ಸಂಜು ( ಸಂಜಯ್ ಚಂದ್ರ . 🙂🙂🙂 )
691 views
#ಕರುನಾಡುನಮ್ಮ ಬಂಗಾರದ ಬೀಡು #ಅಯ್ಯಪ್ಪ_ಸ್ವಾಮಿ_ಮೊಣಕಾಲಿಗೆ #ಕಟ್ಟಿರುವ_ಬಂಧನ_ಏನು? #ಯಾಕೆ? ( ಅಯ್ಯಪ್ಪ ಸ್ವಾಮಿ ಭಕ್ತರು ಈ ಸಂದೇಶವನ್ನು #ಹಂಚಿಕೊಳ್ಳಿ ) 🙏🙏🙏 #ಬೇರೆ_ದೇವಾನುದೇವತೆಗಳಿಗೆ ಹೋಲಿಸಿದರೆ #ಅಯ್ಯಪ್ಪ_ಸ್ವಾಮಿ #ಯೋಗಮುದ್ರೆಯಲ್ಲಿ ಕೂತು, ಚಿನ್ಮುದ್ರೆ ಧಾರಿಯಾಗಿ ಭಕ್ತರಿಗೆ ಅಭಯಹಸ್ತ ನೀಡುತ್ತಿರುತ್ತಾರೆ. ಅಯ್ಯಪ್ಪಸ್ವಾಮಿ ಅವರ #ಮೊಳಕಾಲಿನ ಸುತ್ತ ಒಂದು #ಬಂಧನ ಇರುತ್ತದೆ. ಅದನ್ನು #ವಸ್ತ್ರ_ಬಂಧನ' ಎಂದು ಕರೆಯುತ್ತಾರೆ. ಈ ಬಂಧನ ಅಯ್ಯಪ್ಪ ಸ್ವಾಮಿಗೆ ಹೇಗೆ ಬಂತು? #ಪಂದಳ ರಾಜನ ಬಳಿ ಹನ್ನೆರಡು ವರ್ಷಗಳ ಕಾಲ ಬೆಳೆದ #ಶ್ರೀ_ಮಣಿಕಂಠನು ತಾನು ಹರಿಹರಾಸುತನೆಂದು, ಧರ್ಮವನ್ನು ರಕ್ಷಿಸಲು ಆವಿರ್ಭವಿಸಿದ್ದೇನೆ ಎಂಬ ಸತ್ಯವನ್ನು ನಾರದ ಮಹರ್ಷಿಗಳ ಮೂಲಕ ತಿಳಿದುಕೊಳ್ಳುತ್ತಾರೆ. ಮಹಿಷಿಯನ್ನು ವಧಿಸಿದ ಬಳಿಕ ಶಬರಿಮಲೆ ಆಲಯದಲ್ಲಿ ಚಿನ್ಮುದ್ರೆಯಿಂದ ಯೋಗಾಮುದ್ರೆಯಲ್ಲಿ ಜ್ಞಾನಪೀಠದ ಮೇಲೆ ಕುಳಿತು ಭಕ್ತರನ್ನು ಅನುಗ್ರಹಿಸುತ್ತಿತ್ತಾನೆ ಅಯ್ಯಪ್ಪ. #ಶಬರಿಗಿರಿ ಮೇಲೆ ಆಲಯ ಕಟ್ಟಿಸಿ, ಸ್ವಾಮಿ ಆಭರಣಗಳನ್ನು ಹೊರುತ್ತಾ ಹದಿನೆಂಟು ಮೆಟ್ಟಿಲು ಹತ್ತಿ ಪಂದಳರಾಜು ಬರುತ್ತಾನೆ. ತಂದೆಯಾದ ಪಂದಳರಾಜನ ಬರುವಿಕೆಯನ್ನು ಗುರುತಿಸಿ ಸ್ವಾಮಿ ಯೋಗಾಸನದಿಂದ ಎದ್ದು ನಿಲ್ಲಲು ಪ್ರಯತ್ನಿಸುತ್ತಾನೆ. ಅಷ್ಟರೊಳಗೆ ಸ್ವಾಮಿಯನ್ನು ಬೇಡ ಬೇಡ ಎಂದು ತಡೆದು ತನ್ನ ಭುಜದ ಮೇಲಿನ #ರೇಶ್ಮೆ_ವಸ್ತ್ರದಿಂದ ಅಯ್ಯಪ್ಪಸ್ವಾಮಿ ಮೊಳಕಾಲುಗಳಿಗೆ ಆ ವಸ್ತ್ರವನ್ನು ಸುತ್ತಿ #ಬಂಧಿಸುತ್ತಾರೆ. ತಾನು ಇಲ್ಲಿ ಅಯ್ಯಪ್ಪಸ್ವಾಮಿಯನ್ನು ಯಾವ ರೂಪದಲ್ಲಿ ನೋಡಿ ಪರವಶನಾದೆನೋ ಅದೇ ರೀತಿ ಉಳಿದ ಭಕ್ತರು ಇದೇ ರೂಪದಲ್ಲಿ ಸ್ವಾಮಿಯನ್ನು ನೋಡಿ ಆನಂದಿಸಬೇಕೆಂದು ಅಯ್ಯಪ್ಪನನ್ನು ಕೋರಿದರು. ಅದಕ್ಕೆ ಸ್ವಾಮಿ ಅಂಗೀಕರಿಸಿದ. ಆ ರೀತಿ ಕಟ್ಟಿರುವುದನ್ನು 'ವಸ್ತ್ರ ಬಂಧ' ಎನ್ನುತ್ತಾರೆ. ಇದನ್ನು #ಶಿವಕೇಶವರು ಐಕ್ಯಗೊಳಿಸಿದ ಬಂಧ ಎಂದೂ ಕರೆಯುತ್ತಾರೆ. ಮಾಹಿತಿ... ವಿವಾ 🙏🙏🙏 #🔱 ಭಕ್ತಿ ಲೋಕ #🙏ಹರಿಹರ ಪುತ್ರ ಅಯ್ಯಪ್ಪ🌸 #🙏ಭಕ್ತಿ ಸ್ಟೇಟಸ್ #🙏 ದೈನಂದಿನ ಭಕ್ತಿ ಸ್ಟೇಟಸ್