Malgudi Express
621 views
#📜ಪ್ರಚಲಿತ ವಿದ್ಯಮಾನ📜 ರನ್ ಫಾರ್ ಲೈಫ್ ಕ್ಯಾನ್ಸರ್ ಜಾಗೃತಿ ಮ್ಯಾರಾಥಾನ್ – 2026 ರಲ್ಲಿ ದರ್ಶನ್ ಪುಟ್ಟಣ್ಣಯ್ಯ ಭಾಗಿ ಪದ್ಮಶ್ರೀ ಪುರಸ್ಕೃತ ಎಂ ಅಂಕೇಗೌಡರಿಗೆ ಸನ್ಮಾನ ಕ್ಯಾನ್ಸರ್ ತಪಾಸಣಾ ಶಿಬಿರ ಮಂಡ್ಯ: ಪಾಂಡವಪುರದಲ್ಲಿ ಶಂಭುಲಿಂಗೇಶ್ವರ ಪಿಯು ಕಾಲೇಜು ಆಯೋಜಿಸಿದ್ದ ರನ್ ಫಾರ್ ಲೈಫ್ ಕ್ಯಾನ್ಸರ್ ಜಾಗೃತಿ ಮ್ಯಾರಾಥಾನ್ – 2026 ರಲ್ಲಿ ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಭಾಗಿಯಾದರು. ಮ್ಯಾರಾಥಾನ್ ನಲ್ಲಿ ನೂರಾರು ನಾಗರಿಕರು ಹೆಜ್ಜೆ ಹಾಕುವ ಮೂಲಕ ಕ್ಯಾನ್ಸರ್ ಜಾಗೃತಿ ಮೂಡಿಸಿದರು. ಕ್ಯಾನ್ಸರ್ ಜಾಗೃತಿಯ ಭಾಗವಾಗಿ ಭಾರತಿ ಆಸ್ಪತ್ರೆ ವತಿಯಿಂದ ಉಚಿತ ಕ್ಯಾನ್ಸರ್ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿತ್ತು. ನಾಗರಿಕರು ಸ್ವಯಂಪ್ರೇರಿತರಾಗಿ ಈ ಕ್ಯಾನ್ಸರ್ ಆರೋಗ್ಯ ತಪಸಾಣಾ ಶಿಬಿರದಲ್ಲಿ ಭಾಗವಹಿಸಿದರು. ಇನ್ನು ಶಿಬಿರದಲ್ಲಿ ೨೦೨೬ನೇ ಸಾಲಿನ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಎಂ ಅಂಕೇಗೌಡ ಅವರನ್ನು ಸನ್ಮಾನಿಸಲಾಯಿತು. ಜೊತೆಗೆ ಮ್ಯಾರಾಥಾನ್ ನಲ್ಲಿ ವಿಜೇತರಿಗೆ ನಗದು ಪುರಸ್ಕಾರವನ್ನು ನೀಡಲಾಯಿತು. #DarshanPuttannaiah #participate #RunforLife #Cancer #Awareness #Marathon2026 #malgudiexpress #malgudinews #news #TopNews