುಳ್ಳಿರಿಸಿದ ಮೇಲೆ, ಕೃಷ್ಣನು ಮುಸಿನಗುತ್ತಾ ಕುಳಿತನು. ಅವನ ಇರುವಿಕೆಯಿಂದ ಇಡೀ ಸಭೆ ಶೋಭೆಯನ್ನು ತಂದುಕೊಟ್ಟಿತು. ಎದೆಯ ಮೇಲೆ ಕೌಸ್ತುಭ ರತ್ನ, ಅವನಿಗೆ ಪ್ರಿಯವಾದ ಹಳದೀ ಪೀತಾಂಬರ, ಇವುಗಳ ನಡುವೆ ಎಳೆ ಬಿಸಿಲು ಬಿದ್ದಿರುವ ನೀಲಪರ್ವದಂತೆ ಕೃಷ್ಣನು ಕಾಣಿಸುತ್ತಿದ್ದನು. ಸ್ವಲ್ಪ ಹೊತ್ತು ಗಾಢ ಮೌನ. ಇದ್ದಕ್ಕಿದ್ದಂತೆ ದೂರದ ಮೇಘಗರ್ಜನೆಯಂತೆ ಕೃಷ್ಣನ ವಾಣಿ ಮೊಳಗಿತು. ಧೃತರಾಷ್ಟ್ರನನ್ನು ಉದ್ದೇಶಿಸಿ, ಕೃಷ್ಣನು:- "ಕೌರವ ಪಾಂಡವರ ಮಧ್ಯೆ ಶಾಂತಿಯನ್ನು ಸ್ಥಾಪಿಸಿ ಆ ಮೂಲಕ ಬಹುಜನರ ವೀರರ ಸಾವನ್ನು ತಪ್ಪಿಸುವುದಕ್ಕೆಂದು ನಾನು ಹಸ್ತಿನಾಪುರಕ್ಕೆ ಬಂದಿರುವೆನು. ಎಲ್ಲವೂ ನಿನಗೆ ತಿಳಿದಿರುವುದರಿಂದ ನಾನೇನೂ ಹೆಚ್ಚಿಗೆ ಹೇಳಬೇಕಾಗಿಲ್ಲ. ಸರಿಯಾದ ಸಮಯದಲ್ಲಿ ನೀನು ಕಾರ್ಯೋನ್ಮುಖನಾದರೇ ಪಾಂಡವ ಕೌರವರಿಬ್ಬರನ್ನೂ ಉಳಿಸಹುದು. ಪಾಂಡುವಿನ ಮಕ್ಕಳಲ್ಲಿ ಅಪರಾಧಿಯಾಗಿಸಬೇಡ. ಈ ಶಾಂತಿಯನ್ನು ಸಾಧಿಸಿದರೇ, ನಿನ್ನ ಸಮಾನ ಯಾರೂ ಇರುವುದಿಲ್ಲ. ಪಾಂಡವ ಕೌರವರು ನಿನ್ನ ರಕ್ಷಕರಾಗಿ ನಿಲ್ಲುವರು. ಪಾಂಡವರ ಬೆಂಬಲ ಸಿಕ್ಕಿದರೇ ನಿನಗೆ ಯಾರ ಭಯವೂ ಇರದು. ಆಗ ನಿನ್ನ ಸೈನ್ಯದ ಬಲವನ್ನು ಕಲ್ಪಿಸಿಕೋ. ಕುರುವಂಶದ ಅತ್ಯುತ್ತಮ ರಾಜನೆಂದು ನೀನು ಇಹ-ಪರಗಳಲ್ಲಿ ಕೀರ್ತಿಯನ್ನು ಪಡೆಯುವೆ. ಈಗಿರುವಂತೆಯೇ ಚಕ್ರಾಧಿಪತಿಯಾಗಿ ಮುಂದುವರೆಯುವೆ; ಯಾರೂ ನಿನ್ನನ್ನು ವಿರೋಧಿಸಲು ಧೈರ್ಯ ಮಾಡಲು ಆಗುವುದಿಲ್ಲ. ಪಾಂಡವರು ನಿನ್ನವರಾದರೇ ನಿನಗೆ ಅವರು ಲೋಕವನ್ನೆ ಗೆದ್ದುಕೊಂಡುವರು" "ಈ ವೈಭವದ ಬದಲಾಗಿ ನೀನು ನಾಶವನ್ನು, ಅಪಕೀರ್ತಿಯನ್ನು ಪಡೆಯುತ್ತಿರುವಿ. ಒಂದೇ ಮರದ ಎರಡು ಶಾಖೆಗಳ ನಡುವೆ ಸೀಳನ್ನು ಎಚ್ಚಿಸುವುದರಿಂದ ನಿನಗೇನು ಲಾಭ? ಪಾಂಡವರನ್ನು ನಿನ್ನ ಮಕ್ಕಳಿಂದ ಕೊಲ್ಲಿಸುವುದರಿಂದ ನೀ ಏನನ್ನು ಪಡೆಯುತ್ತಿಯಾ ? ನಿನ್ನ ಮಕ್ಕಳೇನೂ ಶೂರರೇ; ಆದರೇ ಪಾಂಡವರೂ ಕೂಡ ಶೂರರು. ದಯವಿಟ್ಟು ಲೋಕನಾಶವನ್ನು ತಪ್ಪಿಸು. ದಾಯಾದಿಗಳ ನಡುವೆ ಯುದ್ದವನ್ನು ನೆನೆಸಿಕೊಂಡರೇ ನನಗೆ ಮೈ ಜುಮ್ಮೆನ್ನಿಸುವುದು. ಇಲ್ಲಿ ನೆರೆದಿರುವ ರಾಜರೆಲ್ಲ ಸಾವಿನ ಹೊಸ್ತಿಲಲ್ಲೇ ನಿಂತಿರುವರು. ಅವರನ್ನೆಲ್ಲ ರಕ್ಷಿಸು. ಲೋಕವನ್ನು ರಕ್ಷಿಸು. ಪಾಂಡವರು ಸಜ್ಜನರು; ನಿನ್ನ ಮೇಲೆ ಪ್ರೀತಿಯಿಟ್ಟುಕೊಂಡಿರುವವರು. ನಿನ್ನ ಮಕ್ಕಳೂ ಅವರೂ ಶಾಂತಿಯಿಂದ ಬದುಕಲಿ‌. ಎಲ್ಲಿ ಅನ್ಯಾಯವು ನ್ಯಾಯವನ್ನು ಮೆಟ್ಟಿರುವುದೋ, ಅಸತ್ಯವು ಸತ್ಯವನ್ನು ಹೊಸಕಿ ಹಾಕಿರುವುದೋ, ಹಿರಿಯರೆನಿಸಿಕೊಂಡವರು ಅದನ್ನು ನೋಡಿಯೂ ಸುಮ್ಮನಿರುವರೋ, ಅಂತಹ ಸಭೆ ಸಭೆಯೇ ಅಲ್ಲ. ಅದೊಂದು ಪಾಪ ಕೂಪ. ನನ್ನ ಮಾತನ್ನು ಎಚ್ಚರಿಕೆಯಿಂದ ಕೇಳು. ಪಾಂಡವರಿಗೆ ಅವರ ಹಕ್ಕಿನ‌ರಾಜ್ಯವನ್ನ ಹಿಂದಿರುಗಿಸು.‌ ನಿನಗೆ ಯುದಿಷ್ಟಿರನ ಸ್ವಭಾವ ಗೊತ್ತು‌. ಅವನು ಹಿಂದೆ ನಡೆದ ಅನ್ಯಾಯಗಳನ್ನು ನೆನಪಿಟ್ಟುಕೊಂಡಿರುವವನಲ್ಲ. ಅವನು ನಿನಗೆ ಪ್ರಿಯನೂ ವಿಧೇಯನೂ ಅಗಿರುವನು. ರಾಜಾ, ನಿನ್ನ ಮೇಲಿನ ಪ್ರೀತಿಯಿಂದ ಹೇಳುತ್ತಿದ್ದೇನೆ; ಪುತ್ರಶೋಕದಿಂದ ನೀನು ನರಳುವಂಥಾದ್ದು ಆಗಬಾರದು. ಭವಿಷ್ಯದಲ್ಲಿ ಶಾಂತಿಯಿಂದಿರಬೇಕೆಂದು ಇಷ್ಟವಿದಗದರೇ ಈಗ ಪಾಂಡವರೊಂದಿಗೆ ಶಾಂತಿಯನ್ನು ಸ್ಥಾಪಿಸಿಕೋ" ಎಂದನು. ( ನಾವು ಹೊರಗಡೆಗೆ ಬರೀ ಕೆಟ್ಟದ್ದನ್ನೇ ಮಾಡಿ, ಕಷ್ಟಪಡದೇ ಮೋಸದಿಂದ ಹಣ ಸಂಪಾದಿಸಿ, ಅದರಿಂದ ಹೆಚ್ಚು ಖರ್ಚು ಮಾಡಿ ವೈಭವೋಪೇತವಾಗಿ ಹೋಮ, ಪೂಜೆ, ಜಪ ಮಾಡಿಸಿ ಅಂಥಾ ಹಣದಿಂದ ಭಗವಂತನಿಗೆ ಮೃಷ್ಟಾನ್ನ ಭೋಜನವನ್ನು ನೈವೇದ್ಯ ಮಾಡಿಸಿದರೇ, ಆ ಭಗವಂತ ಸ್ವೀಕರಿಸುವುದಿಲ್ಲ. ನಾವು ನಿಷ್ಠೆಯಿಂದ ದುಡಿದು, ಕಷ್ಟದಲ್ಲಿರುವ ನಾಲ್ಕು ಜನರಿಗೆ ಕೈಲಾದಷ್ಟು ಸೇವೆ ಮಾಡಿ, ಒಂದು ಹೂವು ಏರಿಸಿ, ಗಂಜಿಯನ್ನಾದರೂ ನೈವೇದ್ಯ ಮಾಡಿ ಭಗವಂತನಿಗೆ ಭಕ್ತಿಯಿಂದ ಪೂಜೆ ಮಾಡಿದಾಗ ಅವನು ಸ್ವೀಕರಿಸುತ್ತಾನೆ. ಒಟ್ಟಿನಲ್ಲಿ ಆ ದೇವರಿಗೆ ವೈಭವ ಬೇಡ, ಭಕ್ತಿ ಸಾಕು) ❤️🙏🌷 ವಿಮಲ್ ನ್ಯೂಟ್ರಿಷನ್ ಸೆಂಟರ್ 🌷🙏❤️ #👦🏻 Bad Boyz ಸ್ಟೇಟಸ್ #✍️ ಮೋಟಿವೇಷನಲ್ ಕೋಟ್ಸ್ #😍 ನನ್ನ ಸ್ಟೇಟಸ್ #🎥 Motivational ಸ್ಟೇಟಸ್ #✍️ ಮೋಟಿವೇಷನಲ್ ಕೋಟ್ಸ್