RCB ವಿರುದ್ಧ ಪಂದ್ಯಕ್ಕೆ ಪ್ರಸಿದ್ಧ ಕೃಷ್ಣ ಇಲ್ಲ!: ಇದು ಶುಭ್ಮನ್ ಗಿಲ್ ಪಡೆಯ ರಣತಂತ್ರವೋ ಕನ್ನಡಿಗನಿಗೆ ಬಿದ್ದ ಬರೆಯೋ?
Prasidh Krishna Absense- ಕಳೆದ ಸೀಸನ್ನಲ್ಲಿ ಪರ್ಪಲ್ ಕ್ಯಾಪ್ ಗೆದ್ದಿದ್ದ ಕನ್ನಡಿಗ ಪ್ರಸಿದ್ಧ ಕೃಷ್ಣ ಈ ಸೀಸನ್ ನಲ್ಲೂ ಉತ್ತಮ ಲಯದಲ್ಲಿದ್ದಾರೆ. ಆದರೆ ಒಂದೆರಡು ಪಂದ್ಯದಲ್ಲಿ ಆಡಿಲ್ಲ ಎಂಬ ಕಾರಣಕ್ಕೆ ಸತತ ಎರಡನೇ ಪಂದ್ಯದಲ್ಲೂ ಗುಜರಾತ್ ಟೈಟಾನ್ಸ್ ತಂಡದಿಂದ ಹೊರಗಿಟ್ಟಿರುವುದು ಅಚ್ಚರಿ ಮೂಡಿಸಿದೆ. ಆರ್ಸಿಬಿ ಮತ್ತು ಮುಂಬೈ ವಿರುದ್ಧದ ಪಂದ್ಯಗಳಲ್ಲಿ ದುಬಾರಿಯಾಗಿದ್ದೇ ಇವರ ಈ ಸ್ಥಿತಿಗೆ ಕಾರಣವಿರಬಹುದು ಎಂದು ಅಂದಾಜಿಸಲಾಗಿದೆ. ಯಾವುದೇ ಗಾಯದ ಸಮಸ್ಯೆ ಇಲ್ಲದಿದ್ದರೂ ನುರಿತ ಬೌಲರ್ನನ್ನು ಮೂಲೆಗುಂಪು ಮಾಡಿರುವುದು ಕನ್ನಡಿಗರ ಬೇಸರಕ್ಕೆ ಕಾರಣವಾಗಿದೆ.