ಧುರಂಧರ್ ದ ರಿವೇಂಜು...
ಈ ಸಿನಿಮಾದಲ್ಲೊಬ್ವ...
ಭಾರತದಲ್ಲಿದ್ದುಕೊಂಡೇ ಪಾಕಿಸ್ತಾನೀ ಉಗ್ರರ ಅಷ್ಟೂ ಹಣಕಾಸಿನ ವ್ಯವಹಾರ ನೋಡಿಕೊಳ್ತಿದ್ದ ಉತ್ತರಪ್ರದೇಶದ ರಾಜಕಾರಣಿಯ ಬದುಕು ಹಾಗೂ ಅಂತ್ಯವೆರಡೂ ತೋರಿಸಲಾಗಿದೆ, ಆತನೇ ಇಡೀ ರಾಜ್ಯವನ್ನು ದಶಕಗಳ ಕಾಲ ತನ್ನ ಮುಷ್ಠಿಯಲ್ಲಿಟ್ಟು ಆಳಿದ ನಟೋರಿಯಸ್ ಅತೀಖ್ ಅಹ್ಮದ್...
ಅದು 1979 ರ ಸಮಯ.
ಅವತ್ತು ಅಧಿಕೃತವಾಗಿ ಮೊದಲ ಬಾರಿ ಈತನ ಮೇಲೆ ಕೊಲೆ ಕೇಸೊಂದು ದಾಖಲಾಗಿತ್ತು
ಅಂದ್ರೆ ಹತ್ರತ್ರ ಬರೋಬ್ಬರಿ ನಲವತ್ತೇಳು ವರ್ಷಗಳ ಹಿಂದೆ...
ಅಲ್ಲಿಂದ ಇಲ್ಲೀವರೆಗೂ ಐದು ದಶಕಗಳ ಕಾಲ ಉತ್ತರಪ್ರದೇಶದ ಭೂಗತ ಜಗತ್ತಿನ ಸಿಂಹಾಸನವನ್ನೇರಿ, ಇಡೀ ಯುಪಿಯ ಮೂಗುದಾರ ಕೈಲಿ ಹಿಡಿದು ಸಾರ್ವಭೌಮನಾಗಿ ಮೆರೆದವನು ಅತಿಕ್ ಅಹ್ಮದ್....
ಹಾಗಂತ ಭೂಗತ ಜಗತ್ತನ್ನು...
ಎಲ್ಲೋ ದುಬೈ ಯಲ್ಲೋ ಕರಾಚಿಯಲ್ಲೋ ಅಥವಾ ಇನ್ಯಾವುದೋ ದೇಶದಲ್ಲಿ ಕೂತು ಆಡಳಿತ ನಡೆಸಿದ್ದಲ್ಲ. ದೇಶದ ಪ್ರಜಾಪ್ರಭುತ್ವವನ್ನು ಎತ್ತಿ ಹಿಡಿಯೋ ಕೆಲಸ ಮಾಡೋ ವಿಧಾನಸಭೆ ಹಾಗೂ ಸಂಸತ್ತಿನ ಒಳಗೇ ಕೂತು, ಶಾಸಕ ಸಂಸದನ ಕಿರೀಟ ಧರಿಸಿ ಏಸಿ ಕಾರಿನೊಳಗೆ ಹಿಂದೆ ಮುಂದೆ ಹತ್ತಾರು ಪೊಲೀಸ್ ಕಾರುಗಳ ಬೆಂಗಾವಲಿನೊಂದಿಗೆ ರಾಜಾರೋವಾಗಿ ಭೂಗತ ಜಗತ್ತನ್ನು ಆಳುತ್ತಾ ಬಂದವನೀತ....
ಈತನ ಸರಕಾರಿ ಕೃಪಾಪೋಷಿತ...
ಭೂಗತ ಜಗತ್ತಿನ ರಾಜ್ಯಭಾರದ ಆರ್ಭಟಗಳು ಯಾವ ರೇಂಜಿಗಿತ್ತು ಅನ್ನೋದಕ್ಕೆ ಒಂದು ಸಣ್ಣ ಉದಾಹರಣೆ : ಈತನನ್ನು ದೇವರಿಯಾದ ಜೈಲಿಗ್ ಹಾಕಿದ್ರೆ, ಒಳಗೆ ಕೂತೇ ತನ್ನ ಭೂಗತ ಚಟುವಟಿಕೆ ನಡೆಸೋದೂ ಅಲ್ಲದೆ, ಪೊಲೀಸರನ್ನೇ ತನ್ನ ಚೇಲಾಗಳಾಗಿ ಮಾಡಿಕೊಂಡು, ಅವ್ರನ್ನೇ ಕಳಿಸಿಹಣ ಕೊಡದ ಉದ್ಯಮಿಗಳನ್ನ ಜೈಲಿನೊಳಗೇ ಕರೆಸಿಕೊಂಡು ದಿನಗಟ್ಲೆ ಬೆಂಡೆತ್ತಿ ಹಫ್ತಾ ವಸೂಲಿ ಮಾಡುತ್ತಿರ್ತಾನೆ ಈ Mondayಮಗಾ ಅಂದ್ರೆ ಜಸ್ಟ್ ಇಮ್ಯಾಜಿನ್...
ಇಂತವನನ್ನೂ ತಮ್ಮ ಲಾಭಕ್ಕಾಗಿ...
ಬೆಳೆಸುತ್ತಾ ಬೆಂಬಲಿಸುತ್ತಾ ರಕ್ಷಿಸುತ್ತಾ ಬಂದಿದ್ದಲ್ಲದೆ, ತಮ್ಮ ಬೇಳೆ ಬೇಯಿಸಿಕೊಳ್ಳಲು ತಾವು ಅಧಿಕಾರದಲ್ಲಿರಲು ದಶಕಗಳ ಕಾಲ ಅಕ್ಷರಶಃ ಈತನ ಕಾಲ ಬಳಿ ಕೂತು ಈತನ ರಕ್ತಸಿಕ್ತ ಬೂಟುಗಳನ್ನು ನೆಕ್ಕುತ್ತಾ ಈತನಿಗೆ ತಮ್ಮ ಆತ್ಮವನ್ನೇ ತಲೆಹಿಡಿದು ಕೂತಿದ್ದು ಕಾಂಗ್ರೆಸ್ ಸಮಾಜವಾದಿ ಪಕ್ಷದಂತಹ
ರಾಜಕೀಯ ಪಕ್ಷಗಳು..
ಎಲ್ಲೋ ಒಂದೋ ಎರಡೋ ಕೇಸಲ್ಲ...
ನೂರಕ್ಕೂ ಹೆಚ್ಚು ಕೊಲೆ ರಾಬರಿ ಹತ್ಯಾಕಾಂಡದ ಕೇಸುಗಳು, ಈತನ ಜೊತೆ ಸತ್ನಲ್ಲ ಈತನ ಸಹೋದರ ಅಶ್ರಫೂ ಆತನ ಮೇಲೆಯೂ ಅರವತ್ತಕ್ಕೂ ಹೆಚ್ಚು ಕೇಸುಗಳಿದಾವೆ.
ಅಣ್ಣ ತಮ್ಮ ಅಪ್ಪ ಚಿಕ್ಕಪ್ಪ ದೊಡ್ಡಪ್ಪ ಮಾವ ಮಚ್ಚಾ ಹೀಗೆ ಈತನ ಇಡೀ ಖಾಂದಾನೇ ಕ್ರಿಮಿನಲ್ಗಳು.
ಆತಿಕ್ ಅಹ್ಮದನ ಐದು ಮಕ್ಕಳಮೇಲೂ ಐವತ್ತರವತ್ತು ಕ್ರಿಮಿನಲ್ ಕೇಸುಗಳು ನಡೀತಿದಾವೆ, ದೊಡ್ ಮಗ ಉಮರ್ ಲಕ್ನೋ ಜೈಲಲ್ಲಿದ್ರೆ, ಎರಡನೇ ಮಗ ನೈನೀ ಜೈಲಲ್ಲಿದಾನೆ. ಮೂರನೇ ಮಗ ಮೂರು ವರ್ಷದ್ ಹಿಂದೆ ಹೊಗೆ ಹಾಕಿಸಿಕೊಂಡ...
ಬರೀ ಗಂಡ್ಮಕ್ಳಷ್ಟೇ ಅಲ್ಲ,
ಆತಿಕ್ ಅಹ್ಮದನ ಹೆಂಡತಿ ಪರ್ವೀನ್ ಮೇಲೂ ಹತ್ತಾರು ಕ್ರಿಮಿನಲ್ ಕೇಸುಗಳಿದಾವೆ.
ಈಕೆಯೇ ನೇರಾನೇರಾ ಹಫ್ತಾ ವಸೂಲಿಗೆ ಹೊರಡ್ತಾಳೆ.
ಇಡೀ ಊರ ತುಂಬಾ ಇವರ ಕುಟುಂಬದ ಭಯದ ನೆರಳು. ಒಂದು ಕಾಲದಲ್ಲಿ ಯುಪಿಯಲ್ಲಿ ಜನ ಉಸಿರಾಡೋಕೂ ಇವರ ಪರ್ಮಿಷನ್ ಕೇಳಬೇಕಾದ ವಾತಾವರಣವೊಂದಿತ್ತು. ಆ ರೇಂಜಿಗಿತ್ತು ಇವ್ರ ಭಯೋತ್ಪಾದನೆ...
ಇದಿಷ್ಟೇ ಆಗಿದ್ರೆ...
ಈತ ಎಲ್ಲರಂತೆಯೇ ಒಬ್ಬ ಭೂಗತಜಗತ್ತಿನ ಕ್ರಿಮಿಯೋ ದರೋಡೆಕೋರನೋ ಅಂತ ಸುಮ್ನಾಗಿಬಿಡಬಹುದು. ಆದರೆ ಈತನ ಅಸಲೀ ಆಟವಿದ್ದಿದ್ದೇ ನೇರಾನೇರಾ ಪಾಕಿಸ್ತಾನದ ಜೊತೆಗೆ.
ದೇಶದ ಒಟ್ಟು ಮಾಂಸಾಹಾರದ...
ಹದಿನೈದು ಪರ್ಸೆಂಟಿನಷ್ಟು ಅಂದ್ರೆ ಬರೋಬ್ಬರಿ ಹನ್ನೆರಡು ಲಕ್ಷ ಮೆಟ್ರಿಕ್ ಟನ್ನಿನಷ್ಟು ವ್ಯವಹಾರ ಉತ್ತರಪ್ರದೇಶವೊಂದರಿಂದಲೇ ಆಗುತ್ತದೆ. ಬಹುತೇಕ ಈ ಕುರಿ ಕೋಳಿ ಬೀಫ್ ಯಾವುದೇ ಇರಲಿ ಎಲ್ಲಾ ವ್ಯವಹಾರಗಳೂ ನಡೆಯೋದು ನೇರಾನೇರಾ ನೋಟುಗಳಲ್ಲೇ.
ಒಂದು ಸಂತೆ, ಮಾರ್ಕೆಟ್ಟಿಂದ ಮತ್ತೊಂದಕ್ ಕೈ ಬದಲಾಗ್ತಾ ಹೋಗ್ತಾವೆಯೇ ಹೊರತು ಬ್ಯಾಂಕುಗಳತ್ತ ತಲೆಯೂ ಹಾಕದ ವ್ಯವಹಾರವಿದು.
ಇದರ ಬಹುಪಾಲು ಹಿಡಿತವಿದ್ದಿದ್ದು ಈ ಅತೀಖ್ ಅಹ್ಮದನ ಫ್ಯಾಮಿಲಿ ಕೈಲಿ.
ಇದನ್ನೇ ಬಳಸಿಕೊಂಡ ಪಾಕಿಸ್ತಾನ ತನ್ನ ನಕಲೀ ನೋಟುಗಳ ಜಾಲದ ಸಂಪೂರ್ಣ ಜವಾಬ್ದಾರಿ ವಹಿಸಿದ್ದು ಈತನಿಗೆ.
ನೇಪಾಳ ಮುಖಾಂತರ ಬರೋ ನಕಲೀ ನೋಟುಗಳನ್ನೆಲ್ಲಾ ಈ ಮಾಂಸದ ವ್ಯವಹಾರದ ಮುಖಾಂತರ ಕೈ ಬದಲಾಯಿಸೋ, ತಲುಪಿಸಬೇಕಾದವರಿಗೆ ತಲುಪಿಸೋ ಸುಲಭ ಮಾರ್ಗ ಹಿಡಿದು ಕೂತು ಬಿಟ್ಟಿದ್ರು. ಇದೊಂದೇ ಹಣ ಇಡೀ ಯುಪಿಯ ಜೊತೆಗೇ ಇಡೀ ದೇಶದ ಚುನಾವಣೆಯ ಪಲಿತಾಂಶವನ್ನೂ ಡಿಸೈಡ್ ಮಾಡ್ತಾ ಇತ್ತು ಅಂದ್ರೆ ಅದ್ಯಾವ್ ರೇಂಜಿಗಿತ್ತೋ ಜಸ್ಟ್ ಇಮ್ಯಾಜಿನ್.
ಮೊದಲಿಗೆ ನೋಟ್ ಬ್ಯಾನಾಯ್ತು...
ನಂತರ ಯೋಗಿಯ ಆಗಮನವಾಯ್ತು, ಒಂದೊಂದಾಗಿ ಬಾಲ ಕತ್ತರಿಸುತ್ತಾ ಬಂದು ಈತನ ಮನೆ ಬಿಲ್ಡಿಂಗ್ ಶಾಪಿಂಗ್ ಕಾಂಪ್ಲೆಕ್ಸ್ ಮಾಲುಗಳು ಸೇರಿದಂತೆ ಅಷ್ಟೂ ಆಸ್ತಿ ಪಾಸ್ತಿ ಜಪ್ತಿ, ಅಕ್ರಮ ಸಂಪತ್ತುಗಳ ಮೇಲೆ ಬುಲ್ಡೋಜರ್ ದಾಳಿಗಳ ಮುಖಾಂತರ ಆರ್ಥಿಕವಾಗಿ ಬಡಿದು,
ಅದೊಂದು ದಿನ ಮೀಡಿಯಾ ಮುಂದೆ ಮಾತಾಡುತ್ತಿದ್ದಾಗಲೇ...
ಅಪರಿಚಿತ ಬಂದೂಕುಧಾರಿಗಳು ಟೊಂಯ್ಯ್ ಡೊಂಯ್ಯ್ ಟಿಶ್ಕ್ಯೂಂವ್ ಅನ್ನಿಸಿಬಿಟ್ರು 2023ರಲ್ಲಿ...
ಮೋದಿ ನೋಟ್ ಬ್ಯಾನ್ ಮಾಡಿದಾಗ...
ಫೇಲಾಗೋಯ್ತು, ಏನ್ ಯೂಸಾಯ್ತು, ಇದ್ಯಾಕ್ ಬೇಕಿತ್ತು ಅಂದವರಿಗೆಲ್ಲಾ, ಅದ್ಯಾಕ್ ಮಾಡಲಾಯ್ತು ಏನೇನು ಬದಲಾವಣೆಗಳಾದ್ವು ಅನ್ನೋದು ನಮ್ಮದೇ ಕಣ್ಣ ಮುಂದಿದೆ. ಅದನ್ನೇ ಮತ್ತೊಮ್ಮೆ ಸಾಕ್ಷಿ ಸಮೇತ ವಿವರವಾಗಿ ತೋರಿಸಲಾಗಿದೆ ಧುರಂಧರ್ ಸಿನಿಮಾದಲ್ಲಿ...
ಎದೇಲಿ ದೇಶದ ರಕ್ತ, ಆ ರಕ್ತದೊಳಗೆ ತಾಯಿಯ ಎದೆಹಾಲೇ ಕಿಂಚಿತ್ತಾದ್ರೂ ಇದ್ದಲ್ಲಿ ಈ ಮೂವಿ ನೋಡಿ ಒಂದ್ಸಲ.
ನಿಮ್ಮೆಲ್ಲಾ ಪ್ರಶ್ನೆಗಳಿಗೂ ಆನ್ಸರ್ ಈ ಧುರಂಧರ್...!!
Sudheer Sagar
#dhurandhar #dhurandhartherevenge #AdityaDhar #india #modi #Demonetisation #☺ಜೀವನದ ಸತ್ಯ #✍ಟ್ರೆಂಡಿಂಗ್ ಕೋಟ್ಸ್📜 #📖 ನನ್ನ ಓದು #🎖️ಸಲಾಂ ಸೈನಿಕ #yogi



