Harish Desai
461 views
ಮಹಾಶಿವರಾತ್ರಿಯ ಮಹಿಮೆ! ‎ ‎ ಮಾಘ ಕೃಷ್ಣ ಚತುರ್ದಶಿಯೇ ಮಹಾಶಿವರಾತ್ರಿ.. ಈ ರಾತ್ರಿಯೆಲ್ಲಾ ಪರಮೇಶ್ವರನನ್ನು ಸ್ಮರಿಸಿ, ಲಿಂಗರೂಪಕ್ಕೆ ಪಂಚಾಮೃತಾಭಿಷೇಕ ಮಾಡಿ, ತ್ರಿದಳ ಬಿಲ್ವಪತ್ರಗಳಿಂದ ಪೂಜಿಸಿ, “ಓಂ ನಮಃ ಶಿವಾಯ"ಎಂಬ ಪಂಚಾಕ್ಷರಿಯನ್ನು ಜಪಿಸುವ ಪವಿತ್ರ ಸಮಯವೇ ಇದು. ‎ ‎ ಸಾಮಾನ್ಯವಾಗಿ ಎಲ್ಲಾ ಪುಣ್ಯಕರ್ಮಗಳು ‎ಹಗಲಿನಲ್ಲಿ ಶ್ರೇಷ್ಠ. ಆದರೆ ಶಿವನಿಗೆ ಮಾತ್ರ ರಾತ್ರಿಯೇ ಪ್ರಿಯ. ಏಕೆಂದರೆ ಕತ್ತಲೆಯಾದ ರಾತ್ರಿಯನ್ನು ಮಂಗಳಮಯವಾದ ಶಿವಸ್ವರೂಪವಾಗಿಸುವ ಶಕ್ತಿ ಪರಮೇಶ್ವರನದು.. ‎ ‎ ಅಜ್ಞಾನಾಂಧಕಾರದಲ್ಲಿ ಮುಳುಗಿರುವ ನಮ್ಮ ಜೀವನವನ್ನೂ ಈ ಒಂದು ರಾತ್ರಿಯ ಶಿವಸ್ಮರಣೆ ಪ್ರಕಾಶಮಯವಾಗಿಸುತ್ತದೆ.. ‎ ‎ ಅಶಿವವಾದ ರಾತ್ರಿಯನ್ನು ಶಿವರಾತ್ರಿಯಾಗಿಸಿ, ಮನಸ್ಸನ್ನೂ ಮಂಗಳಮಯಗೊಳಿಸೋಣ! 🙏🕉️🙏🕉️🙏 #⏰ಮಹಾ ಶಿವರಾತ್ರಿ ಮುಹೂರ್ತ📿 #🔱ಮಹಾಶಿವರಾತ್ರಿ ಸ್ಟೇಟಸ್ 🛕 #📿ಶಿವ ಮಂತ್ರಗಳು🕉️