ಫಾಲೋ
Ram Ajekar
@ajekarram
1,389
ಪೋಸ್ಟ್ಸ್
1,814
ಫಾಲೋವರ್ಸ್
Ram Ajekar
1.1K ವೀಕ್ಷಿಸಿದ್ದಾರೆ
7 ಗಂಟೆಗಳ ಹಿಂದೆ
#🌸🙏ವಿನಾಯಕ ಚತುರ್ಥಿ🙏🌸 ಒಂದು ಮಳೆಯ ಕಥೆ ನಾನೊಬ್ಬ ರೈತ. ತುಳುನಾಡಿನ ಹಳ್ಳಿಯ ಮಣ್ಣೇ ನನ್ನ ಬದುಕು, ಬೆವರು ನನ್ನ ಸಂಪತ್ತು, ಸಂಸ್ಕೃತಿಯೇ ನಮ್ಮ ಸಂತೋಷ. ಬೇಸಿಗೆ ಬಿಸಿಯು ಕರಗಿದಾಗ, ಮುಂಗಾರು ಮೋಡಗಳು ಕಣ್ಣಿಗೆ ಬೀಳುತ್ತವೆ ಆಗ ಭೂಮಿಗೂ ನಮ್ಮ ಮನಸ್ಸಿಗೂ ತಂಪು. ಗದ್ದೆ ನಾಟಿಗೆ ಕೈಹಾಕಿದಾಗ ಪಾಡ್ದನಗಳ ನಾದ ಕೇಳಿಬರುತ್ತದೆ. ಕೈಯಲ್ಲಿ ನೀರು ಹಾರಿಸಿ ನಾವೆಲ್ಲ ಖುಷಿಯಿಂದ ನಗುತ್ತೇವೆ ಇದು ನಮ್ಮ ಹಳ್ಳಿಯ ಹಬ್ಬ, ನಮ್ಮ ಜೀವದ ಉತ್ಸವ. ಆದರೆ ಪ್ರಕೃತಿಯ ಚಿತ್ತ ಯಾರಿಗೂ ಅರ್ಥವಾಗದು. ಒಂದು ದಿನ ಮಧ್ಯಾಹ್ನ ಮೂರು ಗಂಟೆ, ಆಕಾಶ ಕತ್ತಲಾಗಿ ಗುಡ್ಡದ ಮೇಲೆ ಸಿಡಿಲು ಬಡಿದಿತು. ಕ್ಷಣಕ್ಕೊಂದು ನಿಶ್ಶಬ್ದ, ನಂತರ ಅಸಹ್ಯ ಮಳೆಯ ಅಬ್ಬರ. ತೋಡುಗಳು ಉಕ್ಕಿ ಹರಿದು, ತಮ್ಮ ಹಾದಿಯನ್ನೇ ಬದಲಿಸಿದವು. ಮನೆಯಲ್ಲಿ ನಿಲ್ಲಿಸಿದ್ದ ಕಾರು ಐನೂರು ಮೀಟರ್ ದೂರಕ್ಕೆ ಕೊಚ್ಚಿಹೋಯಿತು. ಆ ಧಾರಾಕಾರ ಮಳೆಯಲ್ಲಿ ಅಜ್ಜಿಯೊಬ್ಬಳು ಹೊರಗೆ ಹೋಗಿ ಮರದ ದಿಮ್ಮಿಗೆ ಸಿಕ್ಕಿ ಜೀವ ಕಳೆದುಕೊಂಡರು. ಹತ್ತಕ್ಕೂ ಹೆಚ್ಚು ಮನೆಗಳು ಧರೆಗುರುಳಿದವು, ಹಲವು ದನಗಳು ಕಾಣೆಯಾಗಿದವು. ತುಳುನಾಡಿನ ಜನರು ಹೇಳಿದ್ರು “ಇದು ಸಾಮಾನ್ಯ ಮಳೆ ಅಲ್ಲ, ಮೇಘಸ್ಫೋಟ.”ಈ ಘಟನೆ ನಮಗೊಂದು‌ಮೊದಲ ಅನುಭವ ದ ಪಾಠವಾಗಿತ್ತು. ನಾವೆಲ್ಲ ಮಳೆ ಎಂದರೆ ನಮ್ಮ ಖುಷಿಪಟ್ಟವರು, ಖುಷಿಪಡುವ ಪ್ರವೃತ್ತಿಯವರು, ಆದರೆ ಆ ಮಳೆ ನೋವಿನ ನೆನಪಾಗಿ ಉಳಿಯಿತು. ಭೂಮಿಯ ತಾಯಿ ತೇವಗೊಂಡರೂ, ನಮ್ಮ ಮನಸ್ಸುಗಳು ಆ ದಿನ ಮಂಕಾದವು. ಆದರೂ, ನಾವು ರೈತರು ನಾಳೆಯ ನಂಬಿಕೆಯಿಂದ ಮತ್ತೆ ಗದ್ದೆ ಹತ್ತುತ್ತೇವೆ ಏಕೆಂದರೆ ಮಣ್ಣು ನಮ್ಮ ದೇವರು, ಮಳೆ ನಮ್ಮ ಜೀವನ. ರಾಂ ಅಜೆಕಾರು ಕಾರ್ಕಳ http://ramajekar.travel.blog/2025/10/25/daily-stories-19/ #ಶನಿವಾರ #ಶುಭ ಶನಿವಾರ #ಶುಭ ಶನಿವಾರ #ಶುಭ ಶನಿವಾರ #TulunadRainVibes #UdupiMonsoonMagic #TulunadMalgale #RainyTulunadu #UdupiMossMood #TuluLandShowers #MonsoonInTulunadu #CoastalRainCharm #UdupiRainDiaries #TulunaduWeatherWhispers
Ram Ajekar
635 ವೀಕ್ಷಿಸಿದ್ದಾರೆ
3 ದಿನಗಳ ಹಿಂದೆ
#📢ದೀಪಾವಳಿ ಗಿಫ್ಟ್ : ಗೃಹ ಲಕ್ಷ್ಮಿಫಲಾನುಭವಿಗಳಿಗೆ 6000 ರೂಪಾಯಿ 🤩 ತುಳುನಾಡಿನ ದೀಪಾವಳಿಯ ಮೂರನೇ ದಿನದ ಸಂಭ್ರಮ ಸಂಸ್ಕೃತಿ, ಸಂಪ್ರದಾಯ ಮತ್ತು ಮಾಂಕಾಳಿ ನೃತ್ಯ ತುಳುನಾಡಿನ ಸಂಸ್ಕೃತಿ ವೈವಿಧ್ಯಮಯವಾದದ್ದು. ಇಲ್ಲಿಯ ಆಚರಣೆಗಳು ಪ್ರತಿ ನದಿ ತೀರ, ಪ್ರತಿ ಊರಿನಲ್ಲಿ ಸ್ವಲ್ಪ ಸ್ವಲ್ಪ ಬದಲಾಗುತ್ತವೆ. ಆದರೆ ಎಲ್ಲೆಡೆ ಕಾಣಿಸಿಕೊಳ್ಳುವ ಸಂಸ್ಕೃತಿಯ ಸುವಾಸನೆ ಒಂದೇ — ಪರಂಪರೆಯ ಗೌರವ ಮತ್ತು ಭಕ್ತಿಯ ನಿಷ್ಠೆ. ದೀಪಾವಳಿಯ ಅಮಾವಾಸ್ಯೆಯಂದು ಹಲವೆಡೆ “ಸಯಿತಿನಕ್ಲೆನೆ ಪರ್ಬ” (ಅಂದರೆ ಪೂರ್ವಜರ ಸ್ಮರಣೆಯ ಹಬ್ಬ) ಆಚರಣೆ ಮಾಡುತ್ತಾರೆ. ಕರಾವಳಿ ಪ್ರದೇಶವಾಗಿರುವುದರಿಂದ ತುಳುನಾಡಿನಲ್ಲಿ ಮೀನುಗಾರಿಕೆ ಜೀವನದ ಅವಿಭಾಜ್ಯ ಭಾಗವಾಗಿದೆ. ಈ ದಿನ ಮನೆಗಳಲ್ಲಿ ಪಲ್ಯ, ಒಣಮೀನು ಚಟ್ನಿ, ಮೀನಿನ ಸಾರು, ಕುಚ್ಚಲಕ್ಕಿ ಅನ್ನ ಸೇರಿದಂತೆ ವಿವಿಧ ವಿಧದ ಅಡುಗೆಗಳು ತಯಾರಾಗುತ್ತವೆ. ನಂತರ ಅಗೆಲಿಗೆ ಬಡಿಸಿ ಪ್ರಾರ್ಥನೆ ಸಲ್ಲಿಸಿ, ಕುಟುಂಬದವರು ಊಟ ಮಾಡುತ್ತಾರೆ. ಗುತ್ತಿನ ಮನೆಗಳಲ್ಲಿ ಈ ದಿನ ಮಾಂಕಾಳಿ ನೃತ್ಯ ನಡೆಯುವುದು ವಿಶಿಷ್ಟ ಪರಂಪರೆ. ಕಾರ್ಕಳ ಹಾಗು ಹೆಬ್ರಿ ತಾಲುಕಿನ ಕೆಲವು ಭಾಗಗಳಲ್ಲಿ‌ಮಾತ್ರ ಕಾಣಸಿಗುತ್ತದೆ. ಮಾಂಕಾಳಿ ನೃತ್ಯಗಾರರು ಮನೆ ಮನೆಗೆ ತೆರಳಿ ನೃತ್ಯ ಪ್ರದರ್ಶಿಸುತ್ತಾರೆ. ಅವರನ್ನು ಸ್ವಾಗತಿಸುವಾಗ ತಟ್ಟೆಯ (ತಡಪೆ) ಮೇಲೆ ಅಕ್ಕಿ ಅಥವಾ ಭತ್ತ, ಮೆಣಸು, ಉಪ್ಪು, ವಿಳ್ಯದೆಲೆ, ಅಡಿಕೆ, ತೆಂಗಿನಕಾಯಿ ಹಾಗೂ ಅಡಿಗೆಯ ಸಾಮಾಗ್ರಿಗಳನ್ನು ಇಟ್ಟು ಕೊಡುತ್ತಾರೆ. ಮಾಂಕಾಳಿ ಮುಖವಾಡವು ಕಣ್ಣು, ಮೂಗು, ತೆರೆದ ಬಾಯಿ ಮತ್ತು ಚಾಚಿದ ನಾಲಿಗೆಯೊಂದಿಗೆ ಬಿಳಿ, ಹಳದಿ, ಕಪ್ಪು, ಹಸಿರು ಹಾಗೂ ಕೆಂಪು ಬಣ್ಣಗಳಿಂದ ಅಲಂಕರಿಸಲ್ಪಟ್ಟಿರುತ್ತದೆ. ಪಾರ್ದನದ ಹಾಡುಗಳು ತೆಂಬರೆ (ತಂತಿ ವಾದ್ಯ) ನಾದದೊಂದಿಗೆ ಹಾಡಲ್ಪಡುತ್ತವೆ. ತೆಂಬರೆಯ ತಾಳಕ್ಕೆ ಅನುಗುಣವಾಗಿ ನೃತ್ಯಗಾರನು ಸಣ್ಣ ಹೆಜ್ಜೆಗಳನ್ನು ಹಾಕುತ್ತಾ ಸುತ್ತುತ್ತಾ ನರ್ತಿಸುತ್ತಾನೆ. ದೀಪಾವಳಿಯ ಸಂದರ್ಭದಲ್ಲಿಯೇ ಇನ್ನೊಂದು ವಿಶಿಷ್ಟ ಆಚರಣೆ ಎಂದರೆ ಕೋಳಿ ಅಂಕ. ಇದು ಸ್ಥಳೀಯ ಕೋಳಿ ಪೈಲ್ವಾನರ ನಡುವೆ ನಡೆಯುವ ಕೋಳಿ ಹೋರಾಟ. ಅಧಿಕೃತವಾಗಿ ಇಲಾಖೆಯಿಂದ ಕೋಳಿ ಅಂಕ ನಿಷೇಧಿಸಲ್ಪಟ್ಟಿದ್ದರೂ, ಕೆಲವು ಕಾಡು ಹಾಗೂ ಹೊಲ ಪ್ರದೇಶಗಳಲ್ಲಿ ಇಂದಿಗೂ ರಹಸ್ಯವಾಗಿ ನಡೆಯುವುದುಂಟು. ಗೆದ್ದ ಕೋಳಿಯನ್ನು ಬಂಟ ಕೋಳಿ ಎಂದು, ಸೋತು ಸತ್ತ ಕೋಳಿಯನ್ನು ಒಟ್ಟೆ ಕೋಳಿ ಎಂದು ಕರೆಯುತ್ತಾರೆ. ಸೋತ ಕೋಳಿಯನ್ನು ಬಾಜಿ ಕಟ್ಟಿದ ನಂತರ ಗೆದ್ದ ಕೋಳಿಯ ಮಾಲೀಕರು ತಮ್ಮ ಮನೆಗೆ ತೆಗೆದುಕೊಂಡು ಹೋಗಿ ಬಾಣಲೆಯಲ್ಲಿ ಬೇಯಿಸಿ ಸಣ್ಣ ಪಾರ್ಟಿ ನಡೆಸುವ ಪರಂಪರೆಯೂ ಇದೆ.. ರಾಂ ಅಜೆಕಾರು ಕಾರ್ಕಳ https://wp.me/pcXa3R-4p #🪕✨ದೀಪಾವಳಿಯ ಟ್ರೆಂಡಿಂಗ್ ಹಾಡುಗಳು 🎶 #ಸ್ಪೂರ್ತಿ ದಾಯಕ ಮಾತು ಗಳು👌👍 #💐ಗುರುವಾರದ ಶುಭಾಶಯಗಳು #ಶುಭ ಬುಧವಾರ
Ram Ajekar
3.3K ವೀಕ್ಷಿಸಿದ್ದಾರೆ
5 ದಿನಗಳ ಹಿಂದೆ
#🪕✨ದೀಪಾವಳಿಯ ಟ್ರೆಂಡಿಂಗ್ ಹಾಡುಗಳು 🎶 ಪಾತ್ರೆಗಳಿಗೂ ನೀರಿನ ಹಂಡೆಗೂ ದೇವರ ಭಾವ ತುಂಬಿರುವುದು ತುಳುನಾಡಿನ ಸಂಸ್ಕೃತಿಯ ವಿಶಿಷ್ಟತೆ. ಕರಾವಳಿಯ ತುಳುನಾಡಿನಲ್ಲಿ ದೀಪಾವಳಿ ಹಬ್ಬದ ಸಂಭ್ರಮಕ್ಕೆ ಇಂದು ಅಧಿಕೃತ ಚಾಲನೆ ದೊರೆತಿದೆ. ಪರಂಪರೆ, ಭಕ್ತಿ ಮತ್ತು ಕುಟುಂಬ ಒಗ್ಗಟ್ಟಿನ ಸುಗಂಧ ತುಂಬಿದ ಈ ಹಬ್ಬದ ಆರಂಭವಾಗಿದ್ದು *ಲನೀರು ತುಂಬುವ ಹಬ್ಬ"ಲದ ಆಚರಣೆಯಿಂದ. ಲಲ. ಮನೆಯ ಅಂಗಳವನ್ನು ಶುದ್ಧಗೊಳಿಸಿ, ಸ್ನಾನಕ್ಕೆ ಬಳಸುವ ಹಂಡಗಳು, ಕೊಡಪಾನಗಳು ಹಾಗೂ ಪಾತ್ರೆಗಳು ಅಲಂಕರಿಸಲ್ಪಡುತ್ತವೆ. ಬಳಿಕ ಮನೆಯ ಬಾವಿಯಿಂದ ನೀರು ಸೇದುತ್ತಾ, ಮೊದಲು ಬಾವಿಗೆ ಪೂಜೆ ಸಲ್ಲಿಸುತ್ತಾರೆ ಜೀವದ ಮೂಲವಾದ ನೀರಿಗೆ ಕೃತಜ್ಞತೆ ಸಲ್ಲಿಸುವ ಈ ಸಂಪ್ರದಾಯ ಪೀಳಿಗೆಯಿಂದ ಪೀಳಿಗೆ ಸಾಗುತ್ತಿದೆ. ನೀರು ತರಲು ಹೊರಟಾಗ ಭಜನೆ ಹಾಗೂ ಜಾಗಟೆ ವಾತಾವರಣ ಭಕ್ತಿಯ ನಾದದಿಂದ ತುಂಬಿ ಹೋಗುತ್ತದೆ. ಪೂಜೆಯೊಡನೆ ನೀರನ್ನು ಹೊತ್ತು ತಂದು ನೀರಿನ ಹಂಡೆಗೆ ಸುರಿಸುವ ಪದ್ದತಿಯನ್ನು ಅತ್ಯಂತ ಭಕ್ತಿಭಾವದಿಂದ ನೆರವೇರಿಸಲಾಗುತ್ತದೆ. ನೀರಿನ ಪಾತ್ರೆಗಳು ಹಂಡೆಗಳು ಕೂಡ ದೇವರಾಗುತ್ತವೆ ಎಂದರು ತಪ್ಪಲ್ಲ. ಇದರಿಂದ ಮನೆಯಲ್ಲಿ ಶುದ್ಧತೆ, ಶಾಂತಿ ಮತ್ತು ಆನಂದ ನೆಲೆಸುತ್ತದೆ ಎಂಬ ನಂಬಿಕೆ ಇದೆ. ಬಳಿಕ ಸೋಮವಾರದ ನರಕ ಚತುರ್ದಶಿ ಹಿನ್ನೆಲೆಯಲ್ಲಿ ಅಭ್ಯಂಗ ಸ್ನಾನದ ಆಚರಣೆಯೂ ನಡೆಯಲಿದೆ. ಈ ಸಂದರ್ಭದಲ್ಲಿ ದೇಹಕ್ಕೆ ಹಳದಿ ಮತ್ತು ತೆಂಗಿನ ಎಣ್ಣೆ ಹಚ್ಚಿ ಶುದ್ಧ ಸ್ನಾನ ಮಾಡುವ ಪರಂಪರೆ ಇಂದಿಗೂ ಇದೆ.., ಸಂಸ್ಕೃತಿಯ ಕಳೆಗೂ ಬೆಳಕು ಹರಿಯುತ್ತದೆ. ಹಳ್ಳಿಹಳ್ಳಿಗಳಲ್ಲಿ ಈ ಹೊತ್ತಿನಲ್ಲೇ ಮಾಂಕಾಳಿ ನೃತ್ಯ, ಪರಿಯು ನೃತ್ಯಗಳು ಸೇರಿದಂತೆ ನೂರಾರು ಜನಪದ ರೂಪಗಳು ಪುನಃ ಜೀವಂತವಾಗುತ್ತವೆ. ದೀಪಾವಳಿ ಹಬ್ಬ ಸದಾ ಖುಷಿಯ ತರಲಿ .. ರಾಂ ಅಜೆಕಾರು ಕಾರ್ಕಳ http://ramajekar.travel.blog/2025/10/19/daily-stories-16/
Ram Ajekar
565 ವೀಕ್ಷಿಸಿದ್ದಾರೆ
9 ದಿನಗಳ ಹಿಂದೆ
#💐ಗುರುವಾರದ ಶುಭಾಶಯಗಳು ತೆರೆಮರೆಯ ಕಂಬಳ ಸಾಧಕರ ಕಥೆ ಅದೊಂದು ಗ್ರಾಮೀಣ ಪ್ರದೇಶದಲ್ಲಿ ನಡೆಯುವ ಕಂಬಳ ರಾಜ್ಯದಲ್ಲೇ ಅತ್ಯುತ್ತಮ ಸೌಲಭ್ಯಗಳನ್ನು ಹೊಂದಿರುವ ಕಂಬಳವೆಂದರೆ ಮಿಯ್ಯಾರಿನ ಲವಕುಶ ಕಂಬಳ. ಈ ಕಂಬಳ ಆಧುನಿಕ ಕಂಬಳಗಳಲ್ಲಿ ಅಗ್ರಗಣ್ಯವಾಗಿದ್ದು, ಅನೇಕ ದಾಖಲೆಗಳನ್ನು ತನ್ನ ಹೆಸರಿಗೆ ಬರೆದಿದೆ. ಸುಮಾರು 290 ಕ್ಕೂ ಹೆಚ್ಚು ಕಂಬಳ ಕೋಣಗಳು ಒಂದೇ ಕಂಬಳದಲ್ಲಿ ಭಾಗವಹಿಸಿದ್ದವು ಎಂಬ ದಾಖಲೆ ಇದೇ ಕಂಬಳದ ಹೆಮ್ಮೆ. ಸುಮಾರು11 ವರ್ಷಗಳ ಹಿಂದಿನ ಮಿಯ್ಯಾರು ಕಂಬಳದ ನೆನಪುಗಳು ಇಂದಿಗೂ ಜನರ ಮನದಲ್ಲಿ ತಾಜಾ. ಆ ವೇಳೆಯಲ್ಲಿ ಇಬ್ಬರು ಚಿಕ್ಕ ಮಕ್ಕಳು ಕಂಬಳ ಕರೆಯಲ್ಲಿ ಓಟಕ್ಕೆ ಇಳಿದಿದ್ದರು. ಅವರ ಹೃದಯದಲ್ಲಿ ಒಂದೇ ಕನಸು “ನಾವು ಕಂಬಳದ ಉಸೇನ್ ಬೋಲ್ಟ್ ಆಗಬೇಕು, ಕಂಬಳದ ಶ್ರೀನಿವಾಸ ಗೌಡನಂತೆ ವೇಗದ ದಾಖಲೆ ಬರೆಯಬೇಕು.” ಎಂಬುದು ಅವರಲ್ಲಿತ್ತು. ಕಂಬಳ ನೋಡುತ್ತಾ ಅದರ ಅರೈಕೆಯ ಮಾಡುವವರು, ಅವರು ಕೋಣಗಳ ನಿಜವಾದ ಗೆಳೆಯರು. ಕೋಣಗಳಿಗೆ ನೀರು ತರುವುದು, ಮೈಮೇಲೆ ನೀರು ಎರಚುವುದು, ಮಲಗಿದಾಗ ಅದರ ದೇಹಕ್ಕೆ ಮೈ ತುರಿಸುವುದು, ಇವೆಲ್ಲವೂ ಅವರ ಜೀವನದ ಭಾಗವಾಗಿದ್ದವು. ಅವರ ಬಾಲ್ಯದ ಆ ಸಣ್ಣಪುಟ್ಟ ಕ್ಷಣಗಳೇ ಮುಂದೆ ಕಂಬಳ ಸಂಸ್ಕೃತಿಯ ದೊಡ್ಡ ಪ್ರೇರಣೆಯಾಗಿದವು. ಕಂಬಳದ ಓಟ ಪ್ರಾರಂಭವಾದಾಗ ಬಾಲಕರಿಗೆ ಗದ್ದೆಗೆ ಇಳಿಯಲು ಅವಕಾಶ ಇರಲಿಲ್ಲ. ಯಾಕೆಂದರೆ ಕಂಬಳ ಕೋಣಗಳ ವೇಗ ಕ್ಷಣಗಳಲ್ಲಿ ಗೆಲುವು ನಿರ್ಧರಿಸುವಂಥದ್ದು. ಆದರೆ ಸ್ಪರ್ಧೆ ಮುಗಿದ ಬಳಿಕ ವಿಜೇತರಿಗೆ ಬಹುಮಾನ ವಿತರಣೆ ನಡೆಯುತ್ತಿದ್ದಾಗ, ಆ ಇಬ್ಬರು ಮಕ್ಕಳು ತಮ್ಮ ಯಜಮಾನರ ಹಾಗೂ ಆಯೋಜಕರ ಅನುಮತಿಯಿಂದ ಗದ್ದೆಗೆ ಇಳಿದರು. ಅದು ಅವರಿಗೊಂದು ಕನಸಿನ ಕ್ಷಣ ಮೊದಲ ಬಾರಿಗೆ ಕಂಬಳದ ಗದ್ದೆಯ ಮಣ್ಣನ್ನು ಪಾದಗಳಿಂದ ಅನುಭವಿಸಿದ ಸಂತೋಷ. ಅವರಲ್ಲಿತ್ತು ಶಾಲೆಯಿಂದ ವಾಪಸ್ಸಾದ ತಕ್ಷಣ ಹತ್ತಿರದ ಮನೆಯ ಕಂಬಳ ಕೋಣಗಳತ್ತ ಓಡಿ ಹೋಗುವುದು, ಅವುಗಳನ್ನು ಈಜುಕೊಳದಲ್ಲಿ ಸ್ನಾನ ಮಾಡಿಸುವುದು, ಆಹಾರ ನೀಡುವುದು ಈ ಎಲ್ಲವೂ ಅವರ ಪ್ರೀತಿಯ ಕಾಯಕ. ಕೋಣಗಳೊಂದಿಗೆ ಅವರು ಬೆಳೆಯುತ್ತಿದ್ದರೆಂದರೆ ತಪ್ಪಾಗದು. ಆದರೆ ಅದರ ಮಧ್ಯೆಯೂ ಓದನ್ನು ಕಡೆಗಣಿಸಲಿಲ್ಲ. ಇಬ್ಬರೂ ಹತ್ತನೇ ತರಗತಿಯ ಪರೀಕ್ಷೆಯಲ್ಲಿ ತಮ್ಮ ಊರಿನಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಗಳಿಸಿದರು. ದ್ವಿತಿಯ ಪಿಯುಸಿ ಯಲ್ಲೂ ಇಬ್ಬರು ಅಗ್ರಗಣ್ಯರಾದರು, ಜೊತೆಗೆ ಇಬ್ಬರಿಗು ಸಾಪ್ಟ್ವೆರ್ ಇಂಜಿನಿಯರ್ ಆಗಿ ಕೆಲಸವು ದಕ್ಕಿತು ವರ್ಷಕ್ಕೆ 8 ಲಕ್ಷದ ಪ್ಯಾಕೆಜ್ ಒಂದೆ ಕಂಪೆನಿಯಲ್ಲಿ ಉದ್ಯೋಗ . ಆದರೆ ಶನಿವಾರ ರವಿವಾರ ಕಂಬಳ‌ನಡೆಯುವ ಕಾರಣ ಬೆಂಗಳೂರಿನಿಂದ ಬಸ್ ಹತ್ತಿ ಊರಿಗೆ ಬರುತಿದ್ದಾರೆ . ಖುಷಿಯಲ್ಲು ಉತ್ತಮ ಬಂಧವಿದೆ ಸಂಸ್ಕೃತಿಯ ಸೆಳೆತವಿದೆ. ದಿಗಂತ್ ಹಾಗು ರಾಕೇಶ್ ಈ‌ ಯುವಕರು ಈ ಸ್ಪೂರ್ತಿಯ ಸಾಧಕರು ಮಿಯ್ಯಾರು ಲವಕುಶ ಕಂಬಳ ಹಿಂದಿನ ಕಥೆ . ಕಷ್ಟಪಟ್ಟು ದುಡಿದರೆ ಸಾಧನೆ ಸಾಧ್ಯ, ಸಂಸ್ಕೃತಿಯನ್ನು ಕಾಪಾಡಿದರೆ ಗೌರವ ಶಾಶ್ವತ ಈ ಇಬ್ಬರು ವಿದ್ಯಾರ್ಥಿಗಳ ಕಥೆಯೇ ಅದಕ್ಕೆ ಜೀವಂತ ಸಾಕ್ಷಿ. ರಾಂ ಅಜೆಕಾರು ಕಾರ್ಕಳ http://ramajekar.travel.blog/2025/10/16/daily-stories-14/ #ಶುಭ ಗುರುವಾರ #ಶುಭ ಗುರುವಾರ #ಶುಭ ಗುರುವಾರ #KantaraKambala #TulunadSpirit #RishabShettyMagic #KantaraLegacy #TulunadCulture #KambalaChronicles #DivineKantara #SpiritOfTulunad #DaivaAndNature #RishabShettyVibes #KantaraReturns #TulunadPride #KambalaFever #RishabShettyUniverse #KantaraCulture #TulunadTradition #RuralRoyalty #DaivaBelaku #KantaraSaga #TulunadDaiva #RishabShettyRising #TulunadKambala #KantaraRoar #TulunadHeritage #DivineLegacy #KantaraGlory #TulunadCinema #KantaraRevolution #SpiritOfDaiva #RishabShettyKantara
Ram Ajekar
565 ವೀಕ್ಷಿಸಿದ್ದಾರೆ
10 ದಿನಗಳ ಹಿಂದೆ
#💐ಬುಧವಾರದ ಶುಭಾಶಯ ಎಳೆ ಮಾವಿನ ಕಾಯಿಯ ಕಥೆ.., ಇನ್ನೂ ನಾಲ್ಕು ತಿಂಗಳು ಬಾಕಿಯಿದೆ ಚಳಿ ಬಂದರೆ ಹಣ್ಣುಗಳ ಋತುವಿಗೆ ರುಜು ಬರೆದಂತೆ, ಇಲ್ಲದಿದ್ದರೆ ಬರಗಾಲ ಹೆಚ್ಚು ಎಂಬುದು ಸ್ತಳಿಯರ ನಂಬಿಕೆ ಕಳೆದ ವರ್ಷ ಚಳಿ ಇರಲಿಲ್ಲ, ಆದ್ದರಿಂದ ಮಾವಿನ ರುತು ತಡವಾಗಿ ಆರಂಭವಾಗಿತ್ತು. ಕರಾವಳಿ ಪ್ರದೇಶದಲ್ಲಿ ಮಾವಿನಕಾಯಿ ಗೇರುಹಣ್ಣು ಹಣ್ಣು ಬೆಳೆಯಲು ಚಳಿ ಅತ್ಯಂತ ಮುಖ್ಯ. ಚಳಿ ಇಲ್ಲದಿದ್ದರೆ ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳು ಹಣ್ಣಿನ ಇಳುವರಿಯನ್ನೇ ಹಾಳುಮಾಡುತ್ತವೆ. ಹವಾಮಾನವೇ ಮಾವಿನ ಹಣ್ಣಿನ ಭಾಗ್ಯ ನಿರ್ಧರಿಸುತ್ತದೆ. ನಾನು ಶಾಲೆಯಲ್ಲಿದ್ದಾಗಿನ ದಿನಗಳು ನೆನಪಾಗುತ್ತವೆ . ಮಕ್ಕಳಿಗೆ ಎಳೆ ಮಾವಿನಕಾಯಿ ಕಿತ್ತು ಕೊಡುವ ಆ ಸಂತೋಷ! ಮನೆಯಲ್ಲಿ ನಿತ್ಯ ತೆಂಗಿನಕಾಯಿ, ಮೆಣಸು, ಸಾಸಿವೆ, ಬೆಳ್ಳುಳ್ಳಿ, ಉಪ್ಪು, ನೀರಿನಲ್ಲಿ ನುಣ್ಣಗೆ ರುಬ್ಬಿ ತಯಾರಿಸಿದ ಮಾವಿನಕಾಯಿ ಚಟ್ನಿ… ಅದಕ್ಕೆ ಜೊತೆಯಾಗಿ ಬಿಸಿ ಕುಚ್ಚಲಕ್ಕಿಯ ಗಂಜಿ ಅನ್ನ ಊಟಕ್ಕೆ ಸ್ವರ್ಗದ ಸುವಾಸನೆ ಇರುತ್ತಿತ್ತು. ಅವತ್ತು ಮರಕ್ಕೆ ಹತ್ತಿ ಮಾವಿನಕಾಯಿ ಕೀಳುವುದು ಸಾಹಸವಾಗಿತ್ತು. ರಸ್ತೆ ಬದಿಯಲ್ಲಿದ್ದ ಆ ಮರವಿಗೆ ವಾಹನಗಳ ಹೊಗೆ, ದೂಳು ತಗುಲುತ್ತಿದ್ದರೂ ಅದರ ಹೂಗಳಿಗೆ ಪರಾಗಸ್ಪರ್ಶ ಸುಲಭವಾಗುತ್ತಿತ್ತು. ಆ ಮರದಲ್ಲಿ ಕೆಂಪಿರುವೆಗಳು ಮನೆಮಾಡಿದ್ದವು; ಅವು ಕಚ್ಚಿದರೆ ದೇಹ ಬೆಂದಂತಾಗುತ್ತಿತ್ತು. ಕಾಲ ಬದಲಾಗಿದಂತೆ ಮರಕ್ಕೆ ಹತ್ತುವವರು ಕಡಿಮೆಯಾದರು, ಆದರೆ "ಕಲ್ಲು ಬಿಸಾಡುವ ಪರಿಣಿತರ" ತಂಡಗಳು ಹೆಚ್ಚಾದವು. ಮರಕ್ಕೆ ಕಲ್ಲುಗಳ ಗಾಯಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಹೋಯಿತು. ಎಷ್ಟೇ ಆಗಲಿ, ಕಲುಪ್ಪು ಜೊತೆ ಎಳೆ ಮಾವಿನಕಾಯಿ ತಿನ್ನುವ ಚಂದ ಬೇರೆ ಅದೊಂದು ವಿಶಿಷ್ಟ ರುಚಿ ,ಮರಕ್ಕೆ ಕಲ್ಲು ಬಿಸಾಡಿ ಮಾವಿನಕಾಯಿ ತಿಂದರೂ, ಆ ರಸಾಸ್ವಾದದ ಆನಂದ ಅಷ್ಟೇ ವಿಭಿನ್ನ. ಮನೆಯ ಯಜಮಾನ ತೆಂಗಿನ ಕಾಯಿ ಕಳ್ಳತನದ ಬಗ್ಗೆ ಭಾರಿ ಚಿಂತಕ್ರಾಂತ ನಾಗಿದ್ದ, ಮಾವಿನ ಕಾಯಿ ಯಾರು ಬೆಕಾದರು ತೆಗೆಯಿರಿ ಎಂದು ಎಲ್ಲರಿಗು ಹೇಳುತಿದ್ದ, ಯಾಕೆಂದರೆ ಹಳ್ಳಿಗರ ಮನಸ್ಸು ದಾನದಲ್ಲಿ ಶೂರರು ಅಲ್ವೆ. ಅದರಲ್ಲಿ ಮೋಸವಿಲ್ಲ. ಮಕ್ಕಳಾಟಿಕೆ ಅಲ್ವಾ ಎಂದು ಕಲ್ಳು ಬಿಸಾಡುವವರನ್ನು ಪ್ರೋತ್ಸಾಹಿಸುತಿದ್ದರು, ಕೆಲವೊಮ್ಮೆ ಯಜಮಾನನೆ ದೋಟಿಯಲ್ಲಿ ಎಳೆ ಮಾವಿನ ಕಾಯಿಯನ್ನು ಕಿತ್ತುಕೊಡುವ ಕಾರ್ಯ ಮಾಡುತಿದ್ದರು. ಒಮ್ಮೆ ಒಂದು ವಿಚಿತ್ರ ಘಟನೆ. ತೋಟದ ದೂರದಲ್ಲಿ ಕೆಲವು ಮಂದಿ ಮಾವಿನಕಾಯಿ ಕೀಳಲು ಕಲ್ಲು ಬಿಸಾಡುತ್ತಿದ್ದರು. ಅದೇ ವೇಳೆಯಲ್ಲಿ ತೋಟದೊಳಗೆ ತೆಂಗಿನಕಾಯಿ ಕದಿಯಲು ಬಂದಿದ್ದ ಯುವಕನ ಮೇಲೆ ಒಂದು ಕಲ್ಲು ಬಿದ್ದು ಗಾಯವಾಯಿತು. ಆತ ನೋವಿನಿಂದ ಬೊಬ್ಬೆ ಹಾಕಿದ. ಜನ ಓಡಿ ಬಂದು ಹಿಡಿದರು. ಬಹುಕಾಲದಿಂದ ತೆಂಗಿನಕಾಯಿ ಕಳೆದು ಹೋಗುತ್ತಿದ್ದ ಸುಳಿವು ಕೊನೆಗೂ ಸಿಕ್ಕಿತು. ಯಾರು ಕದಿಯುತ್ತಿದ್ದರು ಎಂಬುದು ಗೊತ್ತಾಗದಿದ್ದರೂ, ಆ ದಿನ ಬಿದ್ದ ಒಂದೇ ಕಲ್ಲು ಎಲ್ಲವನ್ನೂ ಬಿಚ್ಚಿಟ್ಟಿತು ಕಲ್ಲು ಬಿಸಾಡಿದವರ ಕಲೆ, ಕಳ್ಳನ ಕಥೆಯಾಗಿ ಬದಲಾಗಿದೆ. ಹೀಗೆ, ಮಾವಿನಕಾಯಿ ಕಥೆ ಕೊನೆಗೆ ತೆಂಗಿನಕಾಯಿ ಕಳ್ಳನ ಸಿಕ್ಕಿಬೀಳುವ ಕಥೆಯಾಯ್ತು ಪ್ರಕೃತಿಯ ಆಟವೋ, ಪಾಪದ ಫಲವೋ, ಯಾರಿಗೂ ಅರ್ಥವಾಗಲಿಲ್ಲ.. ರಾಂ ಅಜೆಕಾರು ಕಾರ್ಕಳ #ಹಳ್ಳಿಕಥೆ #ತುಳುನಾಡು #ಕಂಬಳ #ತುಳುಸಂಸ್ಕೃತಿ #ತುಳುನಾಡಿನಜಾನಪದ #ಬೋವೀಕೆಂಬಳ #ಭೂತಕೋಲ #ತುಳುನಾಡಿನಸಿರಿನೋಟ #rurallife #karkalaudupi #ಬುಧವಾರ ಶುಭಾಶಯಗಳು #💐ಬುಧವಾರ ಶುಭಾಶಯಗಳು #ಶುಭ ಬುಧವಾರ 💐 #ಶುಭ ಬುಧವಾರ
Ram Ajekar
669 ವೀಕ್ಷಿಸಿದ್ದಾರೆ
12 ದಿನಗಳ ಹಿಂದೆ
ನನ್ನ ಕಥೆ ನನ್ನ ಶ್ರೇಷ್ಠತೆಯೆಂತು ನನಗೆ ತಿಳಿದಿಲ್ಲ, ಸೂರ್ಯೋದಯದೊಡನೆ ಜೇಸಿಬಿಯ ಗರ್ಜನೆ ಕಿವಿಗೆ ಬಡಿದಾಗ, ನನ್ನ ಹೃದಯದ ಭೂಮಿ ಕಂಪಿಸಿತು. ಏನು ಮಾಡಲಿ ,ನನ್ನನ್ನು ಕಿತ್ತು, ಮಣ್ಣಿನಡಿ ಹಾಕಿ, ಗೊಬ್ಬರ ಮಾಡಿಬಿಟ್ಟರು ಮನುಜರು. ನನ್ನ ಕುಟುಂಬಗಳು ಕುಸಿಯುತ್ತಿವೆ ನಗರಗಳಲ್ಲಿ ನಾನು ಕಾಣೆಯಾದೆ, ಹಳ್ಳಿಗಳಲ್ಲೂ ನನ್ನ ನೆನಪು ಮಾತ್ರ ಉಳಿದಿದೆ. ಕಾಡುಗಳನ್ನು ಕಿತ್ತು, ಗುಡ್ಡಗಳನ್ನು ತೆಗೆದು ಅದೆಯ ಜಾಗದಲ್ಲಿ ಮನೆ, ತೋಟ, ರಬ್ಬರ್ ತೋಟ, ಅಡಿಕೆ ತೋಟಮಾಡಿಬಿಟ್ಟರು, ಅಲ್ಲಿ ನಾನು ಗೊಬ್ಬರವಾಗಿದ್ದೆ. ಒಮ್ಮೆ ಮೇಧಾವಿ ಮನುಜನೊಬ್ಬ ಊರಿಗೆ ಹೇಳಿದ್ದ ದೈವರಾಧನೆಗೆ ಕೇಪುಳ ಹೂ ಬೇಕಂತೆ, ಅದರಲ್ಲೂ ಗುಳಿಗ ಮತ್ತು ಪಂಜುರ್ಲಿ ದೈವಗಳಿಗೆ ಅದು ಪವಿತ್ರ ಎಂದಂತೆ. ಆದರೆ ಊರು ಸುತ್ತಿ ಹುಡುಕಿದರೂ ಸಿಕ್ಕಿಲ್ಲ. ಒಬ್ಬ ಗರ್ಭಿಣಿಗೆ ಮಗುವಿನ ಆರೋಗ್ಯಕ್ಕಾಗಿ ಆಯುರ್ವೇದ ಪಂಡಿತರು ಕೇಪುಳ ಬೇರಿನ ಕಷಾಯ ನೀಡಬೇಕೆಂದರು. ಜ್ವರ ಕಾಡಿದಾಗ ಜನರು ನನ್ನ ಬೇರುಗಳಿಂದ ಕಷಾಯ ಮಾಡಿ ಕುಡಿದರು “ರೋಗನಿರೋಧಕ ಶಕ್ತಿ ಹೆಚ್ಚುತ್ತದೆ” ಎಂದರು. ಆ ಪಂಡಿತನೇ ನನ್ನ ಉಳಿವಿಗೋಸ್ಕರ ತನ್ನ ಮನೆಗೆ ಹೋಗಿ ಒಂದು ಗಿಡ ನೆಟ್ಟನು ಪುನರ್ಜನ್ಮ ನೀಡಿದಂತಾಗಿತ್ತು.. ಕಾಡಿನ ರಸ್ತೆಯ ಬದಿಯಲ್ಲಿ ಬೆಳೆದಾಗ, ನನ್ನ ಕಾಯಿಗಳನ್ನು ಮಂಗಗಳು, ಪಕ್ಷಿಗಳು, ಮಕ್ಕಳು ತಿನ್ನುತ್ತಿದ್ದರು. ಆ ನೋಟ ನನಗೆ ಸಂತೋಷವಾಗಿತ್ತು. ಆದರೆ ಇಂದು ಕಿತ್ತು ಬಿಸಾಡುವವರ ಕೈಯಲ್ಲಿ ನನ್ನ ಮನಸ್ಸು ನೋವಿನಿಂದ ಕಹಿಯಾಗುತ್ತದೆ. ಆ ಪಂಡಿತರು ನನ್ನಿಂದ ಹಣ ಮಾಡಿದರು, ಆದರೆ ಅದರಲ್ಲಿ ನನ್ನ ಉಳಿವಿದೆ ಎಂದು ನಾನು ಸಮಾಧಾನಪಡುತ್ತೇನೆ. ದೈವಗಳ ಆರಾಧನೆಗೆ ಇಂದು ಹೈಬ್ರಿಡ್ ಬಾಂಬೆ ಕೇಪುಳ ಹೂ ಕಾಲಿಟ್ಟಿದೆ ಆದರೆ ನಾನು? ನೋವಿನಿಂದ ಕೂಡಿದರೂ,ಕೂಡ ಸೌಂದರ್ಯದಿಂದ ಬದುಕುತ್ತಿರುವೆ.ಅದರೆ ಕೆಲವು ದಿನಗಳಿಗೆ ಮಾತ್ರ,ಅವರವರ ಭಾವಕ್ಕೆ ಅವರವರ ಭಕ್ತಿ ಎಂದು ಸುಮ್ಮನೆ ಕೂರಬೇಕಷ್ಟೆ ರಾಂ ಅಜೆಕಾರು ಕಾರ್ಕಳ http://ramajekar.travel.blog/2025/10/13/daily-stories-12/ #ಸೋಮವಾರ #ಶುಭೋದಯ ಶುಭ ಸೋಮವಾರ #ಶುಭ ಸೋಮವಾರ #ಶುಭನುಡಿ 🌹 ಶುಭದಿನ #ಶುಭನುಡಿ #Kantara #KantaraSpirit #KantaraLegend #KantaraMovie #KantaraCulture #KantaraDivine #KantaraVibes #KantaraRishabShetty #KantaraLegacy #KantaraFestival #KantaraDaiva #KantaraMagic #KantaraPride #KantaraRevolution #KantaraSensation
See other profiles for amazing content