ShareChat
click to see wallet page
search
#🙏ನಮಸ್ಕಾರ #😍 ನನ್ನ ಸ್ಟೇಟಸ್ *ಜೀವನ* ಎಂಬುದು ಒಂದು ಸುಂದರವಾದ ಮತ್ತು ಅನಿರೀಕ್ಷಿತವಾದ ಆಟ. ಇಲ್ಲಿ ಮನುಷ್ಯ ಆಡುವ ಆಟಕ್ಕು ಮತ್ತು ದೇವರು ಆಡಿಸುವ ಆಟಕ್ಕೂ ಒಂದು ಅವಿನಾಭಾವ ಸಂಬಂಧವಿದೆ. ಜೀವನದಲ್ಲಿ ಅನಿರೀಕ್ಷಿತ ತಿರುವುಗಳಿಂದ ಮುಂದಿನ ಕ್ಷಣ ಏನಾಗುತ್ತದೆ ಎಂದು ತಿಳಿಯುವುದು ಅಸಾಧ್ಯ, ದೇವರ ಆಟದಲ್ಲೂ ಅಷ್ಟೇ, ಇಂದು ರಾಜನಾದವನು ನಾಳೆ ಭಿಕ್ಷುಕನಾಗಲು ಬಹುದು ಸೋತವನು ನಾಳೆ ಗೆಲ್ಲಬಹುದು. ಇಲ್ಲಿ ಮುಂದೇನು ಎಂಬ ಪ್ರಶ್ನೆಯೇ ಕೂತುಹಲದ ಮೂಲ, ಆಟದಲ್ಲಿ ಕುತೂಹಲ ಇಲ್ಲದಿದ್ದರೆ ಅದಕ್ಕೆ ಮೌಲ್ಯಗಳು ಇರುವುದಿಲ್ಲ. ನಾಳೆ ಏನಾಗಬಹುದು ಎಂಬ ಕುತೂಹಲವೇ ಮನುಷ್ಯನನ್ನು ಬಡಿದೆಬ್ಬಿಸಿ ಕೆಲಸ ಮಾಡಲು ಪ್ರೇರೇಪಿಸುತ್ತದೆ. ದೇವರ ಆಟದಲ್ಲಿ ಈ ಕುತೂಹಲವು ನಮಗೆ ಭರವಸೆಯ ರೂಪದಲ್ಲಿ ಕಾಣ ತೊಡಗುತ್ತದೆ. ಸೋಲಿನ ಭಯ ಅಥವಾ ಸಾವು ಎಂಬ ಅಂತಿಮ ಸತ್ಯದ ಭಯವು ಮನುಷ್ಯನನ್ನು ಧರ್ಮ ಅಥವಾ ಶಿಸ್ತಿನ ಹಾದಿಯಲ್ಲಿ ನಡೆಯಲು ಪ್ರೇರೇಪಿಸುತ್ತದೆ. ಜೀವನದಲ್ಲಿ ಎಡವಿದರೆ ಅದಕ್ಕೆ ಶಿಕ್ಷೆಯಾಗಬಹುದು ಎಂಬ ಭಯ ಮನುಷ್ಯನನ್ನು ನಿಯಂತ್ರಿಸುತ್ತದೆ. ಮನುಷ್ಯ ಜೀವನದಲ್ಲಿ ತನ್ನದೇ ಆದ ನಿಯಮವನ್ನು ರೂಪಿಸಿಕೊಳ್ಳ ಬಹುದು, ಆದರೆ ದೇವರ ಆಟಕ್ಕೆ ಪ್ರಕೃತಿಯೇ ನಿಯಮ. ನಾವು ಎಷ್ಟೇ ಪ್ರಯತ್ನ ಪಟ್ಟರು ಸಹ ಕೆಲವು ವಿಷಯಗಳು ನಮ್ಮ ಕೈಯಲ್ಲಿ ಇರುವುದಿಲ್ಲ. ಆಗ ಮನುಷ್ಯನ ಅಹಂಕಾರ ಕರಗಿ ವಿಧಿಯ ಆಟ ಪ್ರಾರಂಭವಾಗುತ್ತದೆ. ಮನುಷ್ಯನ ಆಟ ಕೇವಲ ಸಣ್ಣ ಅವಧಿಗೆ ಸೀಮಿತವಾದರೆ ದೇವರ ಆಟವು ಇಡೀ ಬ್ರಹ್ಮಾಂಡವನ್ನೇ ಆವರಿಸಿದೆ. ಈ ಎರಡರಲ್ಲೂ ಸಾಮಾನ್ಯ ಅಂಶವೆಂದರೆ ಅನಿಶ್ಚಿತತೆ. ಈ ಅನಿಶ್ಚಿತತೆಯೇ ಜೀವನವನ್ನು ರೋಚಕವಾಗಿಸುತ್ತದೆ. ಭಯವು ನಮಗೆ ಎಚ್ಚರಿಕೆಯನ್ನು ನೀಡಿದರೆ ಕುತೂಹಲವು ನಮಗೆ ಬದುಕುವ ಆಸೆಯನ್ನು ನೀಡುತ್ತದೆ. ಮನುಷ್ಯ ಕೇವಲ ಜಗವೆಂಬ ರಂಗಭೂಮಿಯ ಪಾತ್ರಧಾರಿ ಅಷ್ಟೇ, ಆ ಸೂತ್ರಧಾರಿ ಆಡಿಸುವಂತೆ ಮನುಷ್ಯ ಕುತೂಹಲ ಮತ್ತು ಭಯದ ಜೊತೆ ಹೆಜ್ಜೆ ಹಾಕಲೇ ಬೇಕಲ್ಲವೇ??? ✍️ಪ್ರಭಾಕರ ಭಂಡಾರಿ.