Anthoniraj
434 views
ಪೂರ್ಣ ಶರಣಾಗತಿ ಇಲ್ಲದೆ ದೇವರು ಕಾಪಾಡಲಾರನು ಒಂದು ಕೆರೆಯಲ್ಲಿ ಒಬ್ಬ ಧೋಬಿ ಬಟ್ಟೆ ಒಗೆಯುತ್ತಿದ್ದನಂತೆ. ಆಗ ಆ ಕೆರೆಯ ಬಳಿಗೆ ಬಂದ ಸನ್ಯಾಸಿಯೊಬ್ಬ ಅದರಲ್ಲಿ ಸ್ನಾನ ಮಾಡಿ ಅಲ್ಲೇ ಕೆರೆದಂಡೆಯ ಮೇಲೆ ಧ್ಯಾನಕ್ಕೆ ಕುಳಿತ. ಧೋಬಿ ಬಟ್ಟೆ ಒಗೆಯುವಾಗ ಆ ಸನ್ಯಾಸಿಯ ಮೈ ಮೇಲೆ ಕೆಲವು ನೀರಿನ ಹನಿಗಳು ಸಿಡಿಯಲು, ಸಿಟ್ಟಿಗೆದ್ದ ಸನ್ಯಾಸಿಯು ಧೋಬಿಯನ್ನು ಅವಾಚ್ಯ ಶಬ್ದಗಳಿಂದ ಬೈದ. ಇದರಿಂದ ಕೆರಳಿದ ಧೋಬಿಯೂ ಪ್ರತಿಯಾಗಿ ಬೈದ. ಇಬ್ಬರಿಗೂ ಜಗಳ ಪ್ರಾರಂಭವಾಗಿ ಕೈ ಕೈ ಹತ್ತಿತು. ಧೋಬಿ ಸನ್ಯಾಸಿಯನ್ನು ಕೆಳಕ್ಕೆ ಕೆಡವಿ ತಾನು ಅವನ ಎದೆಯ ಮೇಲೆ ಕುಳಿತು ಗುದ್ದುತ್ತಿರಲು, ಸನ್ಯಾಸಿ ತಾನೂ ಧೋಬಿಯನ್ನು ಚೆನ್ನಾಗಿ ಹಣಿದ. ಆದರೆ ಧೋಬಿಯ ಬಲ ಹೆಚ್ಚಾಯ್ತು. ಆಗ ಸನ್ಯಾಸಿ ದೇವರಿಗೆ ಶರಣುಹೋಗಿ "ಹೇ ಪರಮಾತ್ಮಾ! ನಿನ್ನ ಪರಮಭಕ್ತನಾದ ಈ ಸನ್ಯಾಸಿಯನ್ನು ಕೈ ಬಿಟ್ಟೆಯಾ! ನನ್ನ ಸಹಾಯಕ್ಕೆ ಬರಲಾರೆಯಾ!" ಎಂದು ಕೂಗಿಕೊಂಡಾಗ ಪರಮಾತ್ಮನು ಹೇಳಿದನಂತೆ, ಅಯ್ಯಾ ಸನ್ಯಾಸಿ! ನಾನು ನಿನಗೆ ಸಹಾಯ ಮಾಡಲು ಎರಡು ಮೂರು ಬಾರಿ ಬಂದೆ. ಆದರೆ "ಸನ್ಯಾಸಿ ಯಾರು, ಧೋಬಿ ಯಾರು" ಗೊತ್ತಾಗದೆ ಹಿಂದಕ್ಕೆ ಹೋದೆ ಎಂದನಂತೆ. ಸನ್ಯಾಸಿಯಲ್ಜಿ ಸಂಪೂರ್ಣ ಶರಣಾಗತಿ ಇರಲಿಲ್ಲ. ಅದಕ್ಕೆ ಅವನಿಗೆ ಭಗವಂತನ ಸಹಾಯ ದೊರಕಲಿಲ್ಲ. ❤️🙏🌷 ವಿಮಲ್ ನ್ಯೂಟ್ರಿಷನ್ ಸೆಂಟರ್ 🌷🙏❤️ #✍️ ಮೋಟಿವೇಷನಲ್ ಕೋಟ್ಸ್ #👦🏻 Bad Boyz ಸ್ಟೇಟಸ್ #🎥 Motivational ಸ್ಟೇಟಸ್ #✍️ ಮೋಟಿವೇಷನಲ್ ಕೋಟ್ಸ್ #😍 ನನ್ನ ಸ್ಟೇಟಸ್