ShareChat
click to see wallet page
#ಕರುನಾಡುನಮ್ಮ ಬಂಗಾರದ ಬೀಡು #ಘಾಟಿ_ಸುಬ್ರಹ್ಮಣ್ಯ_ದೊಡ್ಡ ಬಳ್ಳಾಪುರ ಲಕ್ಷಾಂತರ ಭಕ್ತರು #ನಾಗಾರಾಧನೆ ನಡೆಸುವ ಪ್ರಸಿದ್ದ ನಾಗ ಕ್ಷೇತ್ರ ಘಾಟಿ ಸುಬ್ರಹ್ಮಣ್ಯ, ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಷ್ಟೇ #ದಕ್ಷಿಣ_ಕರ್ನಾಟಕದಲ್ಲಿ ಘಾಟಿ ಪ್ರಸಿದ್ದವಾಗಿದೆ. ಈ ಕ್ಷೇತ್ರ ದೊಡ್ಡ ಬಳ್ಳಾಪುರ ತಾಲ್ಲೂಕು #ತೂಬಗೆರೆ ಹೋಬಳಿಯಲ್ಲಿದೆ. ಹರಕೆ ಹೊತ್ತ ಭಕ್ತರು ನಾಗಾರಾಧನೆಯಲ್ಲಿ ತೊಡಗಿಸಿಕೊಳ್ಳುವ ದೃಶ್ಯ ನಿತ್ಯ ಕಂಡು ಬರುತ್ತದೆ. ನಾಗದೋಷ ನಿವಾರಣೆಗೆ ಭಕ್ತಾದಿಗಳು ನಾಗರ ಪಂಚಮಿಯಂದು ಸಾಗರೋಪಾದಿಯಲ್ಲಿ ಸೇರುತ್ತಾರೆ. ಇಲ್ಲಿನ #ನಾಗರಕಲ್ಲುಗಳು ಘಾಟಿ ವಿಶೇಷಗಳಲ್ಲಿ ಪ್ರಮುಖ ಸ್ಥಾನ ಪಡೆದಿವೆ. ನಾಗರ ಕಲ್ಲಿಗೆ ಹಾಲೆರೆಯುವ ಸಂಪ್ರದಾಯ ಪುರಾತನ ಕಾಲದಿಂದಲೂ ನಡೆದುಕೊಂಡು ಬಂದಿದೆ. ಇಲ್ಲಿ ನಾಗರ ಕಲ್ಲುಗಳಿಗೆ ಹಾಲೆರೆದರೆ ನಾಗದೋಷ ಕಳೆಯುತ್ತದೆ ಎಂಬುದು ಭಕ್ತರ ಬಲವಾದ ನಂಬಿಕೆ. ಕ್ಷೇತ್ರದಲ್ಲಿ #10_ಸಾವಿರಕ್ಕೂ ಹೆಚ್ಚು ನಾಗರಕಲ್ಲುಗಳಿವೆ. #ನಾಗರ_ಪಂಚಮಿ ದಿನ ಕ್ಷೀರಾಭಿಷೇಕ ಇಲ್ಲಿನ ಪ್ರಮುಖ ಆಕರ್ಷಣೆ. ನಾಗರ ಪಂಚಮಿ ದಿನ ಮುಂಜಾನೆ 5 ರಿಂದಲೇ ವಿಶೇಷ ಅಭಿಷೇಕಗಳು ನೆರವೇರುತ್ತವೆ #ಕುಕ್ಕೆ ಸುಬ್ರಹ್ಮಣ್ಯ 🙏 #ಶ್ರೀ ಸುಬ್ರಹ್ಮಣ್ಯ ಸ್ವಾಮಿ #🙏🕉️ ಜೈ ಶ್ರೀ ಸುಬ್ರಹ್ಮಣ್ಯ ಸ್ವಾಮಿ🕉🙏 🙏🕉 ಜೈ ಶ್ರೀ ಮುರುಗನ್ ಸ್ವಾಮಿ🕉🙏 ##🙏 ಕುಕ್ಕೆ ಶ್ರೀ ಸುಬ್ರಹ್ಮಣ್ಯ ಸ್ವಾಮಿ
ಕರುನಾಡುನಮ್ಮ ಬಂಗಾರದ ಬೀಡು - GHATI SUBRAMANY SWAMY TEMPLE ಘಾಟಿ   ಸುಬ್ರಮಣ್ಯ ದೇವಾಲಯ ಲಕ್ಷಾಂತರ   ಜನರು ನಾಗಾರಾಧನೆ  ನೆಡೆಸುವ   ಪ್ರಸಿದ್ಧ ನಾಗ  ಕ್ಷೇತ್ರ ಘಾಟಿ  ಸುಬ್ರಮಣ್ಯ   GHATI SUBRAMANY SWAMY TEMPLE ಘಾಟಿ   ಸುಬ್ರಮಣ್ಯ ದೇವಾಲಯ ಲಕ್ಷಾಂತರ   ಜನರು ನಾಗಾರಾಧನೆ  ನೆಡೆಸುವ   ಪ್ರಸಿದ್ಧ ನಾಗ  ಕ್ಷೇತ್ರ ಘಾಟಿ  ಸುಬ್ರಮಣ್ಯ - ShareChat

More like this