Malgudi Express
2.6K views
#📜ಪ್ರಚಲಿತ ವಿದ್ಯಮಾನ📜 ಕೆ ಆರ್ ಎಸ್ ಟೋಲ್ ವರ್ಗಾಯಿಸುವಂತೆ ಸದನದಲ್ಲಿ ದರ್ಶನ್ ಪುಟ್ಟಣ್ಣಯ್ಯ ಮನವಿ ಬೆಂಗಳೂರು: ರೈತರಿಗೆ ಮತ್ತು ಸ್ಥಳೀಯ ನಾಗರಿಕರಿಗೆ ಅನುಕೂಲ ಆಗುವಂತೆ ಬೃಂದಾವನ (ಕೆ ಆರ್ ಎಸ್) ಟೋಲ್ ಅನ್ನು ವರ್ಗಾಯಿಸುವಂತೆ ಸದನದಲ್ಲಿ ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರು ಮನವಿ ಮಾಡಿದರು. ವಿಧಾನಸಭೆಯ ವಿಶೇಷ ಅಧಿವೇಶನದಲ್ಲಿ ಗಮನ ಸೆಳೆಯುವ ಸೂಚನೆ ಅಡಿಯಲ್ಲಿ ಮಾತನಾಡಿದ ಅವರು, ರೈತರು ಮತ್ತು ಸ್ಥಳೀಯ ನಾಗರಿಕರು ಬೃಂದಾವನ ಮಾರ್ಗದಲ್ಲಿ ತೆರಳುವ ವೇಳೆ ಟೋಲ್ ಭರಿಸಬೇಕಾಗುತ್ತದೆ. ಇದನ್ನು ತಪ್ಪಿಸಬೇಕು ಎಂದು ಮನವಿ ಮಾಡಿದರು. ಇದಕ್ಕೆ ಡಿಸಿಎಂ ಡಿ ಕೆ ಶಿವಕುಮಾರ್ ಸಕಾರಾತ್ಮಕವಾಗಿ ಸ್ಪಂದಿಸಿದರು. ದರ್ಶನ್ ಪುಟ್ಟಣ್ಣಯ್ಯ ಅವರ ಮನವಿಯನ್ನು ಪರಿಗಣಿಸುವ ಭರವಸೆ ನೀಡಿದರು. #DarshanPuttannaiah #requests #session #transfer #KRS #toll #malgudiexpress #malgudinews #news #TopNews