🕉️ನನ್ನ ದೇವರ ಭಕ್ತಿ🕉️

ಮಂ.ಕೊ....
47.7K views
3 days ago
ಶ್ರೀ ವಿಷ್ಣು ಆರಾಧನೆ ಅತ್ಯಂತ ಶ್ರೇಷ್ಠವಾದ ದಿನ ಅಧಿಕ ಏಕಾದಶಿಯ ಈ ಗುರುವಾರ 🌹🌹🌹🌹🌹 ಅಧಿಕ ಮಾಸದ ಏಕಾದಶಿ ಮಹತ್ವ ಈ ದಿನ ವಿಷ್ಣು ಸಹಸ್ರನಾಮ ಪಠಿಸುವುದು ದೇವಸ್ಥಾನಗಳಿಗೆ ಭೇಟಿ ನೀಡುವುದು ಹಾಗೂ ಬಡವರಿಗೆ ದಾನ ಮಾಡುವುದರಿಂದ ವಿಶೇಷ ಅನುಗ್ರಹ ಲಭಿಸುತ್ತದೆ. 1 ಮೂರು ವರ್ಷಗಳಿಗೊಮ್ಮೆ ಬರುವ ಈ ವಿಶೇಷ ಏಕಾದಶಿಯಲ್ಲಿ ಉಪವಾಸ ಮಾಡುವುದರಿಂದ, ವರ್ಷವಿಡೀ ಬರುವ ಎಲ್ಲಾ ಏಕಾದಶಿಗಳನ್ನು ಆಚರಿಸಿದಷ್ಟು ಪುಣ್ಯ ಫಲ ಸಿಗುತ್ತದೆ 2 ಭಗವಾನ್ ವಿಷ್ಣು ಮತ್ತು ಶಿವನ ಅನುಗ್ರಹಕ್ಕೆ ಪಾತ್ರರಾಗಲು ಇದು ಅತ್ಯಂತ ಸೂಕ್ತವಾದ ಸಮಯ. ಇದು ಹಿಂದಿನ ಜನ್ಮದ ಪಾಪಗಳನ್ನು ಮತ್ತು ಜನ್ಮಜನ್ಮಾಂತರದ ದೋಷಗಳನ್ನು ನಿವಾರಿಸುತ್ತದೆ 3 ಈ ವ್ರತವನ್ನು ಶ್ರದ್ಧಾ-ಭಕ್ತಿಯಿಂದ ಆಚರಿಸಿ, ಧ್ಯಾನದಲ್ಲಿ ತೊಡಗಿಸಿಕೊಳ್ಳುವುದರಿಂದ ಮನಸ್ಸು ಮತ್ತು ಇಂದ್ರಿಯಗಳ ಮೇಲೆ ಹಿಡಿತ ಸಿಗುತ್ತದೆ. ಇದು ಅಂತಿಮವಾಗಿ ಮೋಕ್ಷವನ್ನು ಕರುಣಿಸುತ್ತದೆ ಎಂಬ ನಂಬಿಕೆ ಇದೆ. ಮತ್ತು ಈ ಮಾಸದಲ್ಲಿ ಜನ್ಮ ದಿನ ಹಾಗು ಹಿರಿಯರ ನೆನಪಿನ ದಿನ ಆಚರಿಸಬಾರದು ಶುಭ ಕಾರ್ಯಗಳನ್ನು ಆರಂಭಿಸಬಾರದು ಮುಕ್ತಾಯವೂ ಮಾಡಬಾರದು. ಪತ್ರಿಕೆಗಳಲ್ಲಿ ಓದಿದ ಬರಹ. #🕉️ನನ್ನ ದೇವರ ಭಕ್ತಿ🕉️ #🙏 ದೈವ ಭಕ್ತಿ 🙏 #🙏 ಶುಭ ದಿನ 🙏
ಮಂ.ಕೊ....
1.6K views
6 days ago
ನನ್ನ ಹೆಗಲ ಮೇಲಿನ ಜವಾಬ್ದಾರಿಗಳ ನಡುವೆ ನಿನ್ನ ಹೆಗಲ ಮೇಲಿದ್ದ ಬಾಲ್ಯ ನೆನಪಾಗುತ್ತಿದೆ ಅಪ್ಪ ನೀನು ಹೇಳಿಕೊಟ್ಟ ಬದುಕಿನ ಪಾಠಗಳೇ ಇಂದು ನನ್ನನ್ನು ಒಬ್ಬ ಜವಾಬ್ದಾರಿಯುತ ವ್ಯಕ್ತಿಯನ್ನಾಗಿ ಮಾಡಿದೆ ಅಪ್ಪ. ನನ್ನ ಸೋಲಿನಲ್ಲಿ ಧೈರ್ಯ ತುಂಬಿದ ಗುರು ನೀನು ನನ್ನ ಗೆಲುವನ್ನು ನೋಡಿ ಸಂಭ್ರಮಿಸಿದ ಗೆಳೆಯ ನೀನು ನಿನ್ನ ಕಣ್ಣಿನ ಕಠಿಣತೆಯ ಹಿಂದಿದ್ದ ಮಮಕಾರವನ್ನು ಇಂದು ನಾನು ಬೆಳೆದು ನಿಂತಾಗ ಅರಿತುಕೊಂಡೆ ಅಪ್ಪ ಅಪ್ಪ ನಿನ್ನ ಹೆಜ್ಜೆಯ ಜಾಡಿನಲ್ಲಿ ನಡೆಯುವ ಆಸೆ ನಿನ್ನ ಪ್ರಾಮಾಣಿಕತೆಯೇ ನನಗೆ ದಾರಿದೀಪ ಮಗನಾಗಿ ನಿನ್ನ ಕೀರ್ತಿಯನ್ನು ಹೆಚ್ಚಿಸುವುದೊಂದೇ ನನ್ನ ಬದುಕಿನ ಅತಿ ದೊಡ್ಡ ಗುರಿ ಅಪ್ಪ. 🙏 ಅಪ್ಪನ ದಿನದ ಶುಭಾಶಯಗಳು 🙏 #🕉️ನನ್ನ ದೇವರ ಭಕ್ತಿ🕉️ #🌇 ಸಂಜೆ ಸಮಯ