#PSSM World ಕರ್ಮಗಳು ಹೇಗೆ ನಮ್ಮನ್ನು ಕಾಪಾಡುತ್ತವೆ?
ಗೊತ್ತಿಲ್ಲ!!
ಕಾಪಾಡಬಹುದು ಅಥವಾ ಕಾಪಾಡಲಿಕ್ಕಿಲ್ಲ. ಇದೊಂದು ನಂಬಿಕೆ ಶೃದ್ಧೆ, ಇದಕ್ಕೆ ತರ್ಕ ಇಲ್ಲ. ಆದರೆ ಕಾಪಾಡುತ್ತದೆ ಅನ್ನೋ ನಂಬಿಕೆಯಿಂದ ಎಷ್ಟೋ ಜನರು ಕೆಟ್ಟ ಕರ್ಮ ಮಾಡಲು ಹಿಂಜರಿಯುತ್ತಾರೆ. ಇದರಿಂದ ಸ್ವಲ್ಪ ಸಮಾಜ ಕಲ್ಯಾಣ ಆದರೆ ಅದಕ್ಕೆ ಯಾರದೂ ತಕರಾರು ಇರಬಾರದು.
ಆದರೆ ಭಗವತ್ ಗೀತೆಯಲ್ಲಿ ಕೃಷ್ಣ ಹೇಳುವ ಪ್ರಕಾರ - ಫಲಾಪೇಕ್ಷೆ ಇಲ್ಲದೆ ಕರ್ಮ ಮಾಡಬೇಕು. ಅಪೇಕ್ಷೆ ಇಟ್ಟುಕೊಂಡು ಕರ್ಮ ಮಾಡಿದರೆ ಅದಕ್ಕೆ ಫಲ ಇಲ್ಲ. ಒಳ್ಳೆ ಕರ್ಮ ಮಾಡಿದರೆ ಅದು ನಮ್ಮನ್ನು ಕಾಪಾಡುತ್ತದೆ ಅಂತ ಒಳ್ಳೆ ಕರ್ಮ ಮಾಡಿದರೆ ಅದಕ್ಕೆ ಫಲ ಇಲ್ಲ. ಏನೋ ನನ್ನ ಮಟ್ಟಿಗೆ ತಿಳಿದದ್ದನ್ನು ಹೇಳಿದ್ದೇನೆ.