#ಭಾರತ ನೆಲದ ಸಂತರು ತುಕಾರಾಂ ಮಹಾರಾಜರು ಇದೇ ಫಾಲ್ಗುಣ ಮಾಸದ ಕೃಷ್ಣ ಪಕ್ಷದ ದ್ವಿತೀಯ ತಿಥಿಯಂದು ಸಶರೀರರಾಗಿ ವೈಕುಂಠಕ್ಕೆ (ಕೈಲಾಸಕ್ಕೆ) ತೆರಳಿದರು ಎಂದು ಹೇಳಲಾಗುತ್ತದೆ.ತುಕಾರಾಂ ಮಹಾರಾಜರು ತಮ್ಮ ಕೀರ್ತನೆಗಳ ಮೂಲಕ ಭಕ್ತಿ ಮಾರ್ಗವನ್ನು ಬೋಧಿಸಿದವರು. ಅವರು ಇಂದ್ರಾಯಣಿ ನದಿಯ ದಡದಲ್ಲಿ ಹರಿನಾಮ ಸ್ಮರಣೆ ಮಾಡುತ್ತಿರುವಾಗ, ದೇವ ವಿಮಾನವು ಬಂದು ಅವರನ್ನು ಕರೆದೊಯ್ಯಿತು ಎಂಬುದು ಭಕ್ತರ ಗಾಢ ನಂಬಿಕೆ.



