ಗೌಡ್ರು ಗೂಳಿ💪💪
499 views
#✌️ನಿಖಿಲ್ ಕುಮಾರಸ್ವಾಮಿ ಅಭಿಮಾನಿಗಳು ಬಳಗ✌️ ಆಡಳಿತ, ಜನೋಪಕಾರ, ಮಾನವೀಯತೆ; ಮೈಸೂರು ಅರಸರು ಜಗತ್ತಿಗೆ ತೋರಿಸಿಕೊಟ್ಟ ಶ್ರೇಷ್ಠ ಮೌಲ್ಯಗಳು. ಶ್ರೀ ಶ್ರೀ ಹತ್ತನೇ ಚಾಮರಾಜ ಒಡೆಯರ್ ಅವರು ಇಂತಹ ಮಾನವೀಯ ಪರಂಪರೆಯನ್ನು ಉಳಿಸಿ ಬೆಳೆಸಿ ಆಡಳಿತ ನಡೆಸಿದ ಮಹಾನ್ ಚೇತನರು. ಪ್ರಜಾಪ್ರತಿನಿಧಿ ಸಭೆ ಸ್ಥಾಪನೆ, ಮಹಿಳಾ ಶಿಕ್ಷಣಕ್ಕೆ ಒತ್ತು, ಕೃಷಿ ಬ್ಯಾಂಕ್‌ಗಳ ಸ್ಥಾಪನೆ ಮತ್ತು ಸ್ವಾಮಿ ವಿವೇಕಾನಂದರ ಚಿಕಾಗೋ ಪ್ರವಾಸಕ್ಕೆ ನೆರವು ನೀಡುವುದರ ಮೂಲಕ ಮೈಸೂರನ್ನು ಮಾದರಿ ರಾಜ್ಯವನ್ನಾಗಿ ರೂಪಿಸಿದರು. ಆ ಮಹಾನ್ ಚೇತನದ ಜಯಂತಿಯ ಈ ದಿನದಂದು ನನ್ನ ಗೌರವಪೂರ್ವಕ ಪ್ರಣಾಮಗಳನ್ನು ಸಮರ್ಪಿಸುತ್ತೇನೆ. #10ನೇಚಾಮರಾಜೇಂದ್ರಒಡೆಯರ್