#📜ಪ್ರಚಲಿತ ವಿದ್ಯಮಾನ📜
ಎಸ್ಐಆರ್ ಯಾಕೆ ಬೇಡ?
2025 ಜೂನ್ 24ರಂದು ಇಸಿಐ ತನ್ನ ಆದೇಶ ಸಂಖ್ಯೆ (23/ಇಆರ್ಎಸ್ /2025) ಮೂಲಕ, ಸಂವಿಧಾನದ ವಿಧಿ 324ರ ಅಡಿಯಲ್ಲಿ ದೇಶಾದ್ಯಂತ ಎಸ್ಐಆರ್ ಪ್ರಾರಂಭಿಸುವುದಾಗಿ ಘೋಷಿಸಿತು. ಮೊದಲಿಗೆ ಬಿಹಾರದಲ್ಲಿ ಆಗಸ್ಟ್–ಸೆಪ್ಟೆಂಬರ್ 2025ರಲ್ಲಿ ಈ ಎಸ್ಐಆರ್ ನಡೆಯಿತು.
24 ಜೂನ್ 2025 :
7.89 ಕೋಟಿ ಮತದಾರರು
65 ಲಕ್ಷ ಮತದಾರರನ್ನು ತೆಗೆಯಲಾಗಿದೆ
ಸುಪ್ರೀಂಕೋರ್ಟ್ ವಿಚಾರಣೆ, ಮಧ್ಯಪ್ರವೇಶ
1 ಆಗಸ್ಟ್ 2025(36 ದಿನಗಳ ಅಂತರದಲ್ಲಿ)
7.24 ಕೋಟಿ ಮತದಾರರು
3.66ಲಕ್ಷ ಮತದಾರರನ್ನು ತೆಗೆಯಲಾಗಿದೆ
21.53 ಮತದಾರರನ್ನು ಸೇರಿಸಲಾಗಿದೆ
30 ಸೆಪ್ಟೆಂಬರ್ 2025
7.42 ಕೋಟಿ ಮತದಾರರು
ಅದನ್ನ ಅನುಸರಿಸಿ, 12 ರಾಜ್ಯಗಳಾದ ಅಂಡಮಾನ್ ನಿಕೋಬಾರ್, ಛತ್ತೀಸಗಢ, ಗೋವಾ, ಗುಜರಾತ್, ಕೇರಳ, ಲಕ್ಷದ್ವೀಪ, ಮಧ್ಯಪ್ರದೇಶ, ಪುದುಚೆರಿ, ರಾಜಸ್ಥಾನ, ತಮಿಳುನಾಡು, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳದಲ್ಲಿ ಜನವರಿ 2026ರೊಳಗೆ ಪೂರ್ಣಗೊಂಡಿದೆ.
6.5 ಕೋಟಿ ಮತದಾರರು ಮತದಾನದ ಹಕ್ಕಿನಿಂದ ವಂಚಿತರಾಗಿದ್ದಾರೆ.
ಪ. ಬಂಗಾಳದಲ್ಲಿ 1.36 ಕೋಟಿ ಮತದಾರರ ಮ್ಯಾಪಿಂಗ್ ಆಗಿದ್ದರೂ ಅವರಿಗೆ ಹತ್ತಾರು ಸಮಸ್ಯೆಗಳನ್ನು ಉಲ್ಲೇಖಿಸಿ ನೋಟಿಸ್ ನೀಡಲಾಗಿದೆ.
ಅಷ್ಟು ಮಾತ್ರವಲ್ಲ ಮುಂದಿನ ದಿನಗಳಲ್ಲಿ ಇವರು ಎಸ್ ಐಆರ್ ನಲ್ಲಿ ಇಲ್ಲ ಎಂದು ಸರ್ಕಾರದ ಕಲ್ಯಾಣ ಯೋಜನೆಗಳಿಂದ ವಂಚಿತರಾಗಬಹುದು..
ಈ ಪಟ್ಟಿಯ ಆರು ರಾಜ್ಯಗಳಿಗೆ 2026ರಲ್ಲಿ ವಿಧಾಐನಸಭಾ ಚುನಾವಣೆಗಳೂ ನಿಗದಿಯಾಗಿದೆ.
ಜನಪ್ರತಿನಿಧಿಗಳ ಕಾಯ್ದೆ 1950 ಮತ್ತು ಮತದಾರರ ನೋಂದಣಿ ನಿಯಮಗಳು 1960 ಪ್ರಕಾರ ಮತದಾರರ ಪಟ್ಟಿ ತಯಾರಿಸಲು ಮೂರು ವಿಧಾನಗಳಿವೆ
1. ತೀವ್ರವಾದ ಪರಿಷ್ಕರಣೆ (intensive revision)
2. ಸಾರಾಂಶ ಪರಿಷ್ಕರಣೆ (summary revision)
3. ಕೆಲವೊಮ್ಮೆ ತೀವ್ರವಾಗಿ, ಕೆಲವೊಮ್ಮೆ ಸಾರಾಂಶದಲ್ಲಿ
ಆದರೆ ʼವಿಶೇಷ ತೀವ್ರವಾದ ಪರಿಷ್ಕರಣೆʼ ಎನ್ನುವುದು ಕಾನೂನಿನಲ್ಲಿ, ಸಂವಿಧಾನದಲ್ಲಿ ಪ್ರಸ್ತಾಪವಿಲ್ಲ.
ಇದನ್ನು ಕೇಂದ್ರ ಗೃಹ ಇಲಾಖೆ ನಿರ್ದೇಶನದ ಮೇರೆಗೆ ಇಸಿಐ ನಡೆಸುತ್ತಿದೆ.
ಈ ಸಂಸ್ಥೆ ಸ್ವಾಯತ್ತತೆ ಕಳೆದುಕೊಂಡಿರುವದರಿಂದ, ತನ್ನದೇ ಸ್ವತಂತ್ರ ನಿಲುವು ತೆಗೆದುಕೊಳ್ಳಲು ಸಾಧ್ಯವೇ ಇಲ್ಲದಿರುವುದರಿಂದ ಮೋದಿ ನೇತೃತ್ವ ಸರ್ಕಾರದ ಅಡಿಯಾಳಾಗಿ ಕಾರ್ಯ ನಿರ್ವಹಿಸುತ್ತಿದೆ.
ಇದು ಮೊದಲ ಆಕ್ಷೇಪ.
ಕಾನೂನು ತಜ್ಞರು ಹೇಳಿದಂತೆ ತೀವ್ರವಾದ ಪರಿಷ್ಕರಣೆಯನ್ನು ಒಂದು ನಿರ್ದಿಷ್ಠ ಕ್ಷೇತ್ರಕ್ಕೆ ಮಾತ್ರ ಅನ್ವಯಿಸಬಹುದೇ ಹೊರತು ಇಡೀ ರಾಜ್ಯಕ್ಕಲ್ಲ.
ಆದರೆ ಇಸಿಐ ಇಡೀ ಬಿಹಾರ್ ರಾಜ್ಯಕ್ಕೆ ಅನ್ವಯಿಸಿ ಎಸ್ಐಆರ್ ನಡೆಸಿದೆ.
2025 ಜೂನ್ 24ರಂದು ಇಸಿಐ ಬಿಹಾರ ರಾಜ್ಯ ಸರ್ಕಾರಕ್ಕೆ ಬರೆದ ಪತ್ರದಲ್ಲೂ, ಕಾನೂನಾತ್ಮಕವಾಗಿ ʼವಿಶೇಷ ಪರಿಷ್ಕರಣೆಯ ಅಗತ್ಯವೇನಿದೆ?ʼ ಎಂದು ಸ್ಪಷ್ಟೀಕರಣ ನೀಡಿಲ್ಲ, ಕಾರಣಗಳು ಏನೆಂದು ವಿವರಿಸಿಲ್ಲ. ಅದರ ನಿರ್ಧಾರಗಳು ನಿಯಮಗಳಿಗೆ ವಿರುದ್ಧವಾಗಿದೆ.
ಹಾಗೆಯೇ ಪ.ಬಂಗಾಳ, ಕೇರಳ, ತಮಿಳುನಾಡುನಲ್ಲಿ ಕೆಲವೇ ತಿಂಗಳುಗಳಲ್ಲಿ ಚುನಾವಣೆ ನಡೆಯಲಿದೆ. ತರಾತುರಿಯಲ್ಲಿ ಕೇವಲ ಎರಡು ತಿಂಗಳಲ್ಲಿ ಎಸ್ ಐಆರ್ ನಡೆಸುವ ಉದ್ದೇಶವೇನು? ವಾಸ್ತವದಲ್ಲಿ ವಿಸ್ತ್ರತ ಪರಿಷ್ಕರಣೆಗೆ ಒಂದು ವರ್ಷ ಅವಧಿಯ ಅಗತ್ಯವಿದೆ
ಇದು ಎರಡನೇ ಆಕ್ಷೇಪ.
ಏನು ಬೇಕು?
● 1 ಜುಲೈ1987 ಕ್ಕಿಂತ ಮೊದಲು ಜನಿಸಿದವರು, ತಮ್ಮ ಜನನ ದಿನಾಂಕ/ಸ್ಥಳದ ದಾಖಲೆಯನ್ನುನೀಡಬೇಕು.
● 1 ಜುಲೈ1987 ಮತ್ತು2 ಡಿಸೆಂಬರ್ 2004 ನಡುವೆ ಜನಿಸಿದವರು, ತಮ್ಮದೂ, ಮತ್ತುತಂದೆ ಅಥವಾ ತಾಯಿಯ ದಾಖಲೆಯನ್ನುನೀಡಬೇಕು.
● 2 ಡಿಸೆಂಬರ್ 2004 ನಂತರ ಜನಿಸಿದವರು, ತಮ್ಮದೂ, ಮತ್ತುಇಬ್ಬರು ಪೋಷಕರ ದಾಖಲೆಯನ್ನು ನೀಡಬೇಕು.
ಸಿಇಒ -ಕೆ ನೀಡಿರುವ ಹನ್ನೊಂದು ದಾಖಲೆಗಳು ಪಟ್ಟಿ, ಜನಸಾಮಾನ್ಯರಲ್ಲಿ ಬಹುತೇಕ ಯಾರಿಗೂ ಇಲ್ಲದಂತಹ ದಾಖಲೆಗಳಾಗಿವೆ.
ಇದರ ದಸ್ತಾವೇಜಿನಲ್ಲಿ ಇದರ ಕುರಿತು ಮತ್ತು ಹನ್ನೆರೆಡನೆಯದಾಗಿ ಆಧಾರ್ ದಾಖಲೆಗಳ ವಿವರಗಳನ್ನು ಪ್ರಕಟಿಸಿದೆ.
ಅವೇನೆಂದರೆ.
ಸರ್ಕಾರ, ಪಿಎಸ್ ಯು ಮುಂತಾದ ಉದ್ಯೋಗದ ಗುರುತಿನ ಚೀಟಿ
1 ಜುಲೈ 1987 ಮುಂಚಿನ ಗುರುತಿನ ಚೀಟಿ (ಅಧಿಕಾರಿಗಳಿಂದ ಲಗತ್ತಾಗಿರಬೇಕು)
ಜನನ ಪ್ರಮಾಣ ಪತ್ರ
(ಅಧಿಕಾರಿಗಳಿಂದ ಲಗತ್ತಾಗಿರಬೇಕು)
ಪಾಸ್ ಪೋರ್ಟ್
ಎಸ್ ಎಸ್ ಎಲ್ ಸಿ ಪ್ರಮಾಣ ಪತ್ರ
ಶಾಶ್ವತ ನಿವಾಸದ ಪ್ರಮಾಣ ಪತ್ರ
ಅರಣ್ಯ ಹಕ್ಕುಗಳ ಪತ್ರ
ಜಾತಿ ಪ್ರಮಾಣ ಪತ್ರ
ಸರ್ಕಾರದಿಂದ ಜಮೀನು, ನಿವೇಶನ, ಮನೆ ಹಂಚಿಕೆ ಪತ್ರ
ಮತದಾರರ ಪಟ್ಟಿಯ ಉಲ್ಲೇಖ ಪ್ರತಿ
ಜೊತೆಗೆ ಆಧಾರ್ (ಇದು ಪೌರತ್ವ ನಿರ್ಧರಿಸುವ ದಾಖಲೆ ಅಲ್ಲ.. ಈ ಪಟ್ಟಿಯಲ್ಲಿ ಮತದಾರ ಗುರುತು ಪತ್ರ, ಪಡಿತರ ಚೀಟಿ ಇಲ್ಲ)
ಹೇಗೆ ಸಂವಿಧಾನ ವಿರೋಧಿ?
ಸಂವಿಧಾನದ ವಿಧಿ 326ರ ನೀತಿಯು 18 ವರ್ಷಕ್ಕಿಂತ ಮೇಲ್ಪಟ್ಟ ಪ್ರತಿಯೊಬ್ಬ ಭಾರತೀಯರಿಗೆ ಮತದಾನದ ಹಕ್ಕನ್ನು ಖಚಿತಪಡಿಸಿದೆ. ಅವರಲ್ಲಿ ತಾರತಮ್ಯ ಮಾಡುವಂತಿಲ್ಲ ಎಂದು ಸ್ಪಷ್ಟವಾಗಿ ಹೇಳಿದೆ.
ಆದರೆ ಇಸಿಐ ವಿಧಿ 324ರ ಅಡಿಯಲ್ಲಿ ತನ್ನ ಜವಬ್ದಾರಿಯನ್ನು ಮಾತ್ರ ಹೇಳಿಕೊಳ್ಳುತ್ತಿದೆಯೇ ಹೊರತು ವಿಧಿ 326ರ ಅಡಿಯಲ್ಲಿ ತಾರತಮ್ಯ ಮಾಡುವಂತಿಲ್ಲ ಎನ್ನುವುದನ್ನು ಉಲ್ಲಂಘಿಸಿ ಆದಾರ್ ಕಾರ್ಡ, ಮತದಾರ ಗುರುತಿನ ಚೀಟಿ(ಎಪಿಕ್), ಪಡಿತರ ಚೀಟಿ ಮುಂತಾದವುಗಳನ್ನು ಆಧರಿಸಿ ಪೌರತ್ವವನ್ನು ನಿರ್ಧರಿಸಲು ಸಾಧ್ಯವಿಲ್ಲ ಎಂದು ನಿರ್ಧರಿಸಿದೆ, ಆ ಮೂಲಕ ಸಂವಿಧಾನದ ನೀತಿಯನ್ನು ಉಲ್ಲಂಘಿಸುತ್ತಿದೆ.
ಕಾನೂನಿನ ಪ್ರಕಾರ ಗೃಹ ಇಲಾಖಗೆ ಮಾತ್ರ ಪೌರತ್ವವನ್ನು ನಿರ್ಧರಿಸುವ ಹಕ್ಕಿದೆ. ಇಸಿಐಗೆ ಇಲ್ಲ.
ಆದರೆ ಇದನ್ನು ಪಾಲಿಸುತ್ತಿಲ್ಲ.
ಇದಕ್ಕೆ ಇಸಿಐ 'ನಾನು ಪೌರತ್ವ ಇದೆ/ಇಲ್ಲ ಎಂದು ಮಾತ್ರ ಪರಿಶೀಲನೆ ಮಾಡುತ್ತೇವೆ, ನಿರ್ಧರಿಸುತ್ತಿಲ್ಲ.. ' ಎಂದು ಹೇಳುತ್ತದೆ
ಮುಖ್ಯವಾದ ಬಿಕ್ಕಟ್ಟೇನು?
ಇಲ್ಲಿ ಇಸಿಐ ಮತದಾರರ ಪಟ್ಟಿ ಪರಿಷ್ಕರಿಸಿ, ಅರ್ಹತೆ, ಪೌರತ್ವವನ್ನು ಸಾಬೀತುಪಡಿಸುತ್ತಿಲ್ಲ...
ಬದಲಿಗೆ ಮತದಾರರು ಸಾಬೀತುಪಡಿಸಬೇಕು
(ಯುಎಪಿಎ, ಪಿಎಂಎಲ್ ಎ ರೀತಿ..)
ಎಡಿಆರ್ ಸಂಸ್ಥೆ(ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್) ಪ್ರಕಾರ, ಬಿಹಾರದಲ್ಲಿ
ಅಂತಿಮ ಪಟ್ಟಿಯಲ್ಲಿ ಹೆಸರು, ಸಂಬಂಧಿಕರ ಹೆಸರು, ವಯಸ್ಸು, ವಿಳಾಸ ಒಂದೇ ಆಗಿರುವ 5 ಲಕ್ಷಕ್ಕೂ ಹೆಚ್ಚು ನಕಲಿ ನಮೂದುಗಳಿವೆ.
ರಿಪೋರ್ಟರ್ ಕಲೆಕ್ಟಿವ್ (ವರದಿಗಾರರ ಸಮೂಹ) ಪ್ರಕಾರ, ಸುಮಾರು 14.35 ಲಕ್ಷ ನಮೂದುಗಳು ʼಸಂದೇಹಾಸ್ಪದ ನಕಲುಗಳಾಗಿವೆʼ.
ಅವುಗಳಲ್ಲಿ ಸರಿಸುಮಾರು 3.4 ಲಕ್ಷ ನಮೂದುಗಳು ಹೆಸರು, ಸಂಬಂಧಿಕರ ಹೆಸರು ಮತ್ತು ವಯಸ್ಸಿನ ವಿಷಯದಲ್ಲಿ ಒಂದೇ ತೆರನಾದ ಮಾಹಿತಿ ಹೊಂದಿದೆ. ಮತದಾರರ ವಿವರಗಳಲ್ಲೂ ಗಂಭೀರ ದೋಷಗಳು ಕಂಡುಬಂದಿದೆ.
22 ಲಕ್ಷ ಜನ ತೀರಿಕೊಂಡಿದ್ದಾರೆ(ಇದನ್ನು ಒಪ್ಪಿಕೊಳ್ಳಬಹುದು),
7 ಲಕ್ಷ ನಕಲಿ ಮತದಾರರು(ಇದನ್ನೂ ಅನುಮಾನವಿದ್ದರೂ ಒಪ್ಪಿಕೊಳ್ಳಬಹುದು ಅಥವಾ ಪರಿಶೀಲಿಸಬಹುದು),
36 ಲಕ್ಷ ಜನ ವಲಸೆ ಹೋಗಿದ್ದಾರೆ ಅಥವಾ ಪತ್ತೆ ಹಚ್ಚಲಾಗಿಲ್ಲ. ಈ ಅಂಶ ಪ್ರಶ್ನಾರ್ಹವಾಗಿದೆ, ಅನುಮಾನಸ್ಪವಾಗಿದೆ,
ಪಶ್ಚಿಮ ಬಂಗಾಳದ ಉದಾಹರಣೆ:
ಮ್ಯಾಪಿಂಗ್ ಆಗಿದ್ದರೂ SIR ಅಡಿಯಲ್ಲಿ (ಜನಸಂಖ್ಯೆಯ ಸುಮಾರು 20%) ಸುಮಾರು 1.3 ಕೋಟಿ ಜನರಿಗೆ
‘ತಾರ್ಕಿಕ ವ್ಯತ್ಯಾಸಗಳು’ (logical discrepancies) ಎಂದು ಹೆಸರಿಸಿ ನೋಟಿಸ್ಗಳನ್ನು ಕಳುಹಿಸಲಾಗಿದೆ
‘ತಾರ್ಕಿಕ ವ್ಯತ್ಯಾಸಗಳು’ ಎಂದರೆ: ಆರಕ್ಕಿಂತ ಹೆಚ್ಚು ‘ಸಂತಾನ’ಗಳಿರುವುದು, ‘ಗಂಗೂಲಿ’ ಮತ್ತು ‘ದತ್ತ’ ಎಂಬಂತೆ ಹೆಸರುಗಳ ಅಕ್ಷರ ಸಂಯೋಜನೆಯಲ್ಲಿ ವ್ಯತ್ಯಾಸ, ಪೋಷಕರು ಮತ್ತು ಮಕ್ಕಳ ನಡುವೆ ಕೇವಲ 15 ವರ್ಷಗಳ ವಯಸ್ಸಿನ ಅಂತರ ಇರುವುದು, ಹಾಗೂ ಅಜ್ಜ–ಅಜ್ಜಿ ಮತ್ತು ಮೊಮ್ಮಕ್ಕಳ ವಯಸ್ಸಿನ ಅಂತರ 40 ವರ್ಷಕ್ಕಿಂತ ಕಡಿಮೆ ಇರುವುದು...
ವಿಚಾರಣೆಯಲ್ಲಿ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಬಾಗ್ಚಿ 'ಪೋಷಕರು ಮತ್ತು ಮಗುವಿನ ನಡುವೆ 15 ವರ್ಷದ ವಯಸ್ಸಿನ ಅಂತರ ಇರುವುದು ಹೇಗೆ ತರ್ಕಕ್ಕೆ ವಿರುದ್ಧವಾಗುತ್ತದೆ ಎಂದು ಪ್ರಶ್ನಿಸಿದರು; “ಮಕ್ಕಳ ವಿವಾಹವೇ ಇಲ್ಲದ ದೇಶದಲ್ಲಿ ನಾವು ಬದುಕುತ್ತಿದ್ದೇವೆಯೇ?” ಎಂದು ಕೇಳಿದರು.
ಒಂದೇ ಜಿಲ್ಲೆಯಲ್ಲಿ 2.31 ಲಕ್ಷಕ್ಕೂ ಹೆಚ್ಚು ಜನರಿಗೆ ಅವರ ವಿರುದ್ಧ ಕಂಡುಬಂದ ‘ತಾರ್ಕಿಕ ವ್ಯತ್ಯಾಸಗಳನ್ನು’ ವಿವರಿಸಲು ನೋಟಿಸ್ಗಳು ಬಂದಿವೆ.
‘ಸಂತಾನ’ ವರ್ಗದಲ್ಲಿ ಜನಸಂಖ್ಯೆಯ 2.12% ಮಂದಿಗೆ ನೋಟಿಸ್ಗಳನ್ನು ನೀಡಲಾಗಿದೆ.
ಈ ಎಲ್ಲಾ ಮಾನದಂಡಗಳು ಎಲ್ಲಿಂದ ಬಂದವು?
ಯಾರು ನಿರ್ಧರಿಸುತ್ತಾರೆ?
ಈ 1.36 ಕೋಟಿ ಜನರ ವಿಚಾರಣೆ ನಡೆಸಲು ಚುನಾವಣಾ ಆಯೋಗ (EC) ಕೇವಲ 500 ಸ್ಥಳಗಳನ್ನು ಮಾತ್ರ ಒದಗಿಸಿತ್ತು, ಆದರೆ 1900ಕ್ಕೂ ಹೆಚ್ಚು ಸ್ಥಳಗಳು ಅಗತ್ಯವಾಗಿದ್ದವು.
32 ಲಕ್ಷ ಜನರನ್ನು ‘ಅನ್-ಮ್ಯಾಪ್ಡ್’ (2002ರ ಪಶ್ಚಿಮ ಬಂಗಾಳದ ಹಿಂದಿನ SIRನಲ್ಲಿ ತಯಾರಿಸಲಾದ ಮತದಾರರ ಪಟ್ಟಿಗಳಲ್ಲಿ ಅವರ ಹೆಸರುಗಳು ಅಥವಾ ಅವರ ಕುಟುಂಬದ ಸದಸ್ಯರ ಹೆಸರುಗಳು ಕಾಣಿಸದವರು) ಎಂದು ಗುರುತಿಸಿ, ದಾಖಲೆಗಳನ್ನು ಸಲ್ಲಿಸಿ ಆಕ್ಷೇಪಣೆಗಳನ್ನು ದಾಖಲಿಸುವಂತೆ ನೋಟಿಸ್ಗಳನ್ನು ಕಳುಹಿಸಲಾಗಿದೆ
ಇದು
mass exclusion not mass inclusion
(ಬಿಕ್ಕಟ್ಟಿನ ಮೂಲ ಕಾರಣ
2 ಮಾರ್ಚ 2023ರಂದು ಆಗಿನ ಸುಪ್ರೀಂಕೋರ್ಟ ನ್ಯಾಯಮೂರ್ತಿ ಕೆ.ಎಂ.ಜೋಸೆಫ್ ನೇತೃತ್ವದ ಪೀಠವು ಭಾರತದ ಚುನಾವಣಾ ಅಯೋಗದ ಆಯುಕ್ತರ ನೇಮಕಾತಿಯ ಪ್ರಕ್ರಿಯೆಯಲ್ಲಿ ಬದಲಾವಣೆಗಳನ್ನು ಸೂಚಿಸಿತು. ಮತ್ತಷ್ಟು ಪಾರದರ್ಶಕತೆ ಮತ್ತು ನಿಷ್ಪಕ್ಷಪಾತ ನೀತಿ ತರಲು ಆಯ್ಕೆ ಸಮಿತಿಯಲ್ಲಿ ಪ್ರಧಾನ ಮಂತ್ರಿ, ವಿರೋಧ ಪಕ್ಷದ ನಾಯಕರು ಮತ್ತು ಸುಪ್ರೀಂಕೋರ್ಟನ ಸಿಜೆಐ (ಮುಖ್ಯ ನ್ಯಾಯಮೂರ್ತಿಗಳು) ಒಳಗೊಂಡ ಸಮಿತಿಯು ರಾಷ್ಟçಪತಿಗಳಿಗೆ ತಮ್ಮ ಆಯ್ಕೆಯನ್ನು ಕಳಿಸಿಕೊಡಬೇಕೆಂದು ನಿರ್ದೇಶನ ನೀಡಿತು. ಆದರೆ ‘ತನ್ನ ನಿರ್ದೇಶನವು ಸಂಸತ್ತು ಕಾಯ್ದೆ ರೂಪಿಸುವವರೆಗೆ ಮಾತ್ರ ಮಾನ್ಯವಾಗಿರುತ್ತದೆ’ ಎಂದು ಸೇರಿಸಿತು. ಇದನ್ನೇ ನೆಪ ಮಾಡಿಕೊಂಡ ಆಗಿನ ಮೋದಿ ನೇತೃತ್ವದ ಸರ್ಕಾರವು 28 ಡಿಸೆಂಬರ್ 2023ರಂದು ಮುಖ್ಯ ಚುನಾವಣಾ ಅಯುಕ್ತ ಮತ್ತು ಇತರೆ ಆಯುಕ್ತರು(ನೇಮಕಾತಿ, ಸೇವೆ, ಟರ್ಮ್ಸ ಆಪ್ ಆಫೀಸ್) 2023 ಕಾಯ್ದೆಯನ್ನು ಜಾರಿಗೆ ತಂದರು. ಈ ಕಾಯ್ದೆಯಲ್ಲಿ ಸಿಜೆಐಯವರನ್ನು ಆಯ್ಕೆ ಸಮಿತಿಯಿಂದ ಕೈಬಿಟ್ಟು ಪ್ರಧಾನ ಮಂತ್ರಿ, ವಿರೋಧ ಪಕ್ಷದ ನಾಯಕರು ಮತ್ತು ಪಿಎಂ ನಾಮನಿರ್ದೇಶನ ಮಾಡುವ ಕೇಂದ್ರ ಕ್ಯಾಬಿನೆಟ್ ಸಚಿವರನ್ನು ಒಳಗೊಂಡ ಸಮಿತಿ ರಚಿಸಲಾಯಿತು. ಈ ಕಾಯ್ದೆಯನ್ನು 2 ಜನವರಿ 2024ರಂದು ಜಾರಿಗೊಳಿಸಲಾಯಿತು.)
ಇಷ್ಟು ಕಾರಣಗಳು ಸಾಕಲ್ಲವೇ! ಎಸ್ ಐಆರ್ ತಿರಸ್ಕರಿಸಲು?
- ಶ್ರೀಪಾದ್ ಭಟ್, ಬೆಂಗಳೂರು
#WhynotSIR #SIR #BSripadBhat #votechori #voteloot #malgudiexpress #malgudinews #news #TopNews