ಮಡಿವಾಳ ಮಾಚಿದೇವರ ಜಯಂತಿಯ ಶುಭಾಶಯಗಳು...🙏💐
12ನೇ ಶತಮಾನದ ಬಸವಾದಿ ಶರಣರ ಸಾಲಿನಲ್ಲಿ, ಮಡಿವಾಳ ಮಾಚಿದೇವರು ಒಬ್ಬ ಪ್ರಮುಖ ಶರಣರು, ಹಾಗೂ ವಚನಕಾರರು.
ಅವರು ವಿಶ್ವಗುರು ಬಸವಣ್ಣನವರ ಆದರ್ಶಗಳನ್ನು ಅನುಸರಿಸಿದರು.
ಮಡಿವಾಳ ( ಶರಣರ ಬಟ್ಟೆ ತೊಳೆಯುವ) ಕಾಯಕವ ನಡೆಸಿದವರು,
ಯಾವುದೇ ಕೆಲಸವೂ ಕೀಳಲ್ಲ, ಮೇಲಲ್ಲ, ಎಂಬ ಸಂದೇಶವನ್ನು ಸಮಾಜಕ್ಕೆ ನೀಡಿದರು. ಗುರು ಲಿಂಗ ಜಂಗಮ ಮತ್ತು ಕಾಯಕ ನಿಷ್ಠೆಯಿಂದ ಹೆಸರಾದವರು,
ಅವರು ವೀರಗಣಾಚಾರಿ ಎಂಬ ಬಿರುದಾಂಕಿತರು,
ಶರಣರ ಸಾತ್ವಿಕತೆಗೆ ಹಾಗೂ ವಚನ ಸಾಹಿತ್ಯಕ್ಕೆ ಎದುರಾದ ಆಪತ್ತಿಗೆ ಸವಾಲಾಗಿ ನಿಂತು ವಚನಗಳನ್ನು ರಕ್ಷಿಸಿದವರು, ವಚನ ಸಾಹಿತ್ಯ ರಕ್ಷಕ,
ವೀರಗಣಾಚಾರಿ ಮಡಿವಾಳ ಮಾಚಿದೇವರು.👏👏
ಫೆಬ್ರವರಿ ೧ ರಂದು ಮಡಿವಾಳ ಮಾಚಿದೇವರ ಜಯಂತಿಯ ಪ್ರಯುಕ್ತ
ಅವರನ್ನು ಭಕ್ತಿಯಿಂದ ಸ್ಮರಿಸೋಣ...🙏🏻🙏🏻
ಶರಣು ಶರಣಾರ್ಥಿ ಗಳೊಂದಿಗೆ 💐
~ Lokesh N. Manvi #🔱 ಭಕ್ತಿ ಲೋಕ #🙏 ಭಕ್ತಿ ವಿಡಿಯೋಗಳು 🌼 #ಬಸವಣ್ಣ #🎶ಜಾನಪದ ಗೀತೆಗಳು #🎵ನಮ್ಮ ಜಾನಪದ ಹಾಡುಗಳು
00:56

