"IF U HELP OTHERS TO BECOME UR WELWISHERS TILL LAST BREATH, u w I'll never face difficulties in life as V R ALL ABODES TO NANOPARTICLE OF PARAMATHMA ENSHRINED IN IT TO WORK TOGETHER AND KEEP MOTHER EARTH HEALTHY AND ACTIVE AND HE WILL SEND SOME ONE R OTHER TO HELP U IN DIFFICULT TIMES. I BECAME A DESERTED WIDOWER AT THIS AGE OF 88 BUT GOD BLESSED ME A TENANT TO STAY WITH ME AND GIVE ALL SUPPORT I HAD LOST AFTER DEATH OF MY WIFE. DHARMORAKSHATHI RAKSHITHAHA IS INEVITABLE. AQI ತಾಜಾ ಸುದ್ದಿ ರಾಜ್ಯ T20 World Cup ಸಿನಿಮಾ ಫೋಟೋಗ್ಯಾಲರಿ ದೇಶ ವಿದೇಶ ವೈರಲ್ ಅಧ್ಯಾತ್ಮ ವಾಣಿಜ್ಯ ಜ್ಯೋತಿಷ್ಯ ಕ್ರೈಂ ಉದ್ಯೋಗ ವಿಡಿಯೋಶಾರ್ಟ್ಸ್#ಬೆಂಗಳೂರು ಸುದ್ದಿಕ್ರೀಡೆAb Meri Baariಜೀವನಶೈಲಿಆರೋಗ್ಯರಾಜಕೀಯವೆಬ್ಸ್ಟೋರಿ Kannada News Lifestyle Chanakya Niti: Do These Things Today To Make Old Age Happy Chanakya Niti: ಯೌವನದಲ್ಲಿ ಈ ಕೆಲಸಗಳನ್ನು ಮಾಡಿದರೆ ವೃದ್ಧಾಪ್ಯವು ಸಂತೋಷದಿಂದಿರುವುದು ಕೊನೆಗಾಲದಲ್ಲಿ ನೆಮ್ಮದಿಯಾಗಿರಬೇಕು, ಯಾವುದೇ ನೋವು, ಹತಾಶೆಯಿಲ್ಲದೆ ಸಂತೋಷದಿಂದ ಕಾಲ ಕಳೆಯಬೇಕು ಎಂದು ಪ್ರತಿಯೊಬ್ಬರೂ ಬಯಸುತ್ತಾರೆ. ಹೀಗೆ ವೃದ್ಧಾಪ್ಯ ಸಂತೋಷ, ಶಾಂತಿಯಿಂದ ಕೂಡಿರಬೇಕೆಂದರೆ ಯೌವನದಲ್ಲಿ ಒಂದಷ್ಟು ಕೆಲಸಗಳನ್ನು ತಪ್ಪದೇ ಮಾಡಲೇಬೇಕು ಎಂದು ಆಚಾರ್ಯ ಚಾಣಕ್ಯರು ಹೇಳಿದ್ದಾರೆ. ಅವು ಯಾವುವು ಎಂಬ ಸಂಕ್ಷಿಪ್ತ ವರದಿ ಇಲ್ಲಿದೆ. ಚಾಣಕ್ಯ ನೀತಿ Image Credit Source: Pinterest ಮಾಲಾಶ್ರೀ ಅಂಚನ್ Updated on: Feb 17, 2026 | 7:47 PM ಯೌವನದಲ್ಲಿರುವಾಗ ಮಾಡುವ ಕೆಲವೊಂದು ತಪ್ಪುಗಳು ವೃದ್ಧಾಪ್ಯವನ್ನು (old age) ನರಕ ಮಾಡುತ್ತಂತೆ. ಹೌದು ಇಂದು ಮಾಡುವ ತಪ್ಪಿನಿಂದ ಕೊನೆಗಾಲದಲ್ಲಿ ಮಕ್ಕಳ ಪ್ರೀತಿಯೂ ಸಿಗೋದಿಲ್ಲ, ನೆಮ್ಮದಿಯೂ ಇರೋಲ್ಲ, ಮುಖ್ಯವಾಗಿ ಆಹಾರಕ್ಕೂ ಪರದಾಡಬೇಕಾಗುತ್ತದೆ ಎಂದು ಆಚಾರ್ಯ ಚಾಣಕ್ಯರು ಎಚ್ಚರಿಕೆ ನೀಡಿದ್ದಾರೆ. ಜೊತೆಗೆ ವೃದ್ಧಾಪ್ಯವು ಶಾಂತಿ ಮತ್ತು ಸಂತೋಷದಿಂದ ಕೂಡಿರಬೇಕೆಂದರೆ ಯೌನದಲ್ಲಿರುವಾಗ ಈ ಒಂದಷ್ಟು ಕೆಲಸಗಳನ್ನು ತಪ್ಪದೆ ಮಾಡಲೇಬೇಕು ಎಂಬ ಸಲಹೆಯನ್ನು ನೀಡಿದ್ದಾರೆ. ಹಾಗಿದ್ರೆ ಕೊನೆಗಾಲದಲ್ಲಿ ನೆಮ್ಮದಿಯಾಗಿ ಜೀವನ ನಡೆಸಲು ಮುಂಚಿತವಾಗಿಯೇ ಏನೆಲ್ಲಾ ಮಾಡಬೇಕು ಎಂಬುದನ್ನು ತಿಳಿಯಿರಿ. ವೃದ್ಧಾಪ್ಯವು ಸಂತೋಷದಿಂದ ಕೂಡಿರಲು ಈ ಕೆಲಸಗಳನ್ನು ಇಂದೇ ಮಾಡಿ: ಹಣ ಉಳಿತಾಯ ಬಹಳ ಮುಖ್ಯ: ಯೌವನದ ಆಸೆಗಳನ್ನು ಅನುಸರಿಸಲು ನಿಮ್ಮ ಎಲ್ಲಾ ಗಳಿಕೆಯನ್ನು ವ್ಯರ್ಥ ಮಾಡುವುದು ಅತ್ಯಂತ ಮೂರ್ಖತನವೆಂದು ಆಚಾರ್ಯ ಚಾಣಕ್ಯರು ಹೇಳಿದ್ದಾರೆ. ನಿಮ್ಮ ಸ್ವಂತ ಮಗ ಕೂಡ ವೃದ್ಧಾಪ್ಯದಲ್ಲಿ ನಿಮ್ಮನ್ನು ಕೈಬಿಡಬಹುದು, ಇಂತಹ ಸಮಯದಲ್ಲಿ ನೀವು ಕೂಡಿಟ್ಟ ಹಣ, ನೀವು ಗಳಿಸಿದ ಆಸ್ತಿ ನಿಮ್ಮ ಸಹಾಯಕ್ಕೆ ಬರುತ್ತದೆ. ಹಾಗಾಗಿ ನಿಮಗಾಗಿ, ನಿಮ್ಮ ಸ್ವಂತಕ್ಕಾಗಿ ಒಂದಷ್ಟು ಹಣವನ್ನು ಕೂಡಿಡಿ. ಇದು ನೀವು ವೃದ್ಧಾಪ್ಯದಲ್ಲಿ ಇನ್ನೊಬ್ಬರ ಮುಂದೆ ಕೈ ಚಾಚುವುದನ್ನು ತಪ್ಪಿಸುತ್ತದೆ, ನೆಮ್ಮದಿಯ, ಸ್ವಾಭಿಮಾನದ ಜೀವನ ನಡೆಸಲಲು ಅನುವು ಮಾಡಿಕೊಡುತ್ತದೆ. ನಿಮ್ಮ ಆರೋಗ್ಯದ ಬಗ್ಗೆ ಯಾವಾಗಲೂ ವಿಶೇಷ ಕಾಳಜಿ ವಹಿಸಿ: ನಮ್ಮ ಯೌವನದಲ್ಲಿ, ಆರೋಗ್ಯದ ಬಗ್ಗೆ ತುಂಬಾನೇ ಕಾಳಜಿ ವಹಿಸಬೇಕು ಅದಕ್ಕಾಗಿ ದೈಹಿಕ ವ್ಯಾಯಾಮ ಮಾಡಬೇಕು, ಸಮತೋಲಿತ, ಆರೋಗ್ಯಕರ ಆಹಾರವನ್ನು ಸೇವನೆ ಮಾಡಬೇಕು ಎಂದು ಆಚಾರ್ಯ ಚಾಣಕ್ಯರು ಹೇಳಿದ್ದಾರೆ. ಇಂದು ನಿಮ್ಮ ಆರೋಗ್ಯವನ್ನು ನಿರ್ಲಕ್ಷಿಸಿದರೆ ವೃದ್ಧಾಪ್ಯದಲ್ಲಿ ಆಸ್ಪತ್ರೆಯಲ್ಲೇ ಜೀವನವನ್ನು ಕಳೆಯಬೇಕಾಗುತ್ತದೆ ಎಚ್ಚರ. ಇದನ್ನೂ ಓದಿ: ಈ ಗುಣಗಳು ವ್ಯಕ್ತಿಗೆ ಯಶಸ್ಸು, ಗೌರವವನ್ನು ತಂದುಕೊಡುತ್ತದೆ ನಿಮ್ಮ ಮಕ್ಕಳಿಗೆ ಒಳ್ಳೆಯ ಮೌಲ್ಯಗಳನ್ನು ಕಲಿಸಿ: ನಿಮ್ಮ ಮಕ್ಕಳಿಗಾಗಿ ಆಸ್ತಿ ಮಾಡಬೇಡಿ, ಅವರನ್ನೇ ಆಸ್ತಿ ಮಾಡಿ. ಒಳ್ಳೆಯ ಸಂಸ್ಕಾರಗಳನ್ನು ಕಲಿಸಿ. ಇಂತಹ ಮಕ್ಕಳು ಖಂಡಿತವಾಗಿಯೂ ಕೊನೆಗಾಲದಲ್ಲಿ ನಿಮ್ಮನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ. ಬರೀ ವಿದ್ಯೆ ಕಲಿಸಿ, ಸಂಸ್ಕಾರ, ಹೆತ್ತವರ ಮೌಲ್ಯ ಏನೆಂಬುದನ್ನು ಕಲಿಸದಿದ್ದರೆ, ಅಂತಹ ಮಕ್ಕಳಿಂದ ಕೊನೆಗಾದಲ್ಲಿ ಬರಿ ನೋವನ್ನೇ ತಿನ್ನಬೇಕಾಗುತ್ತದೆ. ಆದ್ದರಿಂದ ಮುಖ್ಯವಾಗಿ ಮಕ್ಕಳಿಗೆ ಒಳ್ಳೆಯ ಮೌಲ್ಯಗಳನ್ನು ಕಲಿಸುತ್ತ ಗಮನ ನೀಡಿ ಎಂದು ಆಚಾರ್ಯ ಚಾಣಕ್ಯರು ಹೇಳಿದ್ದಾರೆ. ಧಾರ್ಮಿಕ ಯಾರ್ಯ ಮತ್ತು ದಾನ, ಸದ್ಗುಣ: ಯೌವನದಲ್ಲಿ ಮಾಡುವ ದಾನ ಮತ್ತು ಒಳ್ಳೆಯ ಕಾರ್ಯಗಳು ಸಮಾಜದಲ್ಲಿ ನಿಮ್ಮ ಗೌರವವನ್ನು ಹೆಚ್ಚಿಸುತ್ತದೆ. ಇದು ನಿಮಗೆ ಸಂತೋಷವನ್ನು ನೀಡುವುದು ಮಾತ್ರವಲ್ಲ ಕೊನೆಗಾಲದಲ್ಲಿ ಈ ದಾನ ಧರ್ಮ ಒಂದಲ್ಲಾ ಒಂದು ರೀತಿಯಲ್ಲಿ ನಿಮ್ಮ ಸಹಾಯಕ್ಕೆ ಬರುತ್ತದೆ ಎಂದು ಆಚಾರ್ಯ ಚಾಣಕ್ಯರು ಹೇಳಿದ್ದಾರೆ. ಆದ್ದರಿಂದ ಒಳ್ಳೆಯ ಕಾರ್ಯಗಳನ್ನು ಮಾಡುವ ಅಭ್ಯಾಸವನ್ನು ಬೆಳೆಸಿಕೊಳ್ಳಿ. ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ Add TV9 Kannada As A Trusted Source Topics Chanakya Niti Related Stories ಶ್ರೀಮಂತಿಕೆಯನ್ನು ಗಳಿಸಲು ನೀವು ಪಾಲಿಸಬೇಕಾದ ಅಭ್ಯಾಸಗಳಿವು ಪಿರಿಯಡ್ಸ್ ಆದಾಗ ಈ ಆಹಾರಗಳನ್ನು ತಪ್ಪದೆ ಸೇವನೆ ಮಾಡಿ ವೀಳ್ಯದೆಲೆ ತಿನ್ನುವುದರಿಂದ ಲಭಿಸುವ ಪ್ರಯೋಜನಗಳು: ಫೆ. 19ರಿಂದ ಪವಿತ್ರ ರಂಜಾನ್ ಮಾಸ ಪ್ರಾರಂಭ: ಉಪವಾಸ, ಪ್ರಾರ್ಥನೆಯ ಮಹತ್ವ Photo Gallery 17 ಸ್ಥಾನ ಮೇಲೇರಿ ಟಾಪ್ 10 ರೊಳಗೆ ಸ್ಥಾನ ಪಡೆದ ಇಶಾನ್ ಕಿಶನ್ ಟಿ20 ವಿಶ್ವಕಪ್ನಿಂದ ಶ್ರೀಲಂಕಾ ತಂಡದ ಸ್ಟಾರ್ ವೇಗಿ ಔಟ್ ಸ್ಟೀವ್ ಸ್ಮಿತ್ ಬರುವಷ್ಟರಲ್ಲಿ ವಿಶ್ವಕಪ್ನಿಂದಲೇ ಹೊರಬಿದ್ದ ಆಸ್ಟ್ರೇಲಿಯಾ ‘ಸೂಪರ್ ಜೋಡಿ’; ಪತಿ ಜೊತೆ ಫೋಟೋ ಹಂಚಿಕೊಂಡ ಗೀತಾ ಭಾರತಿ ಭಟ್ Short Videos View More ಲಕ್ಷಾಂತರ ರೂ ಮೌಲ್ಯದ ಮೆಕ್ಕೆಜೋಳ ಬೆಂಕಿಗಾಹುತಿ ಡಿವೈಡರ್ಗೆ ಡಿಕ್ಕಿ ಹೊಡೆದು ಜಖಂಗೊಂಡ ಕಾರು ಚಾಲಕನ ನಿಯಂತ್ರಣ ತಪ್ಪಿ ಖಾನಾವಳಿಗೆ ನುಗ್ಗಿದ ಕಾರು ಆರೋಗ್ಯಕರವಾದ ಸೌತೆಕಾಯಿ ಸಲಾಡ್ ಮಾಡಿ Kannada Webstories ಇನ್ನಷ್ಟು ಓದಿ ಮನೆಯೆಲ್ಲಾ ಘಮಘಮಿಸಲು ನೆಲ ... ಮನೆಯವರೆಲ್ಲಾ ಒಟ್ಟಿಗೆ ಕುಳಿತು ... ಆರ್ಥಿಕ ನಷ್ಟಕ್ಕೆ ಈ ... ಶಾಂಪೂಗೆ ಸಕ್ಕರೆ ಬೆರೆಸಿ ... Network TV9Hindi.com TV9Marathi.com TV9Telugu.com TV9Bangla.com TV9Gujarati.com TV9Punjabi.com Tv9Tamilnews.com Assamtv9.com Malayalamtv9.com Tv9English.com News9live.com TV9 Uttar Pradesh Money9 ಕರ್ನಾಟಕ ಮನರಂಜನೆ ಕ್ರೀಡೆ ಇತರ Follow us Copyright © 2026 TV9 Kannada. All rights reserved. ಮೆನು ಫೋಟೋ ಶಾರ್ಟ್ಸ್ ವಿಡಿಯೋ ವೆಬ್ ಸ್ಟೋರಿ " https://tv9kannada.com/lifestyle/chanakya-niti-if-you-want-to-be-happy-in-old-age-do-these-things-in-your-young-age-1150187.html#:~:text=AQI,%E0%B2%B5%E0%B3%86%E0%B2%AC%E0%B3%8D%E2%80%8B%20%E0%B2%B8%E0%B3%8D%E0%B2%9F%E0%B3%8B%E0%B2%B0%E0%B2%BF

