ShareChat
click to see wallet page
search
*ಭಗವದ್ಗೀತೆ ಅಧ್ಯಾಯ-1* *ಅಧ್ಯಾಯ-1* *ಶ್ಲೋಕ - 1* ಧೃತರಾಷ್ಟ್ರ ಉವಾಚ । ಧರ್ಮಕ್ಷೇತ್ರೇ ಕುರುಕ್ಷೇತ್ರೇ ಸಮವೇತಾ ಯುಯುತ್ಸವಃ । ಮಾಮಕಾಃ ಪಾಂಡವಾಶ್ಚೈವ ಕಿಮಕುರ್ವತ ಸಂಜಯ ॥೧॥ ಧೃತರಾಷ್ಟ್ರ ಉವಾಚ- ಧೃತರಾಷ್ಟ್ರ ಕೇಳಿದನು: ಧರ್ಮಕ್ಷೇತ್ರೇ ಕುರುಕ್ಷೇತ್ರೇ ಸಮವೇತಾಃ ಯುಯುತ್ಸವಃ ಮಾಮಕಾಃ ಪಾಂಡವಾಃ ಚ ಏವ ಕಿಮ್ ಅಕುರ್ವತ ಸಂಜಯ - ಧರ್ಮದ ತಾಣವಾದ ಕುರುಕ್ಷೇತ್ರದಲ್ಲಿ ಯುದ್ಧದ ಬಯಕೆಯಿಂದ ನೆರೆದ ನನ್ನವರು ಮತ್ತು ಪಾಂಡವರು ಏನು ಮಾಡಿದರು ಸಂಜಯನೆ ? ಈ ಹಿಂದೆ ಹೇಳಿದಂತೆ ಕುರುಡ ಧೃತರಾಷ್ಟ್ರನ ಪ್ರಶ್ನೆ 'ಜೀವದ' ಕುರುಡು ಪ್ರಶ್ನೆ ಕೂಡಾ ಹೌದು. ನಾವು ಎಷ್ಟು ಕುರುಡರು ಎಂದರೆ ನಮಗೆ ಏನೂ ಗೊತ್ತಿಲ್ಲ ಎನ್ನುವ ವಿಷಯ ಕೂಡಾ ನಮಗೆ ಗೊತ್ತಿಲ್ಲ! ಆದ್ದರಿಂದ ಗೀತೆ ಧೃತರಾಷ್ಟ್ರನ ಪ್ರಶ್ನೆಯಿಂದಲೇ ಆರಂಭವಾಗುತ್ತದೆ. ಕಣ್ಣು ಕಾಣದ ಧೃತರಾಷ್ಟ್ರ ದೂರದರ್ಶನ ಹಾಗು ದೂರಶ್ರವಣ ಶಕ್ತಿಯನ್ನು ವ್ಯಾಸರಿಂದ ಪಡೆದ ಸಂಜಯನಲ್ಲಿ ಹಾಕಿದ ಪ್ರಶ್ನೆಯೇ ಗೀತೆಯ ಮೊದಲ ಶ್ಲೋಕ. ಪರಶುರಾಮನಿಂದ ಸಮಂತಪಂಚಕ (ಸುತ್ತಲೂ ಐದು ಸರೋಹರ) ನಿರ್ಮಿಸಲ್ಪಟ್ಟು ಧರ್ಮಕ್ಷೇತ್ರ ಎನಿಸಿದ್ದ ಈ ಯುದ್ಧ ಭೂಮಿ, ಆನಂತರ 'ಕುರು' ಎನ್ನುವ ರಾಜನ ಕಾಲದಲ್ಲಿ ಪರಮ ಧಾರ್ಮಿಕಕ್ಷೇತ್ರವಾಗಿ ಕುರುಕ್ಷೇತ್ರವಾಯಿತು. ಇದನ್ನೇ ಇಲ್ಲಿ "ಧರ್ಮಕ್ಷೇತ್ರೇ ಕುರುಕ್ಷೇತ್ರೇ" ಎಂದು ಸಂಬೋಧಿಸಿದ್ದಾರೆ. ನಮ್ಮ ಹೃದಯ-ಧರ್ಮಕ್ಷೇತ್ರ. ಯಾವುದು ಧರ್ಮ, ಯಾವುದು ಅಧರ್ಮ ಎಂದು ತೀರ್ಮಾನ ಮಾಡುವ ಮನಸ್ಸು(Mind)-ಕುರುಕ್ಷೇತ್ರ(ಕರ್ಮಕ್ಷೇತ್ರ). ಮನಸ್ಸಿನ ಸಂಘರ್ಷಣೆಯೇ ಮಹಾಭಾರತ ಯುದ್ಧ. ಇಲ್ಲಿ ಕುರುಡ ಧೃತರಾಷ್ಟ್ರ ಸಂಜಯನಲ್ಲಿ ಕೇಳುತ್ತಾನೆ "ಹೋರಾಟ ಬಯಸಿ ಎದುರುಬದುರಾದ 'ನನ್ನವರು' ಮತ್ತು 'ಪಾಂಡವರು' ಏನು ಮಾಡಿದರು?" ಎಂದು. ಇಲ್ಲಿ 'ನನ್ನವರು ಮತ್ತು ಪಾಂಡವರು' ಎಂದು ಸಂಬೋಧಿಸುವುದರ ಮೂಲಕ ಆಳುವ ದೊರೆಯಾಗಿದ್ದ ಧೃತರಾಷ್ಟ್ರ ತನ್ನಲ್ಲಿರುವ ದೌರ್ಬಲ್ಯವನ್ನು ವ್ಯಕ್ತಪಡಿಸುತ್ತಿರುವುದು ಈ ಶ್ಲೋಕದಲ್ಲಿ ಸ್ಪಷ್ಟವಾಗಿ ಎದ್ದು ಕಾಣುತ್ತದೆ. #ಭಗವದ್ಗೀತಾ
ಭಗವದ್ಗೀತಾ - S [| ಸರ್ವೇ ಜನೋ ಸುಖೀನೋ ಭವಂತು Il  ಭಗವದ್ಗೀತಾ ಅಧ್ಯಾಯ ೦೧ ಶ್ಲೋಕ ೦೧ | ಧೃತರಾಷ್ಯು ಉವಾಚ ಧರ್ಮಕ್ಷೇತ್ರೇ ಕುರುಕ್ಷೇತ್ರೇ ಸಮವೇತಾ ಯುಯುತ್ಸವಃ ಪಾಂಡವಾಶೈೈವ ಕಿಮಕುರ್ವತ ಸಂಜಯ I| ೧ I| ಮಾಮಕಾಃ ಧೃತರಾಷ್ಯರುನು ಸಂಜಯನನ್ನು ಕುರುಕ್ಷೇತ್ರದ  ಸರಳ ಅರ್ಥ ಯುದ್ಧ ಭೂಮಿಯಲ್ಲಿ ತನ್ನ ಮಕ್ಕಳು ಮತ್ತು ಪಾಂಡು ಮಕ್ಕಳು ಏನು ೊ ಮಾಡುತ್ತಿದ್ದಾರೆ ಎಂದು ಕೇಳುತ್ತಾನೆ. ಇದು ಧರ್ಮದ ಸ್ಥಳವಾಗಿದೆ . ನೀವು ಕಳೆದುಹೋದ ಮತ್ತು ಭವಿಷ್ಯದ ಬಗ್ಗೆ ತಾತ್ಪರ್ಯ నిమ్మే ಖಚಿತವಿಲ್ಲದ ಭಾವನೆ ಹೊಂದಿದ್ದರೆ , మౌల్యగెళు ಮತ್ತು ತತ್ವಗಳನ್ನು [ ಧರ್ಮ ] ನಿಮ್ಮ ಕ್ರಿಯೆಗಳನ್ನು ಪ್ರತಿಬಿಂಬಿಸಿ  ಮಾರ್ಗದರ್ಶಿಸಲು S [| ಸರ್ವೇ ಜನೋ ಸುಖೀನೋ ಭವಂತು Il  ಭಗವದ್ಗೀತಾ ಅಧ್ಯಾಯ ೦೧ ಶ್ಲೋಕ ೦೧ | ಧೃತರಾಷ್ಯು ಉವಾಚ ಧರ್ಮಕ್ಷೇತ್ರೇ ಕುರುಕ್ಷೇತ್ರೇ ಸಮವೇತಾ ಯುಯುತ್ಸವಃ ಪಾಂಡವಾಶೈೈವ ಕಿಮಕುರ್ವತ ಸಂಜಯ I| ೧ I| ಮಾಮಕಾಃ ಧೃತರಾಷ್ಯರುನು ಸಂಜಯನನ್ನು ಕುರುಕ್ಷೇತ್ರದ  ಸರಳ ಅರ್ಥ ಯುದ್ಧ ಭೂಮಿಯಲ್ಲಿ ತನ್ನ ಮಕ್ಕಳು ಮತ್ತು ಪಾಂಡು ಮಕ್ಕಳು ಏನು ೊ ಮಾಡುತ್ತಿದ್ದಾರೆ ಎಂದು ಕೇಳುತ್ತಾನೆ. ಇದು ಧರ್ಮದ ಸ್ಥಳವಾಗಿದೆ . ನೀವು ಕಳೆದುಹೋದ ಮತ್ತು ಭವಿಷ್ಯದ ಬಗ್ಗೆ ತಾತ್ಪರ್ಯ నిమ్మే ಖಚಿತವಿಲ್ಲದ ಭಾವನೆ ಹೊಂದಿದ್ದರೆ , మౌల్యగెళు ಮತ್ತು ತತ್ವಗಳನ್ನು [ ಧರ್ಮ ] ನಿಮ್ಮ ಕ್ರಿಯೆಗಳನ್ನು ಪ್ರತಿಬಿಂಬಿಸಿ  ಮಾರ್ಗದರ್ಶಿಸಲು - ShareChat