#PSSM World Strong & Be Positive ಅಂತ ನನಗೂ ನನ್ನ ಜೀವನದಲ್ಲಿ ತುಂಬಾ ಜನ ಹೇಳಿದ್ದೂ ಉಂಟು. ಹಾಗೆ ನಾನಿಲ್ಲ ಅಂತ ನನ್ನಿಂದ ಎಷ್ಟೋ ಜನ ಅಂತರ ಕಾಯ್ದುಕೊಂಡಿದ್ದೂ ಉಂಟು, ನನ್ನ ಸಂಪರ್ಕ ಕಳೆದುಕೊಂಡವರೂ ಉಂಟು.
ನಾವು ಇನ್ನೊಬ್ಬರಿಗೆ ಹಿತೋಪದೇಶ ಮಾಡುವುದು, ಅಥವಾ ಅವರ ಆಲೋಚನೆ, ಮನಸ್ಥಿತಿ ಬದಲಾಗಲಿ ಅಂತ ಹೇಳುವುದು ಸರಿಯೇ ಹಾಗು ತುಂಬಾನೇ ಸುಲಭವೇ ಆಗಿರುತ್ತದೆ.
ಜೀವನದಲ್ಲಿ ಸಕಾರಾತ್ಮಕವಾಗಿ ಆಲೋಚನೆ ಮಾಡಬೇಕು, ಸಕಾರಾತ್ಮಕತೆಯಿಂದ ಇರಬೇಕು ಅಂತಲೇ ಎಲ್ಲರೂ ಬಯಸುತ್ತಾರೆ. ಆದರೆ, ಆ ಪರಿಸ್ಥಿತಿಯಲ್ಲಿ ಇರುವುದು ಕೆಲವರ ಜೀವನದಲ್ಲಿ ತುಂಬಾನೇ ಕಷ್ಟ ಅನ್ನೋದು ಅನುಭವಕ್ಕೆ ಬಂದಾಗಲೇ ಅರ್ಥವಾಗುವುದು.
ಏಕೆಂದರೆ ಪೆಟ್ಟು ತಿಂದವನಿಗೆ ಆಗುವ ನೋವು ಪಕ್ಕದಲ್ಲಿ ನಿಂತು ನೋಡುವವನಿಗೆ ಅನುಭವ ಆಗಲ್ಲ. ಹಾಗಂತ ನಾನು ಅವರನ್ನು ದೂಷಿಸುವುದಿಲ್ಲ, ದೂಷಿಸುತ್ತಿಲ್ಲ. ಯಾಕೆಂದರೆ ಯಾರು ಏನೇ ಹೇಳಿದರೂ, ಅವರು ಹೇಳುವ ಬುದ್ದಿಮಾತುಗಳು, ಹಿತನುಡಿಗಳು ಅವರ ಅನುಭವದಿಂದ ಬಂದಿರುತ್ತವೆ ಅಂತ ನಂಬುವವನು ನಾನು. ಆದರೆ, ಒಬ್ಬರ ಜೀವನದಲ್ಲಿ ಆದಂತಹ ಬದಲಾವಣೆ ಎಲ್ಲರ ಜೀವನದಲ್ಲಿಯೂ ಆಗುತ್ತದೆ, ಆಗಿಯೇ ತೀರುತ್ತದೆ ಅಂತ ಯಾರೂ ಸ್ಪಷ್ಟವಾಗಿ ಹೇಳಲಾಗದು ಅಲ್ವಾ.
ತಿಳಿದೋ ಅಥವಾ ತಿಳಿಯದೆಯೋ ತಮ್ಮ ಜೀವನದಲ್ಲಿ ಮಾಡಿರುವ ತಪ್ಪನ್ನು ಒಪ್ಪಿಕೊಳ್ಳುವವರು ಅಂತ ಇರೋದು ತುಂಬಾ ಕಡಿಮೆ ಜನ,
ಅದೇ ಆಗಿರುವ ತಪ್ಪನ್ನು ತಿಳಿದುಕೊಂಡು, ತಪ್ಪನ್ನು ಒಪ್ಪಿಕೊಂಡು, ಆ ತಪ್ಪನ್ನು ಸರಿಪಡಿಸಿಕೊಳ್ಳುವವರು ಅಂತ ಇರೋದು ಕೋಟಿ ಜನರಲ್ಲಿ ಒಬ್ಬರು ಮಾತ್ರ.
ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ತಿಳಿದೋ ಅಥವಾ ತಿಳಿಯದೆಯೋ ಆದಂತಹ ತಪ್ಪನ್ನು ತಿದ್ದಿಕೊಳ್ಳಬೇಕು ಅಂತ ಬಯಸುವ ಸಮಯ ಅಂತ ಬಂದೇ ಬರುತ್ತದೆ. ಆದರೆ, ಆ ತಪ್ಪನ್ನು ತಿದ್ದಿಕೊಳ್ಳುವ, ತಿದ್ದಿಕೊಂಡು ಬದಲಾಗುವ ಅವಕಾಶ ಎಲ್ಲರಿಗೂ ಸಿಗಲ್ಲ. ಅವಕಾಶ ಕಲ್ಪಿಸಿಕೊಳ್ಳುವಲ್ಲಿ, ಕಲ್ಪಿಸಿಕೊಡುವಲ್ಲಿ ಸೋತಾಗಲೇ ಯಾರೇ ಆಗಲಿ ಜೀವನದಲ್ಲಿ ಉತ್ಸಾಹ, ಹುಮ್ಮಸ್ಸು ಕಳೆದುಕೊಂಡು ನಿಸ್ಸಹಾಯಕ ಪರಿಸ್ಥಿತಿಗೆ ಬಂದು ನಿಂತಿರುತ್ತಾರೆ.
ಮೋಸ ಮಾಡುವ ಜನರನ್ನು ಈ ಪ್ರಪಂಚ ನಂಬಿ ಮೋಸಹೋಗುತ್ತದೆ. ಆದರೆ, ಮೋಸಹೋದವರನ್ನು ಮಾತ್ರ ಈ ಜನರೇ ಅನುಮಾನದ ದೃಷ್ಟಿಯಲ್ಲಿ ನೋಡುತ್ತಾ, ಭಯಭೀತರಾಗಿರುವಂತೆ ಅಂತರ ಕಾಯ್ದುಕೊಂಡು ದೂರವಾಗಿಸುತ್ತಾರೆ.
ಸ್ಪಂದನೆಗಾಗಿ ಹತೋರೆಯುವ, ಭರವಸೆಯ ಬೆಳಕಿನೆಡೆಗೆ ಸಾಗಬೇಕೆಂದುಕೊಳ್ಳುವ ಎಷ್ಟೋ ಜನರು ಯಾವುದೇ ಸ್ಪಂದನೆಯಿಲ್ಲದೆ, ಜೀವವಿಲ್ಲದ ವಸ್ತುಗಳ ಹಾಗೆ ಮೌನವಾಗಿದ್ದುಕೊಂಡು ಬದುಕುತ್ತಿದ್ದರೂ ಲೆಕ್ಕಿಸದ ಈ ಪ್ರಪಂಚದಲ್ಲಿ ಹೇಗೆ ತಾನೇ ಧೈರ್ಯವಾಗಿ ಮುನ್ನುಗ್ಗಿ ಜೀವನದಲ್ಲಿ ಧೈರ್ಯವಾಗಿ ಎಲ್ಲವನ್ನೂ ಗೆಲ್ಲುವ ಮನಸ್ಥಿತಿಗೆ ಬರಲು ಸಾಧ್ಯ.
ಬದಲಾವಣೆ ಜಗದ ನಿಯಮಗಳಲ್ಲಿ ಒಂದು, ಆ ಬದಲಾವಣೆ ಆಗಬೇಕಾದರೆ ನಮ್ಮ ಮನಸ್ಥಿತಿಯ ಜೊತೆಗೆ ಪ್ರಕೃತಿಯಿಂದಲೂ ಸಹಾಯ, ಸಹಕಾರ ಬೇಕು ಅಲ್ವಾ. ಆದರೆ, ಮನುಷ್ಯನ ಜೀವನದಲ್ಲಿ ಪ್ರಕೃತಿಯ ಸಹಾಯ, ಸಹಕಾರ ಅನ್ನೋದು ನಮಗೆ ನಿಕಟವಾಗಿರುವವರು, ನಮ್ಮನ್ನು ಅರ್ಥ ಮಾಡಿಕೊಂಡವರು ಅಂತ ಅನ್ನಿಸಿಕೊಂಡವರು ನಮ್ಮೊಂದಿಗೆ ನಿಂತು ಸಹಕರಿಸಿದರೆ ಮಾತ್ರ ಸಾಧ್ಯ. ಇತರರ ಸಹಾಯ, ಸಹಕಾರವಿಲ್ಲದೆ ಮನುಷ್ಯ ಹುಟ್ಟಿನಿಂದ ಸಾಯುವವರೆಗೂ ಏನನ್ನೂ ಕಲೆಯಲಾರ, ಏನನ್ನೂ ಸಾಧಿಸಲಾರ ಅನ್ನೋದನ್ನ ಎಲ್ಲರೂ ಒಪ್ಪಲೇಬೇಕು ಅಲ್ವಾ.
Be Strong & Be Positive ಅಂತ ಎಲ್ಲರೂ ಹೇಳಬಹುದು ಆದರೆ ಹೀಗೆ ಹೇಳುವ ಬದಲಿಗೆ I Will Make You Strong & I Will Make You Positive ಅಂತ ಯಾರಾದರೂ ನಮ್ಮೊಂದಿಗೆ ಹೇಳಲು ಸಾಧ್ಯವೇ, ನಮ್ಮ ಕ್ಲಿಷ್ಟಕರ ಪರಿಸ್ಥಿತಿಗಳಿಗೆ ಸೆಡ್ಡು ಹೊಡೆದು ನಮ್ಮೊಂದಿಗೆ ನಿಂತು, ನಮ್ಮ ಜೀವನದಲ್ಲಿ ಸಾರಥಿಯಾಗಿದ್ದುಕೊಂಡು ಮುನ್ನಡೆಸಬಹುದು ಅಲ್ವಾ, ಹಾಗೆ ಯಾರಾದರೂ ನಮ್ಮ ಜೀವನದಲ್ಲಿ ಮುನ್ನಡೆಸಬಲ್ಲರಾ?
ಖಂಡಿತ ಸಾಧ್ಯವಿಲ್ಲ. ಯಾಕೆಂದರೆ ಅವರವರಿಗೆ ಅವರದೇ ಬದುಕಿನ ಚಿಂತೆ,ಹಾಗಾಗಿಯೇ ಇಂದು ಬಡವ ಬಡವನಾಗಿಯೇ ಬದುಕಿ, ಬಡವನಾಗಿಯೇ ಕೊನೆಗೆ ಅಂತ್ಯವಾಗಬೇಕು. ಪ್ರತಿಭೆ ಇದ್ದವರು ಸೂಕ್ತ ಸಮಯದಲ್ಲಿ ಸೂಕ್ತ ಸಹಾಯ, ಸಹಕಾರ ಸಿಗದೆ, ಏನನ್ನೂ ಸಾಧಿಸದೆ, ಸಾಧಿಸಲಾರೆ ಅಂದುಕೊಂಡು ತನ್ನ ಪರಿಸ್ಥಿತಿಗಳೊಂದಿಗೆ ರಾಜಿ ಮಾಡಿಕೊಂಡು ನೊಂದುಕೊಳ್ಳುತ್ತಲೇ ಬದುಕಬೇಕಾಗುತ್ತಿದೆ..
ಕೊನೆಗೆ ಉಳಿಯುವ ನನ್ನಲ್ಲಿನ ಪ್ರಶ್ನೆಗಳಿಗೆ ಉತ್ತರವೇ ಸಿಗಲಾರಾದೇನೋ ಅನ್ನಿಸುತ್ತೆ.
ಇಲ್ಲಿ ತಪ್ಪು ಯಾರದ್ದು?
ಅಸಹಾಯಕ ಪರಿಸ್ಥಿತಿ ಎದುರಾಗುವುದೇ ತಪ್ಪಾ?
ಅಸಹಾಯಕ ಪರಿಸ್ಥಿತಿಯಲ್ಲಿರುವವರಿಗೆ ಅವಕಾಶಗಳಾಗಲಿ ಅಥವಾ ಸಹಾಯ ಸಹಕಾರಗಳು ಸಿಗದಿದ್ದರೆ ಯಾರನ್ನ ದೂಷಿಸುತ್ತ ಬದುಕಬೇಕು.?
ಅಂತ್ಯವಿಲ್ಲದ ಪ್ರಶ್ನೆಗಳ ಸುತ್ತ ಸಾಗುವ ನೊಂದ ಮನಸ್ಸುಗಳ ಭಾವನೆಗಳಿಗೆ ಉತ್ತರಿಸುವವರು ಯಾರು?
😔😔😔😔😔😔
😔😔ಶುಭರಾತ್ರಿ 😔😔
😔 ಸಿಹಿಕನಸುಗಳು ನಿಮ್ಮದಾಗಿರಲಿ 😔
@everyone
@followers
@highlight