ಮಹಾಶಿವರಾತ್ರಿಯ ಮಹಿಮೆ!
ಮಾಘ ಕೃಷ್ಣ ಚತುರ್ದಶಿಯೇ ಮಹಾಶಿವರಾತ್ರಿ.. ಈ ರಾತ್ರಿಯೆಲ್ಲಾ ಪರಮೇಶ್ವರನನ್ನು ಸ್ಮರಿಸಿ, ಲಿಂಗರೂಪಕ್ಕೆ ಪಂಚಾಮೃತಾಭಿಷೇಕ ಮಾಡಿ, ತ್ರಿದಳ ಬಿಲ್ವಪತ್ರಗಳಿಂದ ಪೂಜಿಸಿ, “ಓಂ ನಮಃ ಶಿವಾಯ"ಎಂಬ ಪಂಚಾಕ್ಷರಿಯನ್ನು ಜಪಿಸುವ ಪವಿತ್ರ ಸಮಯವೇ ಇದು.
ಸಾಮಾನ್ಯವಾಗಿ ಎಲ್ಲಾ ಪುಣ್ಯಕರ್ಮಗಳು
ಹಗಲಿನಲ್ಲಿ ಶ್ರೇಷ್ಠ. ಆದರೆ ಶಿವನಿಗೆ ಮಾತ್ರ ರಾತ್ರಿಯೇ ಪ್ರಿಯ. ಏಕೆಂದರೆ ಕತ್ತಲೆಯಾದ ರಾತ್ರಿಯನ್ನು ಮಂಗಳಮಯವಾದ ಶಿವಸ್ವರೂಪವಾಗಿಸುವ ಶಕ್ತಿ ಪರಮೇಶ್ವರನದು..
ಅಜ್ಞಾನಾಂಧಕಾರದಲ್ಲಿ ಮುಳುಗಿರುವ ನಮ್ಮ ಜೀವನವನ್ನೂ ಈ ಒಂದು ರಾತ್ರಿಯ ಶಿವಸ್ಮರಣೆ ಪ್ರಕಾಶಮಯವಾಗಿಸುತ್ತದೆ..
ಅಶಿವವಾದ ರಾತ್ರಿಯನ್ನು ಶಿವರಾತ್ರಿಯಾಗಿಸಿ, ಮನಸ್ಸನ್ನೂ ಮಂಗಳಮಯಗೊಳಿಸೋಣ! 🙏🕉️🙏🕉️🙏
#⏰ಮಹಾ ಶಿವರಾತ್ರಿ ಮುಹೂರ್ತ📿 #🔱ಮಹಾಶಿವರಾತ್ರಿ ಸ್ಟೇಟಸ್ 🛕 #📿ಶಿವ ಮಂತ್ರಗಳು🕉️