ಫಾಲೋ
ಅನಿಲ್ ಮಲ್ನಾಡ್
@64197565
3,547
ಪೋಸ್ಟ್ಸ್
3,834
ಫಾಲೋವರ್ಸ್
ಅನಿಲ್ ಮಲ್ನಾಡ್
551 ವೀಕ್ಷಿಸಿದ್ದಾರೆ
#⚫14 ಫೆಬ್ರವರಿ ಬ್ಲಾಕ್ ಡೇ💔 ದಕ್ಷ ಆಡಳಿತ ನೀಡಿ ರಾಜ್ಯದ ಏಳಿಗೆಗೆ ಶ್ರಮಿಸಿದ, ಗ್ರಾಮೀಣ ಜನರ ಉದ್ಧಾರಕ್ಕೆ ದುಡಿದ, ಸರಳತೆ, ಪ್ರಾಮಾಣಿಕತೆಯಿಂದ ಜನಮನ ಗೆದ್ದಿದ್ದ ವಿಧಾನಸೌಧ ನಿರ್ಮಾತೃ ಮಾಜಿ ಮುಖ್ಯಮಂತ್ರಿಗಳಾದ ಶ್ರೀ #ಕೆಂಗಲ್_ಹನುಮಂತಯ್ಯ ಅವರ 116ನೇ ಜನ್ಮ ಜಯಂತಿಯಂದು ಅವರಿಗೆ ನಮ್ಮ‌ ನಮನಗಳು.. ಇವರ ರಾಜಕೀಯ ಸೇವೆಯನ್ನು ಎಲ್ಲರೂ ಸ್ಮರಿಸೋಣ. #ನಿಮ್ಮ ಸ್ನೇಹಿತ ಅನಿಲ್ ಮಲ್ನಾಡ್
ಅನಿಲ್ ಮಲ್ನಾಡ್
523 ವೀಕ್ಷಿಸಿದ್ದಾರೆ
#🕉️ ಶುಭ ಶುಕ್ರವಾರ "ರೇಡಿಯೋ" ಇಂದಿಗೂ ಎಷ್ಟೋ ಜನಕ್ಕೆ ಮನೋರಂಜನೆಯ ರೂಪ. ರೋಡ್ ಸೈಡ್ ಹೋಟೆಲ್ ಇಟ್ಟೋರ್ಗೆ, ಇಸ್ತ್ರಿ ಮಾಡೋರ್ಗೆ, ಸಣ್ಣ ಪುಟ್ಟ ಅಂಗಡಿಯವ್ರಿಗೆ ಅಷ್ಟೆಲ್ಲ ಯಾಕೆ ಮೊಬೈಲ್ ನೆಟವರ್ಕ್ ಇಲ್ದೆ ಇರೋರಿಗೆ ರೇಡಿಯೋನೇ ಬೇಕಾಗದೆ. "ಗುಗ್ಲಿಯೆಲ್ಮೊ ಮಾರ್ಕೊನಿ" ಅವರನ್ನು ಈ "ವಿಶ್ವ ರೇಡಿಯೋ ದಿನ"ದಂದು ನೆನೆಯೋಣ ಮತ್ತು ಸ್ಮರಿಸೋಣ.ಹಾಗೆಯೇ ಹಲವು ಮಾಧ್ಯಮಗಳ ನಡುವೆಯೂ ಇನ್ನೂ ಗಟ್ಟಿಯಾಗಿ ನೆಲೆಯೂರಿ ನಿಂತಿರುವ ರೇಡಿಯೊಗೆ ಒಂದು ದಿನ ಬೇಕೆಂಬ ನಿಲುವು ವ್ಯಕ್ತವಾಗಿದ್ದು ಫೆಬ್ರವರಿ13 ರಂದು ವಿಶ್ವ ರೇಡಿಯೋ ದಿನವಾಗಿ ಆಚರಿಸಲು 2011 ರ ಯುನೆಸ್ಕೊಸಭೆಯಲ್ಲಿ ನಿರ್ಧರಿಸಲಾಯಿತು ಹಳ್ಳಿಗಾಡಿನ ಜನರು ಹಿಂದಿನ ಕಾಲದಲ್ಲಿ ರೇಡಿಯೋ ವನ್ನೇ ಅವಲಂಬಿಸಿದ್ದರೂ ಬಹುಪಾಲು ಜನರು ಇದನ್ನೇ ಅವಲಂಬಿಸಿಇದ್ದರೂ ಹಾಗೆಯೇ ನಾವು ಕೂಡ ಚಿಕ್ಕವರಾಗಿದ್ದಾಗ ರೇಡಿಯೋ ಆಲಿಸುವ ಮೂಲಕ ನಮ್ಮ ದಿನನಿತ್ಯದ ಬದುಕನ್ನು ಪ್ರಾರಂಭಿಸುತ್ತಿದ್ದೇವೆ ಎಂದುಎಂಬುದೇ ನಮ್ಮ ಖುಷಿ ಇಂತಹ ರೇಡಿಯೊ ಮಾಧ್ಯಮ ಅಂದು ಎಂದು ಕೂಡ ಹೀಗೇ ಮುಂದುವರಿಯಲಿ ಎಲ್ಲ ರೇಡಿಯೋಕಾರ್ಮಿಕರಿಗೆ ಹಾಗೂ ಎಲ್ಲ ನನ್ನ ದೇಶದ ಜನರಿಗೆ ವಿಶ್ವ ರೇಡಿಯೋ ದಿನದ ಶುಭಾಶಯಗಳು #ನಿಮ್ಮ ಸ್ನೇಹಿತ ಅನಿಲ್ ಮಲ್ನಾಡ್
ಅನಿಲ್ ಮಲ್ನಾಡ್
534 ವೀಕ್ಷಿಸಿದ್ದಾರೆ
#🕉️ ಶುಭ ಶುಕ್ರವಾರ "ಭಾರತದ ನೈಟಿಂಗೇಲ್"ಎಂದು ಪ್ರಸಿದ್ಧರಾದ ಇವರು, ಭಾರತದ ಮೊದಲ ಮಹಿಳಾ ಗವರ್ನರ್ ಎಂಬ ಗೌರವಕ್ಕೂ ಪಾತ್ರರು. "ಸರೋಜಿನಿ ನಾಯ್ಡು". ಕವಿಯಾಗಿ, ಸಮಾಜ ಕಲ್ಯಾಣದ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಇವರು, ಆಂಗ್ಲರ ಕಾನೂನು ಮತ್ತು ತೆರಿಗೆ ನೀತಿಯನ್ನು ವಿರೋಧಿಸಿದ ಸ್ವಾತಂತ್ರ ಹೋರಾಟಗಾರಳು. ಧೀಮಂತ ಮಹಿಳೆ ಸರೋಜಿನಿ ನಾಯ್ಡು ಜಯಂತಿ ಇಂದು ಅವರನ್ನೊಮ್ಮೆ ನಾವು ಸ್ಮರಿಸೋಣ ಅವರಿಗೊಂದು ನಮನ ಸಲ್ಲಿಸೋಣ ಎನ್ನುತ್ತಾ #ನಿಮ್ಮ ಸ್ನೇಹಿತ ಅನಿಲ್ ಮಲ್ನಾಡ್
ಅನಿಲ್ ಮಲ್ನಾಡ್
581 ವೀಕ್ಷಿಸಿದ್ದಾರೆ
#🌹 ಹ್ಯಾಪಿ ರೋಸ್ ಡೇ 🌹 ತಾಯಿ ಭಾರತಿಯ ಸ್ವಾತಂತ್ರ್ಯಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ವೀರ ಸೇನಾನಿ ಸ್ವಾತಂತ್ರ್ಯ ಹೋರಾಟದ ಮಹಾನ್ ಕ್ರಾಂತಿಕಾರಿ ಶ್ರೀ ಸಚೀಂದ್ರನಾಥ ಸಾನ್ಯಾಲ್ ಅವರ ಬಲಿದಾನ ದಿನದಂದು ಶತಶತ ನಮನಗಳು. ಬ್ರಿಟಿಷ್ ಆಳ್ವಿಕೆಯಿಂದ ಸ್ವಾತಂತ್ರ್ಯ ಪಡೆಯಲು ಇವರು ಮಾಡಿರುವ ಧೀರ ತ್ಯಾಗ ಹಾಗು ಅವರಿಗಿದ್ದ ರಾಷ್ಟ್ರ ಚಿಂತನೆ ದೇಶಪ್ರೇಮವನ್ನು ರಾಷ್ಟ್ರವು ಎಂದಿಗೂ ಸ್ಮರಿಸುತ್ತದೆ. "ಸಚೀಂದ್ರನಾಥ್ ಸಾನ್ಯಾಲ್" ಓರ್ವ ಭಾರತೀಯ ಕ್ರಾಂತಿಕಾರಿ ೩ ಏಪ್ರಿಲ್ ೧೮೯೩ ೭ ಫೆಬ್ರವರಿ ೧೯೪೨ಇವರು ಹಿಂದೂಸ್ತಾನ್ ರಿಪಬ್ಲಿಕನ್ ಅಸೋಸಿಯೇಶನ್ HRAನ ಸ್ಥಾಪಕರು.೧೯೨೮ರ ನಂತರ ಹಿಂದೂಸ್ತಾನ್ ರಿಪಬ್ಲಿಕನ್ ಅಸೋಸಿಯೇಶನ್ ಹಿಂದೂಸ್ತಾನ್ ಸಮಾಜವಾದಿ ರಿಪಬ್ಲಿಕನ್ ಅಸೋಸಿಯೇಶನ್ ಎಂದು ಮರುನಾಮಕರಣಗೋಡಿತು. ಭಾರತದಲ್ಲಿ ಬ್ರಿಟಿಷ್ ಸಾಮ್ರಾಜ್ಯದ ವಿರುದ್ಧ ಸಶಸ್ತ್ರ ಪ್ರತಿರೋಧ ತೋರಿದವರಲ್ಲಿ ಪ್ರಮುಖ ವ್ಯಕ್ತಿ ಇವರಾಗಿದ್ದಾರೆ. ಆ ಸಮಯದ ಯುವ ಕ್ರಾಂತಿಕಾರಿಗಳಾದ ಚಂದ್ರಶೇಖರ ಆಜಾದ್ ಮತ್ತು ಭಗತ್ ಸಿಂಗ್ ರಂತಹ ಹಲವರಿಗೆ ಮಾರ್ಗದರ್ಶಕರಾಗಿದ್ದರು ಎಂದು ಪರಿಗಣಿಸಲಾಗಿದೆಬಂಗಾಳಿ ಬ್ರಾಹ್ಮಣ ಸಮುದಾಯಕ್ಕೆ ಸೇರಿರುವ ಸಚೀಂದ್ರನಾಥ್ ಸಾನ್ಯಾಲ್ ಅವರ ತಂದೆ ಹರಿನಾಥ ಸಾನ್ಯಾಲ್ ಹಾಗೂ ತಾಯಿ ಖೇರೋಡ್ ವಾಸಿನಿ ದೇವಿ. ಅವರು ಬ್ರೀಟಿಷ್ ಭಾರತದ ಸಂಯುಕ್ತ ಪ್ರಾಂತ್ಯಕ್ಕೆ ಸೇರಿದ್ದ ಬನಾರಸ್‌ನಲ್ಲಿ ೩ ಏಪ್ರಿಲ್ ೧೯೮೩ರಂದು ಜನಿಸಿದರು. ಪ್ರತಿಭಾ ಸಾನ್ಯಾಲ್ ಇವರ ಪತ್ನಿಯಾಗಿದ್ದು, ಓರ್ವ ಪುತ್ರನನ್ನು ಹೊಂದಿದ್ದರು. ಸಾನ್ಯಾಲ್, ೧೯೧೩ರಲ್ಲಿ ಪಾಟ್ನಾದಲ್ಲಿ ಅನುಶಿಲನ ಸಮಿತಿಯ ಶಾಖೆಯನ್ನು ಸ್ಥಾಪಿಸಿದರು.೧೯೧೨ರಲ್ಲಿ ನಡೆದ ದೆಹಲಿ ಪಿತೂರಿಯಲ್ಲಿ ರಾಸ್ ಬಿಹಾರಿ ಬೋಸ್‌ನೊಂದಿಗೆ ಪ್ರಮುಖ ಪಾತ್ರ ವಹಿಸಿದರು. ಈ ಪಿತೂರಿಯ ಪ್ರಕಾರ ಆಗಿನ ವೈಸ್‌ರಾಯ್ ಹಾರ್ಡಿಂಜ್ ಅವರು ಬಂಗಾಳ ವಿಭಜನೆಯ ನಂತರ ಹೊಸದಾಗಿ ಘೋಷಣೆಗೊಂಡ ರಾಜಧಾನಿ ದೆಹಲಿಯನ್ನು ಪ್ರವೇಶಿಸುತ್ತಿದ್ದಾಗ ದಾಳಿ ನಡೆಸಿದರು.ಈ ದಾಳಿಯಲ್ಲಿ ಲಾರ್ಡ್ ಹಾರ್ಡಿಂಜ್ ತೀವ್ರವಾಗಿ ಗಾಯಗೊಂಡರು. ಭಾರತೀಖಯ ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ ಮುಖ್ಯವಾಗಿ ದಾಖಲಾಗಿರುವ ಗದರ್ ಪಿತೂರಿಯ ಯೋಜನೆಯಲ್ಲಿ ಕೂಡ ಇವರೂ ಕೂಡ ಪ್ರಮುಖ ಪಾಲುದಾರರು. ಈ ವಿಚಾರ ಫೆಬ್ರವರಿ ೧೯೧೫ರಲ್ಲಿ ಬಹಿರಂಗಗೊಂಡ ಬಳಿಕ ಅವರು ಭೂಗತರಾದರು.ಇವರ ಸಹವರ್ತಿ ರಾಸ್ ಬಿಹಾರಿ ಬೋಸ್ ಜಪಾನ್‌ಗೆ ಪರಾರಿಯಾದ ಬಳಿಕ ಸಾನ್ಯಾಲ್ ಅವರನ್ನು ಭಾರತದ ಕ್ರಾಂತಿಕಾರಿ ಚಳವಳಿಯ ಅತ್ಯಂತ ಹಿರಿಯ ನಾಯಕ ಎಂದು ಪರಿಗಣಿಸಲಾಗಿದೆ.ಬಳಿಕ ಗದರ್ ಪಿತೂರಿಯಲ್ಲಿ ಭಾಗಿಯಾದ ಆರೋಪದಲ್ಲಿ ಬ್ರಿಟೀಶ್ ಸರ್ಕಾರ ಸಚೀಂದ್ರನಾಥ್ ಸಾನ್ಯಾಲ್ ರಿಗೆ ಜೀವಾವಧಿ ಶಿಕ್ಷೆ ವಿಧಿಸಿತು. ಅವರನ್ನು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಇರುವ ಸೆಲ್ಯೂಲಾರ್ ಜೈಲಿನಲ್ಲಿ ಬಂಧಿಸಿ ಇಡಲಾಯಿತು. ಅವಧಿಗೆ ಮುನ್ನವೇ ಬಿಡುಗಡೆಯಾದ ಇವರು ೧೯೨೨ರಲ್ಲಿ ಸೆಲ್ಯೂಲಾರ್ ಜೈಲಿನ ತನ್ನ ಅನುಭವಗಳನ್ನು "ಬಂಧೀ ಜೀವನ್ಎಂಬ ಪುಸ್ತಕದಲ್ಲಿ ದಾಖಲಿಸಿದ್ದಾರೆ.ಬಿಡುಗಡೆಗೊಂಡ ಬಳಿಕವೂ ಸಾನ್ಯಾಲ್ ಅವರು ಬ್ರಿಟೀಶ್ ಸರ್ಕಾರ ವಿರುದ್ದದ ಹೋರಾಟಗಳಲ್ಲಿ ತೊಡಗಿದ್ದರಿಂದ ಸರ್ಕಾರವು ಬನಾರಸಿನಲ್ಲಿ ಇರುವ ಇವರ ಪೂರ್ವಜರ ಮನೆಯಲ್ಲಿ ಗೃಹ ಬಂಧನದಲ್ಲಿ ಇಟ್ಟಿತು. ೧೯೨೨ರಲ್ಲಿ ಅಸಹಕಾರ ಚಳುವಳಿಯ ಅಂತ್ಯದ ನಂತರ ಸಾನ್ಯಾಲ್ ರಾಮ್ ಪ್ರಸಾದ್ ಬಿಸ್ಮಿಲ್ ಮತ್ತು ಇತರ ಕೆಲವು ಕ್ರಾಂತಿಕಾರಿಗಳು ಸ್ವತಂತ್ರ ಭಾರತವನ್ನು ಬಯಸಿದ್ದರು ಮತ್ತು ತಮ್ಮ ಗುರಿಯನ್ನು ಸಾಧಿಸಲು ಬಲವನ್ನು ಬಳಸಲು ಸಿದ್ಧರಾಗಿದ್ದರು. ಸಾನ್ಯಾಲ್ ಮತ್ತು ರಾಮ್ ಪ್ರಸಾದ್ ಬಿಸ್ಮಿಲ್ ಇಬ್ಬರೂ ಸೇರಿ ಅಕ್ಟೋಬರ್ ೧೯೨೪ ರಲ್ಲಿ ಹಿಂದೂಸ್ತಾನ್ ರಿಪಬ್ಲಿಕನ್ ಅಸೋಸಿಯೇಶನ್ ಅನ್ನು ಸ್ಥಾಪಿಸಿದರು. ೧೯೨೫ರ ಜನವರಿ ೧ರಂದು ಉತ್ತರ ಭಾರತದ ದೊಡ್ಡ ನಗರಗಳಲ್ಲಿ ವಿತರಿಸಲಾದ ಕ್ರಾಂತಿಕಾರಿ ಎಂಬ ಶೀರ್ಷಿಕೆಯ ಹಿಂದೂಸ್ತಾನ್ ರಿಪಬ್ಲಿಕನ್ ನ ಅಸೋಸಿಯೇಶನ್ ಪ್ರಣಾಳಿಕೆಯನ್ನು ಸಚೀಂದ್ರನಾಥ್ ಸಾನ್ಯಾಲ್ ಅವರೇ ರಚಿಸಿದ್ದರು ಕಾಕೋರಿ ಪಿತೂರಿಯಲ್ಲಿ ಭಾಗಿಯಾಗಿದ್ದಕ್ಕಾಗಿ ಸಾನ್ಯಾಲ್ ಜೈಲುವಾಸ ಅನುಭವಿಸಿದರು. ಬಳಿಕ ಆಗಸ್ಟ್ ೧೯೩೭ರಲ್ಲಿ ನೈನಿ ಸೆಂಟ್ರಲ್ ಜೈಲಿನಿಂದ ಪೋರ್ಟ್ ಬ್ಲೇರ್‌ನ ಸೆಲ್ಯುಲಾರ್ ಜೈಲಿಗೆ ಕಳುಹಿಸಲ್ಪಟ್ಟರುಹೀಗೆ ಸಚೀಂದ್ರನಾಥ್ ಸಾನ್ಯಾಲ್ ಎರಡು ಬಾರಿ ಪೋರ್ಟ್ ಬ್ಲೇರ್‌ನ ಸೆಲ್ಯುಲಾರ್ ಜೈಲಿಗೆ ಕಳುಹಿಸಲ್ಪಟ್ಟ ಕೆಲವೇ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಒಬ್ಬರಾಗಿದ್ದರು. ಸಾಕಷ್ಟು ಪ್ರಸಿದ್ದಿ ಪಡೆದ ಸಾನ್ಯಾಲ್ ಮತ್ತು ಮಹಾತ್ಮ ಗಾಂಧಿಯವರ ಮಧ್ಯೆ ನಡೆದ ಲೇಖನ ರೂಪದ ಚರ್ಚೆ ೧೯೨೦ ಮತ್ತು ೧೯೨೪ರ ನಡುವೆ ಯಂಗ್ ಇಂಡಿಯಾದಲ್ಲಿ ಪ್ರಕಟವಾಯಿತು. . ಸಾನ್ಯಾಲ್, ಗಾಂಧಿಯವರ ಮಂದಗಾಮಿ ವಿಧಾನದ ವಿರುದ್ಧ ವಾದಿಸಿದ್ದರು. ಸಾನ್ಯಾಲ್ ಅವರು ತನ್ನ ಧೃಢವಾದ ಹಿಂದೂ ನಂಬಿಕೆಗಳಿಗೆ ಹೆಸರುವಾಸಿಯಾಗಿದ್ದರು ಆದರೆ ಅವರ ಹೆಚ್ಚಿನ ಅನುಯಾಯಿಗಳು ಮಾರ್ಕ್ಸ್ ವಾದಿಗಳಾಗಿದ್ದರು ಮತ್ತು ಧರ್ಮಗಳನ್ನು ವಿರೋಧಿಸುತ್ತಿದ್ದವರಾಗಿದ್ದರು. ಭಗತ್ ಸಿಂಗ್ ಅವರು ಸಾನ್ಯಾಲ್ ಅವರ ನಂಬಿಕೆಗಳನ್ನು "ನಾನೇಕೆ ನಾಸ್ತಿಕ" ಎಂಬ ತಮ್ಮ ಪುಸ್ತಕದಲ್ಲಿ ಚರ್ಚಿಸಿದ್ದಾರೆ. ಜೋಗೇಶ್ ಚಂದ್ರ ಚಟರ್ಜಿ, ಸಾನ್ಯಾಲ್ ಅವರ ನಿಕಟ ಸಹವರ್ತಿಯಾಗಿದ್ದರು. ಮಹಾತ್ಮ ಗಾಂಧಿಯವರ ಅಹಿಂಸಾವಾದನ್ನು ಪ್ರತಿಪಾದಿಸುತ್ತಿದ್ದ ಕಾಂಗ್ರೆಸ್ ಪಕ್ಷದ ಪ್ರಮುಖ ನಾಯಕರಾಗಿದ್ದ ಮೌಲಾನಾ ಶೌಕತ್ ಅಲಿ ಬಂದೂಕುಗಳನ್ನು ಪೂರೈಸಿದ್ದರು. ಇನ್ನೊಬ್ಬ ಪ್ರಮುಖ ಕಾಂಗ್ರೆಸ್ಸಿಗ, ಕೃಷ್ಣಕಾಂತ್ ಮಾಳವೀಯ ಕೂಡ ಅವರಿಗೆ ಆಯುಧಗಳನ್ನು ಪೂರೈಸಿದ್ದರು.ದ್ವಿತೀಯ ಬಾರಿಗೆ ಸೆಲ್ಯೂಲಾರ್ ಜೈಲಿನಲ್ಲಿ ಬಂಧಿಯಾಗಿದ್ದ ಸಮಯದಲ್ಲಿ ಸಾನ್ಯಾಲ್ ತೀವ್ರತರವಾದ ಕ್ಷಯ ರೋಗಕ್ಕೆ ತುತ್ತಾದರು. ಅನಾರೋಗ್ಯದ ಕಾರಣ ಇವರನ್ನು ಗೋರಖಪುರ ಜೈಲಿಗೆ ಸ್ಥಳಾಂತರಿಸಲಾಯಿತು. ೧೯೪೨, ಫೆಬ್ರವರಿ ೭ರಂದು ಗೋರಖಪುರದ ಜೈಲಿನಲ್ಲಿಯೇ ಅನಾರೋಗ್ಯದ ಕಾರಣ ಮರಣ ಹೋಂದಿದರು. ಇವರ ವಾರಣಾಸಿಯ ಆಸ್ತಿಯನ್ನು ಬ್ರಿಟೀಷ್ ಸರ್ಕಾರವು ವಶಪಡಿಸಿಕೊಂಡಿತು. ಈ ಭಾರತಾಂಬೆಯ ಪುತ್ರನ ಚಿಕ್ಕ ಮೆಲುಕುತಾಯಿ ಭಾರತಿಯ ಸ್ವಾತಂತ್ರ್ಯಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ವೀರ ಸೇನಾನಿ, ಸ್ವಾತಂತ್ರ್ಯ ಹೋರಾಟದ ಮಹಾನ್ ಕ್ರಾಂತಿಕಾರಿ ಶ್ರೀ ಸಚೀಂದ್ರನಾಥ ಸಾನ್ಯಾಲ್ ಅವರ ಬಲಿದಾನ ದಿನದಂದು ಶತಶತ ನಮನಗಳು.ಬ್ರಿಟಿಷ್ ಆಳ್ವಿಕೆಯಿಂದ ಸ್ವಾತಂತ್ರ್ಯ ಪಡೆಯಲು ಇವರು ಮಾಡಿರುವ ಧೀರ ತ್ಯಾಗ ಹಾಗು ಅವರಿಗಿದ್ದ ರಾಷ್ಟ್ರ ಚಿಂತನೆ, ದೇಶಪ್ರೇಮವನ್ನು ರಾಷ್ಟ್ರವು ಎಂದಿಗೂ ಸ್ಮರಿಸುತ್ತದೆ. ಮುಂದು ಸ್ಮರಿಸಲಿ ಇಂದಿನ ಯುವ ಪೀಳಿಗೆ ಇದನ್ನು ಸ್ಮರಿಸಲಿ ಎನ್ನುತ್ತಾ ನಿಮ್ಮ ಸ್ನೇಹಿತ ಅನಿಲ್ ಮಲ್ನಾಡ್
ಅನಿಲ್ ಮಲ್ನಾಡ್
41.4K ವೀಕ್ಷಿಸಿದ್ದಾರೆ
#🌹 ಹ್ಯಾಪಿ ರೋಸ್ ಡೇ 🌹 ಯಾವುದೇ ಸಂಬಂಧಕ್ಕು "ಪ್ರೀತಿ" ಅತ್ಯಮೂಲ್ಯ, ಏಕೆಂದರೆ ಪ್ರೀತಿಗೆ ಗೊತ್ತಿರುವುದು ಪ್ರೀತಿಸುವುದೊಂದೇ!!! ನಿಮ್ಮ ಮಧುರ ಕ್ಷಣಗಳಿಗೆ ಸಾಕ್ಷಿ ಆಗಲಿದೆ ಪ್ರತಿದಿನದ ವಿಶೇಷ ದಿನದೊಂದಿಗೆ ನ "ವ್ಯಾಲೆಂಟೈನ್ಸ್ ವಿಶೇಷ ವಾರ"ದಲ್ಲಿ. ಸೊ... ಈ ವರ್ಷ ನಿಮ್ಮ "ವ್ಯಾಲೆಂಟೈನ್ಸ್ ಡೇ"ಅನ್ನು ನಿಮ್ಮ ವ್ಯಾಲೆಂಟೈನ್ ಜೊತೆ ಆಚರಿಸಿ.ನನ್ನ ಸ್ನೇಹಿತರೇ ಪ್ರತಿ ದಿನದವಿಶೇಷವನ್ನುನಿಮ್ಮ ಪ್ರೀತಿಗೆ ಹಂಚುವಲ್ಲಿ ಯಶಸ್ಸಿಗೆ ಎನ್ನುವ #ಶುಭೋದಯ #ನಿಮ್ಮ ಸ್ನೇಹಿತ ಅನಿಲ್ ಮಲ್ನಾಡ್
ಅನಿಲ್ ಮಲ್ನಾಡ್
573 ವೀಕ್ಷಿಸಿದ್ದಾರೆ
#🥀🎵ಲತಾ ಮಂಗೇಶ್ಕರ್ ಅವರ ಪುಣ್ಯತಿಥಿ🎶🌸 ಹಿನ್ನೆಲೆ ಗಾಯಕಿ ಸಂಗೀತ ಸಂಯೋಜಕ ಎಂಟು ದಶಕಗಳ ವೃತ್ತಿಜೀವನದಲ್ಲಿ ಭಾರತ ಸಂಗೀತ ಉದ್ಯಮಕ್ಕೆ ಮೇರು ಕೊಡುಗೆ ನೀಡಿದ ಕ್ವೀನ್ ಆಫ್ ಮೆಲೋಡಿ ಎಂದೇ ಕರೆಯಲ್ಪಡುವ ಲತಾ ಮಂಗೇಶ್ಕರ್ ಅವರ ಪುಣ್ಯ ಸ್ಮರಣೆಯ ಗೌರವ ನಮನಗಳನ್ನು ಸಲ್ಲಿಸುತ್ತೇನೆ ನಿಮ್ಮ ಸ್ನೇಹಿತ ಅನಿಲ್ ಮಲ್ನಾಡ್
ಅನಿಲ್ ಮಲ್ನಾಡ್
568 ವೀಕ್ಷಿಸಿದ್ದಾರೆ
#💐ಗುರುವಾರದ ಶುಭಾಶಯಗಳು ಇಂದು ನಮ್ಮ ಪ್ರೀತಿಯ ಕನ್ನಡದ ಕವಿ ಕೆ ಎಸ್ ನಿಸಾರ್ ಅಹಮದ್ ಜನ್ಮದಿನ 'ನಿತ್ಯೋತ್ಸವ ಕವಿ' ಎಂದೇ ಪ್ರಸಿದ್ಧರಾದ ನಿಸಾರ್ ಅಹಮದ್‍ರವರು ನವೋದಯ ಹಾಗೂ ನವ್ಯ ಕಾವ್ಯ ಪರಂಪರೆಗಳಲ್ಲಿ ಉತ್ತಮ ಅಂಶಗಳನ್ನು ಪಡೆದು, ತಮ್ಮ ಕಾವ್ಯಗಳಲ್ಲಿ ಪ್ರಯೋಗಿಸಿ ತಮ್ಮದೇ ಆದ ವೈಶಿಷ್ಟ್ಯವನ್ನು ಬೆಳೆಸಿದ ಶ್ರೇಷ್ಠ ಕವಿಗಳಲ್ಲೊಬ್ಬರಾಗಿದ್ದಾರೆ. ಪದ್ಮಶ್ರೀ ಮತ್ತು ಪಂಪ ಪ್ರಶಸ್ತಿಯಂತಹ ಹಲವಾರು ಪ್ರಶಸ್ತಿ, ಗೌರವಗಳು ನಿಸಾರರನ್ನು ಅಲಂಕರಿಸಿವೆ. ಮಹಾನ್ ನಿತ್ಯೋತ್ಸವ ಕವಿ " ಕೆ ಎಸ್ ನಿಸಾರ್ ಅಹಮದ್ ರವರಿಗೆ ಈ ಜನ್ಮದಿನದಂದು ನಾವೆಲ್ಲರೂ ಅವರನ್ನು ಸ್ಮರಿಸುತ್ತಾ ಅವರಿಗೆ ನಮ್ಮ ಗೌರವ ಸಲ್ಲಿಸೋಣ ಎನ್ನುತ್ತಾ #ನಿಮ್ಮ ಸ್ನೇಹಿತ ಅನಿಲ್ ಮಲ್ನಾಡ್
ಅನಿಲ್ ಮಲ್ನಾಡ್
585 ವೀಕ್ಷಿಸಿದ್ದಾರೆ
#🌏ವಿಶ್ವ ಕ್ಯಾನ್ಸರ್ ದಿನ🏥ಪಂಡಿತ್ ಭೀಮಸೇನ ಜೋಶಿ ಪಂಡಿತ್ ಭೀಮಸೇನ ಜೋಶಿ ಅವರು ಜನಿಸಿದ್ದು 4ನೆ ಫೆಬ್ರವರಿ 1922ರಂದು. ಭೀಮಸೇನ ಜೋಶಿ ಸಂಗೀತಪ್ರಿಯರಿಗೆ ಅಧಿಕ ಸಂಖ್ಯೆಯಲ್ಲಿ ಧ್ವನಿ ಮುದ್ರಿಕೆಗಳನ್ನು ನೀಡಿ ವಿಕ್ರಮ ಸ್ಥಾಪಿಸಿದವರು. ಅವರ ಧ್ವನಿ ಮುದ್ರಿಕೆಗಳು ಎಷ್ಟು ಜನಪ್ರಿಯವೋ ಅವರ ಕಚೇರಿಗಳೂ ಅದಕ್ಕೆ ಸಮಸಮವಾಗಿಯೇ ಜನಪ್ರಿಯವಾಗಿವೆ. ಜೋಶಿಯವರು ತಮ್ಮ ಪ್ರಿಯವಾದ ಪೂರಿಯಾ ರಾಗವನ್ನು ಬಡೇ ಖ್ಯಾಲ್ನಲ್ಲಿ ಹೇಳುವಷ್ಟೇ ಶ್ರದ್ಧೆ ಉತ್ಸಾಹಗಳಿಂದ ಭೈರವ್ನಲ್ಲಿ ಬ್ರಹ್ಮಾನಂದರ ಭಜನೆಗಳನ್ನೂ ಹಾಡುತ್ತಿದ್ದರು. ಪೂರಿಯಾ ರಾಗವನ್ನು ಹಾಡುವಾಗ ಆನಂದದಿಂದ ಭಾವಪರವಶರಾಗುತ್ತಿದ್ದರು. ಸುಮಧುರ ಧ್ವನಿಯ ಅಪೂರ್ವ ಪುಣ್ಯಪಡೆದ ಸಂಗೀತ ದಿಗ್ಗಜಗಳೆನಿಸಿದ ಅಬ್ದುಲ್ ಕರೀಂ ಖಾನ್ ಮತ್ತು ಜೋಶಿಯವರ ಗುರುಗಳಾದ ಸವಾಯಿ ಗಂಧರ್ವರ ನೆನಪು ತಂದುಕೊಡುತ್ತಿದ್ದ ಹಾಡುಗಾರಿಕೆ ಜೋಶಿಯವರದು. ಗುರು ಶಿಷ್ಯರಿಬ್ಬರ ಹಾಡುಗಾರಿಕೆಯಲ್ಲಿ ಕಂಡು ಬರುವ ಒಂದೇ ಒಂದು ವೆತ್ಯಾಸವೆಂದರೆ ಸವಾಯಿ ಗಂಧರ್ವರ ಧ್ವನಿ ಪ್ರಾರಂಭದ ದಿನಗಳಲ್ಲಿ ಸ್ವಲ್ಪ ತೊಂದರೆಗೆ ಒಳಗಾದದ್ದರಿಂದ ಕಚೇರಿಗಳಲ್ಲಿ ಅವರ ಧ್ವನಿ ಕುದುರಿ ಕಾವೇರಲು ಗಂಟೆಗಳ ಕಾಲ ಬೇಕಾದರೆ, ಅವರ ಶಿಷ್ಯನ ಧ್ವನಿ ಕ್ಷಣ ಮಾತ್ರದಲ್ಲಿ “ಸ” ಸ್ವರವನ್ನು ಉಚ್ಚರಿಸುವಷ್ಟರಲ್ಲೇ ಇಡೀ ಸಭೆಯನ್ನು ಚಕಿತಗೊಳಿಸುತ್ತಿತ್ತು. ಜೋಶಿಯವರ ಧ್ವನಿಯ ಪಕ್ವತೆಯೊಂದೇ ಇದಕ್ಕೆ ಕಾರಣವಲ್ಲ. ಅವರ ಹಿಂದಿನ ಉಸ್ತಾದರಾದ ಅಬ್ದುಲ್ ವಾಹಿದ್ ಖಾನ್ ಮತ್ತು ಅಬ್ದುಲ್ ಕರೀಂ ಖಾನರ ಗಾಯನದ ವಿಶಿಷ್ಟ ಲಕ್ಷಣಗಳೆನಿಸಿದ ಧ್ಯಾನ ಮುದ್ರಿತ ಚಿಂತನಶೀಲತೆ, ಆತ್ಮ ಪರಿಶೀಲನೆ, ಇವುಗಳು ಅವರಲ್ಲಿ ಮೇಳೈಸಿದ್ದವು. ಇವುಗಳೆಲ್ಲದರ ಜೊತೆಗೆ ಕಿರಾನಾ ಘರಾಣೆ ಪರಂಪರೆಯಿಂದ ನೇರವಾಗಿ ಬಂದ ಇವರ ಮೇಲೆ ಅದರ ವಿಶೇಷ ಗುಣಲಕ್ಷಣಗಳ ಪ್ರಭಾವವೂ ಆಗಿತ್ತು. ಆ ಘರಾಣೆಯ ಒಂದು ವಿಶಿಷ್ಟ ಲಕ್ಷಣವಾದ ಸ್ವರಗಳನ್ನು ಕ್ರಮವಾಗಿ ಬೆಳೆಸಿ ರಾಗವನ್ನು ವಿಸ್ತರಿಸುವುದರಲ್ಲಿ ಜೋಶಿಯವರಿಗೆ ವಿಶೇಷವಾದ ಆಸ್ಥೆ, ನಂಬಿಕೆ. ಘರಾಣಾಗಳ ಬಗೆಗೂ ಜೋಶಿಯವರದು ಸ್ಪಷ್ಟವಾದ ನಿಲುವು. ಘರಾಣಾಗಳು ಏನಿದ್ದರೂ ನಮ್ಮ ಅನುಕೂಲಕ್ಕೆ, ಸೌಕರ್ಯಕ್ಕೆ. ಗುರುವಿನಿಂದ ನಾವು ಏನನ್ನು ಕಲಿಯುತ್ತೆವೆಯೋ ಅದನ್ನು ನಮ್ಮ ಕಲಾಪ್ರತಿಭೆಯಿಂದ ಹೆಚ್ಚಿಸಿಕೊಳ್ಳಬೇಕು, ಗುರುವಿನ ಬಳಿಯ ಕಲಿಕೆಯ ಜೊತೆಗೆ ಶಿಷ್ಯನ ತನ್ನತನವೂ ಒಂದಾಗದಿದ್ದರೆ ಅವನ ಬಗ್ಗೆ ಹೇಳಿಕೊಳ್ಳುವಂತಹದೇನೂ ಸಂಭವಿಸುವುದಿಲ್ಲ. ಜೋಶಿಯವರ ಕಲಿಕೆ ನಿಂತ ನೀರಲ್ಲ. ಜುಳು ಜುಳು ಹರಿಯುವ ಸಲಿಲದ ಹಾಗೆ. ಅವರ ಸಾಧನೆ ಹತ್ತು ದಿಕ್ಕಿನ ಬೆಳಕು. ಹಲವಾರು ಘರಾಣೆಗಳಲ್ಲಿ ಕಂಡು ಬರುವ ವಿಶೇಷಗಳನ್ನು ಗಮನಿಸಿ ಅವನ್ನು ಮುಕ್ತ ಮನಸ್ಸಿನಿಂದ ಪಡೆದುಕೊಳ್ಳಲು ಅವರ ಹಿಂಜರಿದವರಲ್ಲ. ಶುದ್ಧ ಕಲ್ಯಾಣದಲ್ಲಿನ ಅವರ ಅನೇಕ ತಾನ್ ಮಾದರಿಗಳು ಗ್ವಾಲಿಯರ್ ಘರಾಣಾದ ಕೊಡುಗೆಗಳು. ಅವರು ಆಗ್ರ ಘರಾನಾದ ಶ್ರೇಷ್ಠ ಗಾಯಕರಾದ ವಿಲಾಯತ್ ಖಾನರ ಅನೇಕ ಬೋಲ್ ತಾನ್ ಮತ್ತು ಬೋಲ್ ಆಲಾಪ್ ಮಾದರಿಗಳನ್ನು ತಮ್ಮದಾಗಿಸಿಕೊಂಡರು. ಒಮ್ಮೆ ಅವರು ಒಬ್ಬ ಸಂಗೀತ ವಿಮರ್ಶಕರೊಂದಿಗೆ ಮಾತನಾಡುತ್ತಾ “ಹಲವಾರು ಕಡೆಗಳಿಂದ ಆಯ್ದು ತಂದ ವಸ್ತುಗಳನ್ನು ಕಿರಾನಾ ಘರಾಣೆಯ ಕಾರ್ಖಾನೆಯಲ್ಲಿ ಸಂಸ್ಕರಿಸಿ ಅವಕ್ಕೆ ಒಂದು ಬಗೆಯ ಹೊಸ ಭಾವಾತ್ಮಕ ಹಾಗೂ ಚಿಂತನಶೀಲ ಮೆರುಗನ್ನು ಕೊಟ್ಟಿದ್ದೇನೆ” ಎಂದಿದ್ದಾರೆ. ಈ ದೃಷ್ಟಿಯಿಂದ ಕಿರಾನಾ ಘರಾಣೆಗೆ ಜೋಶಿಯವರ ಕೊಡುಗೆ ದೊಡ್ಡದು. ಮೊದಲಿಗೆ ಕಿರಾನಾ ಘರಾಣಾ ಅನೇಕ ವಿಧವಾದ ಕೊರತೆಗಳಿಂದ ಕೂಡಿದ್ದು ಮಂದ ಪ್ರಕಾಶದಲ್ಲಿತ್ತು. ಜೋಶಿಯವರು ಅದರಲ್ಲಿನ ಕೊರತೆಗಳನ್ನು ಕಂಡುಕೊಂಡು ಅವುಗಳಿಗೆ ಹೊಸ ಆವಿಷ್ಕಾರ ನೀಡಿದರು. ಕಿರಾನಾ ಘರಾಣೆಗೆ ಜೋಶಿಯವರು ನೀಡಿದ ಈ ಹೊಸ ಕಾಯಕಲ್ಪದಿಂದಲೇ ಅವರನ್ನು “ಕಿರಾನಾ ಘರಾಣಾದ ನವ ನಿರ್ಮಾಪಕರು”, “ಕಿರಾನಾ ಘರಾಣಾ ನವ್ಯತೆಯನ್ನು ಮೂಡಿಸಿದ ದಿವ್ಯ ಶಿಲ್ಪಿ" ಇವೇ ಮುಂತಾದ ವಿಶೇಷಣಗಳಿಂದ ಅಭಿಮಾನಿಗಳು, ವಿಮರ್ಶಕರು ಅವರನ್ನು ಸಂಭೋದಿಸಿರುವುದು. ಜೋಶಿಯವರು ಒಂದು ರೀತಿಯಲ್ಲಿ “ತಾನಪ್ರಿಯರು”. ಅಂದರೆ “ತಾನ್”ಗಳ ಬಗೆಗೆ ಅವರಿಗೆ ತುಂಬಾ ಪ್ರೀತಿ. ತಾನ್ಗಳ ನವೀಕರಣದಲ್ಲೂ ಜೋಶಿಯವರದು ಗಮನಾರ್ಹ ಸಾಧನೆ. ಸಾಧನೆ ಅಥವಾ ತಯಾರಿ ಬಗೆಗೂ ಅವರದು ಖಚಿತ ನಿಲುವು. ಆಗ್ರಾ ಮತ್ತು ಪಟಿಯಾಲ ಘರಾಣಾಗಳ ಕೆಲವು ಕಲಾವಿದರು ಹತ್ತಾರು “ತಾನ್”ಗಳನ್ನು ಭರದಿಂದ ತಯಾರು ಮಾಡುವುದರಲ್ಲಿ ಅಗ್ಗಳಿಕೆಯನ್ನು ಪಡೆದಿದ್ದಾರೆ. ಆದರೆ ಮಾರುಕಟ್ಟೆ ಸರಕಿನಂತೆ ಈ ಅಗ್ಗದ ಪ್ರತಿಷ್ಠೆಯ ತಾನ್ಗಳು ಯಾವುದೇ ಮೌಲ್ಯವನ್ನು ಹೊಂದಿರುವುದಿಲ್ಲ. ಆತುರದ ಅಡಿಗೆಯಂತೆ ತಯಾರಿಸಿದ ಈ ತಾನ್ ಗಳಿಗೆ ಒಂದು ಅಂದ, ಚೆಂದ, ಮಾಧುರ್ಯಗಳ ವೈವಿಧ್ಯತೆ ಇದೆಯೆ? ಅದೇ ಜೋಶಿಯವರ ತಾನ್ಗಳಲ್ಲಿ ಹಲವಾರು ರೀತಿಯ ವೈವಿಧ್ಯತೆಯನ್ನು ಕಾಣಬಹುದು. ಇದಕ್ಕೆ ಕಾರಣ ಜೋಶಿಯವರು ತಮ್ಮ ಉಸಿರಿನ ಮೇಲೆ ಹೊಂದಿರುವ ಹತೋಟಿ. ಈ ಒಂದು ಸಿದ್ಧಿ ಶ್ರೋತೃಗಳನ್ನು ಆಕರ್ಷಿಸುವ ಅಸಾಧಾರಣ ಶಕ್ತಿಯಾಗಿದೆ. ಕಚೇರಿಗಳಲ್ಲಿ ಜೋಶಿಯವರು ಗಳಿಸಿದ್ದ ಅಸಾಧಾರಣ ಜನಪ್ರಿಯತೆಗೆ ಅವರು ರೂಢಿಸಿಕೊಂಡಿದ್ದ ಕೆಲವು ಗುಣಗಳೇ ಕಾರಣ. ಸಾಮಾನ್ಯವಾಗಿ ಅವರು ಕಚೇರಿಗಳಿಗೆ ಆರಿಸಿಕೊಳ್ಳುತ್ತಿದ್ದುದು ಸಂಮಿಶ್ರ ರಾಗಗಳು. ಕಂಡವರು ಕರುಬುವಷ್ಟರ ಮಟ್ಟಿಗೆ ಪರಿಪಕ್ವತೆಯನ್ನು ಸಾಧಿಸಿದ್ದ ಈ ಸಂಯೋಜಿತ ರಾಗಗಳ ಆಯ್ಕೆ ಅನನ್ಯವಾದುದು. ಅವರ ಈ ಯಶಸ್ಸಿನ ಒಂದು ಗುಟ್ಟೆಂದರೆ, “ಯಮನ್, ಕಲ್ಯಾಣ್, ಪೂರಿಯ, ಪೂರಿಯಾ ಕಲ್ಯಾಣ್, ಮತ್ತು ಪೂರಿಯ ಧನಶ್ರೀ – ರಾಗಗಳನ್ನು ಹ್ರುದ್ಗತ ಮಾಡಿಕೊಂಡು ಅವುಗಳ ಮೇಲೆ ಅವರು ಪ್ರಭುತ್ವವನ್ನು ಸಂಪಾದಿಸಿದ್ದುದೇ ಆಗಿದೆ”. ಅವರು ಕಾರ್ಯಕ್ರಮ ಸಂಯೋಜನೆಯಲ್ಲೂ ಒಂದು ಹೊಸತನವನ್ನು ಕಾಣಿಸಿದ್ದಾರೆ. ಸಾಮಾನ್ಯವಾಗಿ ಜೋಶಿಯವರು ತಮ್ಮ ಕಾರ್ಯಕ್ರಮಗಳನ್ನು ಯಮನ್ ಕಲ್ಯಾಣ್ ನಿಂದ ಪ್ರಾರಂಭಿಸುತ್ತಿದ್ದರು. “ಏರೀ ಸಖಿ ಕೈಸೆ” ಎಂಬ ನಿಧಾನ ಗತಿಯ ಖ್ಯಾಲ್, ಧ್ವನಿಯ ಏರಿಳಿತಗಳ ಮೇಲೆ ಅವರು ಹೊಂದಿದ್ದ ಹತೋಟಿಗೂ, ತಾಳ ಕೌಶಲದ ನಿರ್ವಹಣೆಗೂ ಸಾಕ್ಷಿಯಾಗಿದೆ. ‘ಜಪ್ ತಾಲ್’ದಲ್ಲಿ ಧ್ವನಿಮುದ್ರಿತವಾಗಿರುವ ಅವರ ಒಂದು ರಚನೆ ಹಿತಮಿತವಾಗಿ ಮೂಡಿ ಬಂದಿರುವ ಅನರ್ಘ್ಯ ರತ್ನ. ತಮ್ಮ ಧ್ವನಿ ನಿರೂಪಣೆಯಲ್ಲಿನ ಒಂದು ಮುಖ್ಯ ಅಂಶವಾಗಿರುವ “ಲಯಕರಿ”ಯ ಮೇಲೆ ಅವರದು ವಿಶ್ವಾಸದ ಅವಲಂಬನೆ. ಸಾಮಾನ್ಯ ಮಟ್ಟದ ಶ್ರೋತೃಗಳ ಮೇಲೆ ಒಂದು ರೀತಿಯ ಸಂಘಟನೆಯನ್ನು ತರಲು ಲತಾಮಂಗೇಶ್ಕರ್ ಅಂತಹ ಗಾಯಕಿ ಹಾಡಿ ಜನಪ್ರಿಯತೆಗೊಳಿಸಿದಂತಹ ಒಂದು ಚೀಸ್, “ಏರಿ ಅಲಿಪಿಯ ಬಿನ್” ಎಂಬ ಧ್ರುತ್. ಕೆಲವು ಹೊಸ ಪ್ರಚೋದಿತ ರಚನೆಗಳಿಗಿಂತ ಜೋಶಿಯವರು ಸಾಂಪ್ರದಾಯಿಕ ರಚನೆಗಳ ಕಡೆಗೆ ಹೆಚ್ಚು ಒಲವು ತೋರಿದ್ದಾರೆ. ಗಾಯಕನಿಗೆ ತಾನು ಹಾಡಲಿರುವ ರಚನೆ ಕೇವಲ ಒಂದು ಊರುಗೋಲು. ತನ್ನ ಕಲಾ ಪ್ರತಿಭೆಯಿಂದ ಆತ ಅದನ್ನು ಅಂದಗೊಳಿಸುವುದಕ್ಕೆ ಇರುವ ಒಂದು ಸಾಧನ ಮಾತ್ರ, ಅದು ಸಾಂಪ್ರದಾಯಿಕ ರಚನೆಗಳಲ್ಲಿ ಗಾಯಕನಿಗೆ ಇರುವ ಈ ಒಂದು ನಯಗಾರಿಕೆ, ಕುಸುರಿ ಕೆಲಸಕ್ಕೆ ಅವಕಾಶವಿದೆ ಎಂದು ಜೋಶಿಯವರ ನಂಬಿಕೆ. ಖ್ಯಾಲ್ ಗಾಯನ, ಸದಾರಂಗ್, ಅದಾರಂಗ್ ಎಂಬುವರಿಂದ ಜನಪ್ರಿಯತೆ ಪಡೆಯಿತು ಎನ್ನುವವರಿದ್ದಾರೆ. ಇವರು ಅನೇಕ ಖ್ಯಾಲ್ಗಳನ್ನು ರಚಿಸಿದ್ದಾರೆ. ಪ್ರಾಸಂಗಿಕವಾಗಿ ಹೇಳಬಹುದಾದರೆ ಜೋಶಿಯವರ ಬಹುಮಟ್ಟಿನ ಧ್ವನಿಮುದ್ರಿಕೆಗಳೆಲ್ಲ ಅದಾರಂಗ್ ಅಥವಾ ಸದಾರಂಗ್ ಅವರಿಂದ ಅನುಕರಿಸಲ್ಪಟ್ಟವು. ಪರಂಪರಾಗತ ರಚನೆಗಳಿದ್ದಾಗ್ಯೂ ಜೋಶಿಯವರ ತೋಡಿ, ಮಾಲಕೌಂಸ್, ಪೂರಿಯಾ ಕಲ್ಯಾಣಿ ಮತ್ತು ದರ್ಬಾರಿಗಳ ನಿರೂಪಣೆಗಳು ಭಾರತೀಯ ಸಂಗೀತದಲ್ಲಿ ಒಂದು ಹೊಸ ಆಯಕಟ್ಟನ್ನು ನೀಡಿವೆ. ಈ ರಾಗಗಳ ನಿವೇದನೆಯಲ್ಲಿ ಜೋಶಿಯವರು ಅಬ್ದುಲ್ ಕರೀಂಖಾನರ ಅನುಕರಣೀಯ ಶೈಲಿಯನ್ನು ಪ್ರತಿನಿಧಿಸಿದ್ದಾರೆ. ಮಿಯಾನ್-ಕಿ-ಮಲ್ಹಾರ್ ರಾಗದ ಧೃತ್, ಖ್ಯಾಲ್ ನ ನಿರೂಪಣೆಯಲ್ಲಿ ಜೋಶಿಯವರು “ಧೂಮ್” ಎಂಬ ಪದದ ಮೂಲಕ ಚಮತ್ಕಾರವಾಗಿ ಸುರಿಯುವ ಮಳೆಯ ಧ್ವನಿಯನ್ನು ಅನುಸರಿಸಿ ಶ್ರೋತೃಗಳಿಗೆ ವಿಜ್ಞಾನದ ಅರಿವನ್ನುಂಟುಮಾಡಿದ್ದಾರೆ. ‘ಜೋಶಿಯವರು ತಮ್ಮ ಕೆಲವು ವಿಶೇಷ ರಚನೆಗಳನ್ನು ಹಾಡಿದಾಗ, ಟೇಪ್ ರಿಕಾರ್ಡರ್ ಜೀವಂತವಾಗಿ ಬಂದು ಹಾಡುತ್ತಿದೆಯೇನೋ ಅನಿಸುತ್ತದೆ.” ಜೋಶಿಯವರ ಸಂಗೀತದಲ್ಲಿ ಒಂದು ರೀತಿಯ ಸೀಮಿತತೆಯನ್ನು ಕಂಡವರು ಕೂಡ “ಜೋಶಿಯವರ ಸಂಗೀತದ ರಸನಿಮಿಷಗಳು ನಿಜಕ್ಕೂ ಅನಿರ್ವಚನೀಯ” ಎಂದು ಮುಕ್ತ ಕಂಠದಿಂದ ಪ್ರಶಂಸಿಸಿದ್ದಾರೆ. ಕನ್ನಡದ ವಿಚಾರಕ್ಕೆ ಬಂದಾಗ ಹಿಂದೂಸ್ಥಾನಿ ಸಂಗೀತದಲ್ಲಿ ದಾಸಶ್ರೆಷ್ಟರ ಹಾಡುಗಳನ್ನು ಭೀಮಸೇನ ಜೋಶಿ ಅವರಷ್ಟು ಹಾಡಿ ಜನಪ್ರಿಯಗೊಳಿಸಿದವರು ಕಡಿಮೆಯೇ ಎಂದರೆ ತಪ್ಪಾಗಲಾರದು. ಅವರ ಒಂದೊಂದು ಕನ್ನಡದ ಭಜನೆಯೂ ಅತ್ಯಂತ ವೈಶಿಷ್ಟ್ಯಪೂರ್ಣವಾಗಿದ್ದು ಹಿಂದೂಸ್ಥಾನಿ ಸಂಗೀತದ ಅರಿವಿಲ್ಲದ ಕರ್ನಾಟಕ ಸಂಗೀತದ ಅಭಿಮಾನಿಗಳನ್ನೂ ಮತ್ತು ಯಾವುದೇ ಶಾಸ್ತ್ರೀಯ ಸಂಗೀತದ ಅರಿವಿಲ್ಲದ ಲಘು ಸಂಗೀತ ಆಸಕ್ತರನ್ನು ಹಿಂದೂಸ್ಥಾನಿ ಸಂಗೀತದ ಬಾಗಿಲಿಗೆ ಕರೆತರುವಲ್ಲಿ ಸಾಕಷ್ಟು ಮೋಡಿ ಹಾಕಿದೆ. ಅವರ ಗಾಯನದಲ್ಲಿ ಮೂಡಿ ಬಂದ “ಭಾಗ್ಯದ ಲಕ್ಷ್ಮಿ ಬಾರಮ್ಮ”, “ಕನ್ನಡತಿ ತಾಯೆ ಬಾ”, “ನಂಬಿದೆ ನಿನ್ನ ನಾದ ದೇವತೆಯೆ”, “ಈ ಪರಿಯ ಸೊಬಗು ಇನ್ಯಾವ ದೇವರಲಿ ಕಾಣೆ” ಗೀತೆಗಳು ಈ ನಾಡಿನ ಪ್ರತಿ ಚಿತ್ರಗೀತೆಗಳ ಆಸಕ್ತನ ಹೃದಯಲ್ಲೂ ಸ್ಥಿರವಾಗಿ ನೆಲೆ ನಿಂತಿವೆ. ಅವರ “ದೇವ ಬಂದ ನಮ್ಮ ಸ್ವಾಮಿ ಬಂದಾನೋ”, “ತೇಲಿಸೋ ಇಲ್ಲ ಮುಳುಗಿಸೋ”, “ಕರುಣಾಕರ ನೀ ಎಂಬುವುದ್ಯಾತಕೋ”, “ತಪ್ಪು ನೋಡದೆ ಬಂದೆಯಾ, ಎನ್ನಯ ತಂದೆ”, “ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು” ಇವು ಈ ಕ್ಷಣದಲ್ಲಿ ಮೂಡುವ ಕೆಲವು ಸುಮಧುರ ನೆನಪುಗಳು. ಅವರ ಪ್ರತಿಯೊಂದು ಗೀತೆಯೂ ಹೊಸ ಅನುಭವ. ಹೃದಯಾಂತರಾಳದಲ್ಲಿ ಅಮರ. ಎಲ್ಲ ಬದುಕಿಗೂ ಒಂದು ಕೊನೆ ಇದೆ. ಸಂಗೀತ ರತ್ನ, ಭಾರತ ರತ್ನ ಪಂಡಿತ ಭೀಮಸೇನ ಜೋಶಿಯವರು ಜನವರಿ 24, 2011ರಂದು ಈ ಲೋಕವನ್ನಗಲಿ ಮತ್ತೊಂದು ದಿವ್ಯಲೋಕವನ್ನು ಪ್ರವೇಶಿಸಿದ್ದಾರೆ. ಅವರು ಸೃಷ್ಟಿಸಿದ ಸಂಗೀತ ಲೋಕದಲ್ಲಿ ಅವರೆಂದಿಗೂ ಚಿರಸ್ಥಾಯಿಗಳು. ಆ ಸಾಮ್ರಾಜ್ಯದ ನಂದನವನದಲ್ಲಿ ವಿಹರಿಸುವ ಸೌಭಾಗ್ಯವನ್ನು ನಮಗೆಲ್ಲ ನೀಡಿ ಹೋಗಿದ್ದಾರೆ.” #🎂ಪಂಡಿತ ಭೀಮಸೇನ ಜೋಷಿ ಹುಟ್ಟುಹಬ್ಬ ಈ ಸವಿನೆನಪಿನಲ್ಲಿ ನಾವು ಅವರನ್ನೊಮ್ಮೆ ಸ್ಮರಿಸೋಣ #ನಿಮ್ಮ ಸ್ನೇಹಿತ ಅನಿಲ್ ಮಲ್ನಾಡ್
See other profiles for amazing content