ಚೈತ್ರ ಮಾಸ

ವಿಷ್ಣು ಪ್ರಿಯ 🦚💙
616 ವೀಕ್ಷಿಸಿದ್ದಾರೆ
3 ದಿನಗಳ ಹಿಂದೆ
#ಚೈತ್ರ ಮಾಸ ಚೈತ್ರ ಮಾಸದ ಪಾವಿತ್ರ್ಯತೆ! ‎ ‎ ಚೈತ್ರ ಮಾಸ ಎಂಬ ಹೆಸರು ಬರಲು ಕಾರಣ, ಈ ಮಾಸದ ಹುಣ್ಣಿಮೆ ಸನಿಹದಲ್ಲಿ ಬರುವ ಚಿತ್ತಾ ನಕ್ಷತ್ರ. ‎ ‎ ಚೈತ್ರ ಶುದ್ಧ ಪ್ರತಿಪದದಿಂದ ಚೈತ್ರ ಶುದ್ಧ ನವಮಿವರೆಗೂ ಶ್ರೀ ರಾಮನವರಾತ್ರೋತ್ಸವ ಅಥವಾ ವಸಂತ ನವರಾತ್ರಿ ನಡೆಯುತ್ತದೆ. ಶ್ರೀ ರಾಮಚಂದ್ರ ಪ್ರಭು ಚೈತ್ರ ಶುದ್ಧ ನವಮಿಯಂದು ಕೌಸಲ್ಯಾ, ದಶರಥರ ಮೂಲಕ ಅವತರಿಸಿದರು. ‎ ‎ ಚೈತ್ರ ಮಾಸ ಬಂದರೆ ವಸಂತ ಋತುವಿನ ಆಗಮನ. ಪ್ರಕೃತಿ ಚಿಗುರಿ ಹೊಸ ಜೀವಶಕ್ತಿ ತುಂಬುತ್ತದೆ. ಈ ಮಾಸದ ನಿಯಾಮಕ ಭಗವದ್ರೂಪ ಶ್ರೀ ಮಹಾವಿಷ್ಣು. ‎ ‎ ಚೈತ್ರ ಮಾಸವು ಶುಕ್ಲ ಪ್ರತಿಪದದಿಂದ ಆರಂಭವಾಗುತ್ತದೆ. ಈ ದಿನವನ್ನು ಕಲಾದಿ ತಿಥಿ ಎಂದು ಕರೆಯಲಾಗುತ್ತದೆ. ಸತ್ಯಯುಗದ ಆರಂಭವೂ ಇದೇ ದಿನವೆಂದು ಪರಿಗಣಿಸಲಾಗಿದೆ. ‎ ‎ ಯುಗಾದಿಯಂದು ಅಭ್ಯಂಜನ ಸ್ನಾನ ಮಾಡಿ, ದೇವರ ಪೂಜೆ, ಹೊಸ್ತಿಲು ಪೂಜೆ ತುಳಸಿ ಪೂಜೆ ಮಾಡಿ, ಬೇವು-ಬೆಲ್ಲಾದಿ ನಿಂಬಕದಳವನ್ನು ಸಮರ್ಪಿಸಿ ಭಕ್ಷಿಸಬೇಕು. ಸಂಜೆ ಪಂಚಾಂಗ ಶ್ರವಣ ಮಾಡುವುದು ಶ್ರೇಷ್ಠ. ‎ ‎ ಚೈತ್ರ ನವರಾತ್ರಿ ಕೇವಲ ಆಚರಣೆ ಅಲ್ಲ, ಇದು ದೇಹ, ಮನಸ್ಸು, ಪ್ರಕೃತಿ ಮತ್ತು ಭಗವಂತನೊಂದಿಗೆ ಸಮತೋಲನ ಸಾಧಿಸುವ ಪವಿತ್ರ ಅವಕಾಶ.. 🙏🌺🙏🌺🙏 ▬▬ஜ۩۞۩ஜ▬▬▬*▬▬▬ஜ۩۞۩ஜ▬▬ !! ಸರ್ವಂ ಶ್ರೀ ಕೃಷ್ಣಾರ್ಪಣಮಸ್ತು !! 🙏 ಸರ್ವೇ ಜನಾಃ ಸುಖಿನೋ ಭವಂತುಸರ್ವೇ ಸಂತು ನಿರಾಮಯಾಃ 🙏 !! ಧರ್ಮೋ ರಕ್ಷತಿ ರಕ್ಷಿತಃ !! ▬▬▬ஜ۩۞۩ஜ▬▬▬▬▬▬ஜ۩۞۩ஜ▬▬▬ 🙏 ಹರಿ ಸರ್ವೋತ್ತಮ ವಾಯು ಜೀವೋತ್ತಮ 🙏