#ದಿನಕ್ಕೊಂದು ಕಥೆ #ಶ್ರೀ ವಿಶ್ವ ಗುರು ಬಸವಣ್ಣನವರು
ಭಕ್ತಿ ಭಂಡಾರಿ ಬಸವಣ್ಣನವರು :-
12ನೇ ಶತಮಾನದ ಶರಣ ಪಂಥದ ಪ್ರಮುಖರಾದ, ಮಾನವತಾವಾದಿ ಬಸವಣ್ಣನವರು. ಅಂದಿನ ಸಮಾಜದಲ್ಲಿ ನಡೆಯುತ್ತಿದ್ದ ಮೂಡನಂಬಿಕೆ, ತಾರತಮ್ಯ, ಜಾತಿಭೇದಗಳನ್ನು ಧಿಕ್ಕರಿಸಿದರು. ದೇವಸ್ಥಾನ ಮತ್ತು ಸಾಮಾಜಿಕ ವ್ಯವಸ್ಥೆಗಳಿಗೆ ಹೆಚ್ಚು ಮನ್ನಣೆ ಕೊಡಲಿಲ್ಲ. ಹೀಗಾಗಿ ಬಸವಣ್ಣನವರ ಕುರಿತಾದ ಆಧಾರಗಳು ಕಡಿಮೆ. ಕೆಲವು ಪುರಾಣದಲ್ಲಿ ಹೆಚ್ಚು ಸಿಗದಿದ್ದರೂ ಇವರ ಜನನ ಕ್ರಿ. ಶ. 1196 ರ ಆಜು ಬಾಜಿನಲ್ಲಿ . ಈ ಆಧಾರದ ಮೇಲೆ ವೈಶಾಖ ಶುದ್ಧ ತದಿಗೆ ದಿನ ‘ಬಸವ ಜಯಂತಿ’ ಆಚರಣೆ ಮಾಡುತ್ತಾರೆ. ಇವರ ಕುಟುಂಬ ನೆಲೆಸಿದ್ದು ವಿಜಯ ಪುರ ಜಿಲ್ಲೆಯ ಬಸವನ ಬಾಗೇವಾಡಿಯ ಬ್ರಾಹ್ಮಣರ ಅಗ್ರಹಾರದಲ್ಲಿ. ಇವರ ತಂದೆ ತಾಯಿ ಶೈವ ಮತದವರಾದ ಮಾದರಸ- ಮಾದಲಾಂಬಿಕೆ. ಬಹಳ ಕಾಲ ಮಕ್ಕಳಿ ಲ್ಲದ ಕಾರಣ ಅವರು ‘ನಂದಿ’ ಪೂಜೆ ಮಾಡಿದರು. ಪೂಜೆಯ ಫಲದಿಂದ ಗರ್ಭಿಣಿ ಯಾದರು. ಮಾದಲಾಂಬಿಕೆ ತವರೂರು ಇಂಗಳೇಶ್ವರ ದಲ್ಲಿ ಜನನ. ಮಗುವಿಗೆ ಬಸವಣ್ಣ ಎಂದು ನಾಮಕರಣ ಮಾಡಿದರು.
ವೈದಿಕ ಬ್ರಾಹ್ಮಣ ಜಾತಿಯಲ್ಲಿ ಹುಟ್ಟಿದ ಇವರು, ವೀರಶೈವರಾಗಲು ಒಂದು ಘಟನೆ ನಡೆಯಿತು. ಧರ್ಮದ ಹೆಸರಿನಲ್ಲಿ ಜಾತಿ ಪದ್ಧತಿ, ಕಲಹ, ಭೇದ ಭಾವ, ಹೆಣ್ಣು ಗಂಡು, ಮೇಲು- ಕೀಳು, ಹೀಗೆ ಸಮಾಜದಲ್ಲಿ ನಡೆಯುವ ಅಹಿತಕರ ಸಂಗತಿಗಳ ನ್ನು ಬಸವಣ್ಣನವರು ವಿರೋಧಿಸುತ್ತಾ ಬಂದರು. ಅವರ ಉಪನಯನದ ಸಮಯ ದಲ್ಲಿ ಅಕ್ಕನಿಗೂ ( ಸಹೋದರಿ) ಉಪನಯನ ಮಾಡಿ ಎಂದರು. ಪುರೋಹಿತರು ಗಂಡು ಮಕ್ಕಳಿಗೆ ಮಾತ್ರ ಉಪನಯ ಪದ್ಧತಿ ಇರುವುದು ಎಂದಾಗ, ಸ್ತ್ರೀ ಪುರುಷರ ನಡುವೆ ಇಂಥ ಅಸಮಾನತೆ ತೋರುವ ಶಾಸ್ತ್ರ ನನಗೆ ಬೇಡ ಎಂದು ಉಪನಯನ ತಿರಸ್ಕರಿಸಿ ಎದ್ದು ವೈದಿಕ ಸಂಸ್ಕೃತಿಯ ಕರ್ಮಾಚರಣೆಗಳನ್ನು ವಿರೋಧಿಸಿ ಜನಿವಾ ರ ತೆಗೆದುಹಾಕಿ ಹೊರಟರು. ಮುಂದೆ ಶೈವ ಗುರುಗಳಾದ ಜಾತವೇಂದ್ರ ಮುನಿಗ ಳಲ್ಲಿ ಅಧ್ಯಯನ ಮಾಡಿ ವೇದ, ವ್ಯಾಕರಣ, ತತ್ವಶಾಸ್ತ್ರ, ಕನ್ನಡ ಮತ್ತು ಸಂಸ್ಕೃತದ ಲ್ಲಿ ಪಾಂಡಿತ್ಯವನ್ನು ಪಡೆದರು. ಬ್ರಾಹ್ಮಣರಾಗಿ ಹುಟ್ಟಿದ ಬಸವಣ್ಣನವರು ಕೂಡಲ ಸಂಗಮದಲ್ಲಿ “ಕಪ್ಪಡಿ ಸಂಗಯ್ಯ” ರವರಿಂದ ದೀಕ್ಷೆಯನ್ನು ಪಡೆದು ವೀರಶೈವರಾ ದರು. ಮುಂದೆ ಅವರ ವಚನಗಳಲ್ಲಿ “ಕೂಡಲ ಸಂಗಮ” ಎಂಬುದನ್ನೇ ಅಂಕಿತ ನಾಮ ವನ್ನಾಗಿ ಮಾಡಿಕೊಂಡರು. ಹಾಗೆ ಸಾಮಾಜಿಕ ಅಸಮಾನತೆಗಳ ಮೂಲ ಕಾರಣದ ಕುರಿತಾಗಿ ಪಂಡಿತರೊಂದಿಗೆ ಚರ್ಚೆ ನಡೆಸಿದರು.
ಕೂಡಲಸಂಗಮದಲ್ಲಿನ ಶಿವಾಲಯ ಅವರಿಗೆ ಆರಾಧನಾ ಕೇಂದ್ರವಾಗಿತ್ತು. ಕೆಲವು ಕಾಲ ಆಧ್ಯಾತ್ಮದಲ್ಲೇ ಕಳೆದರು. ಒಂದು ರಾತ್ರಿ ಕನಸಿನಲ್ಲಿ ಕೂಡಲ ಸಂಗಮದೇವ ಕಾಣಿಸಿ “ಭೂಮಿಗೆ ಅಧಿಪತಿಯಾಗಿ, ಸಮಾಜ ಸುಧಾರಕನಾಗು ಎಂಬ ಆದೇಶ ದೊರೆತು ಅಲ್ಲಿಂದ ಹೊರಟು ಮಂಗಳವೇಡಿಗೆ ಬಂದು ಬಿಜ್ಜಳನ ಅರಮನೆಯ ಕಟ್ಟೆಯ ಮೇಲೆ ಕುಳಿತರು. ಆಗ ಒಂದು ಚಮತ್ಕಾರ ನಡೆಯಿತು. ದಂಡಾಧಿಕಾರಿ
ಆಗಮಿಸಿ, ಹಣ ಎಷ್ಟು ಎಂದು ಕರ್ಣಿಕರಲ್ಲಿ ಲೆಕ್ಕಾಚಾರ ಕೇಳುತ್ತಿದ್ದರು. ಕರ್ಣಿಕರು ಹಣ ಕೊಡುವುದರಲ್ಲಿ ಮೋಸ ಮಾಡಿದ್ದು ಬಸವಣ್ಣನವರಿಗೆ ತಿಳಿದು ದಂಡಾಧಿ ಪತಿಗಳಿಗೆ ಹೇಳಿದರು. ದಂಡಾಧಿಪತಿಗಳು ಪರಿಶೀಲಿಸಿ ಬಸವಣ್ಣನವರ ಈ ನಡೆಯನ್ನು ಮೆಚ್ಚಿ ಅವರನ್ನು ರಾಜನಿಗೆ ಪರಿಚಯ ಮಾಡಿಸಿದರು ಮತ್ತು ತಮಗೆ ಸಹಾಯಕ ರಾಗಿ ಬಸವಣ್ಣನವರನ್ನು ನೇಮಕ ಮಾಡಿಕೊಳ್ಳಲು ಅನುಮತಿ ಪಡೆದರು. ಮಕ್ಕಳಿಲ್ಲದ ದಂಡಾದಿಪನ ಕಾಲಾನಂತರ ರಾಜನ ದಂಡಾಧಿಕಾರಿಗಳ
ಅಪಾರ ಸಂಪತ್ತಿಗೆ ಬಸವಣ್ಣನವರನ್ನೇ ಒಡೆಯರನ್ನಾಗಿ ಮಾಡಿದರು ಮತ್ತು ಬಸವಣ್ಣನವರನ್ನೇ ರಾಜ್ಯದ ದಂಡಾದೀಪರನ್ನಾಗಿ ಮಾಡಿದನು. ನಂತರ ಇವರ ವಿವಾಹ ದಂಡಾಧಿಪತಿ ಸಿದ್ದರಸನ ಮಗಳು ನೀಲಾಂಬಿಕೆ ಹಾಗೆ ಬಿಜ್ಜಳನ ಆಸ್ಥಾನದ ಮತ್ತೊಬ್ಬ ಮಂತ್ರಿ ಬಲದೇವನ ಮಗಳಾದ ಗಂಗಾಂಬಿಕೆಯನ್ನು ವಿವಾಹವಾದರು.
ಬಸವಣ್ಣನವರ “ಕಾಯಕವೇ ಕೈಲಾಸ” ಈ ನುಡಿ ಸಾಮಾಜಿಕ ಬದಲಾವಣೆಗೆ ಪ್ರೇರಣೆ ಎಂಬಂತೆ ಒಂದು ಘಟನೆ ನಡೆಯುತ್ತದೆ. ಅವರು ಹೀಗೆ ಹೋಗುತ್ತಿದ್ದಾಗ ನೀರು ತುಂಬಿದ ಮಡಿಕೆಯನ್ನು ತಲೆಯ ಮೇಲೆ ಹೊತ್ತ ಒಬ್ಬ ವಯಸ್ಸಾದ ಮಹಿಳೆ ಭಾರ ಹೆಚ್ಚಾಗಿ ಒದ್ದಾಡುವುದನ್ನು ನೋಡಿ, ನಾನು ಸಹಾಯ ಮಾಡಲೆ ಎಂದು ಕೇಳಿದರು. ಆಯ್ತು ಆದರೆ ನೀನು ಈ ಭಾರ ಹೊತ್ತು ಕೊಂಡರೆ ನನ್ನ ಮನೆಯ ತನಕವೂ ತಂದುಕೊಡಬೇಕು ಎಂದಳು. ಆಕೆ ಹಾಕಿದ ಶರತ್ತನ್ನು ಒಪ್ಪಿದ ಬಸವಣ್ಣ ನೀರು ತುಂಬಿದ ಮಡಿಕೆ ಹೊತ್ತುಕೊಂಡು ಹೋದಂತೆ ಬಿಸಿಲಿನ ತಾಪ ಹಾಗೂ ಭಾರ ತಡೆಯಲಾರದೆ ಬಳಲಿ ಏನು ಮಾಡಲಿ ಎಂಬ ಮುಖಭಾವ ನೋಡಿದ ವೃದ್ಧೆ, ಅವರಿಗೆ ಪ್ರೋತ್ಸಾಹ ತುಂಬಲು, ನೋಡು ಸಹಾಯ ಮಾಡುವುದು ಅಷ್ಟು ಸುಲಭವಲ್ಲ ನೀನು ಎಷ್ಟೇ ಕಷ್ಟದಲ್ಲಿದ್ದರೂ ಪರರಿಗೆ ಸಹಾಯ ಮಾಡಬೇಕು ಎಂದು ಹೇಳಿದರು. ಆ ಹೊತ್ತಿಗೆ ಮನೆ ಬಂತು, ನೀರಿನ ಕೊಡ ಕೆಳಗಿಟ್ಟ ಬಸವಣ್ಣ ನವರು ಅಂತು ಮನೆ ಮುಟ್ಟಿದೆ ಎಂದು ನಿಟ್ಟುಸಿರು ಬಿಟ್ಟು ಇನ್ನೇನು ಹೊರಡಲು ಆಕೆಯತ್ತ ತಿರುಗಿ ನೋಡುತ್ತಾರೆ ಆ ಮಹಿಳೆ ಬಸವಣ್ಣನವರ ಪ್ರಾಮಾಣಿಕ ಸೇವೆ ಪರೀಕ್ಷಿಸಲು ಬಂದ “ಕೂಡಿಲಿನಿ ದೇವತೆಯ ಮಾರುವೇಷದಾರಿ” ಎಂಬುದು ತಿಳಿಯಿತು. ಇದು ಗುರುತು ಪರಿಚಯವಿಲ್ಲದ ವೃದ್ಧೆಗೆ ಸೇವಾ ಭಾವದಿಂದ ಸಹಾಯ ಮಾಡಿದ ಅವರ ವ್ಯಕ್ತಿತ್ವ ವನ್ನು ನಿರೂಪಿಸುತ್ತದೆ. ಈ ಘಟನೆ ಬಸವಣ್ಣನವರ ಕಾಯಕ ಅಥವಾ ನಿಸ್ವಾರ್ಥ ಸೇವೆಯ ಕುರಿತು ಉಲ್ಲೇಖಿಸಿದ್ದಾರೆ.
ಎರಡನೇ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿ ಆಗಿದ್ದ ಬಸವಣ್ಣನವರು ಕೊನೆಗೆ ಆಧ್ಯಾತ್ಮಿಕ ಮತ್ತು ಸಾಮಾಜಿಕ ಸುಧಾರಣೆಯತ್ತ ತಮ್ಮನ್ನು ತೊಡಗಿಸಿಕೊಳ್ಳುವ
ಆಸಕ್ತಿಯಿಂದ ಮಂತ್ರಿ ಪದವಿಯನ್ನು ತ್ಯಜಿಸಿ ತಾವು ಹಿಡಿದ ಕಾಯಕದಲ್ಲಿ ತೊಡಗಿ ಯಶಸ್ವಿಯಾದರು. ಇವರ ದೃಷ್ಟಿಯಲ್ಲಿ ಕಾಯಕ ಅಥವಾ ಕೆಲಸ ಜೀವನೋಪಾಯ ದ ಸಾಧನವಲ್ಲ. ಇತರರ ಸೇವೆ ಮತ್ತು ಸಮಾಜದ ಒಳಿತಿಗೆ ಸಹಾಯ ಮಾಡಲು
ಇದು ಮಾರ್ಗವಾಗಿದೆ. ಸೇವೆಯ ಮೂಲಕ ದೇವರನ್ನು ಕಾಣಬಹುದು. ಪ್ರತಿಯೊ ಬ್ಬರು ತಮ್ಮ ಕೌಶಲ್ಯ ಮತ್ತು ಪ್ರತಿಭೆಯಿಂದ ಇತರರಿಗೆ ಸಹಾಯ ಮಾಡುವುದೇ ದೇವರ ಸೇವೆ ಎಂದು ನಂಬಿದ್ದರು. ನಿಸ್ವಾರ್ಥದಿಂದ ಮಾಡುವ ಸಮಾಜ ಸೇವೆಯೇ ದೇವರ ಸೇವೆ ಇದು ಎಲ್ಲರ ಆಧ್ಯಕರ್ತವ್ಯ ಇದೇ ಬಸವಣ್ಣನವರ ಮುಖ್ಯ ತತ್ವವಾಗಿತ್ತು.
ತತ್ವಗಳು:- ಧಾರ್ಮಿಕ ಸಮಾನತೆ, ಕಾಯಕ, ದಾಸೋಹ. ಏಕದೇವೋಪಾಸನೆ, ಬಹು ದೇವತಾರಾಧನೆಯಿಂದ ವರ್ಣಭೇದ ಜಾತಿಭೇದ ವರ್ಗಭೇಧಗಳಾಗಿ ಜಾತಿ ಕಲಹಗಳು ಹೆಚ್ಚಾಗುತ್ತದೆ ಎಂದು ಇವರು “ಈಶ್ವರಾರಾಧನೆ” ಯನ್ನು ಪ್ರತಿಪಾದಿ ಸಿದರು. ಇವರ ಹೋರಾಟ ವರ್ಣ ಪದ್ಧತಿ, ಜಾತಿ ತಾರತಮ್ಯ, ಮೂಢನಂಬಿಕೆ
ವಿರುದ್ಧ ಆಗಿತ್ತು. ಇವರ ಪರಿಕಲ್ಪನೆ ಇಷ್ಟಲಿಂಗ, ಮೂರ್ತಿ ಪೂಜೆ ವಿರೋಧಿಸಿದರು. ಕ್ರಾಂತಿ, ಅಂತರ್ಜಾತಿ ವಿವಾಹ ಸ್ವತಃ ಇವರೇ ಬ್ರಾಹ್ಮಣ ಮಧುವರಸರ ಮಗಳನ್ನು ಕುಮಾರ ಹರಳಯ್ಯನ ಮಗನಿಗೆ ವಿವಾಹ ಮಾಡಿಸಿದರು. ಇದು ಬಸವಣ್ಣನವರ ಅಂತ್ಯಕ್ಕೆ ಕಾರಣವಾಯಿತು ಎಂಬ ಮಾತು ಇದೆ. ವ್ಯಕ್ತಿ ಉತ್ತಮ ಸಾಧಕನಾಗಲು ಪಂಚಮಾರ್ಗವನ್ನು ತಿಳಿಸಿದ್ದಾರೆ. ಹಾಗೆ ಮೂರ್ತಿ ಪೂಜೆಯನ್ನು ವಿರೋಧಿಸಿದರು. “ಕಾಯಕವೇ ಕೈಲಾಸ” ಪ್ರಮುಖ ತತ್ವವಾಗಿತ್ತು.
ಇವರ ಸಾವಿನ ಕುರಿತು ಹಲವು ಅಭಿಪ್ರಾಯಗಳಿವೆ. ಬಿಜ್ಜಳನು ಸಂಪ್ರದಾಯಸ್ಥರ
ಮನವೊಲಿಕೆಗಾಗಿ ಶಿವಶರಣರನ್ನು ನಿರಾಕರಿಸಿದನು. ಇದರಿಂದ ಬಸವಣ್ಣನವರು ಬಿಜ್ಜಳನ ಸಂಸ್ಥಾನದ ಉದ್ಯೋಗವನ್ನು ತ್ಯಜಿಸಿ. ಕೂಡಲಸಂಗಮಕ್ಕೆ ಹೋಗಿ ಅಲ್ಲಿ ಲಿಂಗೈಕ್ಯರಾದರು ಎನ್ನುತ್ತಾರೆ. ಇನ್ನೊಂದು ವಾದ ಕಲ್ಯಾಣ ಕ್ರಾಂತಿ ನಡೆಸಿದ ಬಿಜ್ಜಳ ನನ್ನು ಜಗದೇವ ಎನ್ನುವವನು ಕೊಂದಿದ್ದರಿಂದ, ಬಸವಣ್ಣನವರು ಕೂಡಲಸಂಗ ಮಕ್ಕೆ ಹೋಗಿ ಅಲ್ಲಿ ಲಿಂಗೈಕ್ಯರಾದರು. ಅದೇನೆ ಇರಲಿ ಅವರು ಬದುಕಿನ 62 ವರ್ಷಗಳ ಉದ್ದಕ್ಕೂ ಸಾಧಿಸದ ಸಾಧನೆಗಳ ವಿಚಾರಗಳನ್ನು ಸಮಾಜಕ್ಕೆ ಬಿತ್ತರಿಸಿದ್ದು ಶತಶತಮಾನಗಳೇ ಉರುಳಿದರು ಅಳಿಯುವುದಿಲ್ಲ. ಇವರಿಗೆ ಸಂದ ಗೌರವಗಳು ಜಗಜ್ಯೋತಿ ಬಸವೇಶ್ವರ ಕ್ರಾಂತಿಯೋಗಿ ಬಸವಣ್ಣ ಭಕ್ತಿ ಭಂಡಾರಿ ಬಸವಣ್ಣ ಮಹಾಮಾನವತಾವಾದಿ ಹಾಗೆ ಅಂಚೆ ಚೀಟಿಮತ್ತು ನಾಣ್ಯದ ಮೇಲೆ ಮುಖಚಿತ್ರವನ್ನು ಹಾಕಿದ ಮೊದಲ ಕನ್ನಡಿಗ ಬಸವಣ್ಣನವರು. ಈ ಕಥೆಯನ್ನು ಬರಹ ರೂಪಕ್ಕೆ ತಂದವರು — ಆಶಾ ನಾಗಭೂಷಣ.
ಪವಾಡಗಳು:- ಬಸವಣ್ಣನವರ ಸಾಮಾಜಿಕ ಕ್ರಾಂತಿಯನ್ನು ಕಂಡ ಕೆಲವರು ಅವರನ್ನು ಅಪಹರಿಸಲು ಯೋಚಿಸಿದರು. ಹಾಗೆ ಬಂದ ಅವರುಗಳು ಕಪ್ಪು ಬಟ್ಟೆಯಲ್ಲಿ ಪುಟ್ಟ ಬದನೆಕಾಯಿಯನ್ನು ಕಟ್ಟಿ ಲಿಂಗವೆಂದು ಹಾಕಿಕೊಂಡು ಬಂದರು. ಕಳ್ಳರು ರಾತ್ರಿ ಬಸವಣ್ಣನವರ ಮನೆಗೆ ದಾಸೋಹಕ್ಕೆ ಬಂದು ರಾತ್ರಿ ಊಟ ಮಾಡಿದರು. ಆಗೆಲ್ಲ ಹಗಲು ಚೆನ್ನಾಗಿ ದುಡಿದು, ರಾತ್ರಿ ಬೇಗನೆ ಮಲಗಿ ನಿದ್ರಿಸುತ್ತಿದ್ದರು. ಬಂದ ಕಳ್ಳರು ಬಸವಣ್ಣನವರ ಕೋಣೆಗೆ ನುಗ್ಗಿದರು ಅವರನ್ನು ಕಟ್ಟಲು ಹಗ್ಗಗಳನ್ನು ತಂದಿದ್ದರು. ಆ ಹಗ್ಗಗಳಿಂದ ಬಸವಣ್ಣನವರ ಕಾಲನ್ನು ಕಟ್ಟಿದರು. ಆಗ ಎಚ್ಚರವಾದ ಬಸವಣ್ಣನವರು ಶರಣು ಶರಣಾರ್ಥಿ ಎಂದು ಅವರಿಗೆ ಕೈಮುಗಿದು ಅವರ ಕಾಲು ಮುಟ್ಟಿ ಸಂಗಮದೇವ ಈ ರೂಪದಲ್ಲಿ, ಈ ವೇಳೆಯಲ್ಲಿ ಬಂದೆಯಾ? ಎಂದು ಭಕ್ತಿಯಿಂದ ನಮಸ್ಕರಿಸಿದರು.
ಇದನ್ನು ನೋಡಿ ಕಳ್ಳರ ಮನಸ್ಸು ಕಸಿವಿಸಿ ಆಯಿತು. ಬಸವಣ್ಣ ಹೇಳಿದರು ಜಂಗಮ ಸ್ವಾಮಿಗಳೇ ನಡುರಾತ್ರಿಯಲ್ಲಿ ಏಕೆ ಬಂದಿರಿ ನೀವು ಕರೆದಿದ್ದರೆ ಬರುತ್ತಿದ್ದೆ. ಎಂದರು. ಇದನ್ನು ಕೇಳಿ ಕಳ್ಳರ ಮನಸ್ಸು ಕರಗಿ ನಮ್ಮದು ತಪ್ಪಾಯ್ತು ನಾವು ಶರಣರಲ್ಲ ಕಳ್ಳರು ಎಂದರು. ಇಲ್ಲಪ್ಪ ನೀವು ಶಿವಶರಣೆ ಎಂದರು. ಆಗ ಅವರು ಇಲ್ಲ ನೀವು ತಪ್ಪು ತಿಳಿದಿದ್ದೀರಿ ನಾವು ಕುತ್ತಿಗೆಯಲ್ಲಿ ಕಟ್ಟಿಕೊಂಡ ಬದನೆಕಾಯಿ ಯನ್ನು ನೀವು ಲಿಂಗವೆಂದು ಕೊಂಡಿದ್ದೀರಿ ಅಲ್ಲ ಎಂದರು. ಇಲ್ಲ ನೀವು ಲಿಂಗ ವನ್ನೇ ಕಟ್ಟಿಕೊಂಡಿದ್ಧೀ ತೆಗೆದು ನೋಡಿರಿ ಎಂದಾಗ ಅವರು ನೋಡುತ್ತಾರೆ ಅವು ಇಷ್ಟಲಿಂಗಗಳಾಗಿದ್ದವು. ಕಳ್ಳರಿಗೆ ಆಶ್ಚರ್ಯವಾಯಿತು ಗೊತ್ತಿದ್ಧೇ ಬದನೆಕಾಯಿ ಕಟ್ಟಿಕೊಂಡು ಬಂದಿದ್ದರೂ, ಬಸವಣ್ಣನವರು ಹೇಳಿದ ಮೇಲೆ “ಲಿಂಗವಾಯಿತು” ಎಂಥ ಮಹಾನುಭಾವರು., ಏನು ಚಮತ್ಕಾರ ಬದನೆಕಾಯಿ ಲಿಂಗವಾಯಿತು
ಕಳ್ಳತನ ಮಾಡಲು ಬಂದ ನಮ್ಮನ್ನು ಜಂಗಮರೆಂದು ಉಪಚರಿಸಿದರು. ಪಶ್ಚಾತಾಪದಿಂದ ಎಲ್ಲವನ್ನೂ ತಿಳಿಸಿ ಬಸವಣ್ಣನವರ ಶಿಷ್ಯರಾದರು ಆ ಶಿಷ್ಯರಿಗೆ “ನಿಜಲಿಂಗ’ ಎಂದು ಹೆಸರು ಕೊಟ್ಟರು. (ಬದನೆಕಾಯಿ ನಿಜಲಿಂಗವಾಗಿದ್ದಕ್ಕೆ) ಹೆಸರು ಕೊಟ್ಟರು
ಎಲ್ಲರೂ ಗುಣುಗುಣಿಸುವ ಒಂದೆರಡು ಪ್ರಸಿದ್ಧ ವಚನಗಳು:-
ಉಳ್ಳವರು ಶಿವಾಲಯ ಮಾಡುವರು
ನಾನೇನು ಮಾಡಲಿ ಬಡವನಯ್ಯ
ಎನ್ನ ಕಾಲೇ ಕಂಬ ದೇಹವೇ ದೇಗುಲ
ಶಿರವೇ ಹೊನ್ನ ಕಳಸವಯ್ಯ
ಕೂಡಲಸಂಗಮದೇವ ಕೇಳಯ್ಯ
ಸಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ.
ಕಳಬೇಡ ಕೊಲಬೇಡ ಹುಸಿಯ
ನುಡಿಯಲು ಬೇಡ ಮುನಿಯಬೇಡ
ಅನ್ಯರಿಗೆ ಅಸಹ್ಯ ಪಡಬೇಡ ತನ್ನ
ಬಣ್ಣಿಸಬೇಡ ಇದಿರ ಹಳೆಯಲು ಬೇಡ
ಇದೆ ಅಂತರಂಗ ಶುದ್ದಿ ಇದೇ ಬಹಿರಂಗ ಶುದ್ದಿ
ಇದೇ ನಮ್ಮ ಕೂಡಲಸಂಗಮದೇವ ನುಲಿಸುವ ಪರಿ.
ವಂದನೆಗಳೊಂದಿಗೆ,
ಬರಹ: ©ಆಶಾ ನಾಗಭೂಷಣ