_ಶಿವಲಿಂಗದ ಮೂಲ ಮತ್ತು ಪೂಜೆಯ ಬಗ್ಗೆ ಪುರಾಣಗಳಲ್ಲಿ ಅನೇಕ ರೀತಿಯ ಕಥೆಗಳು ಕಂಡುಬರುತ್ತವೆ..!!_
*ಶಿವಲಿಂಗ ಪೂಜೆ ಶುರುವಾಗಿದ್ದು ಹೇಗೆ? ಮೊದಲ ಪೂಜೆ ಮಾಡಿದವರಾರು?*
ಶಿವಲಿಂಗವನ್ನು ಮೊದಲು ಯಾರು ಪೂಜಿಸಿದರು ಮತ್ತು ಅದರ ಪ್ರಾಮುಖ್ಯತೆಯೇನು ಎಂದು ತಿಳಿಯೋಣ. ಶಿವಲಿಂಗದ ಮೂಲ ಮತ್ತು ಪೂಜೆಯ ಬಗ್ಗೆ ಪುರಾಣಗಳಲ್ಲಿ ಅನೇಕ ರೀತಿಯ ಕಥೆಗಳು ಕಂಡುಬರುತ್ತವೆ. ವಿವಿಧ ಪುರಾಣಗಳಲ್ಲಿ ಈ ಸಂದರ್ಭದಲ್ಲಿ ವಿಭಿನ್ನ ಕಥೆಗಳಿವೆ. ಈ ವಿಷಯದಲ್ಲಿ ಖಚಿತವಾಗಿ ಏನನ್ನೂ ಹೇಳಲು ಸಾಧ್ಯವಿಲ್ಲ. ಅಂಥ ಎರಡು ಶಿವಲಿಂಗ ಪೂಜೆಯ ಕಥೆ ಏನೆಂದು ತಿಳಿಯೋಣ.
*ಶಿವಪುರಾಣದ ಪ್ರಕಾರ ಶಿವಲಿಂಗ ಹುಟ್ಟಿದ್ದು ಹೀಗೆ:*
ಶಿವಪುರಾಣದ ಪ್ರಕಾರ, ಒಮ್ಮೆ ಬ್ರಹ್ಮ ಮತ್ತು ವಿಷ್ಣು ನಡುವೆ ಶ್ರೇಷ್ಠತೆಯ ಬಗ್ಗೆ ವಿವಾದವಿತ್ತು. ಅವರ ವಿವಾದಗಳು ಬಹಳಷ್ಟು ಹೆಚ್ಚಾದವು, ಆಗ ಅಗ್ನಿ ಕೊಳವೊಂದು ಬಂದು ಬ್ರಹ್ಮ ಮತ್ತು ವಿಷ್ಣುವಿನ ನಡುವೆ ನೆಲೆಗೊಂಡಿತು. ಈ ಬೆಂಕಿಯ ಆರಂಭವನ್ನು ಯಾರು ಕಂಡು ಹಿಡಿಯುತ್ತಾರೋ ಅವರೇ ಶ್ರೇಷ್ಠ ಎಂಬ ಆಕಾಶವಾಣಿ ಕೇಳಿಬಂತು. ಬ್ರಹ್ಮ ಮತ್ತು ವಿಷ್ಣು ಸಾವಿರ ವರ್ಷಗಳ ಕಾಲ ಅದರ ರಹಸ್ಯವನ್ನು ಕಂಡುಹಿಡಿಯಲು ಪ್ರಯತ್ನಿಸಿದರು, ಆದರೆ ಯಶಸ್ವಿಯಾಗಲಿಲ್ಲ. ನಿರಾಶೆಗೊಂಡ ಇಬ್ಬರೂ ಬೆಂಕಿ(Fire)ಯ ಪ್ರಾರಂಭ ಮತ್ತು ಅಂತ್ಯವನ್ನು ಕಂಡುಹಿಡಿಯಲು ಹೋದ ಸ್ಥಳಕ್ಕೆ ಮರಳಿದರು. ಅಲ್ಲಿಗೆ ಬರುವಾಗ ಅವರಿಗೆ ಓಂ ಶಬ್ದ ಕೇಳಿಸಿತು ಮತ್ತು ಪರಬ್ರಹ್ಮ ರೂಪದಲ್ಲಿ ಶಿವನು ಕಾಣಿಸಿಕೊಂಡನು. ಅವನು ಅಗ್ನಿ ಕಿರಣದ ವ್ಯತ್ಯಾಸವನ್ನು ಹೇಳಿದನು ಮತ್ತು ಬ್ರಹ್ಮ ವಿಷ್ಣುವು ಅವನ ಅಗ್ನಿ ಕಿರಣಕ್ಕೆ ನಮಸ್ಕರಿಸಿದರು. ಬ್ರಹ್ಮ ವಿಷ್ಣುವಿನ ಕೋರಿಕೆಯ ಮೇರೆಗೆ, ಆ ಬೆಂಕಿಯ ಚೆಂಡು ಬ್ರಹ್ಮ ಮತ್ತು ವಿಷ್ಣುವಿನಿಂದ ಪೂಜಿಸಲ್ಪಟ್ಟ ಲಿಂಗವಾಗಿ ರೂಪಾಂತರಗೊಂಡಿತು. ಅಂದಿನಿಂದ ವಿಶ್ವದಲ್ಲಿ ಶಿವಲಿಂಗವನ್ನು ಪೂಜಿಸುವ ನಿಯಮ ಪ್ರಾರಂಭವಾಯಿತು.
*ಶಿವಲಿಂಗ ಆರಾಧನೆ ಪ್ರಾರಂಭ:*
ಲಿಂಗ ಪುರಾಣದ ಪ್ರಕಾರ, ಶಿವಲಿಂಗದ ಆರಾಧನೆಯು ಹೀಗೆ ಪ್ರಾರಂಭವಾಯಿತು. ದಕ್ಷ ಪ್ರಜಾಪತಿ ತನ್ನ ಯಜ್ಞದಲ್ಲಿ ಭಗವಾನ್ ಶಿವನ ಭಾಗವನ್ನು ಇಡದಿದ್ದಾಗ, ತಾಯಿ ಸತಿಯು ಕೋಪಗೊಂಡು ಯಜ್ಞಕುಂಡಕ್ಕೆ ತನ್ನ ದೇಹವನ್ನು ಅರ್ಪಿಸಿದಳು. ಈ ಸುದ್ದಿಯು ಭಗವಾನ್ ಶಿವನಿಗೆ ತಲುಪಿದಾಗ, ಅವನು ಕೋಪಗೊಂಡು ದಕ್ಷ ಪ್ರಜಾಪತಿಯ ಯಜ್ಞವನ್ನು ನಾಶಪಡಿಸಿದನು. ನಂತರ, ಸತಿಯ ಜೊತೆಯಿಲ್ಲದೆ ಶಿವನು ದುಃಖ, ಕೋಪಗಳಿಂದ ದಿಗಂಬರ ಸ್ಥಿತಿಯಲ್ಲಿ ಭೂಮಿಯ ಮೇಲೆ ಅಲ್ಲಿ ಇಲ್ಲಿ ತಿರುಗಾಡಲು ಪ್ರಾರಂಭಿಸಿದನು. ಶಿವನನ್ನು ನೋಡಿದ ಸ್ತ್ರೀಯರು ಆಕರ್ಷಿತರಾದರು. ಸ್ತ್ರೀಯರ ವ್ಯಾಮೋಹವನ್ನು ಕಂಡು ಋಷಿಗಳು ಶಿವನಿಗೆ ಶಾಪ ಕೊಟ್ಟರು. ಶಾಪ(Curse)ದಿಂದಾಗಿ, ಶಿವನ ಲಿಂಗವು ತಕ್ಷಣವೇ ಕತ್ತರಿಸಲ್ಪಟ್ಟಿತು. ಅದರಿಂದಾಗಿ ಮೂರು ಲೋಕಗಳಲ್ಲಿಯೂ ದಿಗ್ಭ್ರಮೆ ಉಂಟಾಯಿತು. ಲೋಕಕಾರ್ಯಗಳು ಸರಿಯಗಿ ನಡೆಯಲಿಲ್ಲ.ಎಲ್ಲ ದೇವತೆಗಳು ಮತ್ತು ಋಷಿಗಳು ಶಿವನನ್ನು ಹುಡುಕಿಕೊಡುವಂತೆ ಕೋರಿ ಬ್ರಹ್ಮನ ಬಳಿ ಹೋದರು. ಬ್ರಹ್ಮ ತನ್ನ ಯೋಗಬಲದಿಂದ ಇಡೀ ಘಟನೆಯನ್ನು ತಿಳಿದರು ಮತ್ತು ಎಲ್ಲಾ ದೇವತೆಗಳು ಮತ್ತು ಋಷಿಗಳೊಂದಿಗೆ ಶಿವನನ್ನು ತಲುಪಿದರು. ಶಿವನನ್ನು ಪ್ರಾರ್ಥಿಸಿದ ಬ್ರಹ್ಮನು 'ನೀನು ಮತ್ತೆ ನಿನ್ನ ಲಿಂಗವನ್ನು ಧರಿಸಬೇಕು. ಇಲ್ಲದಿದ್ದರೆ ಮೂರು ಲೋಕಗಳು ನಾಶವಾಗುತ್ತವೆ' ಎಂದು ಹೇಳಿದನು. ಬ್ರಹ್ಮನ ಪ್ರಾರ್ಥನೆಯನ್ನು ಕೇಳಿದ ಶಿವ, 'ಇಂದಿನಿಂದ ಎಲ್ಲರೂ ನನ್ನ ಲಿಂಗವನ್ನು ಪೂಜಿಸಲು ಪ್ರಾರಂಭಿಸಬೇಕು. ನಂತರ ನಾನು ಮತ್ತೆ ನನ್ನ ಲಿಂಗವನ್ನು ಧರಿಸುತ್ತೇನೆ' ಎಂದನು. ಶಿವನ ಮಾತನ್ನು ಕೇಳಿದ ಬ್ರಹ್ಮನು ಮೊದಲು ಚಿನ್ನದ ಶಿವಲಿಂಗವನ್ನು ಮಾಡಿ ಅದನ್ನು ಪೂರ್ಣ ವಿಧಿಗಳೊಂದಿಗೆ ಪೂಜಿಸಿದನು. ಇದರ ನಂತರ ದೇವತೆಗಳು ಮತ್ತು ಋಷಿಗಳು ಶಿವಲಿಂಗವನ್ನು ಪೂಜಿಸಲು ಪ್ರಾರಂಭಿಸಿದರು. ಹೀಗೆ ವಿಶ್ವದಲ್ಲಿ ಶಿವಲಿಂಗದ ಆರಾಧನೆಯ ನಿಯಮ ಪ್ರಾರಂಭವಾಯಿತು.
*ಶಿವಲಿಂಗ ಪೂಜೆಯ ಪ್ರಯೋಜನಗಳು:*
ಶಿವಲಿಂಗವನ್ನು ಕ್ರಮಬದ್ಧವಾಗಿ ಪೂಜಿಸುವುದರಿಂದ, ವ್ಯಕ್ತಿಯು ಸಂತಾನ, ಸಂಪತ್ತು, ಜ್ಞಾನ ಮತ್ತು ಮೋಕ್ಷವನ್ನು ಪಡೆಯುತ್ತಾನೆ. ಶಿವಲಿಂಗವನ್ನು ಪೂಜಿಸುವ ಸ್ಥಳವು ತೀರ್ಥಕ್ಷೇತ್ರವಾಗುತ್ತದೆ.
ತೀರ್ಥಯಾತ್ರೆಯ ಮಣ್ಣಿನಿಂದ ಶಿವಲಿಂಗವನ್ನು ಮಾಡಿ ಅದನ್ನು ಸಾವಿರ ಬಾರಿ, ಲಕ್ಷ, ಅಥವಾ ಕೋಟಿ ಬಾರಿ ಪೂಜಿಸುವ ವ್ಯಕ್ತಿ, ಆ ಸಾಧಕನು ಪುಣ್ಯ ಪರಿಣಾಮದಿಂದ ಶಿವನ ಸ್ವರೂಪನಾಗುತ್ತಾನೆ. ಅದೇ ಸಮಯದಲ್ಲಿ, ತೀರ್ಥಯಾತ್ರೆಯ ಮಣ್ಣು, ಬೂದಿ, ಸಗಣಿ ಮತ್ತು ಮರಳಿನಿಂದ ಶಿವಲಿಂಗವನ್ನು ಮಾಡಿ ಪೂಜಿಸುವ ವ್ಯಕ್ತಿಗೆ ಸ್ವರ್ಗದಲ್ಲಿ ನೆಲೆ ಸಿಕ್ಕುತ್ತದೆ.
ಶಿವನನ್ನು ಯಾವಾಗಲೂ ಪೂಜಿಸುವ ಸ್ಥಳದಲ್ಲಿ ಸಾಯುವ ವ್ಯಕ್ತಿಯು ಶಿವಲೋಕವನ್ನು ಪಡೆಯುತ್ತಾನೆ. ಯಾವಾಗಲೂ ಶಿವನಾಮ ಜಪಿಸುತ್ತಲೇ ಇರುವವನು ಪರಮ ಶುದ್ಧನಾಗುತ್ತಾನೆ ಮತ್ತು ಪರಮ ಉನ್ನತಿ ಹೊಂದುತ್ತಾನೆ ಮತ್ತು ಅವನು ಮೋಕ್ಷವನ್ನು ಪಡೆಯುತ್ತಾನೆ. ಶಿವ ಎಂಬ ಪದವನ್ನು ಉಚ್ಚರಿಸುವುದರಿಂದ ಎಲ್ಲ ರೀತಿಯ ಪಾಪಗಳಿಂದ ಮುಕ್ತನಾಗುತ್ತಾನೆ.
#📿🔱ಮಹಾಶಿವರಾತ್ರಿ ಶುಭಾಶಯ🔱📿
ಹೆಚ್ಚಿನ ಮಾಹಿತಿಗಾಗಿ ಸನಾತನ ಪಂಚಾಂಗ:
https://chat.whatsapp.com/GN6DkB3COEGCPllU4XYQou