ShareChat
click to see wallet page
search
ಬಾಂಗ್ಲಾದೇಶದ ಸಿನಿಮಾ ನಿರ್ಮಾಪಕ, ಉದ್ಯಮಿ ಸಲೀಂ ಖಾನ್ ಹಾಗೂ ಖ್ಯಾತ ನಟ ಶಾಂತಾ ಖಾನ್ ಅನ್ನು ಜನ, ನಡು ರಸ್ತೆಯಲ್ಲಿ ಹಿಡಿದು ಭೀಕರವಾಗಿ ಹೊಡೆದು ಕೊಂದು ಹಾಕಿದ್ದಾರೆ. ಅಷ್ಟಕ್ಕೂ ಇವರನ್ನು ಹೀಗೆ ಭೀಕರವಾಗಿ ಕೊಲ್ಲಲು ಕಾರಣವೇನು?ಬಾಂಗ್ಲಾದೇಶದಲ್ಲಿ ಯುವಕರು ಬೀದಿಗಿಳಿದಿದ್ದಾರೆ.ಮೀಸಲಾತಿ ವಿರೋಧಿ ಹೋರಾಟ ಹಿಂಸಾಚಾರಕ್ಕೆ ತಿರುಗಿದೆ. ಈ ವರೆಗೆ ಸುಮಾರು 200 ಕ್ಕೂ ಹೆಚ್ಚು ಜನ ಜೀವ ಹೋಗಿದೆ. ಲಕ್ಷಾಂತರ ಕೋಟಿ ಆಸ್ತಿ ಹಾನಿಯಾಗಿದೆ. ಪ್ರಧಾನಿ ಶೇಖ್ ಹಸೀನಾ ದೇಶ ಬಿಟ್ಟು ಪಲಾಯನ ಮಾಡಿದ್ದಾರೆ. ಜನ ಹುಚ್ಚರಂತಾಗಿದ್ದು ಪೊಲೀಸರು, ಸೈನ್ಯ ಏನೂ ಮಾಡಲಾಗದ ಸ್ಥಿತಿ ತಲುಪಿದೆ. ಜನರು ಅದೆಷ್ಟು ಹುಚ್ಚಾಟಕ್ಕಿಳಿದಿದ್ದಾರೆಂದು ಆಗಸ್ಟ್ 05 ರಂದು ಸಿನಿಮಾ ನಿರ್ಮಾಪಕ ಮತ್ತು ಸ್ಟಾರ್ ನಟನಾಗಿರುವ ಆತನ ಮಗನನ್ನು ನಡು ರಸ್ತೆಯಲ್ಲಿ ಹೊಡೆದು ಕೊಂದು ಹಾಕಿದ್ದಾರೆ. ಪೊಲೀಸರಿಗೆ ವಿಷಯ ತಿಳಿದರೂ ಸಹ ಹೋಗಿ ಕಾಪಾಡಲು ಆಗಲಿಲ್ಲ ಎಂದು ಹೇಳಿಕೆ ಬಿಡುಗಡೆ ಮಾಡಿದ್ದಾರೆ.ಸಿನಿಮಾ ನಿರ್ಮಾಪಕ ಸಲೀಂ ಖಾನ್ ಹಾಗೂ ಅವರ ಪುತ್ರ ಶಾಂತಾ ಖಾನ್ ಅನ್ನು ಚಾಂದ್​ಪುರ ಉಪ ಜಿಲ್ಲೆ ಪ್ರದೇಶದ ಬಜಾರ್​ನಲ್ಲಿ ಜನ ಕಟ್ಟಿಗೆಗಳಿಂದ ಕೈಗೆ ಸಿಕ್ಕಿದ ಆಯುಧಗಳಿಂದ ಭೀಕರವಾಗಿ ಹೊಡೆದು ಕೊಂದು ಹಾಕಿದ್ದಾರೆ. ಪ್ರಧಾನಿ ಶೇಖ್ ಹಸೀನಾ ದೇಶ ಬಿಟ್ಟು ಪರಾರಿಯಾದ ಬಳಿಕ ಸಲೀಂ ಖಾನ್ ಹಾಗೂ ಅವರ ಪುತ್ರ ಶಾಂತಾ ಖಾನ್ ಅವರುಗಳು ತಾವು ಸಹ ಪರಾರಿಯಾಗಲು ಮುಂದಾಗಿದ್ದಾರೆ. ಮೊದಲು ಅವರು ಫರೂಕಾಬಾದ್​ ಮಾರ್ಕೆಟ್​ಗೆ ಬಂದಿದ್ದಾರೆ. ಅಲ್ಲಿ ಜನರು ಅವರನ್ನು ಗುರುತು ಹಿಡಿದು ಕೊಲ್ಲಲು ಬಂದಿದ್ದಾರೆ. ಆಗ ಸಲೀಂ ಖಾನ್ ತನ್ನಲ್ಲಿದ್ದ ಬಂದೂಕು ತೋರಿಸಿ ಹೇಗೋ ಬಚಾವಾಗಿ ಮುಂದೆ ಹೋಗಿದ್ದಾರೆ. ಅಲ್ಲಿಂದ ಮುಂದೆ ಹೋದಾಗ ಬಗಾರಾ ಮಾರುಕಟ್ಟೆ ಬಳಿ ಮತ್ತೊಂದು ಗುಂಪು ಅವರನ್ನು ಅಡ್ಡ ಹಾಕಿದೆ ಅಲ್ಲಿ ಅವರಿಗೆ ತಪ್ಪಿಸಿಕೊಳ್ಳಲಾಗಿಲ್ಲ. ಜನರೆಲ್ಲ ಸೇರಿ ನಡು ರಸ್ತೆಯಲ್ಲಿಯೇ ಅವರನ್ನು ಹೊಡೆದು, ಹೊಡೆದು ಕೊಂದು ಹಾಕಿದೆ.ಘಟನೆ ಬಗ್ಗೆ ಮಾಹಿತಿ ನೀಡಿರುವ ಪೊಲೀಸರು, 'ನಮಗೆ ಸಲೀಂ ಹಾಗೂ ಶಾಂತಾ ಖಾನ್ ನಿಧನ ಸುದ್ದಿ ತಿಳಿಯಿತು. ಆದರೆ ನಮ್ಮ ಜೀವದ ಕಾಳಜಿವಹಿಸಿ ನಾವು ಅವರನ್ನು ರಕ್ಷಿಸಲು ಹೋಗಲಿಲ್ಲ' ಎಂದಿದ್ದಾರೆ. ಪೊಲೀಸರು ಹಾಗೂ ಸೈನ್ಯವೇ ಪ್ರತಿಭಟನಾಕಾರರನ್ನು ಎದುರುಹಾಕಿಕೊಳ್ಳಲಾಗದ ಸ್ಥಿತಿ ತಲುಪಿದೆ ಬಾಂಗ್ಲಾದಲ್ಲಿ. #📢ಆಗಸ್ಟ್ 7ರ ಅಪ್ಡೇಟ್ಸ್ 🗞️
📢ಆಗಸ್ಟ್ 7ರ ಅಪ್ಡೇಟ್ಸ್ 🗞️ - ShareChat