Vijay Karnataka
3.3K views
1 days ago
KKR ಪ್ಲೇಯಿಂಗ್ ಇಲೆವೆನ್ ನಲ್ಲಿ ಕಾಣಿಸದ ಕನ್ನಡಿಗ ಮನೀಷ್ ಪಾಂಡೆ! ಒಂದು ಕಾಲದ ಮ್ಯಾಚ್ ವಿನ್ನರ್ ಈಗ ಯಾಕೆ ಬೇಡವಾದ?
ಐಪಿಎಲ್ ಇತಿಹಾಸದಲ್ಲಿ ಶತಕ ಹೊಡೆದ ಮೊದಲ ಭಾರತೀಯ ಬ್ಯಾಟರ್ ಎಂಬ ಖ್ಯಾತಿ ಮನೀಶ್ ಪಾಂಡೆಯದ್ದು, ನಿರಂತರ 19ನೇ ಸೀಸನ್ ನಲ್ಲಿ ಆಡುತ್ತಿರುವ ಅವರು ಪ್ರಸ್ತುತ ಕೋಲ್ಕತಾ ನೈಟ್ ರೈಡರ್ಸ್ ತಂಡದಲ್ಲಿದ್ದರೂ ಪ್ಲೇಯಿಂಗ್ ಇಲೆವೆನ್‌ನಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿಲ್ಲ. ಇದು ಕನ್ನಡಿಗ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ಕೆಕೆಆರ್ ತಂಡದ ಬ್ಯಾಟಿಂಗ್ ವಿಭಾಗವು ಪ್ರಸ್ತುತ ಅಸ್ಥಿರತೆಯಿಂದ ಕೂಡಿದ್ದು, ಅಜಿಂಕ್ಯ ರಹಾನೆ ನೇತೃತ್ವದ ಮ್ಯಾನೇಜ್‌ಮೆಂಟ್ ಮನೀಶ್ ಪಾಂಡೆಗೆ ಅವಕಾಶ ನೀಡುವ ಮೂಲಕ ಮಧ್ಯಮ ಕ್ರಮಾಂಕವನ್ನು ಬಲಪಡಿಸಬೇಕಿದೆ. ತಮ್ಮ ಸಾಮರ್ಥ್ಯ ಸಾಬೀತುಪಡಿಸಿ ಕರ್ನಾಟಕ ರಾಜ್ಯ ತಂಡಕ್ಕೆ ಮರಳಲು ಸಹ ಅವರಿಗೆ ಈ ಸೀಸನ್ ಅತ್ಯಂತ ನಿರ್ಣಾಯಕ .
ಮನೀಶ್ ಪಾಂಡೆ! ಒಂದು ಕಾಲದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಮ್ಯಾಚ್ ವಿನ್ನರ್ ಇಂದು ತಂಡದಲ್ಲಿ ಇದ್ದಾನೆಂದೇ ಹೆಚ್ಚಿನವರಿಗೆ ನೆನಪಿಲ್ಲ. ಯಾಕೆ ಹೀಗಾಯ್ತು? #IPL 2026