Malgudi Express
4.1K views
2 days ago
#📜ಪ್ರಚಲಿತ ವಿದ್ಯಮಾನ📜 ಅಲೆಮಾರಿಗಳು ಇನ್ನೂ ಅತ್ಯಂತ ಹೀನಾಯ ಸ್ಥಿತಿಗೆ ತಲುಪುವ ಸಾಧ್ಯತೆ: ವಡ್ಡಗೆರೆ ನಾಗರಾಜಯ್ಯ ಸಚಿವ ಸಂಪುಟ ಸಭೆಯಲ್ಲಿ ಒಟ್ಟಾರೆ 15% ಮೀಸಲಾತಿಯಲ್ಲಿ ಎಡಗೈ 'ಎ' 5.25, ಬಲಗೈ 'ಬಿ' 5.25 ಹಾಗೂ ಸ್ಪೃಶ್ಯ ದಲಿತ ಮತ್ತು ಅಲೆಮಾರಿ 'ಸಿ' 4.5 ಪ್ರಮಾಣದಲ್ಲಿ ಹಂಚಿಕೆ ಮಾಡಲು ಸರ್ವಾನುಮತದಿಂದ ಒಪ್ಪಿ ಅನುಮೋದಿಸಲಾಗಿದೆ. ಎಡಗೈ ಮತ್ತು ಬಲಗೈ ಜಾತಿಗಳ ಜನಸಂಖ್ಯೆಯ ಪ್ರಮಾಣಕ್ಕೆ ಕನಿಷ್ಠ ಸಮೀಪ ಇಲ್ಲದಿರುವ, ಅಸ್ಪೃಶ್ಯರಲ್ಲದ ಸ್ಪೃಶ್ಯ ಸಮುದಾಯಗಳಿಗೆ ಹೆಚ್ಚೂಕಮ್ಮಿ ಅಸ್ಪೃಶ್ಯರಷ್ಟೇ ಸಮಾನವಾದ ಪಾಲು ಹಂಚಿಕೆ... ವಾರೆವ್ಹಾ !! ಎಡಗೈ ಬಲಗೈ ಸಮುದಾಯಗಳಿಗಿಂತಲೂ ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಮುಂದುವರೆದಿರುವ ಸ್ಪೃಶ್ಯ ಸಮುದಾಯಗಳ ಜೊತೆಯಲ್ಲಿ ಅತಿ ಹಿಂದುಳಿದಿರುವ ಅಲೆಮಾರಿ ಸಮುದಾಯಗಳನ್ನು ಸೇರಿಸಿರುವುದರಿಂದ ಅಲೆಮಾರಿಗಳು ಇನ್ನೂ ಅತ್ಯಂತ ಹೀನಾಯ ಸ್ಥಿತಿಗೆ ತಲುಪುವ ಸಾಧ್ಯತೆ ಇದೆ. "ಎಡಗೈ ಬಲಗೈ ಇಬ್ಬರ ನಡುವಿನ ಜಗಳ - ಮೂರನೇ ಸ್ಪೃಶ್ಯರಿಗೆ ಲಾಭ" ಎಂಬಂತಾಗಿದೆ. ಎಡಗೈ ಬಲಗೈ ಸಮುದಾಯಗಳಿಗಿಂತಲೂ ಮುಂದುವರೆದಿರುವ ಅಸ್ಪೃಶ್ಯರಲ್ಲದ ಸ್ಪೃಶ್ಯ ಜಾತಿಗಳು ಅಲೆಮಾರಿಗಳ ಅವಕಾಶಗಳನ್ನು ಕೂಡಾ ಕಬಳಿಸಿ ಅಲೆಮಾರಿಗಳನ್ನು ಮತ್ತು ಅಸ್ಪೃಶ್ಯರನ್ನು ಮತ್ತಷ್ಟು ಶೋಷಣೆಗೆ ಗುರಿಪಡಿಸಲು ದೊಡ್ಡ ಹೆದ್ದಾರಿ ನಿರ್ಮಾಣವಾಗಿದೆ. ಅಲೆಮಾರಿಗಳ ಪ್ರತ್ಯೇಕ ಮೀಸಲಾತಿ ಹೋರಾಟವನ್ನು ಅನುಲಕ್ಷಿಸಿ 5.5 + 5.5 + 3 + 1 ಹೀಗೆ ಹಂಚಿಕೊಟ್ಟಿದ್ದರೆ ಒಪ್ಪಬಹುದಾಗಿತ್ತು. ಈಗ ಹಂಚಿಕೆಯಾಗಿರುವುದರಲ್ಲಿ ಯಾವುದೇ ಸಾಮಾಜಿಕ ನ್ಯಾಯ ಇದೆಯೆಂದು ನನಗೆ ಕಾಣಿಸುತ್ತಿಲ್ಲ. ಅಂಬೇಡ್ಕರರ ಸ್ಮರಣೆಯ ದಿನಗಳನ್ನು ಆಚರಿಸದಿರುವ, ಮನೆಗಳಲ್ಲಿ ಅಂಬೇಡ್ಕರ್ ಅವರ ಭಾವಚಿತ್ರ ಹಾಕಿಕೊಳ್ಳದಿರುವ, ಅಂಬೇಡ್ಕರ್ ಅವರ ಸಮಾನತೆಯ ಬೆಳಕನ್ನು ಎದೆಗಿಳಿಸಿಕೊಳ್ಳದಿರುವ, ಸಾಮಾಜಿಕ ನ್ಯಾಯಾಗ್ರಹದ ಬೀದಿ ಹೋರಾಟಗಳಲ್ಲಿ ಗುರುತಿಸಿಕೊಳ್ಳದಿರುವ, ಮೀಸಲಾತಿ ಹೋರಾಟಗಳಲ್ಲಿ ಪಾಲ್ಗೊಳ್ಳದ, ಯಾವತ್ತೂ ಬುದ್ಧ ಬಸವ ಅಂಬೇಡ್ಕರ್ ಚಿಂತನೆಗಳ ಸಂಘಟನೆಗಳನ್ನು ರೂಪಿಸದಿರುವ ಸ್ಪೃಶ್ಯ ಸಮುದಾಯಗಳು ಕುಂತಲ್ಲೇ ತಣ್ಣಗೆ ಮೀಸಲಾತಿಯ ದೊಡ್ಡ ಫಲಗಳನ್ನು ಗಳಿಸುವ ಮಹಾ ಮೋಸದ ಪ್ರಮೇಯವನ್ನು ಯಾವ ಆಯೋಗ ಅಂಗೀಕರಿಸಿದೆಯೋ ಗೊತ್ತಿಲ್ಲ. ಅಂತೂ ಅಲೆಮಾರಿಗಳ ಟೆಂಟುಗಳು ಈ ಬಿರುಗಾಳಿಗೆ ಎಗರಿ ಹೋಗುವ ಸಂಕಟ ಕಲ್ಪನೆಗೂ ನಿಲುಕುತ್ತಿಲ್ಲ. - ಡಾ. ವಡ್ಡಗೆರೆ ನಾಗರಾಜಯ್ಯ, ಹಿರಿಯ ಸಾಹಿತಿಗಳು #Nomads #likely #reach #InnerReservation #more #deplorable #state #VaddagereNagarajaiah #malgudiexpress #malgudinews #news #TopNews