ShareChat
click to see wallet page
search
#🙏ನಮಸ್ಕಾರ #😍 ನನ್ನ ಸ್ಟೇಟಸ್ ರಾಮ ನಾಮವ ಜಪಿಸೋ ಮನುಜ, ರಾಮ ನಾಮವ ಜಪಿಸೋ... ರಾಮನಾಮವ ಜಪಿಸಿದರೆ ಭಯವಿಲ್ಲ ಮನಕೆ, ರಾಮ ನಾಮವ ಜಪಿಸೋ... ಮೂರು ಲೋಕಕೆ ಕಾರಣಕರ್ತ ನಾರಾಯಣ ಜಗಕೆ, ವೇದವ ತರಲು ಮತ್ಸ್ಯವತಾರವ ತಾಳಿದ ಶ್ರೀ ಹರಿ ರಾಮ. ಬೆನ್ನಲಿ ಮಂದರಾಚಲ ಬೆಟ್ಟವ ಹೊತ್ತು ಸಮುದ್ರ ಮಂಥನಕೆ ಕೂರ್ಮಾವತಾರವ ಎತ್ತಿದ ಶ್ರೀ ಹರಿ ರಾಮ.. ವರಹಾವತಾರವ ಎತ್ತಿ ನೀರೊಳಗಡೆ ಮುಳುಗಿ ಭೂಮಿಯನು ಕೋರೆ ಹಲ್ಲಲಿ ಹೊತ್ತು ವಸುಂದರೆಯ ರಕ್ಷಿಸಿದ ಶ್ರೀ ಹರಿ ರಾಮ... ಹರಿ ಭಕ್ತ ಪ್ರಹ್ಲಾದನ ಸಲಹಲು ನರಸಿಂಹ ಅವತಾರವ ಧರಿಸಿದ ಶ್ರೀ ಲಕ್ಷ್ಮೀ ನಾರಾಯಣ ರಾಮ... ವಾಮನವತಾರವ ಎತ್ತಿ ಬಲಿಚಕ್ರವರ್ತಿಯ ಕೈಯಿಂದ ಭೂಮಿಯನು ದಾನದಿ ಪಡೆದು ಅವನನು ಪಾತಳಕಟ್ಟಿ ಸುತಲದ ಸುಖ ಭೋಗವ ಕೊಟ್ಟು ಚಿರಂಜೀವಿ ಮಾಡಿದ ಶ್ರೀ ಜನಾರ್ಧನ ರಾಮ.. ತಂದೆಯ ಆಜ್ಞೆಯ ಮೇರೆಗೆ ಮಣಿದು ತಾಯಿಯ ಶಿರವನು ಕಡಿದಾ, ನಂತರ ತಂದೆಯ ವರವನು ಪಡೆದು ತಾಯಿಯನು ಜೀವಂತ ಮಾಡಿಸಿದಾ ಭಾರ್ಗವತಾರಿ ಚಿರಂಜೀವಿ ರಾಮ... ಜನಕನ ವಾಕ್ಯಕೆ ಮಣಿದು ವನವಾಸಕೆ ತೆರಳಿದ ಸೀತಾಪತಿ, ಲಕ್ಷ್ಮಣ ಸೋದರ ರಾಮ... ಸೋದರ ಮಾವ ಕಂಸನ ಕೊಂದು ತಾಯಿಯ ಬಿಡಿಸಲು ಕೃಷ್ಣವತಾರವ ಎತ್ತಿ ಕೌರವ ಕುಲದ ಅಧರ್ಮವ ತಡೆದು ಪಾರ್ಥನ ರಥದ ಸಾರಥಿಯಾದ ಶ್ರೀ ಕೃಷ್ಣ ರಾಮ... ಶ್ಯಾಮಲ ವರ್ಣವ ತಾಳಿ ಜಗದಲಿ ತನ್ನ ಸಾಮರ್ಥ್ಯವ ಮೆರೆದು ಪುರುಷೋತ್ತಮನೆಂಬ ನಾಮವ ಪಡೆದ ರಾಮ... ರಾಮ ನಾಮವ ಜಪಿಸೋ ಮನುಜ,ರಾಮ ನಾಮವ ಜಪಿಸೋ.... ರಾಮ ಕೃಷ್ಣ ಗೋವಿಂದ ಹರೇ ರಾಮ ಕೃಷ್ಣ ಗೋವಿಂದ.... ರಾಮ ಕೃಷ್ಣ ಗೋವಿಂದ ಹರೇ ರಾಮ ಕೃಷ್ಣ ಗೋವಿಂದಾ.... ವಿಠಲ.......ವಿಠಲ.........! ✍️ ಪ್ರಭಾಕರ ಭಂಡಾರಿ.