#PSSM World ಜನರು ಸಾವಿಗೆ ಏಕೆ ಹೆದರುತ್ತಾರೆ?
ಭಯಕ್ಕೆ ನಿಜವಾದ ಕಾರಣ ಅಜ್ಞಾನ. ಪರೀಕ್ಷೆಯಲ್ಲಿ ನಮಗೆ ಓದದೆ ಇದ್ದರೆ ಭಯವಾಗುವುದು ಸಹಜ ಯಾಕೆಂದರೆ ಅಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸುವ ಜ್ಞಾನ ನಮ್ಮಲ್ಲಿ ಇರುವುದಿಲ್ಲ. ಯಾವಾಗ ಚೆನ್ನಾಗಿ ಓದಿಕೊಂಡು ಹೋಗಿರುತ್ತೇವೆಯೋ ಆಗ ಅದನ್ನು ಎದುರಿಸುವ ತಾಕತ್ತು, ಆತ್ಮವಿಶ್ವಾಸ ಎಲ್ಲವೂ ನಮ್ಮಲ್ಲಿ ಬಂದಿರುತ್ತದೆ.
ಸತ್ತ ಮೇಲೆ ಏನಾಗುತ್ತೇವೆ ಎನ್ನುವುದು ಯಾರಿಗೂ ತಿಳಿಯದ ರಹಸ್ಯ. ಹಿರಿಯರು, ಹಾಗೂ ಕೆಲವೊಂದು ಗ್ರಂಥಗಳು, ತಿಳಿದವರು ಅದರ ಬಗ್ಗೆ ಬೇರೆ ಬೇರೆ ವಿಷಯಗಳನ್ನು ಹೇಳಿದರೂ ಸಹ ನಿಜವಾಗಿಯೂ ಮನಸ್ಸಿನ ಒಂದು ಮೂಲೆಯಲ್ಲಿ ಅದರ ಕುರಿತಾದ ಅನುಮಾನ ಹಾಗೆಯೇ ಇರುತ್ತದೆ. ಇದಕ್ಕೆ ಕಾರಣ ನಮಗೆ ಅದರ ಕುರಿತಾದ ಯಾವುದೇ ಜ್ಞಾನ ಇಲ್ಲದೆ ಇರುವುದು. ಹಾಗಾಗಿಯೇ ಅದರ ಬಗ್ಗೆ ಭಯ ಸಹಜವಾಗಿ ಮನೆ ಮಾಡಿರುತ್ತದೆ. ಏನಾಗಬಹುದು ? ಹೇಗಿರಬಹುದು? ಹೀಗೆ ಕೆಲವೊಂದು ಪ್ರಶ್ನೆಗಳು ಹಾಗೆಯೇ ಕೊನೆಯ ತನಕ ಉಳಿಯುವಂತದ್ದು. ನಮಗೆ ಉತ್ತರ ಸಿಗುವುದಿಲ್ಲ. ಬೇರೆಯವರು ಕೊಟ್ಟ ಉತ್ತರ ಸಮಾಧಾನ ಕೊಡುವುದಿಲ್ಲ. ಹಾಗಾಗಿ ಚಿಂತೆ, ಭಯ, ಅತಿಯಾದ ಆಲೋಚನೆ ಮುಂತಾದವುಗಳು ಶುರುವಾಗುತ್ತವೆ.
ಜೀವನ ನಮ್ಮದೇ ಅಂದ ಮೇಲೆ
ನಾವೇ ಅಲ್ವಾ ಜೀವಿಸಬೇಕಾಗಿರೋದು.