ತಮಿಳು ಸಾಹಿತಿ ವೈರಮುತ್ತುಗೆ ಜ್ಞಾನಪೀಠ ಪ್ರಶಸ್ತಿ; ಚಿತ್ರರಸಿಕರ ಮನಗೆದ್ದ ಟಾಲಿವುಡ್ ನ ಈ ಪ್ರಸಿದ್ಧ ಗೀತರಚನೆಕಾರ ಯಾರು?
Vairamuthu Ramaswamy- 90 ದಶಕದ ಜಂಟಲ್ ಮ್ಯಾನ್, ಕಾದಲನ್, ರೋಜಾ, ಕಾದಲನ್, ಎಂದಿರನ್ ಮೊದಲಾದ ಬ್ಲಾಕ್ ಬ್ಲಸ್ಟರ್ ಚಿತ್ರಗಳನ್ನು ಭಾರತೀಯ ಚಿತ್ರರಸಿಕರು ಹೇಗೆ ತಾನೇ ಮರೆಯಲು ಸಾಧ್ಯ? ತಮಿಳುನಾಡು ಮಾತ್ರವಲ್ಲದೆ ಭಾರತದಾದ್ಯಂತ ಆ ಚಿತ್ರಗಳ ಹಾಡುಗಳು ಜನರ ನಾಲಗೆ ತುದಿಯಲ್ಲಿ ಕುಣಿಯುತ್ತಿದ್ದವು. ಅಂತಹ ಅನೇಕ ಚಿತ್ರಗಳ ಯಶಸ್ಸಿನಲ್ಲಿ ಸಾಹಿತಿ, ಗೀತರಚನೆಕಾರ ವೈರಮುತ್ತು ರಾಮಸಾಮಿ ಅವರಿಗೂ ಪಾಲಿದೆ. ಇದೀಗ ಅವರ ಸಮಗ್ರ ಸಾಹಿತ್ಯಕ್ಕೆ ಭಾರತದ ಪ್ರತಿಷ್ಠಿತ ಜ್ಞಾನಪೀಠ ಪ್ರಶಸ್ತಿ ಒಲಿದಿದೆ. ಇದು ತಮಿಳು ಸಾಹಿತ್ಯಕ್ಕೆ ಒಲಿದಿರುವ ಮೂರನೇ ಜ್ಞಾನಪೀಠ ಪ್ರಶಸ್ತಿಯಾಗಿದೆ.