ShareChat
click to see wallet page
search
#ಲೇಯ್_ಖಮೇನಿ...!!! ( ಇದು ನಾನ್ ಹೇಳಿದ್ದಲ್ಲ ) 👇👇 ಇದೇ ನೆಲದಲ್ಲಿ ಒಂದಲ್ಲ ಒಂದು ದಿನ ನಿನ್ನ ಶವದ ಮೇಲೆಯೇ ಹೆಣ್ಮಕ್ಕಳು ಹಿಜಾಬ್ ಕಿತ್ತೆಸೆದು ಕುಣಿದು ಸಂಭ್ರಮಿಸುತ್ತಾರೆ. ಅವತ್ತು ನನ್ನಾತ್ಮಕ್ಕೆ ಶಾಂತಿ. ಗಲ್ಲಿಗೇರೋ ಮೊದಲು #ಹಿಜಾಬ್_ಕಿತ್ತೆಸೆದು ಆ ಇರಾನಿನ ಮುಸ್ಲಿಂ ಯುವತಿ ಹೇಳಿದ್ದ ಕೊನೆಯ ಮಾತಿದು...!!! ಅವತ್ತು 15 ಆಗಸ್ಟ್ 2004. ಇರಾನಿನ ಮಜಾಂದರನ್ ಪ್ರಾಂತ್ಯದ ನೇಕಾ ಎಂಬ ಊರಿನ ನಟ್ಟನಡುವಲ್ಲಿರೋ ಸರ್ಕಲ್ ಮಧ್ಯದ -ಲ್ಲೊಂದು ಬೃಹತ್ ಕ್ರೇನ್ ನಿಲ್ಲಿಸಲಾಗಿತ್ತು...!!! ಇಡೀ ಊರೇ ಅವತ್ತು ಅಲ್ಲಿ ಸೇರಿತ್ತು...!!! ಕ್ರೇನ್ ನೋಡೋಕಲ್ಲ... ಆ ಕ್ರೇನಿನ ತುದಿಗೊಂದು ಹಗ್ಗ ಕಟ್ಟಿ ಮತ್ತೊಂದು ತುದಿಯನ್ನು ಹುಡುಗಿಯೊಬ್ಬಳ ಕುತ್ತಿಗೆಗೆ ತೂಗು ಹಾಕಲಾಗಿತ್ತು. ಅದನ್ನು ನೋಡೋಕೆ ಸೇರಿದ್ದಿದ್ದು. ಆದೇಶ ನೀಡ್ತಿದ್ದಂಗೆ ಕ್ರೇನ್ ಮೇಲೇರಿಸಲು ಶುರುವಾಗ್ತಿದ್ದಂಗೆ, ಆ ಹುಡುಗಿಯೂ ಮೇಲೇರ ತೊಡಗಿ ವಿಲವಿಲಾ ಅಂತ ಕೈ-ಕಾಲು ಬಡಿದು ಒದ್ದಾಡುತ್ತಾ ಜೀವ ಬಿಡುತ್ತಿದ್ರೆ ಇಡೀ ಊರು ಮೂಕಪ್ರೇಕ್ಷಕರಂತೆ ಆಟ ನೋಡ್ತಾ ನಿಂತಿತ್ತು. ಅವತ್ತು ಹೀಗೆ ಸಾರ್ವಜನಿಕವಾಗಿ ವಿಕೃತ ರೀತಿಯಲ್ಲಿ ಕ್ರೇನಿಗೆ ತೂಗು ಹಾಕಿ ಗಲ್ಲು ಶಿಕ್ಷೆಗೊಳಗಾದ ಹುಡುಗಿ ಇನ್ನೂ ಹದಿನಾರು ವರ್ಷ ಕೂಡಾ ತುಂಬಿರದ " ಅತಾಫಿ ರಜಾಬಿ ಸಹಾಲೆ " ಅನ್ನೋ ಮುಸ್ಲಿಂ ಹೆಣ್ಮಗಳು...!!! ಅಷ್ಟಕ್ಕೂ ಇಂತಾದ್ದೊಂದು ಘೋರ ಶಿಕ್ಷೆಗೆ ಒಳಗಾಗೋಕೆ ಈ ಹೆಣ್ಮಗು ಮಾಡಿದ್ದ ತಪ್ಪಾದ್ರೂ ಏನು ಗೊತ್ತಾ...!!!...??? ಮೂರು ವರ್ಷದ ಹಿಂದೆ...!!! ಅದೊಂದ್ ದಿನ ರಾತ್ರಿ ಈಕೆ ಟ್ಯಾಕ್ಸಿಯಲ್ಲಿ ಹೋಗ್ತಿರುವಾಗ ಮೋರಲ್ ಪೊಲೀಸರು ಚೆಕಿಂಗಿಗೆ ಟ್ಯಾಕ್ಸಿ ಅಡ್ಡ ಹಾಕ್ತಾರೆ...!!! ನೋಡಿದ್ರೆ ಗಾಳಿಗೆ ಕಿಟಕಿಯಲ್ಲಿ ಮುಖವೊಡ್ಡಿದ್ದ ಆಕೆಯ ಹಿಜಾಬ್ ಸರಿದು ಬಿಟ್ಟಿದೆ...!!! ಎಂತಾ ಮಹಾಘೋರ ಅಪರಾಧ , ಸುಮ್ನೆ ಬಿಡೋಕಾಗುತ್ತಾ...!!!...??? ಅರೆಸ್ಟ್ ಮಾಡಿದವರೇ ಸ್ಟೇಷನ್ನಿಗ್ ಎತ್ತಾಕೊಂಡು ಹೋಗಿ ವಿಚಾರಣೆಯ ನೆಪದಲ್ಲಿ ಬರೋಬ್ಬರಿ ಒಂದು ವಾರಗಳ ಕಾಲ ಇಡೀ ಸ್ಟೇಷನ್ನಿಗ್ ಸ್ಟೇಷನ್ನೇ ಈಕೆಯ ಮೇಲೆ ಸಾಮೂಹಿಕ #ಅತ್ಯಾಚಾರ ಮಾಡಿ ಬಿಡೋದೂ ಅಲ್ಲದೆ , ಕಾರಲ್ಲಿ ಕ್ಯಾಬ್ ಡ್ರೈವರ್ ಜೊತೆಗೆ #ವೇಶ್ಯಾ‌ವಾಟಿಕೆ ಮಾಡ್ತಿದ್ದವಳನ್ನು ಅರೆಸ್ಟ್ ಮಾಡಿದೀವಂತ ಇವಳ ಮೇಲೆಯೇ ಕೇಸು ದಾಖಲಿಸಿ ಬಿಡುತ್ತಾರೆ...!!! ಆಗ ಇವಳಿಗೆ ವಯಸ್ಸು ಜಸ್ಟ್ ಹದಿಮೂರು...!!! ಕೋರ್ಟಲ್ಲಿ ವಿಚಾರಣೆ ನಡೆಯುತ್ತೆ... ಈ ಪರಿಪರಿಯಾಗಿ ಕೇಳಿಕೊಳ್ತಾಳೆ , ನಂದೇನೂ ತಪ್ಪಿಲ್ಲ , ವಿಚಾರಣೆ ನೆಪದಲ್ಲಿ ಪೊಲೀಸರೇ ನನ್ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿದಾರೆ , ದಯವಿಟ್ಟು ನ್ಯಾಯ ಕೊಡಿಸಿ ಅಂತ ಬೇಡಿಕೊಂಡ್ರೆ ಅಲ್ಲಿ ಕೇಳೋವ್ರ್ಯಾರು...!!!...??? ಅಸಲಿಗೆ ಅವಳ ಪರ ವಾದ ಮಾಡೋಕೊಬ್ಬ ಲಾಯರ್ ಕೂಡಾ ಇರಲಿಲ್ಲ. ಆ ಅವಕಾಶವೇ ಇಲ್ಲ ಹೆಣ್ಮಕ್ಳಿಗೆ ಇರಾನಲ್ಲಿ. ಏನೇ ಬಾಯಿ ಬಡ್ಕೊಳೀ ಎಲ್ಲವೂ ಏಕಪಕ್ಷೀಯ ವಾದ ವಿಚಾರಣೆ...!!! ಈ ಕಡೆಯದ್ದನ್ನಷ್ಟೇ ಕೇಳಿದ ಜಡ್ಜ್ ಮಹಾಶಯ ಹಾಜಿ ರೆಜಾಯಿ , ಅವಳ ಮೇಲಿದ್ದ ವೇಶ್ಯಾವಾಟಿಕೆ , ಧರ್ಮದ ಪಾವಿತ್ರ್ಯತೆ ಕಳೆದ ಕೇಸಿನ ಅಡಿಯಲ್ಲಿ ಸಾರ್ವಜನಿಕ ಗಲ್ಲುಶಿಕ್ಷೆ ವಿಧಿಸಿ ಬಿಡುತ್ತಾನೆ. ಇದರ ವಿರುದ್ಧ ಮೇಲ್ಮನವಿ ಹೋದರೆ , ಇವ್ರೆಲ್ಲಾ ಬದ್ಧತೆ ಧೃಡ ನಿಲುವು ಸದಾಕಾಲದ ಸ್ಪೂರ್ತಿ ಅಂತೆಲ್ಲಾ ಹಾಡಿ ಹೊಗಳ್ತಿರೋ ಇರಾನಿನ ಸರ್ವೋಚ್ಛ ನಾಯಕ ಅಲಿ ಖಮೇನಿಯು , ಆ ರಾತ್ರೀಲಿ ನೀನು ಕ್ಯಾಬಲ್ಲಿ ಹೋಗಿದ್ದಕ್ ತಾನೆ ಇಷ್ಟೆಲ್ಲಾ ಆಗಿದ್ದು. ರಾತ್ರಿಲಿ ಪರಪುರುಷನ ಜೊತೆ ಸುತ್ತೋಕ್ ಹೋಗಿ ನಮ್ಮ ಪಾವಿತ್ರ್ಯತೆ ಹಾಳು ಮಾಡಿ ಬಿಟ್ಟೆ ನೀನು , ಅಂತ ಕೋರ್ಟಿನ ಆದೇಶವನ್ನು ಎತ್ತಿ ಹಿಡಿದು ಬಿಡ್ತಾನೆ...!!? ಹೀಗೆ ಕೇವಲ #ಹಿಜಾಬ್ ಸರಿದ ತಪ್ಪಿಗೆ ವಿನಾಕಾರಣ ಕ್ರೇನಿನ ತುದಿಯಲ್ಲಿ ನೇತಾಡ ಬೇಕಾಯ್ತು...!!! ಸಾಯೋ ಮೊದಲು ಆಕೆ ಹಿಜಾಬ್ ಕಿತ್ತೆಸೆದು ಹೇಳಿದ್ದ ಕೊನೆಯ ಮಾತು... ಒಂದಲ್ಲ ಒಂದು ದಿನ ನಿನ್ನ ಶವದ ಮೇಲೆಯೇ ಇಲ್ಲಿನ ಹೆಣ್ಮಕ್ಕಳು ಕುಣಿದು ಸಂಭ್ರಮಿಸುತ್ತಾರೆ. ಅವತ್ತು ನನ್ನಾತ್ಮಕ್ಕೆ ಶಾಂತಿ , ನೊಂದ ಹೆಣ್ಮಗಳ ಬಿಸಿಯುಸಿರು , ಸುಡದೇ ಬಿಡೋದುಂಟಾ‌...!!!...??? ಇಂತಾ ನೀಚ ನಿಕೃಷ್ಟ ಮತಾಂಧ ಖಮೇನಿ... ಹೆಣ್ಮಕ್ಕಳೆಂದರೆ ಕೇವಲ ಭೋಗದ ವಸ್ತುವೆಂದೇ ನಂಬಿದ್ದ , ಅವರಿಗೆ ಯಕಶ್ಚಿತ್ ಕನಿಷ್ಟ ಸ್ವಾತಂತ್ರ್ಯವೂ ನೀಡದೆ ಬಂಧಿಯಾಗಿಟ್ಡ ಜಿಹಾದಿಯನ್ನು ನಮಗೆಲ್ಲಾ ಸೂರ್ತಿ ಅಂತಾವೆ ನಜ್ಮಾ ಚಿಕ್ಕನೇರಳೆಯಂತಹ ಮುಸ್ಲಿಂ ಹೆಣ್ಣುಮಕ್ಕಳೇ ಅಂದ್ರೆ ಇದಕ್ಕಿಂತಾ ಮತಾಂಧತೆಯ ಹೀನಾಯಸ್ಥಿತಿ ಇನ್ನೊಂದಿದ್ಯಾ...!...? ಇದು ಒಂದು ಕಥೆಯಷ್ಟೇ‌.‌‌..!!! ಇಂತಾ ಸಾವಿರ ಸಾವಿರ ಹೆಣ್ಮಕ್ಕಳ ಕರುಣಾಜನಕ ಕಥೆಗಳಿವೆ...!!! ಇಂತವ್ನು ಸತ್ತ ಸುದ್ದಿ ಕೇಳಿ ಅಲ್ಲಿನ ಹೆಣ್ಮಕ್ಳು ಕುಣಿದು ಸಂಭ್ರಮಿಸದೆ ಇರ್ತಾರೇನ್ರೀ...!!!...??? #Copy... #🚨Breaking news: ಇಸ್ರೇಲ್ ದಾಳಿಗೆ ಇರಾನ್ ಸುಪ್ರೀಂ ನಾಯಕ ಸಾವು💔🕯️ #😮ನಮ್ಮನ್ನು ಕಾಪಾಡಿ ಮೋದಿಜಿ! ಯುದ್ಧದ ಮಧ್ಯೆ ಸಿಲುಕಿದ ಖ್ಯಾತ ನಟಿ😱 #⚖️ ಡಾ.ಬಿ ಆರ್ ಅಂಬೇಡ್ಕರ್ #🙏ನಮಸ್ಕಾರ #📖🌙 ರಂಜಾನ್ ಇತಿಹಾಸ ಮತ್ತು ಕಥೆಗಳು 🌙📖
🚨Breaking news: ಇಸ್ರೇಲ್ ದಾಳಿಗೆ ಇರಾನ್ ಸುಪ್ರೀಂ ನಾಯಕ ಸಾವು💔🕯️ - Ke Ke - ShareChat