ಸಾವಿರಾರು ಕೋಟಿ ರೂಪಾಯಿ ಸಾಲ ಮಾಡಿ ಬ್ಯಾಂಕುಗಳಿಗೆ ಮೋಸ ಮಾಡಿದವರು ಭಾರತ ಬಿಟ್ಟು ಓಡಿಹೋಗಿ ವಿದೇಶದಲ್ಲಿ ನೆಲೆಸಿದ್ದಾರೆ, ಇದೆಲ್ಲವೂ ಮೋದಿ ಆಡಳಿತದಲ್ಲಿ ನಡೆಯುತ್ತಿದೆ.
ಆದರೆ ದೇಶದೊಳಗೆ ಇದ್ದು ಸರ್ಕಾರಕ್ಕೆ ತೆರಿಗೆಯನ್ನು ಪಾವತಿಸುತ್ತಾ ಉದ್ಯಮಗಳನ್ನು ನಡೆಸಿಕೊಂಡು ಸಾವಿರಾರು ಜನರಿಗೆ ಉದ್ಯೋಗದಾತರಾಗಿರುವ ಉದ್ಯಮಿಗಳನ್ನು ಐಟಿ ರೈಡ್ ಹೆಸರಿನಲ್ಲಿ ರಾಜಕೀಯವಾಗಿ ಹೆದರಿಸಲಾಗುತ್ತಿದೆಯೆ..?
ಕಪ್ಪು ಹಣ ತರುತ್ತೇವೆ ಎಂದು ಅಧಿಕಾರಕ್ಕೆ ಬಂದವರು ಕಪ್ಪು ಹಣವನ್ನು ತರಲಿಲ್ಲ, ದೇಶದೊಳಗೆ ತೆರಿಗೆ ಪಾವತಿಸಿ ಉದ್ಯಮ ನಡೆಸುವವರನ್ನು ಬದುಕಲು ಬಿಡುತ್ತಿಲ್ಲ ಎನ್ನುವ ಕೂಗು ಬಲವಾಗಿ ಕೇಳಿಬರುತ್ತಿದೆ.
ರಿಯಲ್ ಎಸ್ಟೇಟ್ ಉದ್ಯಮಿ ಸಿ.ಜೆ.ರಾಯ್ ಐಟಿ ಅಧಿಕಾರಿಗಳು ದಾಳಿ ನಡೆಸಿದ ಸಂದರ್ಭದಲ್ಲಿಯೇ ಕಚೇರಿಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂದರೆ ಕೇಂದ್ರ ಸರ್ಕಾರ ಜನರ ಪ್ರಾಣದ ಜೊತೆಗೆ ಚೆಲ್ಲಾಟವಾಡುತ್ತಿದೆಯೆ..?
ದೇಶದೊಳಗೆ ಸರ್ವಾಧಿಕಾರಿ ರೂಪುಗೊಳ್ಳುತ್ತಿರುವ ಲಕ್ಷಣಗಳಲ್ಲವೆ ಇದು..!
ಸಿ.ಜೆ. ರಾಯ್ ಆತ್ಮಕ್ಕೆ ಸದ್ಗತಿ ದೊರಕಲಿ.🙏💐🥺
#😞 ಮೂಡ್ ಆಫ್ ಸ್ಟೇಟಸ್ #😢ಯಾಕೋ ಬೇಜಾರು #🙏ನಮಸ್ಕಾರ #🔴ನಮ್ಮ ಕರ್ನಾಟಕ🟡 #📚ನೀತಿ ಕಥೆಗಳು