ಅರ್ಜುನ್ ನಾಯಕ್ ✨🚩
5.2K views
9 hours ago
#🙏🏼ಟಿಪ್ಪು ಸುಲ್ತಾನ್ ಪುಣ್ಯಸ್ಮರಣೆ💐 ಈ ಟಿಪ್ಪು ಹೆಸರು ಮತ್ತೆ ಚಾಲ್ತಿಯಲ್ಲಿದೆ. ಆತನನ್ನು ಮೈಸೂರಿನ ಹುಲಿಯೆಂದು ವೈಭವೀಕರಿಸುವವರಿಗೆ ಈ ಪೋಸ್ಟ್ ಸಮರ್ಪಿತ : ನೋಡಿ ಸ್ವಾಮಿ, ಇತಿಹಾಸ ಅಂದ್ರೆ ಬರೀ ಗೆದ್ದವನು ಬರೆದ ಕತೆಯಲ್ಲ, ಸೋತವನು ಮುಚ್ಚಿಟ್ಟ ಸತ್ಯಗಳ ಕಂತೆ ಕೂಡ. ನಮ್ಮ ದೇಶದ ಸೆಕ್ಯುಲರ್ ಇತಿಹಾಸಕಾರರು, ಈ ಎಡಪಂಥೀಯ ಬುದ್ಧಿಜೀವಿಗಳು ಇದ್ದಾರಲ್ಲ, ಇವರು ಅದೆಂಥಾ ಮಾಯಾಜಾಲ ಹೆಣೆದಿದ್ದಾರೆ ಅಂದ್ರೆ, ಒಂದು ಸಾಧಾರಣ ಬೆಕ್ಕಿಗೆ ಹುಲಿಯ ಮುಖವಾಡ ಹಾಕಿ 'ಮೈಸೂರು ಹುಲಿ' ಅಂತ ಮೆರವಣಿಗೆ ಮಾಡಿಸಿಬಿಟ್ಟರು. ಆದರೆ ಆ ಮುಖವಾಡದ ಹಿಂದಿರೋದು ಬರೀ ಸೋಲು, ಶರಣಾಗತಿ ಮತ್ತು ಅಸಹಾಯಕತೆಯ ಕಣ್ಣೀರು ಅನ್ನೋದು ಯಾರಿಗೂ ಗೊತ್ತಾಗದಂತೆ ಮರೆಮಾಚಿದರು. ಬನ್ನಿ, ಟಿಪ್ಪುವಿನ ಅಸಲಿ 'ಸಿವಿ' (CV) ಒಮ್ಮೆ ಕೆದಕೋಣ. ರಕ್ತಸಿಕ್ತ ಇತಿಹಾಸದ ಪುಟಗಳು ಇಲ್ಲಿವೆ! #ಹುಲಿ_ಹಾರಲಿಲ್ಲ_ಬದಲಿಗೆ_ದಂಡ_ಕಟ್ಟಿತು! 1782ರಲ್ಲಿ ಅಧಿಕಾರಕ್ಕೆ ಬಂದ ಈ ಹುಲಿ, ಮರು ವರ್ಷವೇ ಅಂದರೆ 1783ರಲ್ಲಿ ಬ್ರಿಟಿಷರ ಮುಂದೆ ಆನಂದಪುರ ಕೋಟೆಯನ್ನು ಕಳೆದುಕೊಂಡು ಮಂಡಿಯೂರಿದ್ದು ಇತಿಹಾಸ. ಮಂಗಳೂರನ್ನು ಬಿಟ್ಟುಕೊಟ್ಟು ಅಸಹಾಯಕನಾಗಿ ಬ್ರಿಟಿಷರ ಜೊತೆ 'ಸ್ನೇಹದ' ಒಪ್ಪಂದಕ್ಕೆ ಸಹಿ ಹಾಕಿದಾಗಲೇ ಈ ಹುಲಿಯ ಉಗುರುಗಳು ಸವೆದು ಹೋಗಿದ್ದವು. ಇನ್ನು ಈತನ ಶೌರ್ಯ ಮರಾಠರ ಮುಂದೆ ಹೇಗಿತ್ತು ಗೊತ್ತಾ? 1786ರಲ್ಲಿ ಮರಾಠರು ಬಾದಾಮಿಯನ್ನು ಕಿತ್ತುಕೊಂಡಾಗ, ಅಬ್ಬರಿಸಿ ಬೊಬ್ಬಿರಿಯಬೇಕಿದ್ದ ಟಿಪ್ಪು, ಸುಮ್ಮನೆ 8 ಲಕ್ಷ ರೂಪಾಯಿ ದಂಡ ಕಟ್ಟಿ ಪಲಾಯನ ಮಾಡಿದ. 1787ರಲ್ಲಿ ಅದೋನಿಯ ಮೇಲೆ ದಾಳಿ ಮಾಡಿದಾಗ ಮರಾಠರು ಇವನ ಬೆನ್ನಿಗೆ ಬರೆ ಹಾಕಿದರು. ಅದರ ಪರಿಣಾಮ? 12 ಲಕ್ಷ ರೂಪಾಯಿ ದಂಡ ಮತ್ತು ಐದು ಪ್ರದೇಶಗಳನ್ನು ಮರಾಠರಿಗೆ ಒಪ್ಪಿಸಿ ಕೈ ಮುಗಿದು ನಿಂತ. ಹುಲಿ ಅಂದ್ರೆ ಹಾರಿ ಬೀಳಬೇಕು ಸ್ವಾಮಿ, ಹೀಗೆ ಕಪ್ಪ ಕಾಣಿಕೆ ಕೊಟ್ಟು ಶರಣಾಗಬಾರದು! ಮಂಗಳೂರು ಮತ್ತು ಕೊಡಗನ್ನು ಬ್ರಿಟಿಷರಿಗೆ ಬರೆದುಕೊಟ್ಟು, ಅರಮನೆಯ ಮೂಲೆಯಲ್ಲಿ ಕುಳಿತವನು ಈ ಟಿಪ್ಪು. #ಕೊನೆಯ_ದಿನಗಳ_ಆರ್ತನಾದ. ಮಕ್ಕಳನ್ನೇ ಅಡವಿಟ್ಟ 'ಧೀರ' 1791ರಲ್ಲಿ ಬ್ರಿಟಿಷರು ಮೈಸೂರಿನ ಮೇಲೆ ದಾಳಿ ಮಾಡಿದಾಗ, ಒಂದೇ ಒಂದು ಗುಂಡು ಹಾರಿಸದೆ ಟಿಪ್ಪು ಬೆಂಗಳೂರಿಗೆ ಓಡಿಬಂದ. ಅಲ್ಲಿಂದ ಶ್ರೀರಂಗಪಟ್ಟಣಕ್ಕೆ ಪಲಾಯನ ಮಾಡಿದ. 1799ರ ಏಪ್ರಿಲ್ ತಿಂಗಳಲ್ಲಿ ಶ್ರೀರಂಗಪಟ್ಟಣಕ್ಕೆ ಬ್ರಿಟಿಷರು ಮುತ್ತಿಗೆ ಹಾಕಿದಾಗ, ಟಿಪ್ಪು ಬರೆದ ಪತ್ರಗಳು ಆತನ ಅಸಲಿ ಬಣ್ಣವನ್ನು ಬಯಲು ಮಾಡುತ್ತವೆ. ಏಪ್ರಿಲ್ 20, 1799: ಜನರಲ್ ಹ್ಯಾರಿಸ್‌ಗೆ ಪತ್ರ ಬರೆದ ಟಿಪ್ಪು, "ನಾನು ಸ್ನೇಹ ಬಯಸುತ್ತೇನೆ, ಸಂಧಾನಕ್ಕೆ ವಕೀಲರನ್ನು ಕಳುಹಿಸುತ್ತೇನೆ" ಎಂದು ಅಂಗಲಾಚಿದ. ಆದರೆ ಹ್ಯಾರಿಸ್ ಈ ಪತ್ರವನ್ನು ಕಸದಂತೆ ಕಂಡು, "ನಿನ್ನ ಅರ್ಧ ರಾಜ್ಯ ಕೊಡು, ದಂಡ ಕಟ್ಟು, ಅಲ್ಲಿಯವರೆಗೆ ಸುಮ್ಮನಿರು" ಎಂದು ಮುಖಕ್ಕೆ ಹೊಡೆದಂತೆ ಉತ್ತರಿಸಿದ ಏಪ್ರಿಲ್ 28, 1799: ಮತ್ತೊಮ್ಮೆ ಪತ್ರ ಬರೆದ ಈತ, ಸಂಧಾನಕ್ಕಾಗಿ ಮತ್ತೆ ಬೇಡಿಕೊಂಡ. ಆದರೆ ಬ್ರಿಟಿಷರು ಇವನ ಮಾತು ಕೇಳುವ ಸ್ಥಿತಿಯಲ್ಲಿರಲಿಲ್ಲ. "ಒಪ್ಪಂದ ಬೇಕಿದ್ದರೆ ನಿನ್ನ ಮಕ್ಕಳನ್ನು ಮತ್ತೆ ಅಡವಿಡು" ಎಂದು ಆದೇಶಿಸಿದರು. ಹುಲಿ ಯಾವತ್ತೂ ಸಂಧಾನಕ್ಕೆ ಪತ್ರ ಬರೆಯುವುದಿಲ್ಲ ಸ್ವಾಮಿ, ಅದು ಹೋರಾಡಿ ಸಾಯುತ್ತದೆ. ಆದರೆ ಇಲ್ಲಿ ನಡೆದದ್ದು ಬರೀ ಶರಣಾಗತಿಯ ಆರ್ತನಾದ! ತನ್ನಿಬ್ಬರು ಮಕ್ಕಳನ್ನೇ ಬ್ರಿಟಿಷರಿಗೆ ಅಡವಿಟ್ಟ! ತನ್ನ ರಕ್ತವನ್ನೇ ಶತ್ರುವಿನ ಪಾಳೆಯದಲ್ಲಿ ಒತ್ತೆ ಇಟ್ಟವನನ್ನು 'ಹುಲಿ' ಅಂತ ಕರೆಯಬೇಕಾ? ಮೇ 4ರ ಮಧ್ಯಾಹ್ನ ಬ್ರಿಟಿಷ್ ಧ್ವಜ ಶ್ರೀರಂಗಪಟ್ಟಣದ ಮೇಲೆ ಹಾರಿತು, ಹುಲಿಯ ಕತೆ ಮುಗಿದಿತ್ತು. ಅಂಡಮಾನ್ ಜೈಲಿನಲ್ಲಿ ರಕ್ತದ ಕಣ್ಣೀರು ಸುರಿಸಿದ ಸಾವರ್ಕರ್ ಅವರಂತಾ ಮಹಾನ್ ಕ್ರಾಂತಿಕಾರಿಗಳನ್ನು 'ಹೇಡಿ' ಅಂತ ಕರೆಯುವ ಈ ಎಡಪಂಥೀಯರು, "ನನ್ನನ್ನು ಉಳಿಸಿ" ಎಂದು ಬ್ರಿಟಿಷರಿಗೆ ಪತ್ರದ ಮೇಲೆ ಪತ್ರ ಬರೆದು ಶರಣಾದ, ಮಕ್ಕಳನ್ನೇ ಅಡವಿಟ್ಟ, ಮರಾಠರಿಗೆ ಹೆದರಿ ದಂಡ ಕಟ್ಟಿದ ಒಬ್ಬ ವ್ಯಕ್ತಿಯನ್ನು 'ಸ್ವಾತಂತ್ರ್ಯ ಹೋರಾಟಗಾರ' ಅಂತ ಬಿಂಬಿಸುತ್ತಾರಲ್ಲ? ಇದು ಇತಿಹಾಸಕ್ಕೆ ಮಾಡುತ್ತಿರುವ ದ್ರೋಹ. ಸತ್ಯ ಯಾವತ್ತೂ ಸುಳ್ಳಿನ ಸಮಾಧಿಯ ಮೇಲೆ ಹೆಚ್ಚು ಕಾಲ ನಿಲ್ಲಲಾರದು. ಟಿಪ್ಪು ಹುಲಿಯೂ ಅಲ್ಲ, ವೀರನೂ ಅಲ್ಲ; ಆತ ಅಸಹಾಯಕತೆಯ ಪ್ರತೀಕ, ಇತಿಹಾಸದ ಕತ್ತಲೆಯಲ್ಲಿ ಹೂತು ಹೋಗಬೇಕಾದ ಒಬ್ಬ ಪಲಾಯನವಾದಿ .. ಅಷ್ಟೇ ! ಅಂದ ಹಾಗೆ ಬೆಳಿಗ್ಗೆ ಎದ್ದ ತಕ್ಷಣ ಈ ಪೋಟೋ ನೋಡುದ್ರೆ ಮುಂದಿನ ಅನಾಹುತಗಳಿಗೆ ನಾವು ಜವಾಬ್ದಾರರಲ್ಲ