ShareChat
click to see wallet page
#ನವದುರ್ಗೆಯರಲ್ಲಿ_ಏಳನೇ_ರೂಪ_ಕಾಳರಾತ್ರಿ_ದೇವಿಯದ್ದು ರಾಕ್ಷಸರಾದ ಶುಂಭ-ನಿಶುಂಭ ಮತ್ತು ರಕ್ತಬೀಜಾಸುರರು ಮೂರು ಲೋಕಗಳಲ್ಲಿ ತಮ್ಮ ಭಯವನ್ನು ಸೃಷ್ಟಿಸಲು ಮುಂದಾದರು. ಇದರಿಂದ ಆತಂಕಗೊಂಡ ದೇವತೆಗಳೆಲ್ಲ ಶಿವನ ಮೊರೆ ಹೋದರು. ರಾಕ್ಷಸರನ್ನು ಸಂಹರಿಸಿ ತನ್ನ ಭಕ್ತರನ್ನು ರಕ್ಷಿಸುವಂತೆ ಶಿವನು ಪಾರ್ವತಿಯನ್ನು ಕೇಳಿದನು. #ಪಾರ್ವತಿಯು_ದುರ್ಗೆಯ ರೂಪವನ್ನು ತೆಗೆದುಕೊಂಡು ಶುಂಭ-ನಿಶುಂಭರನ್ನು ಕೊಂದಳು. ಆದರೆ ರಕ್ತಬೀಜಾಸುರನನ್ನು ಕೊಂದ ತಕ್ಷಣ ಆತನ ದೇಹದಿಂದ ಹೊರಬಂದ ರಕ್ತದಿಂದ ಲಕ್ಷಗಟ್ಟಲೆ ರಕ್ತಬೀಜಾಸುರರು ಉತ್ಪತ್ತಿಯಾದರು. ಇದನ್ನು ನೋಡಿದ ದುರ್ಗಾ ಮಾತೆಯು ತನ್ನ ತೇಜಸ್ಸಿನಿಂದ ಕಾಳರಾತ್ರಿಯನ್ನು ರಚಿಸಿದಳು. ಇದಾದ ನಂತರ ದುರ್ಗಾ ದೇವಿಯು ರಕ್ತಬೀಜಾಸುರರನ್ನು ಕೊಂದಾಗ ಕಾಳರಾತ್ರಿಯು ಆತನ ದೇಹದಿಂದ ಹೊರಬರುತ್ತಿದ್ದ ರಕ್ತವನ್ನು ತನ್ನ ಬಾಯಿಯಲ್ಲಿ ತುಂಬಿಕೊಂಡು ರಕ್ತಬೀಜಾಸುರನನ್ನು ಸೀಳಿ ಕೊಂದಳು. #ಪೂಜಾ_ವಿಧಾನ ನವರಾತ್ರಿ ವ್ರತ ಮಾಡುವ ಭಕ್ತರು ಬೆಳಿಗ್ಗೆ ಸೂರ್ಯೋದಯಕ್ಕಿಂತ ಮುಂಚಿತವಾಗಿ ಎದ್ದು ಸ್ನಾನ ಮಾಡಿ ಪೂಜಾ ಸ್ಥಳವನ್ನು ಸ್ವಚ್ಚಗೊಳಿಸಿ. ನಂತರ ಕಾಳರಾತ್ರಿ ದೇವಿಯನ್ನು ಪ್ರತಿಷ್ಠಾಪಿಸಿ, ಹೂವು, ಹಣ್ಣು, ಕರ್ಪೂರ, ಧೂಪ, ಅಲಂಕಾರಿಕ ವಸ್ತುಗಳು, ತೆಂಗಿನಕಾಯಿ, ಎಲೆ, ಅಡಿಕೆ, ಸಿಹಿ ನೈವೇದ್ಯ ಇತ್ಯಾದಿಗಳನ್ನು ಇಟ್ಟು ಪೂಜೆ ಮಾಡಬೇಕು.🙏🙏 #✨ ನವರಾತ್ರಿ ಸ್ಟೇಟಸ್ #🙏 ನವರಾತ್ರಿ ಶುಭಾಶಯಗಳು🔱🔱 #📺 ನವರಾತ್ರೋತ್ಸವ 2025 ಲೈವ್ #🍲ನವರಾತ್ರಿ ಸ್ಪೆಷಲ್ ರೆಸಿಪಿ #🌸ಜೈ ಮಾತಾ
✨ ನವರಾತ್ರಿ ಸ್ಟೇಟಸ್ - ಳರಾತೀ ಇದೇತ "ನವರಾತ್ರಿಯ ಏಳನೇ ದಿನ" ಶುಭೋದಯ ವಾರದಶುಭಾಶಯಗಳು ಭಾ 28 09*2025 ಳರಾತೀ ಇದೇತ "ನವರಾತ್ರಿಯ ಏಳನೇ ದಿನ" ಶುಭೋದಯ ವಾರದಶುಭಾಶಯಗಳು ಭಾ 28 09*2025 - ShareChat

More like this