🙏ಆದಿಗುರು ಶಂಕರಾಚಾರ್ಯ ಜಯಂತಿ🚩🚩

Naveenkumar M
572 ವೀಕ್ಷಿಸಿದ್ದಾರೆ
11 ಗಂಟೆಗಳ ಹಿಂದೆ
ಭಾರತದ ಆಧ್ಯಾತ್ಮಿಕ ಚೇತನ, ತತ್ವಜ್ಞಾನಿ ಶ್ರೀ ಆದಿ ಶಂಕರಾಚಾರ್ಯರ ಜಯಂತಿಯ ಶುಭಾಶಯಗಳು. ಉಪನಿಷತ್, ಬ್ರಹ್ಮಸೂತ್ರ, ಭಗವದ್ಗೀತೆಗಳಿಗೆ ಭಾಷ್ಯ ಬರೆದ ಅಸಾಧಾರಣ ಮೇಧಾವಿ ಪೂಜ್ಯರು. ನಾಲ್ಕು ವಿಭಿನ್ನ ದಿಕ್ಕುಗಳಲ್ಲಿ ಮಠಗಳನ್ನು ಸ್ಥಾಪಿಸಿ, ಅಖಂಡ ಭಾರತದ ಕನಸು ಬಿತ್ತಿದವರು ಜಯಂತಿಯ ಶುಭದಿನದಂದು ಭಕ್ತಿ ಪೂರ್ವಕ ನಮನಗಳನ್ನು ಸಲ್ಲಿಸುತ್ತೇನೆ. #shankaracharyajayanti #ಧಾರವಾಡಜಿಲ್ಲಾಜೆಡಿಎಸ #nkmhubballi #jds #ಆಧಿ ಶ್ರೀ ಶಂಕರಾಚಾರ್ಯ ಜಯಂತಿ #😍 ನನ್ನ ಸ್ಟೇಟಸ್ #🔴ನಮ್ಮ ಕರ್ನಾಟಕ🟡
Ashok Havanur
1.1K ವೀಕ್ಷಿಸಿದ್ದಾರೆ
14 ಗಂಟೆಗಳ ಹಿಂದೆ
ಆದಿ ಶಂಕರಾಚಾರ್ಯ ಜಯಂತಿಯು ವೈಶಾಖ ಮಾಸದ ಶುಕ್ಲ ಪಕ್ಷದ ಪಂಚಮಿಯಂದು ಆಚರಿಸಲಾಗುವ ಅದ್ವೈತ ತತ್ವಜ್ಞಾನಿ ಶ್ರೀ ಶಂಕರಾಚಾರ್ಯರ ಜನ್ಮದಿನವಾಗಿದೆ. 2026 ರಲ್ಲಿ, ಈ ಜಯಂತಿಯನ್ನು ಏಪ್ರಿಲ್ 21 ರಂದು ಆಚರಿಸಲಾಗುತ್ತದೆ. ಕೇರಳದ ಕಾಲಡಿಯಲ್ಲಿ ಜನಿಸಿದ ಇವರು ಸನಾತನ ಧರ್ಮದ ಪುನರುತ್ಥಾನ ಮತ್ತು ಅದ್ವೈತ ವೇದಾಂತದ ಪ್ರಚಾರಕ್ಕೆ ಮಹತ್ತರ ಕೊಡುಗೆ ನೀಡಿದ್ದಾರೆ. #ಆದಿ ಗುರು ಶಂಕರಾಚಾರ್ಯರು.
mahadev
4.5K ವೀಕ್ಷಿಸಿದ್ದಾರೆ
1 ದಿನಗಳ ಹಿಂದೆ
#ಶಂಕರಾಚಾರ್ಯ ಜಯಂತಿ #ಆದಿಶಂಕರ #Shankaracharya jayanti "ಅದ್ವೈತ ಸಿದ್ಧಾಂತದ ಪ್ರತಿಪಾದಕರು, ಜಗದ್ಗುರು ಆದಿ ಶಂಕರಾಚಾರ್ಯರ ಪಾದಪದ್ಮಗಳಿಗೆ ಕೋಟಿ ನಮನಗಳು. 🙏✨"ಆದಿ ಶಂಕರಾಚಾರ್ಯರು: ಸನಾತನ ಧರ್ಮದ ಜ್ಯೋತಿ ಜನನ: ಕೇರಳದ ಕಾಲಡಿ ಎಂಬ ಪುಟ್ಟ ಹಳ್ಳಿಯಲ್ಲಿ ಜನನ. ಸಿದ್ಧಾಂತ: ಅವರು ಪ್ರತಿಪಾದಿಸಿದ 'ಅದ್ವೈತ ಸಿದ್ಧಾಂತ'ವು 'ಆತ್ಮ ಮತ್ತು ಪರಮಾತ್ಮ ಒಂದೇ' ಎಂಬ ಸತ್ಯವನ್ನು ಜಗತ್ತಿಗೆ ಸಾರಿತು. ಸಾಧನೆ: ಕೇವಲ 32 ವರ್ಷಗಳ ಅಲ್ಪಾಯುಷ್ಯದಲ್ಲಿ ಭಾರತದ ನಾಲ್ಕು ದಿಕ್ಕುಗಳಲ್ಲಿ ನಾಲ್ಕು ಮಠಗಳನ್ನು (ಶೃಂಗೇರಿ, ಪುರಿ, ದ್ವಾರಕಾ, ಬದರಿನಾಥ್) ಸ್ಥಾಪಿಸಿ ಧರ್ಮವನ್ನು ಒಗ್ಗೂಡಿಸಿದರು. ಕೃತಿಗಳು: ಭಜಗೋವಿಂದಂ, ಸೌಂದರ್ಯ ಲಹರಿ, ಮತ್ತು ಉಪನಿಷತ್ತುಗಳ ಮೇಲೆ ಅವರು ಬರೆದ ಭಾಷ್ಯಗಳು ಇಂದಿಗೂ ಜ್ಞಾನದ ಭಂಡಾರಗಳಾಗಿವೆ."ಜಗತ್ತೆಲ್ಲವೂ ಮಿಥ್ಯ, ಬ್ರಹ್ಮವೊಂದೇ ಸತ್ಯ. ಆದಿಶಂಕರರ ಈ ಸಂದೇಶ ಸದಾ ಅಮರ. 🕉️"ಎಂದು ಸಾರಿದ ಶಂಕರಾಚಾರ್ಯರ ಜಯಂತಿಯ ಹಾರ್ದಿಕ ಶುಭಾಶಯಗಳು