Follow
Malgudi Express
@news007
26,116
Posts
13,063
Followers
Malgudi Express
534 views
1 days ago
#📜ಪ್ರಚಲಿತ ವಿದ್ಯಮಾನ📜 ಮುತ್ತುರಾಜನ 'ಕಥಾನಾಯಕನ ಕಥೆ' ಬಿಡುಗಡೆ ಏಪ್ರಿಲ್ 12ಕ್ಕೆ ಬೆಂಗಳೂರಿನಲ್ಲಿ ಅದ್ದೂರಿ ಕಾರ್ಯಕ್ರಮ ಬೆಂಗಳೂರು: ಕನ್ನಡ ಚಿತ್ರರಂಗದ ಧ್ರುವತಾರೆ, ನಟಸಾರ್ವಭೌಮ ಡಾ. ರಾಜ್‌ಕುಮಾರ್ ಅವರ ಬದುಕಿನ ಅಪರೂಪದ ಕ್ಷಣಗಳನ್ನು ಅನಾವರಣಗೊಳಿಸುವ ಮಹತ್ವಾಕಾಂಕ್ಷಿ ಕಾರ್ಯಕ್ರಮಕ್ಕೆ ಸಿಲಿಕಾನ್ ಸಿಟಿ ವೇದಿಕೆಯಾಗುತ್ತಿದೆ. ಹಂಪಿಯ ಕನ್ನಡ ವಿಶ್ವವಿದ್ಯಾಲಯ ಹಾಗೂ ಬೆಂಗಳೂರು ನಗರ ವಿಶ್ವವಿದ್ಯಾಲಯದ ಜಂಟಿ ಆಶ್ರಯದಲ್ಲಿ ಡಾ. ರಾಜ್‌ಕುಮಾರ್ ಅವರ ಆತ್ಮಚರಿತ್ರೆ 'ಕಥಾನಾಯಕನ ಕಥೆ' ಪುಸ್ತಕ ಲೋಕಾರ್ಪಣೆ ಹಾಗೂ ಅವರ ಕಲಾಬದುಕಿನ ಅಪರೂಪದ ಛಾಯಾಚಿತ್ರಗಳ ಗ್ಯಾಲರಿ ಉದ್ಘಾಟನಾ ಸಮಾರಂಭವು ಇದೇ ಏಪ್ರಿಲ್ 12, ಭಾನುವಾರದಂದು ನಡೆಯಲಿದೆ. ಕಾರ್ಯಕ್ರಮದ ಮುಖ್ಯಾಂಶಗಳು: ದಿನಾಂಕ ಮತ್ತು ಸಮಯ: ಏಪ್ರಿಲ್ 12, 2026, ಭಾನುವಾರ ಬೆಳಿಗ್ಗೆ 11:00 ಗಂಟೆಗೆ. ಸ್ಥಳ: ಜ್ಞಾನಜ್ಯೋತಿ ಸಭಾಂಗಣ, ಸೆಂಟ್ರಲ್ ಕಾಲೇಜು ಕ್ಯಾಂಪಸ್, ಬೆಂಗಳೂರು. ಸ್ಯಾಂಡಲ್‌ವುಡ್ ತಾರೆಯರ ಉಪಸ್ಥಿತಿ: ಈ ಐತಿಹಾಸಿಕ ಪುಸ್ತಕವನ್ನು ಹ್ಯಾಟ್ರಿಕ್ ಹೀರೋ ಡಾ. ಶಿವರಾಜ್‌ಕುಮಾರ್ ಹಾಗೂ ಗೀತಾ ಶಿವರಾಜ್‌ಕುಮಾರ್ ಅವರು ಬಿಡುಗಡೆ ಮಾಡಲಿದ್ದಾರೆ. ರಾಜ್ ಅವರ ನೂರಾರು ಅಪರೂಪದ ಭಾವಚಿತ್ರಗಳನ್ನು ಒಳಗೊಂಡ ಗ್ಯಾಲರಿಯನ್ನು ಬೆಂಗಳೂರು ನಗರ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಬಿ. ರಮೇಶ್ ಉದ್ಘಾಟಿಸಲಿದ್ದಾರೆ. ಗಣ್ಯರ ಆಗಮನ: ಖ್ಯಾತ ಸಾಹಿತಿ ಹಾಗೂ ಚಲನಚಿತ್ರ ನಿರ್ದೇಶಕ ನಾಡೋಜ ಬರಗೂರು ರಾಮಚಂದ್ರಪ್ಪ ಅವರು ಆಶಯ ನುಡಿಗಳನ್ನಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷೆ ಡಾ. ಜಯಮಾಲ, ಹಿರಿಯ ನಿರ್ದೇಶಕ ಭಾರ್ಗವ ಹಾಗೂ ಚಲನಚಿತ್ರ ಕಲಾವಿದ ಬಿ. ಗುರುದತ್ ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಡಿ.ವಿ. ಪರಮಶಿವಮೂರ್ತಿ ಅವರು ವಹಿಸಲಿದ್ದಾರೆ. ರಾಜ್ ಎಂಬ ಮಹಾಚೇತನಕ್ಕೆ ಗೌರವ: "ರಾಜ್‌ಕುಮಾರ್ ಕೇವಲ ನಟರಾಗಿರದೆ, ಕನ್ನಡ ಸಂಸ್ಕೃತಿ ಮತ್ತು ಮಾನವೀಯ ಮೌಲ್ಯಗಳ ಸಾಕಾರ ಮೂರ್ತಿಯಾಗಿದ್ದಾರೆ" - ಕುವೆಂಪು ಡಾ. ರಾಜ್‌ಕುಮಾರ್ ಅಧ್ಯಯನ ಪೀಠವು ಹೊರತರುತ್ತಿರುವ ಈ ಕೃತಿಯು ಅಣ್ಣಾವ್ರ ಅಭಿಮಾನಿಗಳಿಗೆ ಹಾಗೂ ಸಂಶೋಧಕರಿಗೆ ಒಂದು ಅಮೂಲ್ಯ ಆಸ್ತಿಯಾಗಲಿದೆ. ರಾಜ್ ಕುಟುಂಬದ ಸದಸ್ಯರು ಹಾಗೂ ಕನ್ನಡ ನಾಡಿನ ಕಲಾಭಿಮಾನಿಗಳು ಈ ಸಂಭ್ರಮಕ್ಕೆ ಸಾಕ್ಷಿಯಾಗಲಿದ್ದಾರೆ. #Muthuraj #KathanayakanaKathe #release #Rajkumar #malgudiexpress #malgudinews #news #TopNews
Malgudi Express
473 views
1 days ago
#📜ಪ್ರಚಲಿತ ವಿದ್ಯಮಾನ📜 ಮಂಜುಳಾ ಮೇಡಂ ನೆನಪಿನ ಕಾರ್ಯಕ್ರಮ-2 ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ ​ಮೈಸೂರು: ಸಾಮಾಜಿಕ ಹೋರಾಟಗಳ ಒಡನಾಡಿ, ಸದಾ ಚಳವಳಿಗಳ ಬೆನ್ನಿಗಿದ್ದ ದಿ. ಮಂಜುಳಾ ಅವರ ಸ್ಮರಣಾರ್ಥ ‘ಮಂಜುಳಾ ಮೇಡಂ ನೆನಪಿನ ಕಾರ್ಯಕ್ರಮ-2’ ಅನ್ನು ಇದೇ ಬರುವ ಏಪ್ರಿಲ್ 19, 2026ರ ಭಾನುವಾರದಂದು ಮೈಸೂರಿನಲ್ಲಿ ಹಮ್ಮಿಕೊಳ್ಳಲಾಗಿದೆ. ​ಕಾರ್ಯಕ್ರಮದ ವಿವರಗಳು: ​ದಿನಾಂಕ: 19.04.2026, ಭಾನುವಾರ ​ಸಮಯ: ಬೆಳಿಗ್ಗೆ 10:30 ರಿಂದ ಮಧ್ಯಾಹ್ನ 1:30 ರವರೆಗೆ ​ಸ್ಥಳ: ಇ.ಎಂ.ಆರ್.ಸಿ (EMRC), ಗಾಂಧಿಭವನದ ಎದುರು, ಮಾನಸ ಗಂಗೋತ್ರಿ, ಮೈಸೂರು. ​ಕಾರ್ಯಕ್ರಮದ ಮುಖ್ಯಾಂಶಗಳು: ​ಸಾಕ್ಷ್ಯಚಿತ್ರ ಪ್ರದರ್ಶನ: ಮಂಜುಳಾ ಮೇಡಂ ಅವರ ನೆನಪಿನ ಕುರಿತಾದ 38 ನಿಮಿಷಗಳ ವಿಶೇಷ ಸಾಕ್ಷ್ಯಚಿತ್ರ ಪ್ರದರ್ಶನಗೊಳ್ಳಲಿದೆ. ​ಪುಸ್ತಕ ಬಿಡುಗಡೆ: ಮಂಜುಳಾ ಮೇಡಂ ಅವರ ಸಮಗ್ರ ಬರಹಗಳ ಸಂಕಲನ ‘ಕದಿರು’ ಕೃತಿಯನ್ನು ನಾಡೋಜ ಬರಗೂರು ರಾಮಚಂದ್ರಪ್ಪ ಅವರು ಬಿಡುಗಡೆ ಮಾಡಲಿದ್ದಾರೆ. ​ವಿಶೇಷ ಉಪನ್ಯಾಸ: ‘ಮಹಿಳೆ ಕುರಿತು ಡಾ. ಅಂಬೇಡ್ಕರ್ ಚಿಂತನೆಗಳು’ ಎಂಬ ವಿಷಯದ ಕುರಿತು ಮೈಸೂರು ವಿಶ್ವವಿದ್ಯಾನಿಲಯದ ಡಾ. ಬಿ.ಆರ್. ಅಂಬೇಡ್ಕರ್ ಸಂಶೋಧನಾ ಹಾಗೂ ವಿಸ್ತರಣಾ ಕೇಂದ್ರದ ಪ್ರಾಧ್ಯಾಪಕ ಡಾ. ಸೋಮಶೇಖರ್ ಅವರು ಉಪನ್ಯಾಸ ನೀಡಲಿದ್ದಾರೆ. ​ಪ್ರಶಸ್ತಿ ಪ್ರದಾನ: 2026ನೇ ಸಾಲಿನ ‘ಮಂಜುಳಾ ಮೇಡಂ ಪ್ರಶಸ್ತಿ’ಯನ್ನು ಬೆಂಗಳೂರಿನ ನಿವೃತ್ತ ಕನ್ನಡ ಪ್ರಾಧ್ಯಾಪಕಿ ಪ್ರೊ. ಸುಕನ್ಯಾ ಮಾರುತಿ ಅವರಿಗೆ ನೀಡಿ ಗೌರವಿಸಲಾಗುವುದು. ಈ ಪ್ರಶಸ್ತಿಯು ಸ್ಮರಣಿಕೆ, 25,000 ರೂ. ನಗದು ಹಾಗೂ ಇಲಕಲ್ ಸೀರೆಯನ್ನು ಒಳಗೊಂಡಿರುತ್ತದೆ. ​ಅಧ್ಯಕ್ಷತೆ: ಮಹಿಳಾ ವಿಶ್ವವಿದ್ಯಾನಿಲಯದ ನಿವೃತ್ತ ಕುಲಪತಿಗಳಾದ ಡಾ. ಸಬಿಹಾ ಭೂಮಿಗೌಡ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ​ಈ ಅರ್ಥಪೂರ್ಣ ಕಾರ್ಯಕ್ರಮಕ್ಕೆ ಮಂಜುಳಾ ಮೇಡಂ ಅವರ ಅಭಿಮಾನಿಗಳು, ಹಿತೈಷಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಸಂಘಟಕರಾದ ಡಾ. ರಾಜಪ್ಪ ದಳವಾಯಿ ಹಾಗೂ ಮೇಜರ್ ಭಾರತಿ ನಂದ ಆರ್.ಎಂ. ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ. ​ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 86184 69207, +91 89716 20953 ಡಾ. ರಾಜಪ್ಪ ದಳವಾಯಿ / ಮೇಜರ್ ಭಾರತಿ ನಂದ ಆರ್.ಎಂ. ಬಂಧು-ಮಿತ್ರರ ಬಳಗ, ಮೈಸೂರು. #Manjula #Madam #Memorial #Program #Award #Ceremony #malgudiexpress #malgudinews #news #TopNews
Malgudi Express
4.8K views
2 days ago
#📜ಪ್ರಚಲಿತ ವಿದ್ಯಮಾನ📜 ದೊಡ್ಡಬಳ್ಳಾಪುರದಲ್ಲಿ ಗಜಲ್ ಸಂಭ್ರಮ ಸಾಹಿತ್ಯ ಮತ್ತು ಸಂಗೀತದ ಅಪೂರ್ವ ಸಂಗಮ! ದೊಡ್ಡಬಳ್ಳಾಪುರ: ಅಕ್ಷರ ಮತ್ತು ಸ್ವರಗಳ ಮಿಲನಕ್ಕೆ ಸಾಕ್ಷಿಯಾಗಲು ರೇಷ್ಮೆ ನಗರಿ ಸಜ್ಜಾಗಿದೆ. ಡಾ. ಡಿ.ಆರ್. ನಾಗರಾಜ್ ಬಳಗ ಹಾಗೂ ಕರ್ನಾಟಕ ಗಜಲ್ ಅಕಾಡೆಮಿ (ರಿ.), ಬೆಂಗಳೂರು ಇವರ ಸಹಯೋಗದಲ್ಲಿ ಬರುವ ಏಪ್ರಿಲ್ 19ರಂದು ವಿಶಿಷ್ಟವಾದ ‘ಗಜಲ್ ಸಂಭ್ರಮ’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಗಜಲ್ ಸಾಹಿತ್ಯದ ಸೌಂದರ್ಯವನ್ನು ಜನಸಾಮಾನ್ಯರಿಗೆ ತಲುಪಿಸುವ ಉದ್ದೇಶದಿಂದ ಆಯೋಜಿಸಲಾಗಿರುವ ಈ ಕಾರ್ಯಕ್ರಮದಲ್ಲಿ ಗಜಲ್ ವಾಚನ ಮತ್ತು ಗಾಯನ ಎರಡೂ ಇರಲಿರುವುದು ವಿಶೇಷ. ಕಾರ್ಯಕ್ರಮದ ವಿವರಗಳು: ದಿನಾಂಕ: 19 ಏಪ್ರಿಲ್ 2026 ಸ್ಥಳ: ಕಲಾಭವನ, ಮುದ್ದನಾಯಕನ ಪಾಳ್ಯ, ನಂದಿ ಮೋರಿ ಹತ್ತಿರ, ರಾಮಯ್ಯನ ಪಾಳ್ಯದ ರಸ್ತೆ, ದೊಡ್ಡಬಳ್ಳಾಪುರ. ಸಮಯ: 11 ಗಜಲ್ ಎಂದರೆ ಕೇವಲ ಸಾಹಿತ್ಯವಲ್ಲ, ಅದೊಂದು ಭಾವನೆಗಳ ಮಹಾಪೂರ. ಹಾರ್ಮೋನಿಯಂನ ಸುಶ್ರಾವ್ಯ ನಾದ ಮತ್ತು ತಬಲಾದ ಲಯಬದ್ಧ ಗತಿಯೊಂದಿಗೆ ಗಜಲ್ ಪ್ರಿಯರಿಗೆ ಹಬ್ಬದೂಟ. ದೊಡ್ಡಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸಾಹಿತ್ಯಾಸಕ್ತರು ಹಾಗೂ ಸಂಗೀತ ಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಸಾಂಸ್ಕೃತಿಕ ಹಬ್ಬವನ್ನು ಯಶಸ್ವಿಗೊಳಿಸಬೇಕೆಂದು ಡಾ. ಡಿ.ಆರ್. ನಾಗರಾಜ್ ಬಳಗ ವಿನಂತಿಸಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: ಮೊಬೈಲ್ ಸಂಖ್ಯೆ: 97315 14051 #Ghazal #festival #Doddaballapur #malgudiexpress #malgudinews #news #TopNews
Malgudi Express
529 views
3 days ago
#📜ಪ್ರಚಲಿತ ವಿದ್ಯಮಾನ📜 ಗ್ಯಾಸ್ ಏಜೆನ್ಸಿಗಳು ಗ್ರಾಹಕರೊಂದಿಗೆ ಸ್ಪಂದಿಸಿ ಶಾಂತಿಯುತವಾಗಿ ನಡೆದುಕೊಳ್ಳಿ: ಲತಾ ಕುಮಾರಿ ಹಾಸನ: ಗೃಹ ಮತ್ತು ವಾಣಿಜ್ಯ ಬಳಕೆ ಗ್ಯಾಸ್ ಸಿಲಿಂಡರ್ ಗಳನ್ನು ವಿತರಣೆ ಮಾಡುವ ಏಜೆನ್ಸಿಗಳು ಸ್ಥಳೀಯವಾಗಿ ಯಾವುದೇ ಸಮಸ್ಯೆಗಳು ಉದ್ಬವಿಸದಂತೆ ಎಚ್ಚರಿಕೆ ವಹಿಸಿ ಗ್ರಾಹಕರೊಂದಿಗೆ ಸ್ಪಂದಿಸಿ ಶಾಂತಿಯುತವಾಗಿ ನಡೆದುಕೊಳ್ಳುವಂತೆ ಜಿಲ್ಲಾಧಿಕಾರಿ ಲತಾ ಕುಮಾರಿ ತಿಳಿಸಿದ್ದಾರೆ. ಜಿಲ್ಲಾಧಿಕಾರಿ ಅವರ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ವಾಣಿಜ್ಯ/ಗೃಹಬಳಕೆ ಎಲ್ ಪಿಜಿ ಸಿಲಿಂಡರ್ ಗಳ ಪೂರೈಕೆಯಲ್ಲಿ ನಿಯಂತ್ರಣ ಮತ್ತು ಮೇಲ್ವಿಚಾರಣೆ ಕುರಿತು ಸಭೆ ನಡೆಸಿ ಮಾತನಾಡಿದ ಅವರು ವಿತರಕರು ಸರ್ಕಾರ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲನೆಮಾಡುವಂತೆ ಸೂಚಿಸಿದರು. ಗೃಹ ಬಳಕೆ ಮತ್ತು ವಾಣಿಜ್ಯ ಬಳಕೆ ಗ್ಯಾಸ್ ಸಿಲಿಂಡರ್ ಗೆ ಬುಕಿಂಗ್ ಮಾಡಿದಾಗ ಸಾರ್ವಜನಿಕರಿಗೆ ತೊಂದರೆಯಾಗದಂತೆ ನಿಗದಿತ ಅವಧಿಯೊಳಗೆ ಗ್ಯಾಸ್ ಸಿಲಿಂಡರ್ ಒದಗಿಸಲು ಕ್ರಮವಹಿಸಲು ಸೂಚಿಸಿದರು. ಅಲ್ಲದೆ ದುರ್ಬಳಕೆ ಕಂಡು ಬಂದ್ದಲ್ಲಿ ಗಂಭೀರವಾಗಿ ಪರಿಗಣಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು. ಕಂಪನಿ, ವಿತರಕರು, ಬುಕ್ಕಿಂಗ್, ದಾಸ್ತಾನು ಲಭ್ಯ, ಎಷ್ಟು ಗ್ಯಾಪ್ ಇದೆ ಎಂಬುದರ ಮಾಹಿತಿಯನ್ನು ಪ್ರತಿದಿನದ ಮಾಹಿತಿ ಒದಗಿಸುವಂತೆ ಆಹಾರ ನಾಗರೀಕ ಸರಬರಾಜು ಇಲಾಖೆಯ ಜಂಟಿ ನಿರ್ದೇಶಕರಿಗೆ ಸೂಚನೆ ನೀಡಿದರು. ಹೆಚ್ಚುವರಿ ಪೊಲೀಸ್ ಶ್ರೀನಿಧಿ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಕೃಷ್ಣಮೂರ್ತಿ, ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಜಂಟಿ ನಿರ್ದೇಶಕ ಅರುಣ್ ಕುಮಾರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಅನಿಲ್, ಗ್ಯಾಸ್ ಏಜೆನ್ಸಿ ಮಾಲೀಕರು ಹಾಗೂ ಹೊಟೇಲ್ ಮಾಲೀಕರು ಸಭೆಯಲ್ಲಿ ಹಾಜರಿದ್ದರು. #Gas #agencies #responsive #act #peacefully #customers #LathaKumari #malgudiexpress #malgudinews #news #TopNews
Malgudi Express
576 views
3 days ago
#📜ಪ್ರಚಲಿತ ವಿದ್ಯಮಾನ📜 ಡಾ.ಬಿ.ಆರ್.ಅಂಬೇಡ್ಕರ್ ಬದುಕು ಮತ್ತು ಬರಹ ಕುರಿತು ರಾಜ್ಯ ಮಟ್ಟದ ಮುಕ್ತ ರಸಪ್ರಶ್ನೆ ಸ್ಪರ್ಧೆ ಧಾರವಾಡ: ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲ್ಲೂಕು ಆಡಳಿತ, ಪೊಲೀಸ್ ಇಲಾಖೆ, ಶಿಕ್ಷಣ ಇಲಾಖೆಗಳು ಸ್ಥಳೀಯ ದಲಿತ, ಕನ್ನಡ ಪರ ಹಾಗೂ ಇತರೆ ಸಂಘಟನೆಗಳ ಸಹಯೋಗದಲ್ಲಿ ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ ಅವರ ಜಯಂತಿ ನಿಮಿತ್ತ ಡಾ.ಬಿ.ಆರ್.ಅಂಬೇಡ್ಕರ್ ಅವರ ಬದುಕು ಮತ್ತು ಬರಹ ಕುರಿತು ರಾಜ್ಯ ಮಟ್ಟದ ಮುಕ್ತ ರಸಪ್ರಶ್ನೆ ಸ್ಪರ್ಧೆ ಆಯೋಜಿಸಿದೆ ಎಂದು ಕುಷ್ಟಗಿ ವೃತ್ತದ ಪೊಲೀಸ್ ಇನ್ಸಪೆಕ್ಟರ್ ವಿಶ್ವನಾಥ್ ಹಿರೇಗೌಡರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಸ್ಪರ್ಧೆ ಏಪ್ರಿಲ್ 12ರಂದು ಬೆಳಿಗ್ಗೆ 9 ಗಂಟೆಗೆ ಕುಷ್ಟಗಿ ಪಟ್ಟಣದ ಕ್ರೈಸ್ಟ್ ದಿ ಕಿಂಗ್ ಶಾಲೆಯಲ್ಲಿ ನಡೆಯಲಿದೆ. ರಸಪ್ರಶ್ನೆ ಸ್ಪರ್ಧೆಯಲ್ಲಿ ಯಾವುದೇ ವಯೋಮಿತಿ, ವಿದ್ಯಾರ್ಹತೆಯ ನಿರ್ಬಂಧ ಇರುವುದಿಲ್ಲ. ಎಲ್ಲ ಆಸಕ್ತರಿಗೂ ಮುಕ್ತ ಅವಕಾಶವಿರುತ್ತದೆ. ರಾಜ್ಯದ ಯಾವುದೇ ಜಿಲ್ಲೆಗಳ ಅಭ್ಯರ್ಥಿಗಳು ತಮ್ಮ ಆಧಾರ್ ಕಾರ್ಡಿನ ನಕಲು ಪ್ರತಿ ಒದಗಿಸಿ ಭಾಗವಹಿಸಬಹುದು. ಮೊದಲ ಸುತ್ತಿನಲ್ಲಿ 50 ಅಂಕಗಳ ಬಹುಆಯ್ಕೆ ಮಾದರಿಯ ಸುತ್ತು. ಈ ಸುತ್ತಿನಲ್ಲಿ ಅತಿ ಹೆಚ್ಚು ಅಂಕಗಳಿಸಿದ ಮೊದಲ 12 ಅಭ್ಯರ್ಥಿಗಳು ಎರಡನೇ ಸುತ್ತಿಗೆ ಆಯ್ಕೆಯಾಗುತ್ತಾರೆ. ಈ 12 ಅಭ್ಯರ್ಥಿಗಳನ್ನು 6 ತಂಡಗಳಾಗಿ ವಿಂಗಡಿಸಿ ಎರಡನೇ ಹಂತದ ಮೌಖಿಕ ಸುತ್ತು ನಡೆಸಲಾಗುವುದು. ವಿಜೇತ ತಂಡಗಳಿಗೆ 50 ಸಾವಿರ ರೂ. ಪ್ರಥಮ ಬಹುಮಾನ, 30 ಸಾವಿರ ರೂ.ದ್ವಿತೀಯ ಬಹುಮಾನ ಹಾಗೂ 20 ಸಾವಿರ ರೂ.ಗಳ ತೃತೀಯ ಬಹುಮಾನ ನೀಡಲಾಗುವುದು. ಭಾಗವಹಿಸಿದ ಎಲ್ಲರಿಗೂ ಪ್ರಮಾಣ ಪತ್ರ ನೀಡಲಾಗುವುದು. ರಸಪ್ರಶ್ನೆ ಸ್ಪರ್ಧೆಯ ಪಠ್ಯ ಡಾ.ಬಿ.ಆರ್.ಅಂಬೇಡ್ಕರ್ ಅವರ ಜೀವನ ಮತ್ತು ಶಿಕ್ಷಣ, ರಾಷ್ಟ್ರೀಯ ಹೋರಾಟ, ಭಾರತ ಸಂವಿಧಾನ ರಚನೆ, ಶಿಕ್ಷಣ, ಸಂಘಟನೆ, ಹೋರಾಟ ತತ್ವಗಳು, ಚಿಂತನೆಗಳು, ಮೀಸಲಾತಿ, ಮಹಿಳಾ ಹಕ್ಕುಗಳು, ಜಾಗತಿಕ ಮಹಾನಾಯಕರಾಗಿ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಪ್ರಸ್ತುತ ದಿನಮಾನ. ಆಸಕ್ತರು ಏಪ್ರಿಲ್ 11 ರ ಒಳಗಾಗಿ ಈ ಮೊಬೈಲ್ ನಂಬರುಗಳ ಮೂಲಕ ನೋಂದಣಿ ಮಾಡಿಕೊಳ್ಳುವುದು ಕಡ್ಡಾಯವಾಗಿರುತ್ತದೆ. ಎಸ್.ಎಸ್.ತೆಮಿನಾಳ-9740421421, ಶ್ರೀನಿವಾಸ ದೇಸಾಯಿ-9845808941, ಸುರೇಶ್ ಅಂಕೋಲಿ-9901797951, ಅಮರೇಗೌಡ-9902180043 ಅಥವಾ ಭರಮಪ್ಪ ಪಿ-9731799080 ಮೂಲಕ ಸಂಪರ್ಕಿಸಬಹುದು. #StateLevel #OpenQuiz #Competition #BRAmbedkar #Life #Writings #malgudiexpress #malgudinews #news #TopNews
Malgudi Express
640 views
4 days ago
#📜ಪ್ರಚಲಿತ ವಿದ್ಯಮಾನ📜 I welcome Modi finally opening his mouth on the proposed delimitation exercise: Siddaramaiah "I welcome Prime Minister Narendra Modi finally opening his mouth on the proposed delimitation exercise. This sudden concern for “reassuring” southern states appears less like statesmanship and more like election-driven messaging, timed conveniently with political calculations in states like Kerala and Tamil Nadu. Let us be clear: the issue has never been about whether the number of Lok Sabha seats of southern states increases. The concern is about how they increase - and who benefits disproportionately. Under the proposed expansion, while every state may see an increase, the rate and scale of increase clearly favour BJP-dominated states. Uttar Pradesh is expected to go from 80 to 120 seats (+40), Maharashtra from 48 to 72 (+24), Bihar from 40 to 60 (+20), Madhya Pradesh from 29 to 43–44 (+14–15), Rajasthan from 25 to 37–38 (+12–13), and Gujarat from 26 to 39 (+13). In contrast, southern states see smaller gains. Karnataka rises from 28 to 42 (+14), Tamil Nadu from 39 to 58–59 (+20), Andhra Pradesh from 25 to 37–38 (+12–13), Telangana from 17 to 25–26 (+8–9), and Kerala from 20 to 30 (+10). The numbers are telling. Five southern states together gain barely 63–66 additional seats, while just these seven BJP-dominated states gain about 128–131 seats - nearly double. Even after expanding the Lok Sabha to 816 seats, the collective share of southern states remains around 24% - unchanged and already modest. States that performed better in population control and governance are being penalised, and Karnataka - a key driver of national growth - risks being deliberately sidelined. If our share does not improve while the numerical dominance of larger states grows, what exactly is Karnataka gaining from this exercise? The result is a widening imbalance. Today, Uttar Pradesh has 52 more seats than Karnataka - this gap will increase to 78. Maharashtra’s lead over Karnataka will expand from 20 to 30 seats. This is not just expansion; it is concentration of power. This is not cooperative federalism - this is another blatant assault on federalism, designed to concentrate power and silence states like Karnataka. Having failed to win the trust of southern people, the Modi Government is now attempting to weaken our voice through a manipulative restructuring of representation. Such a structural change cannot be pushed without consultations or public debate. At a time of economic and global challenges, the Union Government is more focused on political arithmetic over national priorities. The people of Karnataka - and all who believe in federalism - deserve fairness, respect, and transparency. We will firmly oppose any attempt to weaken our voice." - Siddaramaiah, ChiefMinister #welcome #Modi #finally #opening #mouth #proposed #delimitation #exercise #Siddaramaiah #BJPFailsIndia #Delimitation #malgudiexpress #malgudinews #news #TopNews
Malgudi Express
4.9K views
5 days ago
#📜ಪ್ರಚಲಿತ ವಿದ್ಯಮಾನ📜 ಇತಿಹಾಸ ಸೃಷ್ಟಿಸಿದ ಕರ್ನಾಟಕ ರಾಜ್ಯ ರೈತ ಸಂಘ ಇಳ್ಳೇನಹಳ್ಳಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಚುನಾವಣೆಯಲ್ಲಿ ಇತಿಹಾಸ ಸೃಷ್ಟಿಸಿದ ಕರ್ನಾಟಕ ರಾಜ್ಯ ರೈತ ಸಂಘ ಒಟ್ಟು 10 ಸ್ಥಾನಗಳ ಪೈಕಿ 9 ಸ್ಥಾನಗಳಲ್ಲಿ ಭರ್ಜರಿ ಜಯ ದರ್ಶನ್ ಪುಟ್ಟಣ್ಣಯ್ಯ ಅವರ ಸ್ವರಾಜ್ಯ ಸಂಕಲ್ಪಕ್ಕೆ ಬೆಲೆ ಮಂಡ್ಯ: ಮೇಲುಕೋಟೆ ವಿಧಾನಸಭೆಯ ಪಾಂಡವಪುರ ತಾಲ್ಲೂಕಿನ ಚಿನಕುರಳಿ ಪಂಚಾಯಿತಿ ವ್ಯಾಪ್ತಿಯ ಇಳ್ಳೇನಹಳ್ಳಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಚುನಾವಣೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಇತಿಹಾಸ ಸೃಷ್ಟಿಸಿದೆ. ಒಟ್ಟು 10 ಸ್ಥಾನಗಳ ಪೈಕಿ 9 ಸ್ಥಾನಗಳನ್ನು ಭರ್ಜರಿಯಾಗಿ ಗೆದ್ದು, ಗ್ರಾಮೀಣ ರಾಜಕೀಯದಲ್ಲಿ ರೈತರ ಏಕತೆ, ನಾಯಕತ್ವ ಮತ್ತು ಸಂಕಲ್ಪದ ಶಕ್ತಿಯನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ಈ ಭರ್ಜರಿ ಜಯ ದರ್ಶನ್ ಪುಟ್ಟಣ್ಣಯ್ಯ ಅವರ “ಸ್ವರಾಜ್ಯ ಸಂಕಲ್ಪ”ದ ತತ್ವಗಳು ಗ್ರಾಮ ಮಟ್ಟದಲ್ಲೂ ಬೇರೂರಿರುವುದಕ್ಕೆ ಜ್ವಲಂತ ಸಾಕ್ಷಿಯಾಗಿದೆ. ಅಧಿಕಾರ ಗ್ರಾಮಕ್ಕೆ, ನಿರ್ಧಾರ ರೈತನಿಗೆ ಮತ್ತು ಅಭಿವೃದ್ಧಿ ಸಹಕಾರ ಸಂಘಗಳಿಂದಲೇ ಪ್ರಾರಂಭವಾಗಬೇಕು ಎಂಬ ಅವರ ಹೋರಾಟಕ್ಕೆ ಇಳ್ಳೆನಹಳ್ಳಿ ಸ್ಪಷ್ಟವಾಗಿ ಬೆಂಬಲ ಸೂಚಿಸಿದೆ. ಇಳ್ಳೇನಹಳ್ಳಿ ರೈತ ಸಂಘದ ಈ ಗೆಲುವು, ಸಂಘದ ಮೇಲೆ ಜನತೆ ಇಟ್ಟಿರುವ ಅಪಾರ ವಿಶ್ವಾಸ ಮಾತ್ರವಲ್ಲ; ಇದು ಹಣ, ಜಾತಿ, ಕುಟಿಲ ರಾಜಕಾರಣಕ್ಕಿಂತ ರೈತರ ಏಕತೆ ಮತ್ತು ಶುದ್ಧ ನಂಬಿಕೆಗೆ ಜನತೆ ಮೌಲ್ಯ ನೀಡಿದೆ ಎಂಬುದರ ಘೋಷಣೆಯಾಗಿದೆ. ರೈತ ಸಂಘದ ವಿಜಯ ಕುರಿತು ಪ್ರತಿಕ್ರಿಯೆ ನೀಡಿರುವ ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ, ಈ ವಿಜಯಕ್ಕೆ ಕಾರಣರಾದ ಸಂಘದ ಎಲ್ಲ ಸದಸ್ಯರು, ಕಾರ್ಯಕರ್ತರು, ಮುಖಂಡರು, ಮತದಾರರು ಮತ್ತು ಇಳ್ಳೇನಹಳ್ಳಿಯ ರೈತ ಸಮುದಾಯಕ್ಕೆ ಹೃತ್ಪೂರ್ವಕ ಧನ್ಯವಾದಗಳು. ನಿಮ್ಮ ಬೆಂಬಲವೇ ನಮ್ಮ ಹೋರಾಟದ ಬಲ ಎಂದಿದ್ದಾರೆ. #KarnatakaRajyaRaitaSanhga #created #history #malgudiexpress #malgudinews #news #TopNews
Malgudi Express
513 views
5 days ago
#📜ಪ್ರಚಲಿತ ವಿದ್ಯಮಾನ📜 ಗೌರವ ಡಾಕ್ಟರೇಟ್ ತಿರಸ್ಕರಿಸಿದ ಬಸವರಾಜ ಬೊಮ್ಮಾಯಿ ಬೆಂಗಳೂರು: ತಮಗೆ ನೀಡಿದ ಗೌರವ ಡಾಕ್ಟರೇಟ್ ಪದವಿಯನ್ನು ಮಾಜಿ ಸಿಎಂ ಮತ್ತು ಹಾವೇರಿ ಸಂಸದ ಬಸವರಾಜ ಬೊಮ್ಮಾಯಿ ತಿರಸ್ಕರಿಸಿದ್ದಾರೆ. ಹಾವೇರಿ ವಿಶ್ವವಿದ್ಯಾಲಯವು ತಮ್ಮ ಸಿಂಡಿಕೇಟ್ ಸಭೆಯಲ್ಲಿ ನನಗೆ ಗೌರವ ಡಾಕ್ಟರೇಟ್ ನೀಡಲು ತೀರ್ಮಾನಿಸಿರುವುದಕ್ಕೆ ಕುಲಪತಿಗಳು, ಉಪಕುಲಪತಿಗಳು, ಕುಲಸಚಿವರು ಹಾಗೂ ಸಿಂಡಿಕೇಟ್ ಸದಸ್ಯರಿಗೆ ಹೃತ್ಪೂರ್ವಕ ಕೃತಜ್ಞತೆಗಳು ಮತ್ತು ಧನ್ಯವಾದಗಳು ಎಂದಿದ್ದಾರೆ. ನಾನು ಗೌರವ ಡಾಕ್ಟರೇಟ್ ಸ್ವೀಕರಿಸುವುದಿಲ್ಲವೆಂದು ಈಗಾಗಲೇ ಕುಲಪತಿಗಳಿಗೆ ತಿಳಿಸಿದ್ದೇನೆ. ನಾನು ಸಾರ್ವಜನಿಕ ಸೇವೆಯಲ್ಲಿ ಇರುವುದರಿಂದ, ಸಾರ್ವಜನಿಕ ಸೇವೆಗೆ ಯಾವುದೇ ಪ್ರಶಸ್ತಿಯನ್ನು ಅಪೇಕ್ಷಿಸುವುದಿಲ್ಲ. ಸಾರ್ವಜನಿಕ ಸೇವೆಗೆ ಜನರ ಪ್ರೀತಿ ಮತ್ತು ವಿಶ್ವಾಸವೇ ನನಗೆ ಅತ್ಯಂತ ದೊಡ್ಡ ಗೌರವವೆಂದು ಭಾವಿಸುತ್ತೇನೆ. ಆದ್ದರಿಂದ ಗೌರವ ಡಾಕ್ಟರೇಟ್ ಸ್ವೀಕರಿಸುವುದಿಲ್ಲವೆಂದು ವಿನಮ್ರವಾಗಿ ಪುನರುಚ್ಚರಿಸುತ್ತೇನೆ ಎಂದಿದ್ದಾರೆ. ಗೌರವ ಡಾಕ್ಟರೇಟ್ ಎಂಬುದು ದೀರ್ಘಕಾಲದಿಂದ ಯಾವುದಾದರೂ ಕ್ಷೇತ್ರದಲ್ಲಿ ವಿಶಿಷ್ಟ ಮತ್ತು ಮಹತ್ತರ ಸೇವೆ ಸಲ್ಲಿಸಿದವರಿಗೆ ನೀಡಬೇಕಾದ ಗೌರವವೆಂಬುದು ನನ್ನ ಅಭಿಪ್ರಾಯ. ಹೀಗಾಗಿ ಇದನ್ನು ಅಂಥ ಸಾಧಕರಿಗೆ ನೀಡಬೇಕು. ರಾಜಕಾರಣಿಗಳಿಗೆ ಅಥವಾ ಸ್ವಯಂ ಪ್ರೇರಣೆಯಿಂದ ಸಮಾಜ ಸೇವೆಯಲ್ಲಿ ತೊಡಗಿರುವವರಿಗೆ ಗೌರವ ಡಾಕ್ಟರೇಟ್ ನೀಡುವುದು ಸಮಂಜಸವಲ್ಲ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ. ಈ ವಿಷಯದಲ್ಲಿ ಪುನರ್ ವಿಚಾರ ಮಾಡಬೇಕೆಂದು ವಿನಂತಿಸಿದ್ದಾರೆ. ಮತ್ತೊಮ್ಮೆ ವಿನಯಪೂರ್ವಕವಾಗಿ ಗೌರವ ಡಾಕ್ಟರೇಟ್ ಸ್ವೀಕರಿಸುವುದಿಲ್ಲವೆಂದು ತಿಳಿಸುತ್ತಾ, ಹಾವೇರಿ ವಿಶ್ವವಿದ್ಯಾಲಯಕ್ಕೆ ನನ್ನ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದಿದ್ದಾರೆ. #BasavarajaBommai #rejects #honorary #doctorate #Haveri #malgudiexpress #malgudinews #news #TopNews
Malgudi Express
484 views
6 days ago
#📜ಪ್ರಚಲಿತ ವಿದ್ಯಮಾನ📜 ಬೇಸಿಗೆ ಶಾಖ ಮತ್ತು ನಾಗರಿಕ ರಕ್ಷಣಾ ಇಲಾಖೆ ಹೆಸರಿನಲ್ಲಿ ಹರಿದಾಡುತ್ತಿರುವ ಸಂದೇಶ ಸತ್ಯವೇ? ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುದ್ದಿ ಏನು? ಕಳೆದ ಕೆಲವು ದಿನಗಳಿಂದ ವಾಟ್ಸಾಪ್ ಮತ್ತು ಫೇಸ್‌ಬುಕ್‌ನಲ್ಲಿ "ನಾಗರಿಕ ರಕ್ಷಣಾ ಇಲಾಖೆ" (Civil Defence Department) ಹೆಸರಿನಲ್ಲಿ ಒಂದು ಎಚ್ಚರಿಕೆಯ ಸಂದೇಶ ವೈರಲ್ ಆಗುತ್ತಿದೆ. ಅದರಲ್ಲಿ, "ಹೊರಗಿನ ತಾಪಮಾನ 45–47°C ತಲುಪಲಿದೆ, ಆದ್ದರಿಂದ ಎಸಿ ತಾಪಮಾನವನ್ನು 24°C ನಲ್ಲೇ ಇಡಿ ಮತ್ತು ಮಧ್ಯಾಹ್ನ ಹೊರಗೆ ಬರಬೇಡಿ" ಎಂದು ಸೂಚಿಸಲಾಗಿದೆ. ಮಾಲ್ಗುಡಿ ಎಕ್ಸ್ಪ್ರೆಸ್ ನಡೆಸಿದ ತನಿಖೆಯಲ್ಲಿ ಕಂಡುಬಂದ ಸತ್ಯಾಂಶಗಳು ಇಲ್ಲಿವೆ: 1. ಇದು ಅಧಿಕೃತ ಪ್ರಕಟಣೆಯೇ?: ಅಸತ್ಯ: ನಮ್ಮ ತನಿಖೆಯ ಪ್ರಕಾರ, ನಾಗರಿಕ ರಕ್ಷಣಾ ಇಲಾಖೆ ಇತ್ತೀಚಿನ ದಿನಗಳಲ್ಲಿ ಇಂತಹ ಯಾವುದೇ ಪ್ರಕಟಣೆ ಹೊರಡಿಸಿಲ್ಲ. ಈ ಸಂದೇಶ ಕಳೆದ ಹಲವು ವರ್ಷಗಳಿಂದ ಪ್ರತಿ ಬೇಸಿಗೆಯಲ್ಲಿ ಕೇವಲ ಹೆಸರುಗಳನ್ನು ಬದಲಾಯಿಸಿಕೊಂಡು (ಕೆಲವೊಮ್ಮೆ ಆರೋಗ್ಯ ಇಲಾಖೆ, ಕೆಲವೊಮ್ಮೆ ಇಂಧನ ಇಲಾಖೆ) ಹರಿದಾಡುತ್ತಿದೆ. 2. ಎಸಿ ತಾಪಮಾನ 24–25°C ನಲ್ಲಿರಬೇಕೇ?: ಸರಿ: ತಾಂತ್ರಿಕವಾಗಿ ಇದು ಸರಿಯಾದ ಸಲಹೆ. ತಜ್ಞರ ಪ್ರಕಾರ, ಎಸಿಯನ್ನು 24 ಡಿಗ್ರಿಯಲ್ಲಿ ಇಡುವುದರಿಂದ ದೇಹದ ಆರೋಗ್ಯಕ್ಕೂ ಉತ್ತಮ ಮತ್ತು ವಿದ್ಯುತ್ ಬಿಲ್ ಕೂಡ ಕಡಿಮೆ ಬರುತ್ತದೆ. ಆದರೆ, ತಾಪಮಾನ 45 ಡಿಗ್ರಿ ದಾಟಿದ ಕೂಡಲೇ ಎಸಿ ಸ್ಫೋಟಗೊಳ್ಳುತ್ತದೆ ಅಥವಾ ಕೆಟ್ಟುಹೋಗುತ್ತದೆ ಎಂಬ ಆತಂಕ ಪಡಬೇಕಿಲ್ಲ. ಆಧುನಿಕ ಎಸಿಗಳು ಹೆಚ್ಚಿನ ತಾಪಮಾನವನ್ನು ತಡೆದುಕೊಳ್ಳುವ ಸಾಮರ್ಥ್ಯ ಹೊಂದಿವೆ. 3. ಮಧ್ಯಾಹ್ನ 10 ರಿಂದ 3 ರವರೆಗೆ ಹೊರಗೆ ಹೋಗಬಾರದೇ?: ಭಾಗಶಃ ಸರಿ: ಹವಾಮಾನ ಇಲಾಖೆ ಮತ್ತು ವೈದ್ಯರು ಬೇಸಿಗೆಯ ಸಮಯದಲ್ಲಿ ಮಧ್ಯಾಹ್ನ 11 ರಿಂದ ಸಂಜೆ 4 ರವರೆಗೆ ನೇರ ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳಬೇಡಿ ಎಂದು ಸಲಹೆ ನೀಡುತ್ತಾರೆ. ಇದು ಹೀಟ್ ಸ್ಟ್ರೋಕ್ ತಡೆಯಲು ಸಹಕಾರಿ. ಸಂದೇಶದಲ್ಲಿರುವ ಈ ಭಾಗ ಜನಹಿತ ದೃಷ್ಟಿಯಿಂದ ಉಪಯುಕ್ತವಾಗಿದೆ. ಮಾಲ್ಗುಡಿ ಎಕ್ಸ್ಪ್ರೆಸ್ ತೀರ್ಪು: ವೈರಲ್ ಆಗಿರುವ ಸಂದೇಶದಲ್ಲಿರುವ ಆರೋಗ್ಯದ ಸಲಹೆಗಳು (ನೀರು ಕುಡಿಯುವುದು, ಬಿಸಿಲಿನಲ್ಲಿ ಹೋಗದಿರುವುದು) ಪಾಲಿಸಲು ಯೋಗ್ಯವಾಗಿವೆ. ಆದರೆ, ಈ ಸಂದೇಶ ನಾಗರಿಕ ರಕ್ಷಣಾ ಇಲಾಖೆಯಿಂದ ಬಂದ ಅಧಿಕೃತ ಎಚ್ಚರಿಕೆಯಲ್ಲ. ಇದು ಹಳೆಯ ಫಾರ್ವರ್ಡ್ ಮೆಸೇಜ್ ಆಗಿದ್ದು, ಸಾರ್ವಜನಿಕರು ಅನಗತ್ಯವಾಗಿ ಆತಂಕಕ್ಕೊಳಗಾಗುವ ಅಗತ್ಯವಿಲ್ಲ. ಓದುಗರಲ್ಲಿ ಮನವಿ: ಯಾವುದೇ ಅಧಿಕೃತ ಮಾಹಿತಿಗಾಗಿ ಸರ್ಕಾರದ ವೆಬ್‌ಸೈಟ್‌ಗಳು ಅಥವಾ ವಿಶ್ವಾಸಾರ್ಹ ಸುದ್ದಿ ಮಾಧ್ಯಮಗಳನ್ನು ಗಮನಿಸಿ. ಆಧಾರರಹಿತ ಸಂದೇಶಗಳನ್ನು ಹಂಚುವ ಮೊದಲು ಪರಿಶೀಲಿಸಿ. #message #spread #name #summerheat #CivilDefenseDepartment #true #factcheck #malgudiexpress #malgudinews #news #TopNews