ಕೃಷ್ಣೆ 🦚💙
6.2K views
5 days ago
#🙏🎵ಶ್ಲೋಕಗಳು!! #🕉️ ಜೈ ಶ್ರೀ ರಾಮ🙏 ತಾರಕ ಮಂತ್ರ ನಿರಂತರವಾಗಿ ಯಾವ ಮಂತ್ರವನ್ನು ಜಪಿಸುವವವವರಿಗೆ ಮನಸ್ಸು ನಿರಾಳ ಹಾಗೂ ಪ್ರಫುಲ್ಲವಾಗಿರುತ್ತದೆಯೊ, ಯಾವುದೇ ಭಯ ಆತಂಕಗಳು ಇರುವುದಿಲ್ಲವೊ, ಮುಗುಳ್ನಗೆ, ಹಸನ್ಮುಖ, ಮನಶ್ಶಾಂತಿ, ನೆಮ್ಮದಿ ತಾನಾಗಿ ಲಭ್ಯವಾಗುತ್ತದೆಯೊ. ಮಾತು ಮಧುರವಾಗುತ್ತದೆಯೊ. ದುಗುಡ ನೀಗುತ್ತದೆಯೊ. ಬೇಸರ ಹೋಗುತ್ತದೆಯೊ. ಜೀವ ಧನ್ಯತೆಯಿಂದ ಬಾಗುತ್ತದೆಯೊ. ಚೇತನ ಅನುಭವದಿಂದ ಮಾಗುತ್ತದೆಯೊ. ನಿಧಾನವಾಗಿ ಎಲ್ಲ ಬಂಧನಗಳು ಬಿಡಿಸಿಕೊಳ್ಳುತ್ತವೆಯೊ. ಮುಖ್ಯವಾಗಿ ಜನನ-ಮರಣಗಳ ಚಕ್ರ ಕಳಚುತ್ತದೆಯೊ. ಭವಸಾಗರ ದಾಟುವ ನೌಕೆ ಕಾಣುತ್ತದೆಯೊ. ಇದನ್ನೇ "ತಾರಕ ಮಂತ್ರ" ಎಂದು ತಿಳಿಯಬೇಕು. ಶ್ರೀರಾಮ ಜಯರಾಮ ಜಯಜಯ ರಾಮ ಇವುಗಳನ್ನು ತಾರಕ ಮಂತ್ರ ಎಂದು ಗುರುತಿಸಲಾಗಿದೆ. ಮಹತ್ವದ 'ರಾ' ಮತ್ತು 'ಮ' ಎಂಬ ಈ ಎರಡು ಬೀಜಾಕ್ಷರಗಳಿಂದ "ರಾಮ" ಎನ್ನುವ ಮಂತ್ರವಾಗಿದೆ. ಶ್ರೀರಾಮನು ಗರ್ಭ-ಜನ್ಮ-ಮುಪ್ಪು-ಮರಣ ಇತ್ಯಾದಿಗಳಿಂದ ಯುಕ್ತವಾದ ಸಂಸಾರದ ಮಹಾನ್ ಭಯದಿಂದ ಭಕ್ತನನ್ನು ದಾಟಿಸುತ್ತಾನೆ ಅಂತ ಅವನನ್ನು ತಾರಕ ಬ್ರಹ್ಮ ಅಥವಾ ಶ್ರೀ ಗುರು ಎಂದು ಕರೆಯುತ್ತಾರೆ. ರಾಮನಾಮ ಸ್ಮರಣೆ ಶ್ರೇಷ್ಠವಾದ ಮಂತ್ರ. "ಜಯ ಜಯ ಜಯ"ಎಂಬ ಷಟ್ ಜಯಕಾರ ಅಕ್ಷರವು ಸೇರಿದರೆ ಜಯಧ್ವನಿಯು ನಮಗೆ ಜಯವನ್ನು ತಂದು ಕೊಡುವುದು. ಅದರಂತೆ ಮುಂದೆ .... "ಶ್ರೀರಾಮ ಜಯರಾಮ ಜಯಜಯ ರಾಮ" ತಾರಕ ರಾಮನಾಮವಾಗಿ ಜನಮನಗಳನ್ನ ಸೂರೆ ಮಾಡಿತು‌. ಅದೇ ತಲ್ಲಣಗೊಂಡ ಮನಕ್ಕೆ ಈ ನಾಮವೇ ನಮ್ಮ ಪ್ರಾಣಕ್ಕೆ ತ್ರಾಣಶಕ್ತಿಯಾಗಿ ಘೋರ ಸಂಸಾರ ಸಾಗರವನ್ನು ದಾಟಲು ಯಾನವಾಗಿದೆ. "ಶ್ರೀ ರಾಮ "ಎಂಬುದು ರಕ್ಷಾ ಮಂತ್ರ. ಭಜಿಸೆ ಅಭಯವ ನೀಡಿ ರಕ್ಷಿಸುವನು "ಶ್ರೀ ರಾಮ" ಎಂಬುದು ತಾರಕ ಮಂತ್ರ ಕಾಲಕಾಲಕೆ ಕಾಯುವನು ಶ್ರೀ ರಾಮನು ▬▬ஜ۩۞۩ஜ▬▬▬*▬▬▬ஜ۩۞۩ஜ▬▬ !! ಸರ್ವಂ ಶ್ರೀ ಕೃಷ್ಣಾರ್ಪಣಮಸ್ತು !! 🙏 ಸರ್ವೇ ಜನಾಃ ಸುಖಿನೋ ಭವಂತುಸರ್ವೇ ಸಂತು ನಿರಾಮಯಾಃ 🙏 !! ಧರ್ಮೋ ರಕ್ಷತಿ ರಕ್ಷಿತಃ !! ▬▬▬ஜ۩۞۩ஜ▬▬▬▬▬▬ஜ۩۞۩ஜ▬▬▬ 🙏 ಹರಿ ಸರ್ವೋತ್ತಮ ವಾಯು ಜೀವೋತ್ತಮ 🙏