ಫಾಲೋ
꯭̽♔︎꯭꯭꯭꯭❥꯭𝐆꯭꯭꯭𝝾꯭꯭꯭֟፝͠𝗺𝗯꯭꯭𝝴༐꯭꯭꯭🦋̲͟
@gombe_r
5,307
ಪೋಸ್ಟ್ಸ್
58,090
ಫಾಲೋವರ್ಸ್
꯭̽♔︎꯭꯭꯭꯭❥꯭𝐆꯭꯭꯭𝝾꯭꯭꯭֟፝͠𝗺𝗯꯭꯭𝝴༐꯭꯭꯭🦋̲͟
3.3K ವೀಕ್ಷಿಸಿದ್ದಾರೆ
5 ದಿನಗಳ ಹಿಂದೆ
#☔ಇನ್ನೂ 5 ದಿನದವರೆಗೆ ಭಾರೀ ಮಳೆ, ಹವಾಮಾನ ಇಲಾಖೆ ಎಚ್ಚರಿಕೆ!⛈️ ಕರ್ನಾಟಕದಲ್ಲಿ ಇನ್ನೂ 5 ದಿನ ಭಾರೀ ಮಳೆ ಆಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.ಇಂದಿನಿಂದ 5 ದಿನಗಳವರೆಗೆ ಕರ್ನಾಟಕ ರಾಜ್ಯದಲ್ಲಿ ಭಾರೀ ಮಳೆಯಾಗುತ್ತೆ ಎಂದು ತಿಳಿಸಿದೆ ಹವಾಮಾನ ಇಲಾಖೆ. ಕೆಲವು ಜಿಲ್ಲೆಗಲ್ಲಿ ಗುಡುಗು ಸಹಿತ ವರುಣ ಅಬ್ಬರಿಸಲಿದ್ದಾನೆ. ಕರಾವಳಿ ಕರ್ನಾಟಕದಲ್ಲಿ ಇಂದಿನಿಂದ ಭಾರಿ ಮಳೆ ಮತ್ತು ಬಲವಾದ ಗಾಳಿಯೊಂದಿಗೆ ಚಂಡಮಾರುತದ ಸಾಧ್ಯತೆಯಿದೆ, ವಿಶೇಷವಾಗಿ ಮಂಗಳೂರು ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ 50-60 ಕಿಮೀ/ಗಂಟೆಯ ವೇಗದ ಗಾಳಿ ಮತ್ತು ಮಧ್ಯಮ ಮಳೆ ಮುಂದುವರಿಯಲಿದೆ. ಮೀನುಗಾರರಿಗೆ ಸಮುದ್ರಕ್ಕೆ ಹೋಗದಂತೆ ಎಚ್ಚರಿಕೆ ನೀಡಲಾಗಿದೆ. ಸೆಪ್ಟೆಂಬರ್ 30 ರಿಂದ ಅಕ್ಟೋಬರ್ 4ರವರೆಗೆ ಚದುರಿದ ಮಳೆಯಾಗಿ, 5-9 ಮಿಮೀ ಮಳೆಯ ಸಾಧ್ಯತೆಯಿದ್ದು, ತಾಪಮಾನ 30°C ಗರಿಷ್ಠ ಮತ್ತು 24°C ಕನಿಷ್ಠದ ಸುತ್ತಲಿದೆ. ಕಳೆದ ಒಂದು ವಾರದಿಂದ ಸುರಿಯುತ್ತಿರು ಮಳೆಯಿಂದ ಉತ್ತರ ಕರ್ನಾಟಕ ಅಕ್ಷರಶಃ ತತ್ತರಿಸಿ ಹೋಗಿದೆ. ಹಲವು ಪ್ರದೇಶಗಳಲ್ಲಿ ಮನೆ, ಮಠಗಳೆಲ್ಲವೂ ಮುಳುಗಡೆಯಾಗಿದ್ದು, ಜಾನುವಾರುಗಳು ಕೊಚ್ಚಿಹೋಗಿವೆ. ಬಾಗಲಕೋಟೆ, ಯಾದಗಿರಿ, ವಿಜಯಪುರ, ಕಲಬುರ್ಗಿ, ಬೀದರ್ ಜಿಲ್ಲೆಗಳಲ್ಲಿ ಪ್ರವಾಹದಿಂದ ಜನ ತತ್ತರಿಸಿ ಹೋಗಿದ್ದಾರೆ.
꯭̽♔︎꯭꯭꯭꯭❥꯭𝐆꯭꯭꯭𝝾꯭꯭꯭֟፝͠𝗺𝗯꯭꯭𝝴༐꯭꯭꯭🦋̲͟
48.9K ವೀಕ್ಷಿಸಿದ್ದಾರೆ
5 ದಿನಗಳ ಹಿಂದೆ
#😢ಬಿಜೆಪಿ ಹಿರಿಯ ನಾಯಕ ನಿಧನ 💔 ಭಾರತೀಯ ಜನತಾ ಪಕ್ಷದ ಹಿರಿಯ ಮುಖಂಡ, ದೆಹಲಿ ಬಿಜೆಪಿ ಘಟಕದ ಪ್ರಥಮ ಅಧ್ಯಕ್ಷ, ಪ್ರೊಫೆಸರ್ ವಿಜಯ್ ಕುಮಾರ್ ಮಲ್ಹೋತ್ರಾ (94) ಅವರು ಇಂದು ಬೆಳಿಗ್ಗೆ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ನಿಧನರಾದರು.
꯭̽♔︎꯭꯭꯭꯭❥꯭𝐆꯭꯭꯭𝝾꯭꯭꯭֟፝͠𝗺𝗯꯭꯭𝝴༐꯭꯭꯭🦋̲͟
6.8K ವೀಕ್ಷಿಸಿದ್ದಾರೆ
5 ದಿನಗಳ ಹಿಂದೆ
#😭ಖ್ಯಾತ ಹಾಸ್ಯ ರಂಗಭೂಮಿ ಕಲಾವಿದ ಇನ್ನಿಲ್ಲ💔 ಕನ್ನಡ ರಂಗ ಭೂಮಿ ನಟ, ಹಾಸ್ಯ ಕಲಾವಿದ ಯಶವಂತ ಸರದೇಶಪಾಂಡೆ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ.ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಇಂದು ಚಿಕಿತ್ಸೆ ಫಲಿಸಿದೆ ಮೃತಪಟ್ಟಿದ್ದಾರೆ.
꯭̽♔︎꯭꯭꯭꯭❥꯭𝐆꯭꯭꯭𝝾꯭꯭꯭֟፝͠𝗺𝗯꯭꯭𝝴༐꯭꯭꯭🦋̲͟
15.8K ವೀಕ್ಷಿಸಿದ್ದಾರೆ
6 ದಿನಗಳ ಹಿಂದೆ
#😭ಶಾರ್ಟ್ ಸರ್ಕ್ಯೂಟ್‌ - ಖ್ಯಾತ ನಟಿಯ ಇಬ್ಬರು ಪುತ್ರರು ಸಾವು💔 ರಾಜಸ್ಥಾನ ಕೋಟಾದ ಅನಂತಪುರದ ದೀಪ್ ಶ್ರೀ ಬಹು ಮಹಡಿಯ ಕಟ್ಟಡದಲ್ಲಿ ಶನಿವಾರ ತಡ ರಾತ್ರಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಇಬ್ಬರು ಬಾಲಕರು ಮೃತಪಟ್ಟಿದ್ದಾರೆ.ಮೃತಪಟ್ಟ ಬಾಲಕರನ್ನು ಬಾಲ ನಟ ವೀರ್ ಶರ್ಮಾ (10) ಹಾಗೂ ಆತನ ಸಹೋದರ ಶೌರ್ಯ ಶರ್ಮಾ (15) ಎಂದು ಗುರುತಿಸಲಾಗಿದೆ.ಇವರಿಬ್ಬರು ಬಾಲಿವುಡ್ ನಟಿ ರೀಟಾ ಶರ್ಮಾ ಹಾಗೂ ಕೋಟಾದ ಖಾಸಗಿ ಕೋಚಿಂಗ್ ಸಂಸ್ಥೆಯಲ್ಲಿ ಅಧ್ಯಾಪಕರಾಗಿ ಕೆಲಸ ಮಾಡುತ್ತಿರುವ ಜಿತೇಂದ್ರ ಶರ್ಮಾ ಅವರ ಮಕ್ಕಳು. ಕಟ್ಟಡದ ನಾಲ್ಕನೇ ಮಹಡಿಯಲ್ಲಿರುವ ಫ್ಟ್ಯಾಟ್‌ನಲ್ಲಿ ಅಗ್ನಿ ಅವಘಡ ಸಂಭವಿಸಿದಾಗ ಅಲ್ಲಿ ಇಬ್ಬರು ಮಕ್ಕಳು ಮಾತ್ರ ಇದ್ದರು. ಮಕ್ಕಳು ದಟ್ಟ ಹೊಗೆಯಿಂದ ಉಸಿರುಗಟ್ಟಿ ಪ್ರಜ್ಞೆ ಕಳೆದುಕೊಂಡರು. ಅಪಾರ್ಟ್‌ಮೆಂಟ್‌ನಿಂದ ಹೊಗೆ ಹೊರ ಸೂಸುತ್ತಿರುವುದನ್ನು ಗಮನಿಸಿದ ನೆರೆ ಹೊರೆಯವರು ಧಾವಿಸಿ ಫ್ಯಾಟ್‌ನ ಬಾಗಿಲು ಮುರಿದು ಮಕ್ಕಳನ್ನು ಕೂಡಲೇ ಅಸ್ಪತ್ರೆಗೆ ಕರೆದೊಯ್ದರು. ಆದರೆ, ಇಬ್ಬರೂ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಅಗ್ನಿ ಅವಘಡ ಸಂಭವಿಸಲು ಶಾರ್ಟ್ ಸರ್ಕ್ಯೂಟ್ ಕಾರಣ ಎಂದು ಪ್ರಾಥಮಿಕ ತನಿಖೆ ತಿಳಿಸಿದೆ.
꯭̽♔︎꯭꯭꯭꯭❥꯭𝐆꯭꯭꯭𝝾꯭꯭꯭֟፝͠𝗺𝗯꯭꯭𝝴༐꯭꯭꯭🦋̲͟
1.6K ವೀಕ್ಷಿಸಿದ್ದಾರೆ
8 ದಿನಗಳ ಹಿಂದೆ
#🌺ಹೂವುಗಳ ಬೆಲೆಯಲ್ಲಿ ಭಾರೀ ಕುಸಿತ ರೈತರ ಆಕ್ರೋಶ 🚨 ಬೆಂಗಳೂರು:ಸತತವಾಗಿ ಮಳೆ ಸುರಿಯುತ್ತಿರುವುದರಿಂದ ಹೂವುಗಳು ಗುಣಮಟ್ಟ ಕಳೆದುಕೊಂಡ ಹಿನ್ನೆಲೆಯಲ್ಲಿ ಹೂವುಗಳು ನೆರೆಯ ರಾಜ್ಯಗಳಿಗೆ ಹಾಗೂ ವಿದೇಶಕ್ಕೆ ರಫ್ತು ಬೇಡಿಕೆ ಕುಸಿತ ಹಿನ್ನೆಲೆಯಲ್ಲಿ ಬೆಲೆ ಇಳಿಕೆಗೆ ಕಾರಣವಾಗಿದೆ.ಚಿಕ್ಕಬಳ್ಳಾಪುರ, ಚಿಂತಾಮಣಿ ತಾಲೂಕು ವಿವಿಧೆಡೆ ರೈತರು ನಾಡಹಬ್ಬದಸರಾ ಸಂದರ್ಭದಲ್ಲಿ ಹೂವುಗಳಿಗೆ ಉತ್ತಮ ಬೆಲೆ ನಿರೀಕ್ಷಿಸಿದ್ದರು, ಕಲರ್ ಕಲರ್ ಸೇವಂತಿ, ಗುಲಾಬಿ, ಚೆಂಡು ಸೇರಿದಂತೆ ಇತರ ಹೂವಿನ ಬೆಲೆ ಕುಸಿದಿದ್ದು, ರೈತರು ಕಂಗಾಲಾಗಿದ್ದಾರೆ. ಈ ಹಿಂದೆ ಪಿತೃಪಕ್ಷದ ಸಮಯದಲ್ಲಿ ಬೆಲೆ ಇಳಿಕೆ ಸಹಜ ಎಂದುಕೊಂಡರೆ ಈಗ ದಸರಾ ಸಮಯ ದಲ್ಲೂ ಬೆಲೆ ಏರಿಕೆಯಾಗದಿರುವುದು ರೈತರನ್ನು ಬಾರೀ ಸಂಕಷ್ಟಕ್ಕೆ ದುಡಿದೆ. ಬಯಲುಸೀಮೆ ಪ್ರದೇಶವಾಗಿರುವ ಚಿಕ್ಕಬಳ್ಳಾಪುರದ ಈ ಭಾಗದಲ್ಲಿ ಯಾವುದೇ ನದಿ ನಾಲಾ ಗಳಿಲ್ಲದ ಜಿಲ್ಲೆ ನಮ್ಮದು. ನೀರಿಗಾಗಿ ಹೆಂಡತಿ ಮಕ್ಕಳ ಮೈಮೇಲಿನ ಒಡವೆಗಳನ್ನು ಮಾರಿ, ಸಾಲ ಸೋಲ ಮಾಡಿ ಬೋರ್‌ ವೆಲ್‌ ಹಾಕಿಸಿ, ಸಮೃದ್ಧ ಬೆಳೆ ಬೆಳೆದರೂ ಮಾರುಕಟ್ಟೆಯಲ್ಲಿ ಕೊಳ್ಳುವವ ರಿಲ್ಲ. 40 ಕೆಜಿ ಹೂವಿನ ಬ್ಯಾಗ್‌ ಮಾರಿದರೂ ರೂ 300 ರಿಂದ 500 ಬರುತ್ತದೆ. ಹೂ ಕೀಳುವ ಕೂಲಿ ಸಹಾ ಬರುವುದಿಲ್ಲ. ಈಗಲಾದರೂ ಸರ್ಕಾರ ನಮ ನೆರವಿಗೆ ಬರಬೇಕಿದೆ ಪುರದಗಡ್ಡೆ ಮಹಿಳೆ ಗಾಯತ್ರಿ ಅಂಬರೀಶ್‌ ಆಗ್ರಹಿಸಿದರು.ಆದರೆ ಚಿಲ್ಲರೆ ದರ ಸೇವಂತಿಗೆ 200 ರೂ. ಗುಲಾಬಿ 160 ರೂ. ಮಾರಾಟಮಾಡುತ್ತಾರೆ. ನಮಗೆ ಮಾತ್ರ ಬೆಲೆ ಸಿಗುವುದಿಲ್ಲ ಎಂದು ರೈತರು ದೂರುತ್ತಾರೆ.
꯭̽♔︎꯭꯭꯭꯭❥꯭𝐆꯭꯭꯭𝝾꯭꯭꯭֟፝͠𝗺𝗯꯭꯭𝝴༐꯭꯭꯭🦋̲͟
37.9K ವೀಕ್ಷಿಸಿದ್ದಾರೆ
16 ದಿನಗಳ ಹಿಂದೆ
#⛈️ಇಂದಿನಿಂದ ಕರ್ನಾಟಕದಾದ್ಯಂತ ಜೋರು ಮಳೆ ಶುರು🔴 ಕರ್ನಾಟಕದ ಬಹುತೇಕ ಕಡೆ ಮತ್ತೆ ಮಳೆ ಶುರುವಾಗಿದೆ. ಬೆಂಗಳೂರು ಸೇರಿ 20ಕ್ಕೂ ಅಧಿಕ ಜಿಲ್ಲೆಗಳಲ್ಲಿ ಸೆಪ್ಟೆಂಬರ್ 24ರವರೆಗೂ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಬೀದರ್, ಕಲಬುರಗಿ, ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​ ಘೋಷಿಸಲಾಗಿದೆ.
See other profiles for amazing content