ಹಿಂದೂ ಸಮಾಜದಲ್ಲಿರುವ ಕೆಟ್ಟಪದ್ದತಿಯಿಂದಾಗಿ ಅಂಬೇಡ್ಕರ್ ರವರು ಬೌದ್ಧ ಧರ್ಮಕ್ಕೆ ಮತಾಂತರಗೊಂಡರು ಎನ್ನುತ್ತಾ ಹಿಂದೂ ಧರ್ಮವನ್ನು ದಿನಬೆಳಗಾದರೆ ಧೂಷಿಸುವ ಯಾವೊಬ್ಬ " ಜೈಬೀಮ್ " ನಾಯಕನೂ ಕೂಡ ಈವರೆಗೆ ಹಿಂದೂ ಧರ್ಮದಿಂದ ಬೌದ್ಧ ಧರ್ಮ ಕ್ಕೆ shift ಆಗಲೇ ಇಲ್ಲ!!!!
ಹಾಗೆಯೇ ಅಂಬೇಡ್ಕರ್ ರವರು ತಾವೇ ಆರಂಭಿಸಿದ " ನವಯಾನ/ Neo- Buddhism " ಎಂಬ ಹೆಸರಿನ ಹೊಸದೊಂದು ಪಂತವನ್ನು ಹುಟ್ಟುಹಾಕಿದರೆ ಹೊರತು ಗೌತಮ ಬುದ್ಧನ " ಬೌದ್ದ ಧರ್ಮಕ್ಕೆ" ಸೇರಿದ್ದಲ್ಲ ಎಂಬ ಸತ್ಯವನ್ನು ಹೇಳದೇ ಜನರ ದಾರಿ ತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ ಹೊರತು ಬೇರೇನಲ್ಲ..
" ಜೈ ಬೀಮ್ ಜೈ ಮೀಮ್" ಘೋಷಣೆ ಕೂಗುವ so called ದಲಿತ ನಾಯಕರೆನಿಸಿಕೊಂಡವರು ಅಂಬೇಡ್ಕರ್ ರವರ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸಭೆಯೊಂದರಲ್ಲಿ ಅಂಬೇಡ್ಕರ್ ರ " ಬ್ರಾಹ್ಮಣ" ಅಭಿಮಾನಿಯಿಂದ " ಮನುಸ್ಮೃತಿ "ಗೆ ಬೆಂಕಿ ಹಚ್ಚುವ ಕೆಲಸವಾಗಿದ್ದರೂ ಅದನ್ನು ಅಂಬೇಡ್ಕರ್ ರವರೇ ಮಾಡಿದರೆಂದು ಜನರ ತಲೆಗೆ ಸುಳ್ಳನ್ನು ತುಂಬುತ್ತಾ ಬಂದವರು , ಜೈಬೀಮ್ ಜೈ ಮೀಮ್ ಅಂಬೆಡ್ಕರ್ ರವರ ನಿಲುವು ಆಗಿದ್ದಲ್ಲಿ ಹಿಂದೂ ಸಮಾಜದಿಂದ ಬೇಸತ್ತ ಅಂಬೆಡ್ಕರ್ ರವರು ಇಸ್ಲಾಂ ಗೆ ಸೇರುತ್ತಿದ್ದರಲ್ಲಾ?!! ಅಂಬೇಡ್ಕರ್ ರವರು ಇಸ್ಲಾಂ ಗೆ ಸೇರುವ ವಿಚಾರ ಬಿಡಿ, ಅವರು ಇಸ್ಲಾಂ ಮತ್ತು ಮುಸಲ್ಮಾನರ ಬಗ್ಗೆ ಕಠೋರ ನಿಲುವನ್ನು ವ್ಯಕ್ತಪಡಿಸುತ್ತಾ ಪುಸ್ತಕವನ್ನು ಅಲ್ಲ ಪುಸ್ತಕ"ಗಳನ್ನು" ಬರೆದಿದ್ದರೂ ಅವುಗಳ ಬಗ್ಗೆ ಮಾತೆತ್ತದೇ "ಜೈಬೀಮ್ ಜೈ ಮೀಮ್ " ಎನ್ನುತ್ತಾ ಅಮಾಯಕ ಅಂಬೇಡ್ಕರ್ ಅನುಯಾಯಿಗಳನ್ನು ಅಂಧಕಾರಕ್ಕೆ ತಳ್ಳುತ್ತಿರುವುದನ್ನು ನಾವು ಕಾಣಬಹುದು.
ಅಸ್ಪೃಶ್ಯತೆ ಬಗ್ಗೆ ಹಿಂದೂಗಳಲ್ಲಿನ ಮೆಲ್ವರ್ಗದವರು ದಲಿತರನ್ನು ಕೀಳಾಗಿ ಕಾಣುತ್ತಿದ್ದರು ತಾವು ಬಳಸುತ್ತಿದ್ದ ಬಾವಿ ಕೆರೆಗಳ ನೀರನ್ನು ದಲಿತರು ಬಳಸದಂತೆ ನೋಡುತ್ತಿದ್ದರು ಎಂದು ದಲಿತರ ತುಂಬುವ ಈ so called ನಾಯಕರು ಅಂಬೇಡ್ಕರ್ ತಾವೇ ಬರೆದ ಪುಸ್ತಕದಲ್ಲಿ ಹಳ್ಳಿಯೊಂದರಲ್ಲಿ ಅಂಬೇಡ್ಕರ್ ರವರಿಗೆ ನೀರು ಕುಡಿಯದಂತೆ ತಡೆದ ಮುಸ್ಲಿಂ ಸಮುದಾಯದ ಬಗ್ಗೆ ಉಲ್ಲೇಖ ಮಾಡಿದ್ದರೂ ಅದನ್ನು ಮುಚ್ಚಿಟ್ಟು ರಾಜಕೀಯ ಮಾಡುತ್ತಿರುವುದು ಯಾಕಾಗಿ?!!
ಇನ್ನು ಜಮ್ಮು ಕಾಶ್ಮೀರದಲ್ಲಿ ಆರ್ಟಿಕಲ್ 370 ಯೊಂದಿಗೆ ಯಾವುದೇ ನಾಗರಿಕ ಸ್ಥಾನವನ್ನು ನೀಡದೇ ದಲಿತರನ್ನು ಅಲ್ಲಿನ so called ಅಲ್ಪಸಂಖ್ಯಾತ ಸಮುದಾಯವು ದಲಿತರನ್ನು ಯಾವ ಕೆಲಸಕ್ಕಾಗಿ ಇಟ್ಟುಕೊಂಡಿದ್ದರು ಎಂದು ಅಲ್ಲಿನ ಇತಿಹಾಸದ ಪುಟ ತೆರೆದ ಪ್ರತೀಯೊಬ್ಬರಿಗೂ ತಿಳಿದ ವಿಷಯವೇ ಆಗಿದೆ.
ಹೀಗಿರುವಾಗ ಅಂಬೇಡ್ಕರ್ ಯಾವ ಸಿದ್ದಾಂತವನ್ನು ತಿರಸ್ಕರಿಸಿದ್ದರೋ ಅದನ್ನೇ ಇಂದು ಅಂಬೇಡ್ಕರ್ ಅಭಿಮಾನಿಗಳಿಗೆ ಅಂಬೇಡ್ಕರ್ ಸಿದ್ದಾಂತವೆಂದು ಸುಳ್ಳು ಹೇಳಿ ಅವರ ನಾಯಕರೇ ದಾರಿ ತಪ್ಪಿಸುತ್ತಿದ್ದಾರೆಂದರೆ ಏನು ಹೇಳೋಣ ಹೇಳಿ...
ಬ್ರಾಹ್ಮಣರ ದ್ವೇಷಿ ಎಂಬಂತೆ ಅಂಬೇಡ್ಕರ್ ರವರನ್ನು ಬಿಂಬಿಸುವ ನಾಯಕರು ಅಂಬೇಡ್ಕರ್ ರವರ ಎರಡನೇ ಪತ್ನಿ ಸವಿತಾ ಅಂಬೇಡ್ಕರ್ ಒಬ್ಬ ಬ್ರಾಹ್ಮಣ ಕುಟುಂಬಕ್ಕೆ ಸೇರಿದವರಾಗಿದ್ದರು ಎಂಬುದನ್ನು ಹೇಳುವುದೇ ಇಲ್ಲ!!!
#⚖️ ಡಾ.ಬಿ ಆರ್ ಅಂಬೇಡ್ಕರ್ #🌅Good Morning🍵 #🙏ನಮಸ್ಕಾರ #🖊ಬದುಕಿನ ಕೋಟ್ಸ್📜