Malgudi Express
587 views
#📜ಪ್ರಚಲಿತ ವಿದ್ಯಮಾನ📜 ಫೆಬ್ರವರಿ 15ರಂದು ಕಿ.ರಂ. ನೆನಪಿನ ಕಾವ್ಯ ಶಿವರಾತ್ರಿ ಬೆಂಗಳೂರು: ಜನಸಂಸ್ಕೃತಿ ಪ್ರತಿಷ್ಠಾನ, ಕಾವ್ಯಮಂಡಲ, ಬೆಂಗಳೂರು ಹಾಗೂ ಸ್ನಾತಕೋತ್ತರ ಕೇಂದ್ರ ರಾಮನಗರ ಬೆಂಗಳೂರು ವಿಶ್ವವಿದ್ಯಾನಿಲಯ ಇವರ ಸಹಯೋಗದಲ್ಲಿ ಇದೇ 15 ಫೆಬ್ರವರಿ 2026, ಭಾನುವಾರ ಸಂಜೆ 6 ಗಂಟೆಯಿಂದ ಸೋಮವಾರ ಬೆಳಿಗ್ಗೆ 6 ರವರೆಗೆ ಬೆಂಗಳೂರು ವಿವಿ ಜ್ಞಾನಭಾರತಿಯ ಡಾ.ವೆಂಕಟಗಿರಿಗೌಡ ಸ್ಮಾರಕ ಸಭಾಂಗಣದಲ್ಲಿ  ವಿಮರ್ಶಕ ಪ್ರೊ ಕಿ.ರಂ.ನಾಗರಾಜ ನೆನಪಿನ ಕಾವ್ಯಶಿವರಾತ್ರಿ ಪ್ರಯುಕ್ತ ಅಹೋರಾತ್ರಿ ಮಂಟೇಸ್ವಾಮಿ ಮತ್ತು ಮಲೆ ಮಹದೇಶ್ವರ ಮಹಾಕಾವ್ಯ ಗಾಯನವನ್ನು ಹಮ್ಮಿಕೊಳ್ಳಲಾಗಿದೆ. ಅಲ್ಕೆರೆ ಶಿವಕುಮಾ‌ರ್ ಮತ್ತು ಸಂಗಡಿಗರು ಗಾಯನವನ್ನು ಪ್ರಸ್ತುತ ಪಡಿಸಲಿದ್ದಾರೆ. ಸಂಜೆ 6.00 ಕವಿಗೋಷ್ಠಿ ಚಾಲನೆ: ಡಾ.ಎಚ್. ಲಕ್ಷ್ಮೀನಾರಾಯಣಸ್ವಾಮಿ, ಕೇಂದ್ರ ಸಾಹಿತ್ಯ ಅಕಾಡೆಮಿ ಯುವ ಪುರಸ್ಕಾರ ಪುರಸ್ಕೃತರು ಅಧ್ಯಕ್ಷತೆ: ಚಲಂ ಹಾಡ್ಲಹಳ್ಳಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು ಭಾಗವಹಿಸುವ ಕವಿಗಳು ಚಾಂದ್ ಪಾಷಾ ಅಮರಾವತಿ ಕೆ. ದಾದಾಪೀ‌ರ್ ಜೈಮನ್ ಶ್ರೀಧರ ಸಿ. ಮಂಜುಳಾ ಹುಲಿಕುಂಟೆ ಇಂಚರ ನಾರಾಯಣಸ್ವಾಮಿ ಎಂ.ಎಸ್. ಸಿದ್ದಾರ್ಥ ಆನಂದ ಕುಮಾರ್ ಎಸ್.ಡಿ ಹಾಜಿರಾ ಖಾನಂ ಗುಂಡಿಗೆರೆ ವಿಶ್ವನಾಥ್ ಚಿನ್ನೇನಹಳ್ಳಿ ಸ್ವಾಮಿ ಸೈಯ್ಯದ್ ಯೇಜಸ್ ಪಾಶ ದಯಾನಂದ ಹುಲಗುತ್ತೂರು ಶಿವಕುಮಾ‌ರ್ ಕೆಂಪನಪುರ ಕಾಂತರಾಜಪುರ ಸುರೇಶ್ ಕಮರವಾಡಿ ಮಹದೇವಸ್ವಾಮಿ ಕುಮಾರ್ ಇಂದ್ರಬೆಟ್ಟ ಡಾ.ಪಿ ಪ್ರೇಮ ಕಾರ್ಯಕ್ರಮದ ಉದ್ಘಾಟನೆಯನ್ನು ಸಂಸ್ಕೃತಿ ಚಿಂತಕರಾದ ಡಾ.ಟಿ.ವೆಂಕಟೇಶಮೂರ್ತಿ ನೆರವೇರಿಸಲಿದ್ದಾರೆ. ಅಧ್ಯಕ್ಷತೆಯನ್ನು ಡಾ. ಜಯಕರ್ ಎಸ್.ಎಂ. ಕುಲಪತಿಗಳು, ಬೆಂಗಳೂರು ವಿಶ್ವವಿದ್ಯಾಲಯ, ಇವರು ವಹಿಸಲಿದ್ದಾರೆ. ಕಿರಂ ಕಾವ್ಯ ಶಿವರಾತ್ರಿ ಪುರಸ್ಕಾರ ಪ್ರದಾನ: ಪ.ಸ. ಕುಮಾರ್, ಅಧ್ಯಕ್ಷರು, ಕರ್ನಾಟಕ ಲಲಿತಕಲಾ ಅಕಾಡೆಮಿ, ಬೆಂಗಳೂರು ಪುರಸ್ಕೃತರು: ಶೃತಿ ಶಿಲ್ಪಿ ಏಕತಾರಿ ರಾಮಯ್ಯ ಚಂಚನ ಪಾಳ್ಯ, ಬೆಂಗಳೂರು ಮುಖ್ಯ ಅತಿಥಿಗಳಾಗಿ ಶಾಂತಲಾ ಕೆ ಟಿ, ಕುಲಸಚಿವರು, ಬೆಂಗಳೂರು ವಿಶ್ವವಿದ್ಯಾಲಯ, ಡಾ. ಸಿ ಎಸ್ ಕರಿಗಾರ್ ಕುಲಸಚಿವರು (ಮೌಲ್ಯಮಾಪನ) ಬೆಂಗಳೂರು ವಿಶ್ವವಿದ್ಯಾಲಯ, ಸಿಂಡಿಕೇಟ್ ಸದಸ್ಯರಾದ ಡಾ. ಕೆ.ಷರೀಫ, ರಮೇಶ್‌ ಬಾಬು, ಗಂಗರಾಜು, ಮಹದೇವ ನಾಯಕ್  ಹಾಗೂ ಕಿ.ರಂ ಮಕ್ಕಳಾದ ಕೆ.ಎನ್. ಸಹನ, ಕೆ.ಎನ್.ಕವನ, ಕೆ.ಎನ್.ಚಂದನ ಭಾಗವಹಿಸಲಿದ್ದಾರೆ. ಪ್ರೊ. ಬಿ. ಗಂಗಾಧರ, ನಿರ್ದೇಶಕರು, ಸ್ನಾತಕೋತ್ತರ ಕೇಂದ್ರ ರಾಮನಗರ ಬೆಂಗಳೂರು ವಿಶ್ವವಿದ್ಯಾನಿಲಯ ಇವರು ಪ್ರಾಸ್ತಾವಿಕ ಭಾಷಣ ಮಾಡಲಿದ್ದು, ಸ್ವಾಗತವನ್ನು ಡಾ. ಪ್ರದೀಪ್ ಮಾಲ್ಗುಡಿ, ಅಧ್ಯಕ್ಷರು ಜನಸಂಸ್ಕೃತಿ ಪ್ರತಿಷ್ಠಾನ ಮಾಡಲಿದ್ದಾರೆ. ಕಾರ್ಯಕ್ರಮವನ್ನು ನಿರ್ಮಲಾ ನಾದನ್ ನಿರ್ವಹಿಸಲಿದ್ದಾರೆ. ಕಾವ್ಯಶಿವರಾತ್ರಿ ಕುರಿತು ಪ್ರೊ ಕಿ.ರಂ.ನಾಗರಾಜ ಅವರಿಗೆ ಜನಪದ ಮಹಾಕಾವ್ಯಗಳ ಮೇಲೆ ಎಲ್ಲಿಲ್ಲದ ಪ್ರೀತಿ. ಅವುಗಳಲ್ಲಿ ಅವಿತಿರುವ ಜೀವಸತ್ವ, ಅಂತಃಸತ್ವಗಳನ್ನು ಬೋಧನೆಯ ಅವಧಿಯಲ್ಲಿ ವಿದ್ಯಾರ್ಥಿಗಳಿಗೆ ಅವರು ಉಣಬಡಿಸುತ್ತಿದ್ದರು. ವಿಚಾರ ಸಂಕಿರಣಗಳಲ್ಲಿ ಕೂಡ ಜನಪದ ಮಹಾಕಾವ್ಯಗಳ ಕುರಿತು ವಿಭಿನ್ನ ಒಳನೋಟಗಳನ್ನು ಅವರು ನೀಡುತ್ತಿದ್ದರು. ಇದರ ಮುಂದುವರಿದ ಭಾಗವಾಗಿ ಕಾವ್ಯಮಂಡಲದಿಂದ ಪ್ರತಿ ಶಿವರಾತ್ರಿಯಂದು ಕಾವ್ಯ ಶಿವರಾತ್ರಿ ಹೆಸರಿನಲ್ಲಿ ಜನಪದ ಮಹಾಕಾವ್ಯಗಳನ್ನು ನೀಲಗಾರರಿಂದ ಹಾಡಿಸುವ ಸಂಪ್ರದಾಯವನ್ನು ಹುಟ್ಟುಹಾಕಿದರು. ಈ ಬಾರಿ ಸ್ನಾತಕೋತ್ತರ ಕೇಂದ್ರ ರಾಮನಗರ ಬೆಂಗಳೂರು ವಿಶ್ವವಿದ್ಯಾನಿಲಯ ಇವರ ಸಹಭಾಗಿತ್ವದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಮೊ: 9448160398, 9844086993 #KavyaShivaratri #memory #Kiram #malgudiexpress #malgudinews #news #TopNews