Vikas Chandra
361 views
#PSSM World ಸಾಹಿತ್ಯಕ್ಕೆ ದಾಸರ ಕೊಡುಗೆ ಏನು? ದಾಸ ಸಾಹಿತ್ಯವು ವಿಶ್ವ ಸಾಹಿತ್ಯ ಕಂಡ ವಿನೂತನ ಬಗೆಯ ಸಾಹಿತ್ಯ ಪ್ರಕಾರ. 1) ದೇವರಲ್ಲಿ ಅಚಲವಾದ ಭಕ್ತಿ, ನಂಬಿಕೆ, ಶ್ರದ್ಧೆ ಮತ್ತು ಮುಕ್ತಿ ಮಾರ್ಗಕ್ಕೆ ಬೇಕಾದ ದಾರಿಯನ್ನು ದಾಸರು ತೋರಿಸದರು. 2) ಕಲಿಯುಗದಲಿ ಹರಿ ನಾಮವ ನೆನದರೆ ಕುಲ ಕೋಟಿಗಳು ಉದ್ಧರಿಸುವವು ಎಂಬ ಕೀರ್ತನೆ ವಿಶೇಷ ಛಾಪು ಮೂಡಿಸುತ್ತದೆ ಭಕ್ತಿ ಮಾರ್ಗದಲ್ಲಿರುವವರಿಗೆ. 3) ದಾಸರು ದಾಸ ಸಾಹಿತ್ಯದ ಮೂಲಕ ಧಾರ್ಮಿಕ ಮತ್ತು ಸಾಂಸ್ಕೃತಿಕ ಜೀವನದಲ್ಲಿ ಅಳಿಸಲಾಗದ ಛಾಪು ಮೂಡಿಸಿದ್ದಾರೆ ಯೆಂದರೆ ತಪ್ಪಾಗಲಾರದು. 4) ದಾಸರ ಇನ್ನೊಂದು ಅಪೂರ್ವ ಕೊಡುಗೆ ಸಂಗೀತ. ಕರ್ನಾಟಿಕ್ ಸಂಗೀತದ ಶ್ರೀಮಂತ ಪರಂಪರೆಗೆ ಕೊಡುಗೆ ನೀಡಿದ್ದಾರೆ. 5) ಸಂಗೀತದ ರೂಪದಲ್ಲಿ ನೀತಿಬೋಧನೆಗಳನ್ನು ಸಾಮಾನ್ಯ ಜನರ ಹೃದಯಕ್ಕೆ ಹರಡಿದರು. 6) ಭಾರತೀಯ ಮತ್ತು ಕರ್ನಾಟಿಕ್ ಶಾಸ್ತ್ರೀಯ ಸಂಗೀತದ ನಾದೋಪಾಸನ ಮೂಲಕ ವಿಷ್ಣುವಿಗೆ ಪೂಜೆ ಸಲ್ಲಿಸಿದರು. ಭಗವಂತನನ್ನು ಸಾಮಗಾನ ಪ್ರಿಯ ಎಂದು ವರ್ಣಿಸ ಸಂಗೀತದ ಮೂಲಕ ಭಕ್ತಿ ಬಘವಂತನ್ನು 'ತಲುಪವ' ಅತ್ಯಂತ ಆದ್ಯತೆಯ ಮಾರ್ಗವಾಗಿದೆ. 7) ದಾಸರು ದೇವರನಾಮ, ಸುಳಾದಿ, ಉಗಾಭೋಗಾ, ಮುಂಡಿಗೆ, ಕೋಲಾಟದ ಪದ, ಜಾನಪದ ಮತ್ತು ಸಣ್ಣ ಸಣ್ಣ ರಚನೆ ಮೂಲಕ ಸಮಾಜಕ್ಕೆ ಉಪಯುಕ್ತವಾಗುವ ಕೆಲಸ ಮಾಡಿದರು. 8) ಕೀರ್ತನೆ ಮೂಲಕ ಸಮಾಜದ ಅಂಕು ಡೊಂಕುಗಳನ್ನು ತಿದ್ದುವ ಕೆಲಸ ಮಾಡಿದರು. 9) ಹಾಡಿನ ಮೂಲಕ ಅನೇಕ ತೀರ್ಥ ಕ್ಷೇತ್ರಗಳ ಪರಿಚಯ ಮಾಡಿದ್ದಾರೆ. ದಾಸರ ಸಂಬಂಧವು ವಿಷ್ಣುವಿನೊಂದಿಗೆ ಇದ್ದರೂ, ಅವರು ಸಗುಣ ಬ್ರಹ್ಮ ಸ್ವರೂಪ(ರು) ಎಂದೂ ಕರೆಯಲ್ಪಡುವ ಹಿಂದೂ ದೇವರುಗಳ ಇತರ ರೂಪಗಳ ಮೇಲೆ ಹಾಡುಗಳನ್ನು ರಚಿಸಿದ್ದಾರೆ. ಉದಾಹರಣೆಗೆ, ಪುರಂದರದಾಸರು ಗಣಪತಿ (ಗಜವದನ ಬೇಡುವೆ), ಶಿವ (ಚಂದ್ರ ಚೂಡ ಶಿವಶಂಕರ), ಮತ್ತು ಸರಸ್ವತಿ (ಕೊಡುಬೇಗ ದಿವ್ಯಮತಿ ಸರಸ್ವತಿ) ಸ್ತುತಿಗೀತೆಗಳನ್ನು ರಚಿಸಿದ್ದಾರೆ.