
६८ ह व्ह्यू · ९.६ ह प्रतिक्रिया | ಯಾರೋ ಪುಣ್ಯಾತ್ಮರು ಹಾಕಿದ ಈ ವೀಡಿಯೋ ನೋಡಿ share ಮಾಡಿದೆ🙏 ಎಲ್ಲಾ ದೇಹದ ಅಂಗ ಸರಿಯಿದ್ದು, ಸಹಬಾಳ್ವೆಗೆ ತಂದೆ ತಾಯಿ ಹೆಂಡತಿ ಮಕ್ಕಳು ಬಂಧುಮಿತ್ರರು ಇದ್ದರು ಕೊರಗುವ ಅಮಾಯಕ ಜೀವಗಳಿಗೆ ಬದುಕಿನ ಬಗ್ಗೆ ಸಣ್ಣ ಕಿವಿಮಾತು ಹೇಳಬೇಕು ಅನ್ನಿಸಿತು..!! ಆತ್ಮೀಯ ಬಂಧುಗಳೆ ಒಂದು ವೇಳೆ ಇವರಿಗಿಂತ ಉತ್ತಮ ಜೀವನ, ಇರಲು ಮನೆ, ಭಾವ ಹಂಚಿಕೊಳ್ಳುವ ತಂದೆ ತಾಯಿ ಬಂಧುಮಿತ್ರರು ಮಡದಿ ಮಕ್ಕಳು ಮೂರು ಹೊತ್ತು ತಿನ್ನಲು ಅನ್ನವಿದ್ದರೆ ದೇವರ ಕೃಪೆ ನಮ್ಮ ಮೇಲೆ ಇದೆ ಎಂದು ವಿನಮ್ರವಾಗಿ ನೀವು ಸಂತೋಷ ಪಟ್ಟು ಅನ್ಯರಿಗು ಸಂತೋಷ ನೀಡಿ ಬಾಳಿಬಿಡಿ.. ಅವರಿಗೆ ಅದಿದೆ ನನಗಿಲ್ಲಾ, ಅವರು ಚನ್ನಾಗಿದ್ದಾರೆ ನಾನಿಲ್ಲಾ, ಅವರದೇನು ದೊಡ್ಡ ಸಾಧನೆ ನಾ ನೋಡದ್ದು, ಅವರು ಹೆಂಗೆ ಸಂತೋಷವಾಗಿ ಬಾಳುತ್ತಾರೆ ನಾನು ಬಿಡೋಲ್ಲಾ, ಅವರಿಗೆ ಹೆಂಗೆ ಅಪಮಾನ ಮಾಡಿ ಮಾನಕಳೆವೆ ನೋಡು, ನಾನತ್ವ,ಅಹಂಕಾರ,ಸುಳ್ಳು, ಮೋಸ ಇದ್ಯಾವ ಗುಣ ಅಳವಡಿಸಿ ಬಾಳಬೇಡಿ! ಎಲ್ಲರಲ್ಲು ದೇವರಿದ್ದಾನೆ ಎಂದು ಬದುಕಿ ಇಲ್ಲಾ ಅಂದರೆ ಕರುಣೆಯಿಂದ ದೇವರು ನೀಡಿದ ಎಲ್ಲಾ ಭಾಗ್ಯ ವಾಪಸ್ ಪಡೆದು ಮೇಲಿನ ಸಂಕಷ್ಟಕ್ಕೆ ನೂಕಿ ಮೇಲೆ ಇದೆ ಎಂಬ ನರಕ ಇಲ್ಲೆ ಶೃಷ್ಠಿಮಾಡಿ ಅದರಲ್ಲಿ ನೂಕಿಬಿಡುತ್ತಾನೆ....... ನಾವೆಲ್ಲಾ ದೇವರ ಮಕ್ಕಳು ನಮ್ಮ ಗುಣ ಸಂಸ್ಕಾರಕ್ಕೆ ತಕ್ಕಪಲ ಕಟ್ಟಿಟ್ಟ ಬುತ್ತಿ 🙏 ಎಲ್ಲರನ್ನು ಪ್ರೀತಿಸಿ ಪ್ರೀತಿಹುಡುಕಿ ಬಾಳಿ ಸರ್ವಆತ್ಮಾನೇನಬ್ರಹ್ಮ 🙏🙏🙏🙏🙏 ಶುಭದಿನ:) | ಜಗ್ಗೇಶ್ ಶಿವಲಿಂಗಪ್ಪ

