ShareChat
click to see wallet page
search
#🧠 ಸಾಮಾನ್ಯ ಜ್ಞಾನ & ಕರೆಂಟ್ ಅಫೇರ್ಸ್ 🧠 #ದಿನಪತ್ರಿಕೆ #📜ಪ್ರಚಲಿತ ವಿದ್ಯಮಾನ📜 #🔴ಲೇಟೆಸ್ಟ್ ನ್ಯೂಸ್ ಅಪ್ಡೇಟ್ಸ್ #🤓ಸರಕಾರಿ ಉದ್ಯೋಗ ಅಪ್ಡೇಟ್ಸ್
🧠 ಸಾಮಾನ್ಯ ಜ್ಞಾನ & ಕರೆಂಟ್ ಅಫೇರ್ಸ್ 🧠 - ಕನ್ನಡಪ್ರಭ ದುರ್ನಡತೆ ಪೊಲೀಸರ ವರ್ಗ ಅಧಿಕಾರ ಮಂಡಳಿಗೆ : ಮಸೂದೆ ಅವಧಿ ಪೂರ್ವ ವರ್ಗಾವಣೆ ಮಾಡಲು ಅವಕಾಶ • ಕನ್ನಡಪ್ರಭ ವಾರ್ತೆ ವಿಧಾನಸಭೆ ಕರ್ತವ್ಯ ಲೋಪ , ನಿರ್ಲಕ್ಷ್ಯ ಅಥವಾ ದುರ್ನಡೆತೆ ಎಸಗಿದ ಪೊಲೀಸ್ ಸಿಬ್ಬಂದಿ ಮತ್ತು ಪೊಲೀಸ್ ಉಪ ಅಧೀಕ್ಷಕ ಶ್ರೇಣಿಯವರೆಗಿನ ಅಧಿಕಾರಿಗಳನ್ನು ಅವಧಿ ಪೂರ್ವ ವರ್ಗಾವಣೆ ಮಾಡಲು ಪೊಲೀಸ್ ಸ್ಥಾಪನಾ ಮಂಡಳಿಗೆ ಅಧಿಕಾರ ನೀಡುವ ' ಕರ್ನಾಟಕ ಪೊಲೀಸ್‌ ಅಧಿನಿಯಮ ತಿದ್ದುಪಡಿ ವಿಧೇಯಕ - 2026'ಕ್ಕೆ ಸೋಮವಾರ ವಿಧಾನಸಭೆಯಲ್ಲಿ ಅಂಗೀಕಾರ ದೊರೆತಿದೆ . ವಿಧೇಯಕ ಪರ್ಯಾ ಲೋಚನೆಗೆ ಮಂಡಿಸಿದ ಗೃಹ ಸಚಿವ ಡಾ | ಜಿ.ಪರಮೇಶ್ವರ್ , ಈ ಹಿಂದೆ ಪೊಲೀಸ್ ಕಾಯಿದೆಗೆ ಮಾಡಿರುವ ತಿದ್ದುಪಡಿಯಂತೆ 2 ವರ್ಷದ ಅವಧಿವರೆಗೆ ಪೊಲೀಸ್ ಸಿಬ್ಬಂದಿಯನ್ನು ವರ್ಗಾವಣೆ ಮಾಡಲು ಅವಕಾಶವಿಲ್ಲ . ಆದರೆ , ಪೊಲೀಸ್ ಅಧಿಕಾರಿಗಳು ಕರ್ತವ್ಯ ಲೋಪ , ನಿರ್ಲಕ್ಷ್ಯ ಅಥವಾ ಕರ್ತವ್ಯದಲ್ಲಿ ದುರ್ನಡೆತೆ ಎಸಗಿದಾಗ ಅವರನ್ನು ವರ್ಗಾಯಿಸಲು ಸಹ ಈ ನಿಯಮ ಅಡ್ಡಿಯಾಗಿದೆ . ಅಂತಹವರನ್ನು ವರ್ಗಾವಣೆ ಮಾಡಲು ಸರ್ಕಾರಕ್ಕೆ ಶಿಫಾರಸು ಮಾಡಬೇಕಾ ಗುತ್ತದೆ . ಅದರ ಬದಲಿಗೆ ಅಂತಹವರ ವರ್ಗಾವಣೆಗೆ ಪೊಲೀಸ್ ಸ್ಥಾಪನಾ ಮಂಡಳಿಗೆ ಅಧಿಕಾರ ನೀಡಲು ತಿದ್ದುಪಡಿ ಮಾಡಲಾಗಿದೆ ಎಂದು ವಿವರಿಸಿದರು . ತಿದ್ದುಪಡಿಯಲ್ಲೇನಿದೆ ?: ಪೊಲೀಸ್ ಸಿಬ್ಬಂದಿ ಮತ್ತು ಪೊಲೀಸ್ ಉಪಅಧೀಕ್ಷಕರ ಶ್ರೇಣಿಯವ ರೆಗೆ ಅಧಿಕಾರಿಗಳನ್ನು ಕರ್ತವ್ಯ ಲೋಪ ಅಥವಾ ದುರ್ನಡಳತೆ ಪ್ರಕರಣಗಳಲ್ಲಿ ಅವಧಿ ಪೂರ್ವ ವರ್ಗಾವಣೆ ಮಾಡಲು ಪೊಲೀಸ್ ಸ್ಥಾಪನಾ ಮಂಡಳಿಗೆ ಅಧಿಕಾರ ನೀಡಲು ಕರ್ನಾಟಕ ಪೊಲೀಸ್‌ ಅಧಿನಿಯಮಕ್ಕೆ ತಿದ್ದುಪಡಿ ಮಾಡಲು ವಿಧೇಯಕದಲ್ಲಿ ಪ್ರಸ್ತಾಪಿಸಲಾಗಿದೆ . BENGALURU Edition Mar 17 , 2026 Page No. 09 Powered by : erelego.com - ShareChat